ಹೂವಿನ ಬಯಕೆ
ಮೂಲ ಹಿಂದಿ ಪದ್ಯ : ಮಾಖನ್ ಲಾಲ್ ಚತುರ್ವೇದಿ ಕನ್ನಡಕ್ಕೆ : ಸಿ . ಪಿ . ರವಿಕುಮಾರ್ ಮುಡಿಯುವ ಆಭರಣವಾಗಲೇ ದೇವಕನ್ಯೆಯ ಜಡೆಯಲ್ಲಿ ? ಇಲ್ಲ , ಆ ಬಯಕೆ ನನಗಿಲ್ಲ . ಮದುಮಗನು ನಲ್ಲೆಗರ್ಪಿಸುವ ಹಾರಕ್ಕೆ ಪದಕವಾಗುವ ತವಕ ನನ್ನೊಳಗಿಲ್ಲ . ಕೊಂಡೊಯ್ದು ಇರಿಸದಿರು ಗೋರಿಕಲ್ಲಿನ ಮೇಲೆ ಹಿಂದೆ ಎಂದೋ ಆಳಿ ಅಳಿದ ರಾಜನಿಗೆ ! ಮಂದಿರದ ಮೂರ್ತಿಶಿಲೆ ಮೇಲಿಡದಿರು , ನನಗಿಲ್ಲ ಒಂದೆರಡು ಕ್ಷಣದ ಧನ್ಯತೆಯ ಬಯಕೆ ! ಕೊಂಡೊಯ್ದು ನನ್ನನ್ನು ಓ ವನಮಾಲಿ ! ಎಸೆದುಬಿಡು ಬಂಧು ಸೈನಿಕರು ಮುನ್ನುಗ್ಗುವ ಹಾದಿಯಲ್ಲಿ ಇಂದು ತಾಯ್ ಭೂಮಿ ರಕ್ಷಣೆಗೆ ಹೊರಟವರ ಪದತಲದಲೆನ್ನ ಬಾಳಿನ ಅರ್ಥ ಹೊಮ್ಮಿ ಬರಲಿ ! Translation by C.P. Ravikumar of a Hindi Poem by Makhanlal Chaturvedi [ಚಿತ್ರ: ಶ್ರೀನಿವಾಸನ್ ಮಾರ್ಗಸಹಾಯಂ]