ಪೋಸ್ಟ್‌ಗಳು

snow ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹಿಮದ ಕಣ

ಇಮೇಜ್
 ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕಾಲಿಂದ ಕೆದರಿ ಕೆಳಗೆ ಬೀಳಿಸಿದಾಗ ನನ್ನ ಮೇಲೆ ಕಾಗೆಯೊಂದು ಹೆಮ್ಲಾಕ್ ಮರದ ಮೇಲಿದ್ದ ಹಿಮಕಣ ಬದಲಾಯಿತು ನನ್ನ ಹೃದಯದ ಭಾವನೆ ಸ್ವಲ್ಪವಾದರೂ ಮತ್ತು ಭಾಗಶಃ ಉಳಿಸಿತು ನಾನು ಬೇಸರದಲ್ಲಿ ಕಳೆದುಕೊಂಡಿದ್ದ ದಿನ

ಶರತ್ಕಾಲದ ಸಂವಾದ

ಇಮೇಜ್
 ಈ ಕವಿತೆಗೆ ಪ್ರೇರಣೆ ನೀಡಿದ್ದು  ರೀನ್ಹೋಲ್ಡ್ ಲಜೆಂಗ್ರೆನ್ ಎಂಬ ಕಲಾವಿದ ಬರೆದ ಚಿತ್ರ. ಕೆಳಗೆ ತೋರಿಸಿದ ಚಿತ್ರ ಬರೆದದ್ದು ಏಐ #ಚಿತ್ರಕವಿತೆ: ಸಿ. ಪಿ. ರವಿಕುಮಾರ್  ಶರತ್ಕಾಲದ ಬೆಳಗು ನಡೆದು ಹೊರಟಾಗ ನೋಡಿದೆನು ತರಗೆಲೆ ಉದುರಿಸಿ ನಿಂತ ಹೆಮ್ಮರಗಳ ಸಾಲು - ಹೀಗೇಕೆ ಎಲ್ಲ ಬರಿದಾಗಿ ನಿಂತಿರುವಿರಿ ತಪೋನಿರತ ಸಾಧುಗಳ ಹಾಗೆ ನೀವು? ಉತ್ತರಿಸಿತು ಒಂದು ಮರ ಗಂಭೀರ ದನಿಯಲ್ಲಿ: ಶಿಶಿರದಲ್ಲೂ ನಾವು ಹಸಿರೆಲೆ ಛತ್ರಿಯ ಹೊತ್ತು ನಿಂತಿದ್ದರೆ ಓ ಮಗೂ ಯೋಚಿಸಿ ನೋಡು ಸೂರ್ಯನ ಮಂದಾಗ್ನಿ ಹೇಗೆ ಮುಟ್ಟುತ್ತಿತ್ತು? ಮರಳಿ ಬರುವಾಗ ಅದೇ ದಾರಿಯಲ್ಲಿ ನೋಡಿದೆನು ಮರಗಳು ಅಲ್ಲೇ ನಿಂತಿದ್ದವು ಇನ್ನೂ. ಎಲ್ಲರೂ ಕೈ ಎತ್ತಿ ಪ್ರಾರ್ಥಿಸುವ ಹಾಗಿದೆಯಲ್ಲ ಹೇಳಿ ದೇವನಲ್ಲಿ ಸಲ್ಲಿಸುವ ಕೋರಿಕೆ ಏನು? ಉತ್ತರಿಸಿತು ಒಂದು ಮರ ಗಂಭೀರ ದನಿಯಲ್ಲಿ: ಪ್ರಾರ್ಥಿಸುತ್ತಿದ್ದೇವೆ ಹೊಸಚಿಗುರು ಬರಲಿ ನಮಗೆ! ಮುಂಬರುವ ಗ್ರೀಷ್ಮ ನೀನು ನಡೆದು ಬರುವಾಗ ಈ ದಾರಿ ತಂಪಾಗಿಸಲು ಮರಳಿ ಕೊಡು ಹಸಿರೆಲೆಯ ಕಾಣ್ಕೆ.