ಪೋಸ್ಟ್‌ಗಳು

ಏಪ್ರಿಲ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಲೆಬರಹದಲ್ಲಿ ಯುದ್ಧ

 ಮೀಡಿಯಾ ತಲೆಬರಹದಿಂದ  ದೂರವಾಗಿದೆ ಯುದ್ಧ  ಹೇಳಿದ್ದನ್ನೇ ಹೇಳಿ  ಯಾರೆಷ್ಟು ಮಾಡಿದರೂ ಗೇಲಿ  ವಿಡಿಯೋದಲ್ಲಿ ಬಾಂಬ್ ದಾಳಿ  ಹೇಳಿ ಹೇಳಿ ಹೇಳಿ  ಚಾಲೀಸ ಬಾರಿ ಹೇಳಿ  ಕೆಂಪಾಕ್ಷರಗಳಲ್ಲಿ ರೌದ್ರಾವತಾರ ತಾಳಿ  ಕೂಗಾಡುವ ಮೀಡಿಯಾ ಜನರೂ  ಒಂದೆರಡು ದಿನ ಮರೆತರು  ಕೊಚ್ಚೆಗೆ ಕಲ್ಲೆಸೆಯುತ್ತ.  ಆಗುತ್ತಿವೆಯಂತೆ ಮನೆಗಳು ಇನ್ನೂ ನಿರ್ನಾಮ  ಬಾಂಬ್ ದಾಳಿಗೆ ಬೀಳುತ್ತಿವೆ ಊರು, ನಗರ, ಗ್ರಾಮ  ಕೆಂಪಗೇ ಇದೆಯಂತೆ ನೆಲಕ್ಕೆ ಬಿದ್ದ ನೆತ್ತರು  ಶೋಕಿಸುತ್ತಾರಂತೆ ಇನ್ನೂ ಯಾರೊಬ್ಬರು ಸತ್ತರೂ.  ಬ್ರೇಕಿಂಗ್ ನ್ಯೂಸ್ ಪಾಳಿಯಿಂದ  ಬ್ರೇಕ್ ತೆಗೆದುಕೊಂಡಿವೆ ರಣಹದ್ದು ಪಡೆ   ಮತ್ತೆ ಪಡೆದುಕೊಳ್ಳಲು ಮುಖಪುಟದ ಹಕ್ಕು ದಾಟಿ ಬಿಡುವರೋ ಮುಂದಾಳುಗಳು ಇನ್ನಾವ ಗೆರೆ  ಎಂದು ಭೀತಗೊಂಡು ನಡುಗುತ್ತದೆ ಎದೆ.  ಸಿ ಪಿ ರವಿಕುಮಾರ್, ಏಪ್ರಿಲ್ ೨೪, ೨೦೨೨