ಪೋಸ್ಟ್‌ಗಳು

ಸೆಪ್ಟೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವೈವಾನುಗ್ರಹ

ಇಮೇಜ್
  ವೈವಾ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದಲ್ಲ ಒಂದು ದಿವಸ ಎದುರಿಸಲೇಬೇಕಾದ ಅಗ್ನಿಪರೀಕ್ಷೆ.  ಮೌಖಿಕ ಪರೀಕ್ಷೆಗೆ ನಾವು ವೈವಾ ಎನ್ನುವುದು ರೂಢಿಯಾದರೂ ಇದರ ಮೂಲ ವೀವಾ ವೋಸಿ ಎಂಬುದು.  ಇಲ್ಲಿ ವೀವಾ ಎಂದರೆ ಜೀವಂತ ಎಂಬರ್ಥ. ನಾನು ಹುಡುಗನಾಗಿದ್ದಾಗ ವೀವಾ ಎಂಬ ಹಾರ್ಲಿಕ್ಸ್ ಮಾದರಿಯ ಪಾನೀಯ ಜನಪ್ರಿಯವಾಗಿತ್ತು.  ಲಾಸ್ ಏಂಜಲೀಸ್ ನಗರದಲ್ಲಿ ವೀವಾ ಲ ಪಾಸ್ತಾ ಎಂಬ ಪಾಸ್ತಾ ಖಾದ್ಯಾಲಯದಲ್ಲಿ ತಾಜಾ ಪಾಸ್ತಾ ಮಾಡಿಕೊಡುತ್ತಾರೆ ಎಂಬ ಹೆಗ್ಗಳಿಕೆ. ವೀವಾ ಎಂಬುದನ್ನು ಲೈವ್ ಎಂದು ಈ ನಡುವೆ ಭಾಷಾಂತರಿಸುವ ರೂಢಿ ಬಂದಿದೆ. ಉದಾಹರಣೆಗೆ  ಲೈವ್ ಟ್ರಾನ್ಸ್ಮಿಷನ್ ಎಂದರೆ ನೇರ ಜೀವಂತ ಪ್ರಸಾರ.  ಇನ್ನು ವೀವಾ ವೋಸಿ ಎಂಬಲ್ಲಿ ವೋಸಿ ಎಂದರೆ "ಓಸಿ" ಎಂದು ಖಂಡಿತಾ ಅಪಾರ್ಥ ಮಾಡಬೇಡಿ. ವೋಸಿ ಎಂದರೆ ವಾಯ್ಸ್ ಅಥವಾ ಧ್ವನಿ. ವೀವಾ ವೋಸಿ ಎಂದರೆ "ಜೀವಂತ ಧ್ವನಿಯಲ್ಲಿ" ಎಂಬ ಅರ್ಥ. ಪರೀಕ್ಷಕರ ಮುಂದೆ ಜೀವಂತವಾಗಿ ಕೂತು ಆತನ ಅಥವಾ ಆಕೆಯ ಜೀವಂತ ಧ್ವನಿಯಲ್ಲಿ ಕೇಳಲ್ಪಡುವ ಪ್ರಶ್ನೆಗಳಿಗೆ ಸಾಧ್ಯವಾದಷ್ಟೂ ಜೀವಂತವಾಗಿ ಉತ್ತರಿಸಿ ಜೀವ ಉಳಿಸಿಕೊಳ್ಳುವ ಪರೀಕ್ಷೆಗೆ ಈಗ ವೈವಾ ಎಂಬ ಹೆಸರು ಬಂದಿದೆ. ಕೆಲವರು ವೈವಾಹಿಕ ಎಂಬುದರ ಚುಟುಕು ರೂಪ ಇದೆಂದು ತಪ್ಪು ಕಲ್ಪನೆ ಹರಡಿರುವುದು ಖೇದನೀಯ. ವೈವಾಹಿಕ ಜೀವನದಲ್ಲಿ ಜೀವಂತವಾಗಿದ್ದು ಜೀವಂತ ಧ್ವನಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಹಿಕಪ್ ಇಲ್ಲದೆ ಉತ್ತರಿಸಿ ಜೀವ ಉಳಿಸಿಕೊಂಡವರು ಹೆಚ್ಚು ಜನರಿಲ

ಆರು ತಿಳಿಯರು ನಿನ್ನ ಆರಾ ಪರಾಕ್ರಮ!

ಇಮೇಜ್
  ಆರಾ ಎಂದರೆ ನಮ್ಮ ಸುತ್ತಲೂ ಇರುತ್ತದೆ ಎನ್ನಲಾಗುವ ಅಗೋಚರ ಪ್ರಭೆ.  ದೇವರ ಚಿತ್ರಗಳಲ್ಲಿ ಸುತ್ತಲೂ ಚಿನ್ನದ ಬಣ್ಣದಲ್ಲಿ ಹೊಮ್ಮುತ್ತಿರುವ ಪ್ರಭೆಯನ್ನು ಚಿತ್ರಿಸುವುದು ಸಾಮಾನ್ಯ. ಮನುಷ್ಯರಷ್ಟೇ ಅಲ್ಲ, ಇತರ ಪ್ರಾಣಿಗಳಿಗೂ ಮತ್ತು ನಿರ್ಜೀವ ವಸ್ತುಗಳಿಗೂ ಆರಾ ಇರುತ್ತದೆ ಎಂದು ನಂಬುತ್ತಾರೆ.  ನಾಡಿ ಪಂಡಿತರು ನಾಡಿ ಹಿಡಿದು ನೋಡಿ ಬಾಡಿಯನ್ನು ಏನು ಬಾಧಿಸುತ್ತಿದೆ ಎಂದು ಔಷಧ ಕೊಡುವಂತೆ ಕೆಲವರು ಆರಾ ನೋಡಿ ಔಷಧ ನೀಡುವುದು ಕೂಡಾ ಇದ್ದಾರಂತೆ.  ಆರಾಂಕುಶಮಿಟ್ಟೊಡಂ ಎಂದು ಕವಿಯೊಬ್ಬನು ಹೇಳಿದ್ದು ತನ್ನ ಆರಾಗೆ ಯಾರಾದರೂ ಕುಶದಿಂದ (ಹುಲ್ಲಿನ ಕಡ್ಡಿ) ಚುಚ್ಚಿದರೂ ತನಗೆ ಬನವಾಸಿಯ ಹುಲ್ಲು ಕಾಡು ಮೇಡು ಎಲ್ಲವೂ ನೆನಪಿಗೆ ಬರುತ್ತದೆ ಎಂದು. ಕೆಲವರಿಗೆ ಆರಾ ವಿಷಯ ಗೊತ್ತಿಲ್ಲ ನೋಡಿ, ಅವರು ಕವಿ ಆರು ಅಂಕುಶಗಳನ್ನು ಇಟ್ಟಾಗ ಬನವಾಸಿಯ ನೆನಪು ಮಾಡಿಕೊಳ್ಳುವನೆಂದು ತಪ್ಪಾಗಿ ಅರ್ಥೈಸಿಬಿಡುತ್ತಾರೆ.  ಆರು ಅಂಕುಶ ಯಾಕೆ ಬೇಕು ಹೇಳಿ? ಒಂದು ಅಂಕುಶ ಇಟ್ಟರೂ ಆನೆಯನ್ನು ಕಂಟ್ರೋಲ್ ಮಾಡಬಹುದು ಎಂದು ಇವರಿಗೆ ಹೇಳುವವರು ಆರು?  ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ ಎಂಬ ಗಾದೆಯನ್ನು ಗಮನಿಸಿ. ಇಲ್ಲಿ ಕೂಡಾ ಆರಾ ಪ್ರಸ್ತಾಪ ಇದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೆಲವರು ತಮ್ಮ ಆರಾ ಹೆಚ್ಚಿಸಿಕೊಳ್ಳಲು ಫೋಟೋಶಾಪ್ ಇತ್ಯಾದಿ ಬಳಸಿದರೂ ಅವರ ಆರಾ ಹೆಚ್ಚಲಿಲ್ಲ.   ಸದ್ಯ ಆರಾ ತೀರಾ ಕಡಮೆಯಾಗಿ ಮೂರಾಬಟ್ಟೆ ಆಗಲಿಲ್ಲ ಎನ್ನುವುದು ಸಮಾಧಾನಕರ.  ಪ್ರ

ಹಾಲನು ಮಾರಲು ಹೋಗುವ ಬಾರೇ ಬೇಗ ಸಖೀ

 ನಾನು ದೆಹಲಿ ಐಐಟಿಯ ನೀಲಗಿರಿ ಹಾಸ್ಟೆಲಿಗೆ ವಾರ್ಡನ್ ಆಗಿ ನಿಯುಕ್ತನಾಗಿ ಕೊನೆಗೂ ಮನೆಯನ್ನು ಬದಲಾಯಿಸಿ ವಾರ್ಡನ್ ಮನೆಗೆ ಬಂದೆ. ಆ ಮನೆಯ ಸ್ಥಿತಿ ಏನೂ ಚೆನ್ನಾಗಿರಲಿಲ್ಲ. ಮನೆಯ ಮುಂದೆ ಮತ್ತು ಹಿಂದೆ ಇದ್ದ ದೊಡ್ಡ ತೋಟ ನನಗೆ ಇಷ್ಟವಾಗಿತ್ತು. ಆದರೆ ಅದರಲ್ಲಿ ತೋಟಗಾರಿಕೆ ಮಾಡಲು ನನಗೆಲ್ಲಿ ಸಮಯವಿತ್ತು! ಮಗಳಿಗೆ ಆಗತಾನೇ ಒಂದು ವರ್ಷ ತುಂಬಿತ್ತು.  ಅವಳನ್ನು ಹಿಡಿಯುವುದೇ ಒಂದು ಸಾಹಸ. ಅವಳಿಗೆ ಅವಳ ಅಮ್ಮ ಹಿತ್ತಲಲ್ಲಿದ್ದ ಶೆಹತೂತ್ ಅಥವಾ ಹಿಪ್ಪುನೇರಳೆ ಮರದಲ್ಲಿ ಉಯ್ಯಾಲೆ ಹಾಕಿಕೊಟ್ಟಳು. ಇಬ್ಬರೂ ಈ ಉಯ್ಯಾಲೆಯಲ್ಲಿ ಬೇಕಾದಷ್ಟು ಆಡಿದರು. ದೆಹಲಿಯ ವಾಯುಮಾಲಿನ್ಯ ಆಗಲೂ ಹದಗೆಟ್ಟಿತ್ತು. ಮಗಳಿಗೆ ಹವಾಮಾನ ಬದಲಾವಣೆಯಾದಾಗಲೆಲ್ಲಾ ನೆಗಡಿ, ಕೆಮ್ಮು. ಐಐಟಿಯ ದವಾಖಾನೆಯಲ್ಲಿ ಯಾವಾಗಲೂ ಗಿಜಿಗಿಜಿ ಜನ ತುಂಬಿರುತ್ತಿದ್ದ ಕಾರಣ ನಾವು ಹೊರಗಿನ ವೈದ್ಯರಿಗೆ ಶರಣಾದೆವು.  ಒಬ್ಬ ಹೋಮಿಯೋಪತಿ ವೈದ್ಯೆಯ ಪರಿಚಯವನ್ನು ಯಾರೋ ಹೇಳಿದರು. ಆಕೆಯ ಕ್ಲಿನಿಕ್ ದೂರದಲ್ಲಿತ್ತು. ನನ್ನ ಹೆಂಡತಿ ಟ್ಯಾಕ್ಸಿ ಮಾಡಿಕೊಂಡು ಅಲ್ಲಿಗೆ ಹೋಗಿಬರುತ್ತಿದ್ದಳು.  ಒಮ್ಮೆ ಹೋಮಿಯೋಪತಿಯ ಸಿಹಿಗುಳಿಗೆಗಳ ಬಾಟಲ್ ಮಗಳ ಕೈಗೆ ಸಿಕ್ಕಿ ಅವಳು ಅದರಲ್ಲಿದ್ದ ಸಿಹಿಯ ರುಚಿ ನೋಡಿದಳು..ಹೋಮಿಯೋಪತಿ ಔಷಧಕ್ಕೆ ಕಾಫಿ ಒಂದು ಆಂಟಿಡೋಟ್ ಅಥವಾ ಪ್ರತ್ಯೌಷಧ ಎಂದು ತಿಳಿದಿದ್ದ ನನ್ನ ಹೆಂಡತಿ ಮಗಳಿಗೆ ಸ್ವಲ್ಪ ಕಾಫಿ ಕುಡಿಸಿ ಡಾಕ್ಟರಿಗೆ ಫೋನ್ ಮಾಡಿ ಹೋದಳು.  ದೂರದ ಡಾಕ್ಟರ್ ಬಳಿ ಪದೇಪದೇ ಹೋಗುವುದ

ಕೆಲಸ ಮತ್ತು ಹೆಸರು

ಇಮೇಜ್
  ಕಬೀರನ ಒಂದು ದ್ವಿಪದಿಯಲ್ಲಿ ಅವನು ಹೀಗೆ ಹೇಳಿದ್ದಾನೆ. ಎಲ್ಲಿ ಹೆಸರಿದೆಯೋ ಅಲ್ಲಿ ಕೆಲಸವಿಲ್ಲ, ಎಲ್ಲಿ ಕೆಲಸವಿದೆಯೋ ಅಲ್ಲಿಲ್ಲ ಹೆಸರು ಎಂದೂ ಸೇರವು ಒಂದೇ ಸ್ಥಳದಲ್ಲಿ ತಿಂಗಳು ಮತ್ತು  ನೇಸರು ಬೇಂದ್ರೆ ಅವರ "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಎಂಬ ಸಾಲುಗಳು ನಿಮಗೆ ನೆನಪಾಗಿರಬಹುದು. ಸೂರ್ಯ ಮತ್ತು ಚಂದ್ರ ಒಂದು ಕಡೆ  ಹೇಗೆ ಸೇರುವುದಿಲ್ಲವೋ ಹಾಗೇ ಕೆಲಸ ಮತ್ತು ಹೆಸರು ಎಂದೂ ಒಂದೇ ಕಡೆ ಸೇರುವುದಿಲ್ಲ ಎನ್ನುವುದು ಕಬೀರನ ದ್ವಿಪದಿಯ ಸಾರಾಂಶ.  ಕೆಲಸ ಯಾರದೋ ಆದರೂ ಹೆಸರು ತೆಗೆದುಕೊಳ್ಳುವವರು ಬೇರೆ ಎಂಬ ವಿಷಯವನ್ನು ನೀವು ಪ್ರತಿನಿತ್ಯ ನೋಡುತ್ತೀರಿ.  ಯಾರೋ ಕಷ್ಟ ಪಟ್ಟು ಬರೆದದ್ದನ್ನು ಅನಾಯಾಸವಾಗಿ ಕಾಪಿ ಮಾಡಿ ತಮ್ಮ ಹೆಸರು ಹಾಕಿಕೊಳ್ಳುವುದು ಈಗ ಬಹಳ ಸಾಧಾರಣವಾಗಿದೆ.  ಇದಕ್ಕೆ ಪ್ಲೇಜಿಯರಿಸಮ್ ಎಂಬ ಒಂದು ಇಸಂ ಪದವಿದೆ.   ಆಲೆಕ್ಸ್ ಹೇಯ್ಲಿ ಎಂಬ ಅಮೆರಿಕನ್ ಮೂಲದ ಲೇಖಕ ರೂಟ್ಸ್  ಎಂಬ ಕಾದಂಬರಿ ಬರೆದ. ಕಪ್ಪು ಅಮೆರಿಕನ್ ಜನರ ಬೇರುಗಳನ್ನು ಶೋಧಿಸುವ ಈ ಕಾದಂಬರಿಯ ಸಂಕ್ಷಿಪ್ತ ರೂಪ ಬಹಳ ಹಿಂದೆ ರೀಡರ್ಸ್ ಡೈಜೆಸ್ಟ್ ಪತ್ರಿಕೆ ಪ್ರಕಟಿಸಿತು. ಆಗ ಅದನ್ನು ಓದಿ ಈ ಜನಾಂಗದವರು ಒಳಗಾದ ಶೋಷಣೆ ಕುರಿತು ನನ್ನ ಕಣ್ಣು ತೆರೆಯಿತು. ಮುಂದೆ ಈ ಕಾದಂಬರಿಯಲ್ಲಿ ಹೆರಾಲ್ಡ್ ಕೊರ್ಲಾಂಡರ್ ಎಂಬ ಲೇಖಕನ ದ ಆಫ್ರಿಕನ್ ಕೃತಿಯಿಂದ ಭಾಗಗಳನ್ನು ಕದಿಯಲಾಗಿದೆ ಎಂಬ ಆಪಾದನೆ ಬಂತು.  ನ್ಯಾಯಾಂಗ ಕೇಸ್ ದಾಖಲಾಯಿತು. ಹ

ಬಾ ಹತ್ತರ

ಇಮೇಜ್
 ಬಾ ಹತ್ತರ ಮಿತ್ರರೊಬ್ಬರು ಕರೆ ಮಾಡಿ ಅವರು ಬೆಳಗಿನ ವಾಕಿಂಗ್ ಹೋಗುವಾಗ ಅರ್ಚಕರು "ಚೀತಾಯಾಪತಯೇ ನಮೋ" ಎಂದು ಮಂತ್ರ ಹೇಳಿದ್ದನ್ನು ವಿವರಿಸಿದರು. ಪ್ರಧಾನಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚೀತಾಗಳನ್ನು ಕಾಡಿಗೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅರ್ಚಕರು ತಮ್ಮನ್ನು ತಾವೇ ಮರೆತು ಹಾಗೆ ಹೇಳಿರಬಹುದು ಎಂದು ನಾನು ತರ್ಕಿಸಿದೆ. ಅಂದಹಾಗೆ ನನ್ನ ಮಿತ್ರರು ಹಾರ್ಡ್ ಆಫ್ ಹಿಯರಿಂಗ್.  ಎರಡೂ ಕಿವಿಯಲ್ಲಿ ಗಟ್ಟಿಯಾದ ಚಿನ್ನದ ಇಯರ್ ರಿಂಗ್ ಹಾಕಿಕೊಂಡ ಕಾರಣ ಈ ಹಿಯರಿಂಗ್ ಸಮಸ್ಯೆ ಇದೆ ಎಂದು ನನ್ನ ಸಂದೇಹ.  ಅವರಿಗೆ ಮಂತ್ರ ಸರಿಯಾಗಿ ಕೇಳಿಸಿತೋ ಬಿಟ್ಟಿತೋ! ರಿಟೈರ್ ಆದಮೇಲೆ ಸುಮ್ಮನೇ ಎಲ್ಲದಕ್ಕೂ ಆಕ್ಷೇಪ ತೆಗೆದು ದೂರುವುದು ಅವರ ಸ್ವಭಾವ.   ಅವರು ಅಷ್ಟಕ್ಕೇ ಸುಮ್ಮನಿರದೆ "ನಾನು ಅಲ್ಲೇ ನಿಂತುಕೊಂಡು ಕೇಳಿಸಿಕೊಂಡೆ. ಇವತ್ತು ಶತನಾಮಾವಲಿಯಲ್ಲಿ ಎಪ್ಪತ್ತೆರಡು ಹೆಸರು ಮಾತ್ರ ಹೇಳಿ ಮಂಗಳಾರತಿ ಮಾಡಿದರು" ಎಂದು ದೂರಿದರು. ನನಗೆ ತಡೆಯಲಾಗದೆ "ನೀವು ತಪ್ಪು ಎಣಿಸದಿರಿ. ನೀವು ತಪ್ಪು ಎಣಿಸಿದಿರೋ ಏನೋ?" ಎಂದು ಅಡ್ಡಬಾಯಿ ಹಾಕಿದೆ. ಅದಕ್ಕೆ ಅವರು ಕುಪಿತರಾಗಿ "ಒಂದೊಂದು ಸಲ ನಮೋ ಅಂದಾಗಲೂ ನಾನು ನೆಲದ ಮೇಲೆ ಗೀಟು ಹಾಕುತ್ತಿದ್ದೆ ಕಣ್ರೀ. ನಾಲಕ್ಕು ಗೀಟು ಆದಮೇಲೆ ಐದನೇ ಗೀಟು ಕ್ರಾಸಾಗಿ ಹಾಕಿ ಐದರ ಗುಂಪು ಮಾಡುತ್ತಿದ್ದೆ. ಹದಿನಾಲ್ಕು ಗುಂಪುಗಳಾದ ಮೇಲೆ ಎರಡು ಗೀಟು ಹಾಕಿದ್ದೆ. ಅಷ್ಟಕ್ಕೇ ಅರ್ಚಕರು ನಿಲ್ಲಿ

ನಾನು ಮೌಂಟನ್ ಹೋಂಗೆ ಹೋಗಿದ್ದು

 ಅಮೆರಿಕಾದಲ್ಲಿ ಒಂದು ವರ್ಷ ವೃತ್ತಿ ಜೀವನ ನಡೆಸಿ ಹಿಂದಿರುಗಿದ ಮೇಲೆ ಓದುವುದನ್ನು ಮುಂದುವರೆಸುವ ಅದಮ್ಯ ಬಯಕೆ ನನ್ನಲ್ಲಿ ಎದ್ದಿತು. ಮೌಂಟನ್ ಹೋಮಿನಲ್ಲಿದ್ದಾಗ ವೀಕೆಂಡ್ ಮಾಡಲು ಏನೂ ತೋರುತ್ತಿರಲಿಲ್ಲ. ಆಗ ಇಂದಿನಂತೆ ಪರ್ಸನಲ್ ಕಂಪ್ಯೂಟರ್ ಇರಲಿಲ್ಲ.  ಭಾರತದ ಸಮಾಚಾರ ತಿಳಿದುಕೊಳ್ಳಲು ಇಂದಿನಂತೆ ಇಂಟರ್ನೆಟ್ ಇರಲಿಲ್ಲ. ಆಗ ಹಿಂದೂ ಪತ್ರಿಕೆಯ ಒಂದು ಇಂಟರ್ ನ್ಯಾಷನಲ್ ಆವೃತ್ತಿ ಬರುತ್ತಿತ್ತು. ನಮ್ಮ ತಂದೆ ಅದನ್ನು ಕಳಿಸುವ ವ್ಯವಸ್ಥೆ ಮಾಡಿದ್ದರು. ನಾಲ್ಕು ಪುಟಗಳ ಈ ನ್ಯೂಸ್ ಪೇಪರ್ ಓದಲು ನನ್ನ ಸಹೋದ್ಯೋಗಿಗಳು ಕಾದಿರುತ್ತಿದ್ದರು. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಬಿ.ಇ. ಪದವಿ ಗಳಿಸಿದ ನಂತರ ನಾನು ಮಾಡುತ್ತಿದ್ದ ಕೆಲಸಕ್ಕೂ ನಾನು ಓದಿದ ವಿಷಯಗಳಿಗೂ ಏನೇನೂ ಸಂಬಂಧ ಇಲ್ಲವಲ್ಲ ಎಂದು ನನಗೆ ವ್ಯಥೆಯಾಗುತ್ತಿತ್ತು. ಮೌಂಟನ್ ಹೋಮಿನ ಪಬ್ಲಿಕ್ ಲೈಬ್ರರಿಯಲ್ಲಿ ಎಲೆಕ್ಟ್ರಾನಿಕ್ಸ್ ಸಂಬಂಧಿಸಿದ ಪುಸ್ತಕಗಳನ್ನು ಹುಡುಕಿದೆ. ಸಿಕ್ಕಲಿಲ್ಲ.  ಮುಂದೆ ಕ್ಲಿಯರ್ ವಾಟರಿಗೆ ಬಂದಾಗ ನನ್ನ ಮಿತ್ರ ರವಿಚಂದ್ರನ್ ಯೂನಿವರ್ಸಿಟಿ ಆಫ್ ಸೌತ್ ಫ್ಲಾರಿಡಾದಲ್ಲಿ ಓದುತ್ತಿದ್ದುದನ್ನು ನೋಡಿ ನನ್ನ ಆಸೆ ಮತ್ತೆ ಜಾಗೃತವಾಯಿತು. ಅವನು ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂ.ಎಸ್.  ಮಾಡುತ್ತಿದ್ದ. ಅವನ ಪುಸ್ತಕಗಳನ್ನು ನೋಡಿದಾಗ ನಾನು ಅಕಾಡೆಮಿಕ್ಸ್ ನಿಂದ ಎಷ್ಟು ದೂರ ಇದ್ದೇನೆ ಎಂದು ವ್ಯಥೆಯಾಗುತ್ತಿತ್ತು.   ಗೇಟ್ ಪರೀಕ್ಷೆಯಲ್ಲಿ ನಾನು ಉತ್ತಮ ಸ್ಥಾನ  ಗಳಿಸಿದ್ದೆ.

ದಂಡಂ ದಶಗುಣಂ

ಇಮೇಜ್
 ದಂಡಂ ದಶಗುಣಂ ಥಂಡಾಪಾನಿ ಎಂದು ಉತ್ತರ ಭಾರತೀಯರಿಂದ ಕರೆಸಿಕೊಳ್ಳುವ ದಂಡಪಾಣಿಗಳು ನಿಮಗೂ ಗೊತ್ತಿರಬಹುದು. ದಂಡ ಎಂದರೆ ಕೋಲು. ಪಾಣಿ ಎಂದರೆ ಕೈ ಎಂದು ಅರ್ಥ.   ಪಾಣಿಗ್ರಹಣ ಎಂದರೆ ಕೈ ಹಿಡಿಯುವುದು. ಮದುವೆಯ ದಿನ ಗಂಡು ಹೆಣ್ಣಿನ ಕೈ ಹಿಡಿದು ಸಪ್ತಪದಿ ತುಳಿಯುವ ಪದ್ಧತಿ ಇರುವುದರಿಂದ ಮದುವೆಗೆ ಪಾಣಿಗ್ರಹಣ ಎನ್ನುವ ಹೆಸರು ಬಂದಿದೆ. ಕೆಲವರು ಇದನ್ನು ಪ್ರಾಣಿಗ್ರಹಣ ಎಂದು ತಪ್ಪಾಗಿ ಬರೆಯುತ್ತಾರೆ. ಮದುವೆಯ ಗಂಡು ಅವರಿಗೆ ಪಾಪದ ಪ್ರಾಣಿಯಂತೆ ಮತ್ತು ಕಾಶಿಯಾತ್ರೆಗೆ ಹೊರಟ ಈ ಬಡಪ್ರಾಣಿಯನ್ನು ಹಿಡಿದು ತರುವ ಬೇಟೆಗಾರನಂತೆ ಮಾವನು ತೋರಿದ ಕಾರಣ ಕೆಲವರು ಈ ಪದವನ್ನು ಅಪಾರ್ಥ ಮಾಡಿಕೊಂಡಿರುವುದು ಸಾಧ್ಯ.  ಕಾಶಿಯಾತ್ರೆಯಿಂದ ಕರೆತಂದ ವರನನ್ನು ಸುಧಾರಿಸಿಕೋ ಎಂದು ಕುರ್ಚಿಯ ಮೇಲೆ ಕೂಡಿಸಿ, ಛತ್ರಿ ಹಿಡಿದು, ಗಾಳಿ ಬೀಸಿ ಕೈಗೆ  ಥಂಡಾಪಾನಿಯ ಲೋಟವನ್ನು ಕೊಡುವ ಪದ್ಧತಿ ಇರುವುದರಿಂದ ಉತ್ತರಭಾರತೀಯರು ಹೆಸರನ್ನು  ಅಪಾರ್ಥ ಮಾಡಿಕೊಂಡಿರುವ ಸಾಧ್ಯತೆಯೂ ಇದೆ. ದಂಡ ಎಂಬ ಪದವು ಹಿಂದಿಯ ಡಂಡಾ ಎಂಬ ಪದಕ್ಕೆ ಮೂಲ.  ನಮ್ಮಲ್ಲಿ ಕೋಲನ್ನು ಹಲವು ರೀತಿಗಳಲ್ಲಿ ಬಳಸುತ್ತಾರೆ. ನಡೆಯಲು ಆಧಾರಕ್ಕಾಗಿ ಬಳಸುವ ಕೋಲು ನಡೆಗೋಲು. ಮೊಸರು ಕಡೆಯಲು ಬಳಸುವ ಕೋಲು ಕಡೆಗೋಲು.  ಮೇಷ್ಟ್ರು ಹೊಡೆಯಲು ಬಳಸುವ ಕೋಲಿಗೆ ಹೊಡೆಗೋಲು ಎಂಬ ಪದವನ್ನು ಯಾರೂ ಬಳಸಿದ್ದು ಕಾಣೆ. ಈಗ ಮೇಷ್ಟ್ರುಗಳು ಹೊಡೆಯವ ಕೆಲಸವನ್ನು ಬಿಟ್ಟಿರುವ ಕಾರಣ ಹೊಡೆಗೋಲು ಕೂಡಾ ಮೂಲೆ ಸೇರಿದೆ.  ಕನ್ನಡದಲ್ಲಿ

ಸಂತಾಪ ಸಂದೇಶ (ಗಜಲ್)

 ಈಗ ಎಲ್ಲರ ಸಾವಿಗೂ ಎಲ್ಲರೂ ಸಂತಾಪ ಸೂಚಿಸುವುದು ಪದ್ಧತಿ ಎಲ್ಲರೂ ಕಾಮೆಂಟ್ ಮಾಡುವರು ಓಂ ಶಾಂತಿ, ಸದ್ಗತಿ ರಾಣಿಯ ಸಾವಿಗೆ ಓಂ ಶಾಂತಿ ಆರ್ ಐ ಪೀ ರೆಸ್ಟ್ ಇನ್ ಪೀಸ್ ಕೇಳರಿಯದದ್ದಿರೂ ಕಾಣದಿದ್ದರೂ ಕಡಿಮೆಯಿಲ್ಲ ಕಕ್ಕುಲಾತಿ ಕಣ್ಣೀರು ಹಾಕುವರು ತುಂಬಲಾರದ ನಷ್ಟ ಇದೆಂದು ವರ್ಷಗಳಿಂದಲೂ ಏನೂ ಬರೆಯದೇ ಸತ್ತರೂ ಸಾಹಿತಿ ಸತ್ತವರು ಮಾಡದ ಸಾಧನೆ ಮತ್ತು ಆಡದ ಮಾತು ಒಂದೆರಡು ದಿನ ಸುತ್ತುವುವು ಹೀಗೆ ಸೃಷ್ಟಿಸಿದ ಮಾಹಿತಿ ಆನಂತರ ಮರೆತು ಮುನ್ನಡೆಯುವುದು ಜಗತ್ತು ಎಷ್ಟು ದಿನ ಮಾಡಲಾದೀತು ಯಾರನ್ನಾದರೂ ಪ್ರೀತಿ! ಸಿ. ಪಿ. ರವಿಕುಮಾರ್ #ಗಜಲ್

ಜಿಯಾಸರಾಯ್

ಇಮೇಜ್
  ಐಐಟಿಯಲ್ಲಿ ನಡೆಯುತ್ತಿದ್ದ ಪೂಜೆ ಎಂದರೆ ವಿಶ್ವಕರ್ಮ ಡೇ ಮಾತ್ರ ಎಂದು ನನ್ನ ನೆನಪು. ನಮ್ಮ ಡಿಪಾರ್ಟ್ಮೆಂಟಿನ ಕಂಟ್ರೋಲ್ ಲ್ಯಾಬಿನಲ್ಲೋ ಅಥವಾ ಪವರ್ ಸಿಸ್ಟಮ್ಸ್ ಲ್ಯಾಬಿನಲ್ಲೋ ಇದನ್ನು ಆಯೋಜಿಸುತ್ತಿದ್ದರು.  ಬಹುಶಃ ದಕ್ಷಿಣದಲ್ಲಿ ಆಯುಧಪೂಜೆ ಇದ್ದಂತೆ ಉತ್ತರದಲ್ಲಿ ವಿಶ್ವಕರ್ಮ ಡೇ. ವಿಶ್ವಕರ್ಮ ಒಬ್ಬ ಇಂಜಿನಿಯರ್ ಎಂಬ ನಂಬಿಕೆಯಿಂದಲೋ ಏನೋ ಈ ರೂಢಿ ನಡೆದುಬಂದಿದೆ.  ಎಲ್ಲರಿಗೂ ಆಹ್ವಾನವಿರುತ್ತಿತ್ತು. ಬರುತ್ತಿದ್ದವರು ಕಡಿಮೆ.  ನಮ್ಮ ಡಿಪಾರ್ಟ್ಮೆಂಟಿನ ಕ್ಲಾಸ್ ಡಿ ನೌಕರರಾದ ಪಂಡಿತ್ ಜೀ ಪೂಜೆ ಸಲ್ಲಿಸುತ್ತಿದ್ದರು. ಎಲ್ಲ ಲ್ಯಾಬ್ ಸಹಾಯಕ ಸಿಬ್ಬಂದಿಯೂ ಜರೂರಾಗಿ ಸೇರುತ್ತಿದ್ದರು. ಪೂಜೆಯ ನಂತರ ಎಲ್ಲರಿಗೂ ಸಿಹಿತಿಂಡಿ ಪ್ರಸಾದ ಸಿಕ್ಕುತ್ತಿತ್ತು.  ಪೂಜೆಗೆ ಬೇಕಾದ ಹಣವನ್ನು ಡಿಪಾರ್ಟ್ಮೆಂಟಿನ ಸಿಬ್ಬಂದಿಯಿಂದ ಚಂದಾ ರೂಪದಲ್ಲಿ ಪಡೆದುಕೊಳ್ಳುತ್ತಿದ್ದರು.  ಐಐಟಿಯಲ್ಲಿದ್ದ ಕನ್ನಡ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿ ಗಣೇಶನ ಹಬ್ಬ ಆಚರಿಸುವುದು ಕೂಡಾ ರೂಢಿಯಾಗಿತ್ತು. ಪ್ರೊ ಇಂದಿರೇಶನ್ ಅವರು ಐಐಟಿಯಲ್ಲಿ ಇದ್ದಷ್ಟು ದಿವಸವೂ ಅವರ ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು.  ಏನಿಲ್ಲವೆಂದರೂ ಐವತ್ತು ಜನ ಸೇರುತ್ತಿದ್ದರು. ಹಾಡು, ಭಜನೆ ಕಾರ್ಯಕ್ರಮಗಳ ನಂತರ ಎಲ್ಲರಿಗೂ ಪ್ರಸಾದ ಸಿಕ್ಕುತ್ತಿತ್ತು. ಇದಕ್ಕೆ ಚಂದಾ ಕೇಳುವ ಸಂಪ್ರದಾಯ ಇರಲಿಲ್ಲ.  ಪ್ರೊ ಇಂದಿರೇಶನ್ ಅವರು ನಿವೃತ್ತರಾದ ನಂತರ ಪ್ರೊ ಸುಬ್ಬರಾವ್ ಅಥವಾ ಪ್ರೊ ಮೂರ್ತಿ ಅವರ ಮನ

"ಅರಸಿಗಳಿಗಿದು ವೀರ

(ವಿಂಡ್ಸರ್ ಕಾಸಲ್ ಊಟದ ಮನೆಯ ಚಿತ್ರ ನೋಡಿ) ಊಟಕ್ಕೆ ಮುಂಚೆ ಗೋವಿಂದನನ್ನು  ನೆನೆಯುವಂತೆ ಇಲ್ಲಿ ಗೋ ವಿಂಡ್ಸರ್ ಎಂದೇ ಊಟವನ್ನು ಪ್ರಾರಂಭಿಸುತ್ತಾರಂತೆ. ಇದು ವಿಂಡ್ಸರ್ ಕಾಸಲ್ ಅರಮನೆಯಲ್ಲಿ ಊಟದ ದೃಶ್ಯ.  ಇದು  ಸಂಜಯ ಲೀಲಾ ಬನ್ಸಾಲಿ ಅವರ ಚಿತ್ರದ ದೃಶ್ಯ ಎಂದು ಕೆಲವರು ಸುಳ್ಳು ಹೇಳುತ್ತಿದ್ದಾರೆ.  ಸಂಜಯನು ಉವಾಚಿಸುವ ಮೊದಲೇ ರಾಣಿಯು ಎಷ್ಟು ಜನರಿಗೆ ಆಹ್ವಾನ ಹೋಗಬೇಕು, ಯಾರು ಎಲ್ಲಿ ಕೂಡಬೇಕು, ಏನೇನು ವ್ಯಂಜನಗಳನ್ನು ತಯಾರಿಸಬೇಕು ಮುಂತಾದವುಗಳನ್ನು ನಿರ್ಧರಿಸಿ ಪ್ರಕಟಣೆ ಹೊರಡಿಸುತ್ತಿದ್ದಳು.  ರಾಣಿಗೆ ಏನು ಕೆಲಸ ಎಂದು ಕೆಲವರು ಕುಹಕ ಆಡುವರಲ್ಲ, ಅವರು ಈ ಚಿತ್ರ ನೋಡಲಿ. ನೋಡಲಿ ಅದೆಷ್ಟು ಅಸಂಖ್ಯ ವಿವರಗಳನ್ನು ಕುರಿತು ರಾಣಿವಾಸವು ಯೋಚಿಸಬೇಕಾದ ಅಗತ್ಯವಿತ್ತು ಎಂದು! ಡ್ಯೂಕ್ ಆಫ್ ಬರ್ಮಿಂಗಮ್ ಅವರಿಗೆ ಬೇಯಿಸಿದ ಬಟಾಟೆ ಇಷ್ಟ. ಆದರೆ  ಆದರೆ  ಲೇಡಿ ಬರ್ಮಿಂಗಮ್ ಅವರಿಗೆ ಇದರಿಂದ ವಾಯು ದೋಷ ಉಂಟಾಗುವುದು.  ಅರ್ಲ್ ಆಫ್ ಬಕಿಂಗ್ ಹ್ಯಾಮ್ ಗೆ ಹ್ಯಾಮ್ ಇಲ್ಲದೇ ಊಟ ಸೇರದು. ಒಂದೇ ಎರಡೇ ಈ ಬಗೆಯ ಕುಶಪಿಷ್ಟೆಗಳು!  ರಾಣಿ ಇಡೀ ದಿನ ಕೂತರೂ ಮುಂದಿನ ದಿನದ ಮೆನುವಿನಲ್ಲಿ ಏನಾದರೂ ಸಣ್ಣ ಲೋಪ ಯಾರಿಗಾದರೂ ಕಾಣಸದೇ ಇರದು.  ಇನ್ನು "ಮಾಡಿದ್ದುಣ್ಣೋ ಮಹರಾಯ" ಎಂಬ ಹಾಗೆ ಮಾಡಿದ್ದನ್ನು ಮಾತಿಲ್ಲದೆ ಉಣ್ಣುವ ಮಹಾರಾಜರಿಗೆ ಅಂಜದಿದ್ದರೂ ಮಾತಿಲ್ಲದೆ ಬಡಿಸುವ ಮಹಾಗಾಂಭೀರ್ಯದ ವ್ಯಾಲೆಗಳಿಗೆ ರಾಣಿ ಕೂಡಾ ಹೆದರುವಳು ಎಂಬುದು ಗುಪ್ತ ಸತ್ಯ. ನೋ

ಅಂತರ್ಜಾಲೀಯ ವಿವಾಹ

 ಮದುವೆ ಮಾಡಿಸಲು ಬರಬೇಕಾಗಿದ್ದ ಪುರೋಹಿತರಿಗೆ ಆಟೋ, ಓಲಾ, ಊಬರ್ ಯಾವುದೂ ಸಿಕ್ಕಲಿಲ್ಲ.  ಪುರೋಹಿತರು ಇರಲಿ, ಮದುವೆಯ ಗಂಡು ಕೂಡಾ ರೈಲ್ವೆ ಸ್ಟೇಷನ್ನಲ್ಲಿ ಪೆಚ್ಚಾಗಿ ಕೂತಿದ್ದ. ಅವನ ಪರಿವಾರದವರು ಎಲ್ಲಾದರೂ ಬ್ರೇಕ್ ಫಾಸ್ಟ್ ಸಿಕ್ಕಬಹುದೇ ಎಂದು ಹುಡುಕುತ್ತಾ ಓಡಾಡುತ್ತಿದ್ದರು. ಮದುವೆಯ ಹೆಣ್ಣು ಮತ್ತು ಅವಳ ಪರಿವಾರದವರು ನಿಮಿಷ ನಿಮಿಷಕ್ಕೂ ಕಾಲ್ ಮಾಡಿ ಯಾವಾಗ ಬರುವಿರಿ ಎಂದು ಗಂಡಿನ ಕಡೆಯವರನ್ನು ಕೇಳುತ್ತಿದ್ದಿದ್ದನ್ನು ಕೇಳಿ ಕೇಳಿ 'ಕಾಲ ಪುರುಷ'ನ ಬ್ಯಾನ್ಡ್ ವಿಡ್ತ್ ಕೂಡಾ ಲುಪ್ತವಾಗಿ '"ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ" ಎಂಬ ಮೆಸೇಜಿನ "ತಾಳಿ ಭಾಗ್ಯ"ವನ್ನೇ ಪಡೆಯಬೇಕಾಯಿತು.  ತಾನು ವಧೂಪರೀಕ್ಷೆಯ ದಿನ "ದೇವ ಬಂದಾ," "ಮೆಲ್ಲ ಮೆಲ್ಲನೆ ಬಂದನೇ",  "ಯಾರೇ ಬಂದವರು" ಇತ್ಯಾದಿ "ಬಂದ" ಪದಖಚಿತ ಕೀರ್ತನೆಗಳನ್ನು ಹಾಡಿದ್ದರಿಂದಲೇ ಈ ಬಂದ್ ಬಂದು ವಕ್ಕರಿಸಿತೇ ಎಂದು ವಧು ಮರುಗಿದಳು. ಕೊನೆಗೂ ಹೆಣ್ಣಿನ ಅಜ್ಜಿಗೆ ಈ ಸಮಸ್ಯೆಯ ಪರಿಹಾರ ಹೊಳೆದೇ ಬಿಟ್ಟಿತು. ಮದುವೆ ಹೆಣ್ಣನ್ನು ಲ್ಯಾಪ್ ಟಾಪ್ ಮುಂದೆ ಕೂಡಿಸಿ ಐಟಿ ಗೌರಿ ಪೂಜೆ ಮಾಡಮ್ಮಾ ಎಂದು ಬಾಸಿಂಗ ಕಟ್ಟಿಯೇ ಬಿಟ್ಟರು.  ಓಲಾ ಇಲ್ಲದೆ ಬರಲಾಗದ ಓಲಗದವರ ಕೊರತೆ ನೀಗಲು ವಧುವಿನ ತಮ್ಮ ಕಿಟ್ಟಿ ಯೂಟ್ಯೂಬಿನಲ್ಲಿ ಹುಡುಕಿ ನಾದಸ್ವರವನ್ನು ನುಡಿಸಿದ್ದು ಎಲ್ಲರ ಮೈಯಲ್ಲೂ ಉತ್ಸಾಹಸಂಚಾರವಾಯಿತು.

ಅಕ್ಕಿಯೊಳು ಅನ್ನವನು (ಹರಟೆ)

 ಅಕ್ಕಿಯೊಳು ಅನ್ನವನುಮೊದಲಾರು ಕಂಡವರು ಎಂದು ಹೋಗಿಹೋಗಿ  ಮಂಕುತಿಮ್ಮನನ್ನು ಕೇಳಿದರೆ ಅದು ತೀರಾ ಹೈ ಎಕ್ಸ್ಪೆಕ್ಟೇಶನ್ ಎನಿಸುವುದಿಲ್ಲವೇ? ಅನ್ನವನ್ನು ಅಕ್ಕಿಯಿಂದ ಮಾಡುತ್ತಾರೆ ಎಂದೇ ಎಷ್ಟೋ ಜನರಿಗೆ ತಿಳಿಯದು. ರೈಸ್ ಅಂಡ್ ಶೈನ್ ಎಂದಷ್ಟೇ ಸುಲಭವಾಗಿ ಸ್ವಿಗ್ಗಿಯವನು ಹುಗ್ಗಿಯನ್ನು ಅಥವಾ ಯೆಲ್ಲೋ ಕಲರ್ಡ್ ರೈಸ್ ಅನ್ನೂ ಮತ್ತು ಜೋಮಾಟೋದವನು ಟೊಮಾಟೋ ಭಾತ್ ಅಥವಾ ರೆಡ್ ಕಲರ್ಡ್ ರೈಸ್ ಅನ್ನೂ ತಂದುಕೊಡಬಲ್ಲ ಈ ಯುಗದಲ್ಲಿ ಅವೇಕ್ ಅರೈಸ್ ಸ್ಟಾಪ್ ನಾಟ್ ಅಂಟಿಲ್ ಯು ಫೈಂಡ್ ಎ ದರ್ಶಿನಿ ಎಂಬ ದಾರ್ಶನಿಕ ಮಾತುಗಳು ಸಪ್ಪೆ ಎನ್ನಿಸುವುದು ಸಹಜ. ಅಮೆರಿಕಾದಲ್ಲಿ ಮಕ್ಕಳಿಗೆ ಹಾಲು ಎಲ್ಲಿಂದ ಬರುತ್ತದೆ ಎಂದು ಕೇಳಿದಾಗ ಸೂಪರ್ ಮಾರ್ಕೆಟ್ ಕ್ಯಾನುಗಳಲ್ಲಿ ಎಂಬ ಉತ್ತರ ಬಂದದ್ದು ಹಳೆಯ ಸುದ್ದಿ. ಕ್ಯಾನಿನೊಳು ಹಾಲನ್ನು ಮೊದಲಾರು ಕಂಡವರು ಎಂದು ಕೇಳುವ ಅಗತ್ಯವೇ ಇಲ್ಲ. ಬೆಂಗಳೂರಿನ ಮಕ್ಕಳಿಗೂ ಹಾಲಿನ ಪ್ರಶ್ನೆ ಕೇಳಿದರೆ ಅದು ಪ್ಯಾಕೆಟ್ನಲ್ಲಿ ಬರುತ್ತದೆ ಎಂಬ ಉತ್ತರ ಬರಬಹುದು.  "ಅಜೀ ಕಹೋ ಕ್ಯಾ ಹಾಲ್ ಹೈ? ತುಮ್ ಭೀ ನ ಸಮಝೆ ಕಮಾಲ್ ಹೈ" ಎಂದು ಗೀತಾ ದತ್ ಬಹಳ ಹಿಂದೆಯೇ ಹಾಡಿದರು. ಇದರ ಅರ್ಥ ಹೀಗೆ. ಮಗು ಅಜ್ಜಿಯನ್ನು "ಅಜ್ಜೀ ಹಾಲು ಎಂದರೇನು?" ಎಂದು ಕೇಳುತ್ತಿದೆ.  ಅಜ್ಜಿಯು "ನಿನಗೆ ಗೊತ್ತಿಲ್ಲವೇ ಅದೊಂದು ಮ್ಯಾಜಿಕ್" ಎಂದು ಉತ್ತರಿಸುತ್ತಾಳೆ. ನೀರು ಕುಡಿದ ಹಸು ಹಾಲ್ ಎಫೆಕ್ಟ್ ಮೂಲಕ ಹಾಲಾಗಿ ಮಾರ್ಪಡಿಸಿ  ಕೊಟ್ಟ

ಗುರ್ ಎನ್ನುವ ಗುರು

ಇಮೇಜ್
ಗುರ್ ಎನ್ನುವವನೇ ಗುರು ಎಂಬುದರಲ್ಲಿ ಗುಲಗಂಜಿಯಷ್ಟೂ ನಿಜವಿಲ್ಲ. ಗುರುಗಳು ಗುರ್ ಎನ್ನಬಹುದು, ಆದರೆ ಗುರ್ ಎನ್ನುವವರೆಲ್ಲ ಗುರುಗಳಲ್ಲ. ಗುರ್ ಎನ್ನುವ ರಾಜಕಾರಣಿಗಳು ಎಷ್ಟೋ ಜನರನ್ನು ನೀವು ಗುರುತಿಸಬಹುದು. ಆದರೆ ಅವರೆಲ್ಲರನ್ನೂ ಗುರು ಎನ್ನಲಾದೀತೆ? ಮಾತು ಮಾತಿನಲ್ಲಿ ಸ್ನೇಹಿತರನ್ನು  ಏನ್ ಗುರೂ ಎನ್ನುವವರೂ ಇದ್ದಾರೆ. ಆದರೆ ಸ್ನೇಹಿತರಿಂದ ಅವರು ಏನನ್ನು ಕಲಿತರೋ ಹೇಳಲಾಗದು.  ನಿಮಗೆ ಅದೃಷ್ಟ ಇದ್ದರೆ ನಿಮ್ಮ ಸ್ನೇಹಿತರೇ ನಿಮಗೆ ಉತ್ತಮ ಗುರುಗಳಾದಾರು. ಬೆತ್ತದ ಏಟಿನಿಂದ ಮೇಷ್ಟ್ರು ಹೇಳಿಕೊಡಲಾಗದ್ದನ್ನು ಎಷ್ಟೋ ಸಲ ಸ್ನೇಹಿತರು ಸರಳವಾಗಿ ಹೇಳಿಕೊಟ್ಟುಬಿಡುವುದನ್ನು ಕಾಣುತ್ತೇವೆ. ಇಟ್ ಟೇಕ್ಸ್ ಎ ವಿಲೇಜ್ ಟು ರೇಸ್ ಎ ಚೈಲ್ಡ್ ಎಂದು ಹೇಳುವುದು ಇದಕ್ಕೇ. ನಮ್ಮ ಸೋಮನಾಥನು ಇದನ್ನೇ ಕೆಲವಂ ಬಲ್ಲವರಿಂದ ಕಲ್ತು ಇತ್ಯಾದಿಯಾಗಿ ಹೇಳಿದ್ದಾನೆ. ಬಲ್ಲವರು ಯಾರು ಎಂದು ಹೇಳುವುದೇ ಈಗ ಕಷ್ಟವಾಗಿದೆ. ಏನೇ ವಿಷಯವನ್ನು ಇಂಟರ್ನೆಟ್ನಲ್ಲಿ ಹುಡುಕಿದರೆ ಅದೆಷ್ಟು ಹಿಟ್ಸ್ ಸಿಕ್ಕುತ್ತವೆ ಎಂದರೆ ಗೂಗಲಿಗೂ ಸುಸ್ತಾಗಿ ಹೋಗುವಷ್ಟು.   ಅದೆಷ್ಟು ಜನ ಪಂಡಿತರು ಇದ್ದಾರಪ್ಪ ಎಂದು ಆಶ್ಚರ್ಯವಾಗುವಷ್ಟು.  ವಿಕಿಪೀಡಿಯವಂತೂ ಸರ್ವರೊಳಗೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆಗಿಬಿಟ್ಟಿದೆ. ಕೆಲವರು ವಿಕಿಯಿಂದಲೇ ಕಲ್ತು ವಿದ್ಯೆಯ ಸಣ್ಣ ಗುಡ್ಡಗಳಾಗಿ ಶೋಭಿಸುವುದನ್ನೂ ನೀವು ಕಾಣುತ್ತೀರಿ. ಇದನ್ನು ನೋಡಿ ನನ್ನ ಸ್ನೇಹಿತರೊಬ್ಬರು ಕೆಲವಂ ಅಲ್ಲಿಲ್ಲಿಂದ  ಕದ್ದು ಎಂದ

ಮೂಷಕದ ಬೇಟೆ

 ಟೀಚರ್ - ಯಾವಾಗಲೂ ಟೀಗಾಗಿ ಅತ್ತಿತ್ತ ಚಲಿಸುತ್ತಿರುವವನೇ ಟೀಚರ್.  ಹೇಗೆ ನೀರಿನಲ್ಲಿ ಚಲಿಸುವ ಪ್ರಾಣಿಯು ಜಲಚರವೋ, ಆಕಾಶದಲ್ಲಿ ಚಲಿಸುವ ಪಕ್ಷಿಯು ಖೇಚರವೋ, ಟೀಗಾಗಿ ಓಡಾಡುವ ವ್ಯಕ್ತಿಗಳು ಟೀಚರರು. ನಾನು ಐಐಟಿ ಸೇರಿದ ಹೊಸತರಲ್ಲಿ ಟೀ ಕುಡಿಯಲು ಪಕ್ಕದಲ್ಲಿದ್ದ ಜಿಯಾ ಸರಾಯ್ ಎಂಬ "ಹಳ್ಳಿ"ಗೆ ಹೋಗುತ್ತಿದ್ದೆ.  ದೆಹಲಿಯಲ್ಲಿ ಅತ್ಯಂತ ಆಧುನಿಕ ಎನ್ನಿಸಿಕೊಳ್ಳುವ ಏರಿಯಾಗಳ ನಡುವೆ ಇಂಥ ಹಳ್ಳಿಗಳು ಸಿಕ್ಕುತ್ತವೆ.  ಆಧುನಿಕ ಏರಿಯಾಗಳಿಗೆ ತರಕಾರಿಯ ಹಣ್ಣು ಇತ್ಯಾದಿಗಳನ್ನು ಪೂರೈಸಲು, ಮನೆಗೆಲಸಕ್ಕೆ ಆಳುಗಳನ್ನು ಪೂರೈಸಲು ಇಂಥ ಹಳ್ಳಿಗಳು ಬೇಕೆಂದು ದೆಹಲಿಯನ್ನು ಪ್ಲಾನ್ ಮಾಡಿದವರ ಮುಂದಾಲೋಚನೆ ಇರಬಹುದು. ಜಿಯಾ ಸರಾಯಿಯಲ್ಲಿದ್ದ ಲಕ್ಕಿ ರೆಸ್ಟೋರೆಂಟ್ ಐಐಟಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತೊಂದು ತಂಗುದಾಣವಾಗಿತ್ತು. ಹಳ್ಳಿಯಲ್ಲಿದ್ದ ಅನೇಕ ಪೀಜೀ ಹಾಸ್ಟೆಲುಗಳಲ್ಲಿ ತಂಗಿದ್ದ ಯುವಕ ಯುವತಿಯರು ಐಐಟಿಯ ಲೈಬ್ರರಿಯಲ್ಲಿ ಬಂದು ಓದಿಕೊಳ್ಳುವುದು ಸಾಮಾನ್ಯವಾಗಿತ್ತು.  ನನ್ನ ವಿದ್ಯಾರ್ಥಿಗಳೊಂದಿಗೆ ನಾನು ಲಕ್ಕಿ ರೆಸ್ಟೋರೆಂಟಿಗೆ ಹೋಗಿ ಚಹಾ ಕುಡಿಯುವುದು ವಾಡಿಕೆಯಾಗಿತ್ತು.  ಸಂಶೋಧನೆ ಕುರಿತು ವಿಚಾರ ವಿನಿಮಯ ನಡೆಸಲು ಕೂಡಾ ಲಕ್ಕಿ ರೆಸ್ಟೋರೆಂಟ್ ಸೂಕ್ತ ಸ್ಥಳವಾಗಿತ್ತು.  ಮುಂದೆ ನಾನು ನಮ್ಮ ಡಿಪಾರ್ಟ್ಮೆಂಟ್ನನಲ್ಲಿರುವ ಟೀ ಕ್ಲಬ್ ಸದಸ್ಯನಾದ ಮೇಲೆ ಲಕ್ಕಿ ರೆಸ್ಟೋರೆಂಟಿಗೆ ಹೋಗುವುದು ನಿಂತಿತು.  ಎಲ್ಲ ಡಿಪಾರ್ಟ್ಮೆಂಟ್ಗಗಳಲ್ಲೂ ಇರು

ಮೋದಕೋಪಾಖ್ಯಾನ

 ಮೋದಕೋಪಾಖ್ಯಾನ ಸಿ. ಪಿ. ರವಿಕುಮಾರ್ ನೀರಿಳಿಯದ ಗಂಟಲಿನಲ್ಲಿ ಕಡುಬು ತುರುಕಿದಂತೆ ಎನ್ನುವ ಮುದ್ದಣನ ಮಾತನ್ನು ಕೇಳಿದಾಗ ನಾನು ಕರಿಗಡುಬನ್ನು ಯಾರೋ ನನ್ನ ಗಂಟಲಿಗೆ ತುರುಕುತ್ತಿರುವ ದೃಶ್ಯ ಕಲ್ಪಿಸಿಕೊಂಡು ಭೀತನಾಗಿದ್ದೇನೆ. ಬಹುಶಃ ಮುದ್ದಣನು ಕಡುಬು ಎನ್ನುವ ಬದಲು ಮೋದಕ ಎನ್ನುವ ಪದವನ್ನು ಬಳಸಿದ್ದರೆ ಹೀಗೆ ಆಗುತ್ತಿರಲಿಲ್ಲ. ಮೋದಕವನ್ನು ತಿನ್ನಲು ಬೇರೆ ಯಾವ ವಿಧಾನವೂ ಇಲ್ಲ.  ಇಡೀ ಮೋದಕವನ್ನು ಬಾಯೊಳಗೆ ತುರುಕುವುದೇ ಏಕಮಾತ್ರ ವಿಧಾನ. ಮೋದಕದ ಗಾತ್ರವನ್ನು ನಮ್ಮ ಬಾಯಿಯ ಗಾತ್ರದಷ್ಟೇ ವಿರಚಿಸಿರುವುದು ಬೇರೇತಕ್ಕೆ  ಎಂದು ತಿಳಿದಿರಿ! ನೀವು ಗಮನಿಸಬೇಕಾದದ್ದು  ಮೋದಕವು ಇಡೀ ಮುಖಕ್ಕೆ ಎಕ್ಸರ್ಸೈಸ್ ನೀಡುತ್ತದೆ ಎಂಬ ವಿಷಯ. ಮೃದು ಕವಚವಿದ್ದರೂ ಮೋದಕವನ್ನು ಮೆಲ್ಲಲು ಹಲ್ಲುಗಳು ತಮ್ಮ ಕೆಲಸ ಮಾಡಲೇ ಬೇಕು.  ಗಲ್ಲಗಳು ಮತ್ತು ತುಟಿಗಳು ಒಳಗೂ ಹೊರಗೂ ಚಲಿಸಬೇಕು.   ಬಾಯಿ ಮುಚ್ಚಿದ್ದರೂ ಹೂರಣದಲ್ಲಿರುವ ಕೊಬ್ಬರಿ ಬೆಲ್ಲ ಏಲಕ್ಕಿ ಇತ್ಯಾದಿಗಳ ನಾಜೂಕು ಘಮವನ್ನು ನಮ್ಮ ನಾಸಿಕವು ಆಘ್ರಾಣಿಸಬೇಕು.  ಇನ್ನು   ಗಂಟಲಿನಲ್ಲಿ ತುರುಕುವ ಕೆಲಸವನ್ನು ನಾಲಗೆ ಮಾಡಬೇಕು. ಇಪ್ಪತ್ತೊಂದು ಮೋದಕ ತಿನ್ನುವಷ್ಟರಲ್ಲಿ ಮುಖಕ್ಕೆ ಎಷ್ಟು ವ್ಯಾಯಾಮ ಆಗುತ್ತದೆಂದು ಯೋಚಿಸಿ! ಈಚೆಗೆ ಎಲ್ಲೆಲ್ಲೂ ಜನಪ್ರಿಯವಾದ ಮೋಮೋ ಎಂಬ ಖಾದ್ಯವು ನಮ್ಮ ಮೋದಕದ ಕಾಪಿಯೇ ಎಂದು ನನ್ನ ಬಲವಾದ ನಂಬಿಕೆ. ಹಿಂದೆ ನಮ್ಮ ದೇಶಕ್ಕೆ ಬಂದ ಹ್ಯೂ ಎನ್ ತ್ಸಾಂಗ್ ಮುಂತಾದ ಯಾತ್ರಿಗಳು ಇಲ್ಲಿ ಸಿಕ