ಪೋಸ್ಟ್‌ಗಳು

ಜೂನ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮರೆಯಲಾಗದಲ್ಲ

ಇಮೇಜ್
ಸಿ ಪಿ ರವಿಕುಮಾರ್  ಮೊಹಮ್ಮದ್ ರಫಿ ಹಾಡಿರುವ "ಯಾದ್ ನ ಜಾಯೇ ಬೀತೇ ದಿನೋಂಕೀ" ನನಗೆ ಇಷ್ಟವಾದ ಹಾಡು. ಇದನ್ನು ಬರೆದವರು ನನ್ನ  ಮೆಚ್ಚಿನ ಕವಿಗಳಲ್ಲಿ ಒಬ್ಬರಾದ ಶೈಲೇಂದ್ರ. ಶಂಕರ್-ಜೈಕಿಶನ್ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಶೈಲೇಂದ್ರ ಅವರದ್ದು ಸರಳ-ಸುಂದರ ಶೈಲಿ. ಈ ಗೀತೆಯಲ್ಲಿ ಒಂದಾದರೂ ಕಠಿಣವಾದ ಶಬ್ದವಿಲ್ಲ. ಪಖೇರೂ (ಹಕ್ಕಿ) ಎನ್ನುವ ಪದ ಒಂದೇ ಸ್ವಲ್ಪ ಅಪರೂಪವಾದದ್ದು! ಗೀತೆಯಲ್ಲಿ ಒಬ್ಬ ಪ್ರೇಮಿ ತನ್ನ ಹಳೆಯ ದಿನಗಳನ್ನು ನೆನೆದು ದುಃಖಿಸುತ್ತಿದ್ದಾನೆ. ಯಾವುದೋ ಕಾರಣಕ್ಕಾಗಿ ಅವನು ಪ್ರೇಮಿಕೆಯಿಂದ ಬೇರಾಗಿದ್ದಾನೆ. ಬಹುಶಃ ಕಾರಣಾಂತರದಿಂದ ಅವನ ಪ್ರೇಮಿಕೆ ಬೇರೊಬ್ಬನನ್ನು ವರಿಸಬೇಕಾದ ಸಂದರ್ಭ ಬಂದು "ನನ್ನನ್ನು ಮರೆತುಬಿಡು" ಎಂದಿದ್ದಾಳೆ. ಅವಳ ಸಂದರ್ಭ ಇವನಿಗೆ ತಿಳಿದಿದೆ - ಹೀಗಾಗಿ ಅವಳ ಮೇಲೆ ಸಿಟ್ಟಿಲ್ಲ.  ಆದರೆ ಕಳೆದ ದಿನಗಳನ್ನು ಮರೆಯಲು ಅವನು ಪ್ರಯತ್ನಿಸಿದರೂ ಅವನಿಗೆ ಸಾಧ್ಯವಾಗುತ್ತಿಲ್ಲ.   ಈ ಗೀತೆ ಒಬ್ಬ ಪ್ರೇಮಿ-ಪ್ರೇಮಿಕೆಗೇ ಅನ್ವಯಿಸಬೇಕಾಗಿಲ್ಲ. ಒಟ್ಟಿಗೆ ಓದಿದ ಸ್ನೇಹಿತರು ಒಬ್ಬರನ್ನೊಬ್ಬರು ಅಗಲುವ ಕ್ಷಣಗಳೂ ಅಷ್ಟೇ ನೋವುಂಟು ಮಾಡುತ್ತವೆ.  ನಿಮ್ಮ ಹೈಸ್ಕೂಲ್  ಅಥವಾ ಕಾಲೇಜು ಬೀಳ್ಕೊಡುಗೆ ಸಮಾರಂಭ ನೆನೆಸಿಕೊಳ್ಳಿ! ವಿದಾಯ ಸಮಾರಂಭಗಳಲ್ಲಿ ಈ ಹಾಡು ಕೇಳಿದಾಗ ಯಾರ ಕಣ್ಣಾದರೂ ತೇವವಾಗುತ್ತದೆ.  ಮರೆಯಲಾಗದಲ್ಲ ಕಳೆದು ದಿನಗಳ ನೆನಪು! ಬರಲಾರವು ತಿರುಗಿ, ಕರಗಿಹೋದ ಕ್ಷಣಗಳು -

ವಚನ ನ ಜಾಯೇ

ಇಮೇಜ್
ಸಿ ಪಿ ರವಿಕುಮಾರ್ ನಾನು ಸಭಾಗೃಹದ ಸುತ್ತ ಕಣ್ಣು ಹಾಯಿಸಿದೆ. ಸೇರಿದ ಸುಮಾರು ಐವತ್ತು ಮಂದಿ ಜನರಲ್ಲಿ ಬಹುತೇಕರು ವಯಸ್ಸಾದವರೇ. ಇದನ್ನೇ ಮುಂದೆ ಭಾಷಣಕಾರರು ಕೂಡಾ ಬೊಟ್ಟು ಮಾಡಿ ತೋರಿಸಿದರು. ಸಂದರ್ಭ: ಸಂವಾದ ಟ್ರಸ್ಟ್ ನಡೆಸಿದ ಕಾರ್ಯಕ್ರಮದಲ್ಲಿ ಪ್ರೊ| ಓ.ಎಲ್. ನಾಗಭೂಷಣಸ್ವಾಮಿ ಅವರ ಉಪನ್ಯಾಸ. ವಿಷಯ: ಇಂದು ವಚನಗಳು ಪ್ರಸ್ತುತವೇ? ಕಾರ್ಯಕ್ರಮದ ಕೊನೆಯಲ್ಲಿ ನಡೆದ ಚರ್ಚೆಯಲ್ಲಿ ವಚನಗಳಲ್ಲಿ ಬಳಕೆಯಾದ ಕನ್ನಡ ಪದಗಳ ನಿಘಂಟನ್ನು ತಯಾರಿಸಿ ಅವುಗಳಿಗೆ ವ್ಯಾಖ್ಯಾನ ಬರೆಯುವ ಕೆಲಸ ಆಗಬೇಕೆಂಬ ಮಾತು ಬಂತು. ಅದನ್ನು ಯಾರು ಮಾಡಬೇಕೆಂಬ ಜಿಜ್ಞಾಸೆಗೆ ಭಾಷಣಕಾರರು ಉತ್ತರಿಸುತ್ತಾ ವಿಷಾದದಿಂದ "ಈ ಕೆಲಸವನ್ನು ಯಾರೂ ಮಾಡಲಾರರು" ಎಂಬ ಅನುಮಾನ ವ್ಯಕ್ತಪಡಿಸಿದರು.  ಕಾರ್ಯಕ್ರಮಕ್ಕೆ ಬಂದವರೆಲ್ಲಾ ಐವತ್ತರ ಗಡಿ ದಾಟಿದವರೆಂಬುದನ್ನು ಆಗಲೇ ಅವರು ನಮಗೆ ಮನವರಿಕೆ ಮಾಡಿಕೊಟ್ಟಿದ್ದು. ಇದು ಬಹುತೇಕ ಇಂದಿನ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ನಾವು ನೋಡಬಹುದಾದ ವಿಷಯವೇ. ವಚನಗಳನ್ನು ಆನ್ ಲೈನ್ ಸಂಗ್ರಹಿಸಿ ಅವುಗಳನ್ನು ಹುಡುಕುವ ಸಾಮರ್ಥ್ಯವನ್ನು ಇಂದು ಸೃಷ್ಟಿಸಲಾಗಿದೆ. ಇದರಿಂದ ಸಂಶೋಧಕರಿಗೆ ಉಪಯೋಗವಾಗಿದೆಯೇ ಎಂಬುದನ್ನು  ಪ್ರೊ| ನಾಗಭೂಷಣಸ್ವಾಮಿ ಪ್ರಶ್ನಿಸುತ್ತಾ "ಒಂದು ಕಾಲದಲ್ಲಿ ವಚನಗಳು ಸಿಕ್ಕುವುದೇ ಕಷ್ಟವಾಗಿತ್ತು. ಒಂದು ಪದವನ್ನು 25,000 ವಚನಗಳಲ್ಲಿ ಹುಡುಕುವುದು ದುಸ್ಸಾಧ್ಯವಾಗಿತ್ತು. ಇಂದು ಅದನ್ನು ಸೆಕೆಂಡುಗಳಲ್ಲಿ ಮಾಡಬ

ಮಾರ್ಗದರ್ಶಿ

ಇಮೇಜ್
ಸಿ ಪಿ ರವಿಕುಮಾರ್ ಕೆಲವು ವರ್ಷಗಳ ಹಿಂದೆ ನಾನು ಸ್ಯಾಂಟಾ ಕ್ಲಾರಾ (ಕ್ಯಾಲಿಫೋರ್ನಿಯಾ) ದಲ್ಲಿ ಒಂದು ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ. ಆಗ ಸಮ್ಮೇಳನದಲ್ಲಿ ಭಾಗವಹಿಸಿದವರ ಮನರಂಜನೆಗಾಗಿ ಅರ್ಧ ದಿನದ ಕಾರ್ಯಕ್ರಮ ಇತ್ತು. ಮೊದಲು ನಮ್ಮನ್ನು ಅಲ್ಲಿಯ ಒಂದು ಪಾರ್ಕಿಗೆ ಕರೆದುಕೊಂಡು ಹೋದರು; ಅಲ್ಲಿ ಸುತ್ತಾಡಿದ ನಂತರ ಔತಣಕೂಟವಿತ್ತು. "ಇಗೋ ಪಾರ್ಕಿನಲ್ಲಿ ಸುತ್ತಾಡಿಕೊಂಡು ಬನ್ನಿ" ಎಂದು ಸಮ್ಮೇಳನದಲ್ಲಿ ಭಾಗವಹಿಸಲು ದೂರದಿಂದ ಬಂದವರನ್ನು ಬಿಟ್ಟುಬಿಡುವ ಹಾಗಿಲ್ಲ! ಪಾರ್ಕಿನಲ್ಲಿ ಸುತ್ತಾಟಕ್ಕೆ ಒಂದು ವ್ಯವಸ್ಥೆ ಇತ್ತು. ನಮ್ಮ ಲಾಲ್ ಬಾಗಿಗೆ ಅಥವಾ ಕಬ್ಬನ್ ಪಾರ್ಕಿಗೆ ಹೋಲಿಸಿದರೆ ಈ ಪಾರ್ಕ್  ಏನೇನೂ ಇಲ್ಲ.  ಆದರೆ ಬಂದವರನ್ನು ಪಾರ್ಕಿನಲ್ಲಿ ಸುತ್ತಾಡಿಸಿ ಅವರಿಗೆ ಗಿಡಗಳ ವಿಶೇಷದ ಬಗ್ಗೆ ವಿವರಿಸಲು ಜನರಿದ್ದರು - ಇವರೆಲ್ಲರೂ ಬಹುತೇಕರು ವಯಸ್ಸಾದ ಮಹಿಳೆಯರು, ಹಿಂದೆ ಕೆಲಸದಲ್ಲಿದ್ದು ನಿವೃತ್ತಿ ಹೊಂದಿದವರು.  ಪಾರ್ಕಿನಲ್ಲಿದ್ದ ಮರ-ಗಿಡಗಳನ್ನು ತೋರಿಸಿ ಕೆಲವು ಸ್ವಾರಸ್ಯಗಳನ್ನು ತಿಳಿಸುತ್ತಿದ್ದರು. ಉದಾಹರಣೆಗೆ "ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚು ಮಳೆ ಬೀಳುವುದಿಲ್ಲ. ಇಂಥ ಹವಾಮಾನಕ್ಕೆ ಗಿಡಗಳು ಹೇಗೆ ಹೊಂದಿಕೊಳ್ಳುತ್ತವೆ, ನೋಡಿ. ಈ ಗಿಡದ ಎಲೆಗಳು ಹೇಗೆ ಮುಳ್ಳುಗಳ ರೀತಿ ಬೆಳೆದಿವೆ," ಎಂದು ಅವರು ತೋರಿಸಿದಾಗ ಜನ ಕುತೂಹಲದಿಂದ ಚಿತ್ರಗಳನ್ನು ಕ್ಲಿಕ್ ಮಾಡುತ್ತಿದ್ದರು. ಪಾರ್ಕಿನಲ್ಲಿ ನಮಗೆ ಮಾರ್ಗದ

ಕಾಡಿನ ಭಾಗ್ಯ

ಸಿ ಪಿ ರವಿಕುಮಾರ್   ಒಂದು ಕಾಡು. ಅಲ್ಲೊಂದು ಸಿಂಹ ರಾಜ್ಯವಾಳುತ್ತಿತ್ತು. ಬೇಟೆಯಾಡುವುದು ಕಾಡಿನ ನಿಯಮ ಎಂದು ಸಿಂಹರಾಜನಿಗೆ ಗೊತ್ತಿತ್ತು. ಎಲ್ಲ ಪ್ರಾಣಿಗಳೂ ತಮ್ಮ ಅವಶ್ಯಕತೆ ಇದ್ದಷ್ಟು ಬೇಟೆಯಾಡಲು ಸಿಂಹ ಅವಕಾಶ ಮಾಡಿಕೊಟ್ಟಿತ್ತು. ಈ ಸಿಂಹದ ತಮ್ಮಂದಿರಿಗೆ ತಾವೂ ರಾಜ್ಯವಾಳಬೇಕೆಂಬ ಆಸೆ ಉಂಟಾಯಿತು. ರಾಜನ ಸ್ಥಾನಕ್ಕೆ ಚುನಾವಣೆ ಆಗಬೇಕೆಂದು ಹಠ ಹಿಡಿದವು. ಚುನಾವಣೆಯಲ್ಲಿ ರಾಜಸಿಂಹನ ತಮ್ಮಂದಿರು ಹೀಗೆ ಪ್ರಚಾರ ಮಾಡಿದವು - "ಎಲೈ ಪ್ರಾಣಿಗಳೇ! ನಮಗೆ ಯಾರು ಮತ ಹಾಕುತ್ತಾರೋ ಅವರಿಗೆ ಬೇಟೆಯಾಡುವುದೇ ಬೇಕಾಗಿಲ್ಲ. ನಾವೇ ಆ ಪ್ರಾಣಿಗಳಿಗೆ ಇದ್ದಲ್ಲೇ ಆಹಾರ ಸರಬರಾಜು ಮಾಡುತ್ತೇವೆ" ಬೇಟೆಯನ್ನೇ ಅರಿಯದ ಕಿರುಬಗಳನ್ನು ಪ್ರಚಾರಕ್ಕಾಗಿ ಇಟ್ಟುಕೊಳ್ಳಲಾಯಿತು. ಕಿರುಬಗಳು ಪ್ರಾಣಿಗಳಿಗೆ ಹೀಗೆ ಹೇಳಿಕೊಟ್ಟವು. "ನಿಮ್ಮ ಪಾಡು ನೋಡಿದರೆ ಕನಿಕರವಾಗುತ್ತಿದೆ. ಈ ಕಾಡಿನಲ್ಲಿ ಆಹಾರ ಸಿಕ್ಕುವುದೇನು ಸುಲಭವೇ? ಎಷ್ಟೋ ಸಲ ವಾರಗಟ್ಟಲೆ ಹಸಿದುಕೊಂಡಿರಬೇಕು! ನಿಮ್ಮ ರಾಜಸಿಂಹನಿಗೆ ಇದು ಕಾಣಿಸುತ್ತದೆಯೇ? ಇಲ್ಲ. ತನ್ನ ಹೊಟ್ಟೆ ತುಂಬಿದರೆ ಸಾಕು. ರಾಜನಾದವನು ತನ್ನ ಪ್ರಜೆಗಳ ಹೊಟ್ಟೆ ತುಂಬಿಸಬೇಕಾದದ್ದು ತನ್ನ ಕರ್ತವ್ಯವೆಂದು ತಿಳಿಯದಿದ್ದರೆ ಅವನು ರಾಜನಾಗಲು ಅನರ್ಹ. ನೀವು ನಮ್ಮ ಪಕ್ಷಕ್ಕೆ ಮತ ಹಾಕಿ. ನಿಮಗೆ ಹಸಿವೆನ್ನುವುದೇ ಇರುವುದಿಲ್ಲ." ಪ್ರಾಣಿಗಳಿಗೆ ಇದೊಳ್ಳೆಯ ಮೋಜು ಎನ್ನಿಸಿತು. ಒಮ್ಮೆಲೇ ಬೇಟೆಯಾಡುವುದು ತು