ಪೋಸ್ಟ್‌ಗಳು

Kannada Poem ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕೊನೆಯ ಎಲೆ

ಇಮೇಜ್
 ಕೊನೆಯ ಎಲೆ ಹೊರಗೆ ಹಿಮಪಾತ, ಕೆಟ್ಟ ಚಳಿ ; ಬೆಳಗಿನಲ್ಲೂ ಹಾಕಿದ ಪರದೆ. ಮಲಗಿದಲ್ಲೇ ನಿಟ್ಟಿಸುವನು ಬರಿದೇ  ಕಿಟಕಿಯ ಹೊರಗೆ ಹಬ್ಬಿದ ಬಳ್ಳಿ ರೋಗಿಯು ಕಲಾವಿದ; ಅವನ ಕಣ್ಣು ಕಾಣುವುದು ಬಳ್ಳಿಯಲ್ಲಿ ಬದುಕಿನ ಸಂಕೇತ; ಮೊನ್ನೆ ಬೀಸಿದ ಝಂಝಾವಾತ ಅಲ್ಲಾಡಿಸಿದೆ ನಿರ್ಬಲ ಬಳ್ಳಿಯನ್ನು. ಉದುರಿಹೋದವು ಬಹುಮಟ್ಟಿಗೆ ಎಲೆ ತನ್ನ ಬಾಳಿನ ವರ್ಷಗಳು ಉದುರಿದಂತೆ; ಬಾರಿಸುತ್ತಿದೆ ಅಪಾಯದ ಗಂಟೆ ಬತ್ತಿ ಹೋಗುತ್ತಿದೆ ಬಾಳ ಬಳ್ಳಿಯಲ್ಲಿ ಸೆಲೆ. ಕಲಾವಿದ ಮಲಗಿದ್ದಾನೆ, ತಪಿಸುವ ಜ್ವರದಲ್ಲಿ; ಬಡಬಡಿಸುತ್ತಾನೆ ಕನವರಿಕೆಯಲ್ಲಿ ಕೊನೆಯ ಎಲೆ ಉದುರಿಸಿದಾಗ ಬಳ್ಳಿ ವಿಲೀನವಾಗುವುದು ಪ್ರಾಣ ಕಾಲ ನಿರಂತರದಲ್ಲಿ...  ಹಣೆಯ ಮೇಲೆ ತಣ್ಣೀರು ಪಟ್ಟಿ ಇಟ್ಟು ಅವನ ಶಿಷ್ಯೆ ಹೊದ್ದಿಸುತ್ತಾಳೆ ಬೆಚ್ಚನೆ ಹೊದಿಕೆ; ಏನೂ ಆಗದು ಬಳ್ಳಿಗೆ, ಯಾತಕ್ಕೆ ಹೆದರಿಕೆ! ಎಂದು ಶಾಂತ ಸ್ವರದಲ್ಲಿ ಆಶ್ವಾಸನೆ ಕೊಟ್ಟು. ಬಣ್ಣ ಕುಂಚಗಳನ್ನು ಹೊತ್ತು ಕಿಟಕಿಯ ಹೊರಗಡೆ  ಚಜ್ಜದ ಮೇಲೆ ಹತ್ತಿ ಹಿಮವಂತ ಕುಳಿರ್ಗಾಳಿಯ ರಾತ್ರಿ ಬೆಳಕು ಬೀರುವ ಲಾಂದ್ರದ ದುರ್ಬಲ ಬತ್ತಿ: ಬಿಡಿಸುತ್ತಾಳೆ ಹಸಿರೆಲೆ ಉದುರಿದ ಎಲೆ ಇದ್ದೆಡೆ. ಬೆಳಕು ಹರಿದಾಗ ಕಲಾವಿದನು ಮೆಲ್ಲನೆ ತೆರೆದು ಕಣ್ಣು ಹರಿಸುತ್ತಾನೆ ಕಿಟಕಿಯ ಕಡೆಗೆ ದೃಷ್ಟಿ: ಉಳಿದುಕೊಂಡಿದೆ ಇನ್ನೂ! ಹಿಮವೃಷ್ಟಿ ವಿನಾಶಗೊಳಿಸಲಿಲ್ಲ ಬಳ್ಳಿಯ ಕೊನೆಯ ಹಸಿರನ್ನು! ಹಾಸಿಗೆಯಲ್ಲಿ ಮೆಲ್ಲನೆ ಮೇಲೆದ್ದು ಕುಳಿತ, ಜ್ವರ ಬಿಟ್ಟಿತ್ತು, ಮೈಯಲ್ಲಿ ...

ಸತ್ಯಭಾಮೆ ಮತ್ತು ಪಾರಿಜಾತ

ಇಮೇಜ್
ಸಿ. ಪಿ. ರವಿಕುಮಾರ್   ಆಭರಣದ ಪೆಟ್ಟಿಗೆಯನ್ನು ಕೈಯಲ್ಲಿ ಹಿಡಿದು ಕೋರೈಸುವ ವಜ್ರವನ್ನು ಮೆಲ್ಲನೆ ಹೊರತೆಗೆದು ಅಂಗೈಯಲ್ಲಿಟ್ಟು ನೋಡಿದಳು ಸತ್ಯಭಾಮೆ. ಅದು ಅವಳಿಗೆ ಬಂದ ಪಿತ್ರಾರ್ಜಿತ ಆಸ್ತಿ: ತಂದೆ ಸತ್ರಾರ್ಜಿತನು ಕೊಟ್ಟ ಸ್ಯಮಂತಕ! ಸತ್ಯವಂತರು ದಿನವೂ ಪೂಜೆ ಮಾಡಿದರೆ ಕೊಡುತ್ತದಂತೆ ದಿನವೂ ಚಿನ್ನ ಒಂದು ತೂಕ! ಹೇಗೆ ತಪಸ್ಸು ಮಾಡಿರಬಹುದು ಅಪ್ಪ ಕಣ್ಮಿಟುಕಿಸದೆ ನೋಡುತ್ತಾ ಸೂರ್ಯನನ್ನು! ತಪಸ್ಸಿಗೆ ಮೆಚ್ಚಿ ಸೂರ್ಯನೇ ಕೊಟ್ಟ ವರ - ಸೂರ್ಯನ ಮರಿಯಂತಿರುವ ಈ ಸ್ಯಮಂತಕ: ಇದನ್ನು ನೋಡಿದರೂ ಕೋರೈಸುತ್ತದೆ ಕಣ್ಣು! ಸ್ಯಮಂತಕ ಬೇಡುತ್ತದೆ ಕಠಿಣ ವ್ರತ , ಕಟ್ಟುನಿಟ್ಟಾದ ನೇಮನಿಷ್ಠೆ. ನನ್ನಿಂದಾಗದು! ಎಂದು ದಿಟ್ಟತನದಿಂದ ಆಭರಣದ ಪೆಟ್ಟಿಗೆಯಲ್ಲಿ ಮುಚ್ಚಿಟ್ಟುಬಿಟ್ಟೆ. ಬೀಸಿದ ಗಾಳಿಗೆ ತೇಲಿ ಬಂದ ಸುಗಂಧ ಆಘ್ರಾಣಿಸಿ ಮುದಗೊಂಡಳು ಸತ್ಯಭಾಮೆ ಕಿಟಕಿಯಿಂದ ಇಣುಕಿ ನೋಡಿದರೆ ಕಾಣಿಸಿತು:   ದೇವಲೋಕದಿಂದ ತಂದು ನೆಡಿಸಿದ್ದು ನಾನೇ! ಪ್ರತಿದಿನವೂ ನೀಡುತ್ತದೆ ನಿರ್ವಂಚನೆಯಿಂದ ಒಂದು ತೂಕ ಚಿನ್ನದಷ್ಟು ಹೂ , ಪಾರಿಜಾತ! ಮುಟ್ಟಿದರೂ ಬಾಡುವ ಮೃದು ಹೂವಿಗೆ ಕೇಸರಿ ತಿಲಕವನ್ನು ಹೇಗಿಟ್ಟನೋ ಕಾಣೆ , ವಿಧಾತ! ಬೇಡದು ಯಾವುದೇ ನೇಮ , ನಿಷ್ಠೆ ಕಠಿಣವ್ರತ! ಸುರಿಸುವುದು ಬೆಳಬೆಳಗ್ಗೆ , ಪಾರಿಜಾತ! ಕೊಳಲು ನುಡಿಸುತ ತನ್ಮಯತೆಯಿಂದ ಮುಗ್ಧ ಮುಗುಳ್ನಗೆ ಸೂಸ...

ವೃತ್ತಪತ್ರಿಕೆ ಮತ್ತಿತರ ಹನಿಗವಿತೆಗಳು

ವೃತ್ತಪತ್ರಿಕೆ  ವೃತ್ತಪತ್ರಿಕೆಯೇ ನೀನು ಆಯತಾಕಾರವೇಕೆ? ಗುಂಡಗಿನ ಭೂಮಿಯ ಸ್ತುತ್ತಮುತ್ತಲಿಂದ ಗ್ರಹಿಸಿರುವೆ ಸುದ್ದಿ ನಮ್ಮ ತಲೆ ತಿನ್ನುತ್ತಾ ಸಾಕಷ್ಟು ಬೆಳೆದಿರಬೇಕು ನಿನ್ನ ಬುದ್ಧಿ ನಿನಗೆ ಜಾಮೆಟ್ರೀ ಹೇಳಿಕೊಡಬೇಕೆ? ವೃತ್ತಪತ್ರಿಕೆಯೇ ನೀನು ಆಯತಾಕಾರವೇಕೆ? ನಿರ್ಮಮ     ನಾ, ಮಮ ಎಲ್ಲವನ್ನೂ ಬಿಟ್ಟು ಬಿಡಿ ಎಂದು  ಗುರುಗಳು ಉಪನ್ಯಾಸ ನೀಡಿದರು ಎಂದು  ಅವರ ಶಿಷ್ಯರೆಲ್ಲರೂ ಯೋಚಿಸಿ ತ್ಯಜಿಸಿದ್ದಾರೆ  'ನಾ'ಚಿಕೆ 'ಮಾ'ನ  ಹಾಗೂ 'ಮ'ರ್ಯಾದೆ  ಹೊರಗೆ   ಹಿಂದೊಮ್ಮೆ  ಗುಡಿಚರ್ಚುಮಸೀದಿಗಳನ್ನು  ಹೊರಗಿಟ್ಟು ಬನ್ನಿ! ಇಂದು  ಗುಡಿಚರ್ಚುಮಸೀದಿಗಳ ಹೊರಗೆ : "ಚಪ್ಪಲಿ  ಹೊರಗಿಟ್ಟು ಬನ್ನಿ" ಬಂಗಾರದ ಮನುಷ್ಯ  ಹಾಲಿವುಡ್ "ಐರನ್ ಮ್ಯಾನ್" ತಯಾರಿಸುವ ಮುನ್ನ ಕನ್ನಡದಲ್ಲಿ ತಯಾರಿಸಿಬಿಟ್ಟಿದ್ದರು ಬಂಗಾರದ ಮನುಷ್ಯನ್ನ ಕಿಣಿ  ಮದುವೆಯಾದಳು ಎಂಬಿಬಿಎಸ್ ಪಡೆದು ಮಿಸ್. ಮಂದಾಕಿನಿ, ಡಾ. ಕಿಣಿಯನ್ನು ಹಿಡಿದು ನಡೆಸುತ್ತಾರೆ ಕ್ಲಿನಿಕ್ ದಂಪತಿಗಳು ಇಬ್ಬರೂ  ಸೇರಿ ಬೋರ್ಡ್ ಬರೆದವನು ಹೀಗೆ ಬರೆಯಬಹುದೆನ್ರೀ ಅವಳ ಹೆಸರಿನ ಕೆಳಗೆ  "ಶ್ರೀಮತಿ ಡಾ.ಕಿಣಿ" ವಿಲ್ಲಾ  ಹಸಿದಾಗ ಕಾಣಿಸಿದ ರೆಸ್ತೊರಾಂ ಹೆಸರು "ಆಹಾರ್ ವಿಲ್ಲಾ" "ಸಾರ್ ಇಂದು ಕರೆಂಟ್ ಇಲ್ಲ, ಗೊತ್ತಾತ್ರಾ...

ಕವಿಶೈಲದಲ್ಲೊಂದು ಸಂಜೆ

ಇಮೇಜ್
ಕೂಗಲು ಮೇಲೊಂದು ಒಂಟಿ ಬೆಳ್ಳಕ್ಕಿ ಮುಗಿಲಲ್ಲಿ ರಾಗವದಾವುದೋ ಕೇಳುವುದು ಕವಿಮನಕ್ಕೆ!     ಮಾಗಿಯ ಚಳಿಯಲ್ಲಿ ಕಾವ್ಯಸೃಷ್ಟಿಯ ಕಠಿಣ ತ್ಯಾಗಗಳ ತಪದಲ್ಲಿ ತೊಡಗಿದ್ದ  ರಸಋಷಿಗೆ! ರಾಗಿ-ಬತ್ತದ ಪೈರಿನ ಹಸಿರು ಪತ್ತಲವನ್ನುಟ್ಟು ಮೇಘಗಳ ಕರಿನೇರಳೆ ಬಣ್ಣದ ರವಿಕೆಯಂ ತೊಟ್ಟು ಹೂಗಳ ಚೆಲುವಿನಿಂ  ಕಂಗೊಳಿಸುವ  ಮಲೆನಾಡಿತಿ    ಜಾಗ ನೀಡಿದ್ದಾಳೆ ತನ್ನ ಮಡಿಲಲ್ಲಿ, ಕವಿಶೈಲದಲ್ಲಿ! ಈಗ ಕೇಳುವುದು ಕ್ರೌಂಚಪಕ್ಷಿಗಳ ಹರ್ಷಕಲರವ ಈಗ ಕೇಳುವುದು ನಿಷಾದನ ಬಾಣಕ್ಕೆ ಅಸು- ನೀಗಿದ ಜೊತೆಗಾತಿಗೆ ಮರುಗುವ ಒಂಟಿ ಆರ್ತನಾದ! ರಾಘವನ ಅಂತರಂಗದ ವ್ಯಥೆಯು ಕೇಳುವುದು .. ಓಗೊಡುವುದು ಎಲ್ಲಿಂದಲೋ ಸೀತೆಯ ದುಃಖವೃಷ್ಟಿ ಸಾಗುವುದು ದುಃಖದ ದೋಣಿಯಲ್ಲಿ ಕಾವ್ಯಸೃಷ್ಟಿ   - ಸಿ. ಪಿ. ರವಿಕುಮಾರ್  (c) ೨೦೧೭ 

ದರ್ಶನ

ಇಮೇಜ್
ಮ ಹಾಬೋಧಿಯ ಕೆಳಗೆ ಕುಳಿತ ವೃದ್ಧನೊಬ್ಬ ಯೋಚಿಸುತ್ತಾನೆ ಜಗತ್ತಿನ ಶೋಕಕ್ಕೆ ಕಾರಣಗಳನ್ನು. ನೀನು ಹೇಳುತ್ತೀಯಾ ಬೋಧಿವೃಕ್ಷವೇ ಮೌನವಾಗಿ ನೋಡಿರುವೆ ಎಲ್ಲ ಮೊದಲಿಂದಲೂ? ಪ್ರಾರಂಭವಾಯಿತು ಮಹಾಬೋಧಿಯ ಶೋಧನಾಯಂತ್ರ ಸುತ್ತುತ್ತಲೇ ಇತ್ತು ಸುತ್ತುತ್ತಲೇ ಇತ್ತು ಬಹಳಹೊತ್ತು ಕಾಯುತ್ತಲೇ ಇದ್ದ ವೃದ್ಧ ಪ್ರಬುಧ್ಧ ಉತ್ತರಕ್ಕಾಗಿ ಏಕೆಂದರೆ ಶೋಧನಾಯಂತ್ರಕ್ಕೆ ಎಲ್ಲವೂ ಗೊತ್ತು ಕಡೆದಾಗ ಕಡಲನ್ನು ಕಕ್ಕಿದಹಾಗೆ ಕಾರ್ಕೋಟಕ ಉತ್ತರಗಳು ಹತ್ತಾರು ಉಕ್ಕಿದವು ಹೊರಗೆ ಹಾಲಾಹಲದ ನಂತರ ಸಿಕ್ಕಬಹುದು ಅಮೃತ ಜೀರ್ಣಿಸಿಕೋ ವಿಷ(ಯ)ವನ್ನೇ ಅಲ್ಲಿವರೆಗೆ ಶೋಧಿಸುತ್ತಿದ್ದಾನೆ ಬೋಧಿ ನೀಡಿದ್ದನ್ನು ಎಂದು ಸಿಕ್ಕೀತೋ ನಿಜದ ಜಾಡು ಅರೆಬೆಂದ ಹಸಿಹಸಿಯಿಂದ ಹಸಿವು ಬಾಯಾರಿಕೆ ತೀರಿಸಿಕೊಳ್ಳುವುದೇ ಪಾಪ ಇವನ ಪಾಡು ಸಿ.ಪಿ. ರವಿಕುಮಾರ್

ಕೋಗಿಲೆ ಮತ್ತು ಇಂಟರ್ನೆಟ್ ವಿಷ್ಯ

ಇಮೇಜ್
ಕೋಗಿಲೆ ಮತ್ತು ಇಂಟರ್ನೆಟ್ ವಿಷ್ಯ  ಸಿ. ಪಿ. ರವಿಕುಮಾರ್  ಇಲ್ಲೊಂದು ಮರದಲ್ಲಿ ಒಂಟಿಯಾಗಿ ಕೂತಿದೆ ಕಿಟಕಿ ಗಾಜಿನಿಂದ ಸ್ಪಷ್ಟ ಕಾಣುತ್ತದೆ , ಕೋಗಿಲೆ! ಮೌನ ಧರಿಸಿ ಕುಳಿತ ಹಕ್ಕಿ ಯಾವುದೆಂದು ನೋಡಿದೆ: ಅಚ್ಚಗಪ್ಪು ಬಣ್ಣವಿರುವ ಹಕ್ಕಿಯೇನು ಕಾಗೆಯೇ ? ಕಾಗೆ ಹೀಗೆ ಮೌನ ಧರಿಸಿ ಎಂದು ತಾನೇ ಕೂತಿದೆ ? ಕಾಗೆ ಸುತ್ತ ಅದರ ಬಳಗ ಕಾಕಾರವ ಮಾಡದೆ ? ಎಲಾ ಗಾನಕೋಗಿಲೆ , ಮೌನದ ಮೊರೆ ಹೋಗಿದೆ! ಸುಬ್ಬುಲಕ್ಷ್ಮಿ ಹಾಡಿದ್ದನೆಲ್ಲಾದರೂ ಕೇಳಿತೆ ? ಯಾಕೆ ತನ್ನ ಕೂಹೂ ಕೂಹೂ ಮರೆತು ಸುಮ್ಮನಾಗಿದೆ ? ಪಾಪ ಚಳಿಗೆ ನೆಗಡಿಯಾಗಿ ಇದರ ದನಿಯು ಕಟ್ಟಿತೇ ? “ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ” ಎಂಬ ಜಂಬವೆಲ್ಲಾ ಮರೆತಂತಿದೆ! ಇಯರ್ ಫೋನ್ ಧರಿಸಿ ಇಂದು ರಸಿಕರ ಕಿವಿ ಮುಚ್ಚಿದೆ! ಮುಚ್ಚಿಲ್ಲದವರ ಕಿವಿಯ ಸಿಟಿ ಗದ್ದಲ ಕಚ್ಚಿದೆ! ಹಾಡುವುದೇ ಅನಿವಾರ್ಯ ಕರ್ಮವೆಂದ ಕೋಗಿಲೆ – ಪಾಪ ಯಾಕೆ ಹೀಗೆ ಮೌನ ಧರಿಸಿ ಮಂಕಾಗಿದೆ! ಸಂಗಾತಿ ಎಲ್ಲಿ ? ಪಾಪ ಒಂಟಿ ಯಾಕೆ ಕುಳಿತಿದೆ ? ವ್ಯಾಲೆಂಟೈನ್ಸ್ ದಿವಸ ಬೇರೆ ಬರುವ ವಾರ ಬರಲಿದೆ! ಬೇರಾರದೋ ಚಿತ್ರ ನೋಡಿ ಗೆಳತಿಯು ಬೆರಗಾದಳೆ ? ಚಾಕೊಲೆಟ್ ಗುಲಾಬಿಗುಚ್ಛ ನೋಡಿ ಮೋಡಿ ಹೋದಳೇ ? (ಪಾಪ ಅತ್ತು ಅತ್ತು ನೋಡಿ ಕಣ್ಣು ಕೆಂಪಾಗಿದೆ!) ಮೌನ ಧರಿಸಿ ಕುಳಿತರಾಯ್ತೆ ? ಏಳು , ಹಾಡು , ಕೋಗಿಲೆ! ಇಂಟರ್ನೆಟ್ ಯುಗದಲ್ಲಿ ಮೌನಕ್ಕೆ ಬೆಲೆಯ...

ಹ್ಯಾಲೊವೀನ್ ಸಂಜೆ

ಇಮೇಜ್
ಸಿ. ಪಿ. ರವಿಕುಮಾರ್ ಹ್ಯಾಲೊವೀನ್ ಸಂಜೆ ಯಾವ ವೇಷ ತೊಡಲಿ? ನೋಡಿದವರಿಗೆ ಹೇಗೆ 400V ಶಾಕ್ ಕೊಡಲಿ? ತಲೆಯಲ್ಲಿ ರಕ್ತ! ಬುರುಡೆ  ಸೀಳಿದ ಕೊಡಲಿ! ಫ್ರಾಂಕಿನ್ ಸ್ಟೀನ್ ಐಡಿಯಾ  ಹೇಗಿದೆ ಡೆಡ್ಲೀ! ಇಲ್ಲ ಇವೆಲ್ಲಾ ಈಗ ಶಾಕ್ ಕೊಡುವುದಿಲ್ಲ ಮಿತ್ರ ಪ್ರತಿದಿನ ನೋಡುವರು ಜನ ಹಾರರ್ ಚಿತ್ರ ಗೋರಿಯಿಂದ ಮೇಲೆದ್ದ  ಜಾಂಬೀ ಬಂದರೂ ಹತ್ರ ಯಾರಿಗೂ ಅನ್ನಿಸೋದಿಲ್ಲ ಇದೊಂದು ವಿಚಿತ್ರ ಡೆಂಗೀ ರೋಗಾಣುವಾಗು, ಸ್ಯಾಮ್ ಸಂಗ್ ಫೋನಾಗು! ನೊರೆತುಂಬಿದ ಕೆರೆಯಾಗು ಅಥವಾ ಟ್ರಾಫಿಕ್ ಜಾಮಾಗು! ಉಕ್ಕಿನ ಸೇತುವೆಯಾಗು! ಚುನಾವಣೆ ಭರವಸೆಯಾಗು! ಶಾಸಕ ಮಹೋದಯರ ಮಾತಿನ ವರಸೆಯಾಗು! ಟಿ.ವಿ. ಚರ್ಚೆಯಾಗು, ರಿಯಾಲಿಟಿ ಶೋ ಆಗು, ಸೀಳುನಾಲಗೆ ಸಾಹಿತಿಯ ಲೇಟೆಸ್ಟ್ ಸೋಗಾಗು! ಸುಳ್ಳು ಸುದ್ದಿಯಾಗು, ವಿಷ ಹರಡುವ ಮೀಂ ಆಗು! ಧರ್ಮ ದ್ವೇಷಿಯಾಗು, ಇಂಥದೇನಾದರು ನೀನಾಗು! ಗೋಳುಕರೆ ಲೇಖಕನ ಅಂಕಣ ಬರಹವಾಗು! ಲೈಕೇ ಇಲ್ಲದ ಸೆಲ್ಫೀ ತರಹವಾಗು! ಪ್ರತಿದಿನವೂ ಜನರನ್ನು ಹೊಸದಾಗಿ ಬೆದರಿಸುವ ಮೀಡಿಯಾ ಪುಟದಲ್ಲಿ ಏನಾದರೊಂದಾಗು!

ತಿಪ್ಪೆಸಾಂಗ್

ಇಮೇಜ್
ಸಿ ಪಿ ರವಿಕುಮಾರ್              ಭಾಳ trashಆ ಆಗಲಿಕ್ಕೆ ಹತ್ತಿದೆರೀ ಬೆಂಗಳೂರದಾಗs ನಡುವs ನಡಕೋತ ಹೊಂಟೆs ಹಾಕುತ ತಿಪ್ಪರ್ ಲಾಗs ದೀರ್ಘ ಶ್ವಾಸs ಎಳಕೋಬೇಕಂತs ಬಾಬಾ ಪ್ರಾಣಾಯಾಮಾs ತಿಪ್ಪೆ ಗುಂಡಿ ಹತ್ರs ಎಂಥದ್ದೂರೀ ಅಯ್ಯೋ ರಾಮಾs ತಿಪ್ಪೆ, ತಿಪ್ಪೆ, ಎಲ್ಲಾ ಕಡೆಗೂ, ತಿಪ್ಪೆ ತಿಪ್ಪೆ ತಿಪ್ಪೆ! ಬ್ಯಾರೆ ಚಾನಲ್ ಹಾಕಿದರೂನೂ ಅಷ್ಟೇ ತಕ್ಕಡಿ ಬೆಪ್ಪೇ ಓದಲು ಕೂತರs ವಾರ್ತಾ ಪತ್ರಿಕೆ ಟೀವೀ ಬಂದು ಮಾಡಿs ಕೈಯಲ್ಲಿರುವುದು ಪತ್ರಿಕೆಯೋ ಅಥವಾ ಅದು ತಿಪ್ಪೇಗಾಡಿ? ಕನ್ನಡ ಪತ್ರಿಕೆ ಪುಟಪುಟದಲ್ಲೂ ಇಂಗ್ಲಿಷ್ ಜಾಹೀರಾತs ಪುರುಸೊತ್ ಸಿಕ್ರs ಕರೇಂಗೆ ಮಿಲ್ಕೇ ಹಿಂದೀಮೇ ಹಂ ಬಾತs ವಾರ್ತಾ ಪತ್ರಿಕೆ ಅಂತಾರs ತುಂಬಿದೆ ಬರಿಯ ವರಾತs ಯಾವುದು ಇಲ್ಲಿ ವಾರ್ತಾ ತಮ್ಮಾ ಯಾವುದು ಜಾಹೀರಾತs? ನಮ್ ತಿಪ್ಪಾರಳ್ಳಿ ದೂರ ಅಂದ್ರು ಸುಮ್ನೇ ಕೈಲಾಸಮ್ಮೂ ಹತ್ರs ತಂತು ತಿಪ್ಪಾರಳ್ಳಿ ಲೊಟ್ಟೆ-ಲೊಸಕು ಇಸಮ್ಮು

"ಇಲ್ಲದಿದ್ದರೆ ನಾನು ಬರುವುದಿಲ್ಲ" ಅಥವಾ ಸಾಹಿತಿಯ ಕರಾರು

ಇಮೇಜ್
ಸಿ ಪಿ ರವಿಕುಮಾರ್ ಒಪ್ಪದಿದ್ದರೆ ನೀನು ನನ್ನೈಡಿಯಾಲಜಿಯ ನಿಮ್ಮ ಸಮ್ಮೇಳನಕ್ಕೆ ಬರುವುದಿಲ್ಲ ಇರುವುದೆಲ್ಲೆಡೆ ಎಂದು ಆಕ್ಸಿಜನ್ ಜೊತೆಜೊತೆಗೆ ಅಸಹನೆ ಎಂಬೊಂದು ಹೊಸ ಅನಿಲವೆಂದು ನಾನು ಹೇಳುವ ಮಾತು ಒಪ್ಪದಿದ್ದರೆ ನೀನು ಟೂ! ನಿನ್ನ ಜೊತೆ ಆಟಕ್ಕೆ ಬರುವುದಿಲ್ಲ ಕಪ್ಪು ತೋರಣ ಕಟ್ಟಿ, ಕಪ್ಪು ಕಾಫಿಯ ಕೊಟ್ಟು ಕಪ್ಪು ಪೇಪರ್ ಮೇಲೆ ಮಾತ್ರ ಕರೆಯೋಲೆ, ಎಲ್ಲರೂ ಹೊದ್ದು ಬರಬೇಕು ಕರಿಶಾಲು, ಇಲ್ಲದಿದ್ದರೆ ನಾನು ಬರುವುದಿಲ್ಲ ಬಂದವರ ಮುಖವೆಲ್ಲ ಊದಿಕೊಂಡಿರಬೇಕು ನಗೆ ಯಾಕೆ ಮಂದಸ್ಮಿತವೂ ಇರಕೂಡದು ಮರಳಿಸಬೇಕು ಒಬ್ಬರಾದರೂ ಪದ್ಮಪ್ರಶಸ್ತಿ, ಇಲ್ಲದಿದ್ದರೆ ನಾನು ಬರುವುದಿಲ್ಲ ಕಾರ್ಯಕ್ರಮದ ಮುಂಚೆ ದೀಪ ಆರಿಸಬೇಕು, ಎಲ್ಲರೂ ಮೌನ ಆಚರಿಸಬೇಕು, ಮಲ್ಲಿಗೆಯ ಬದಲು ರಕ್ತ ಕಣಿಗಲೆಯೇ ಇರಬೇಕು, ಇಲ್ಲದಿದ್ದರೆ ನಾನು ಬರುವುದಿಲ್ಲ ಮುಖ್ಯಭಾಷಣದಲ್ಲಿ ಆಸ್ಫೋಟವಿರಬೇಕು, ಚಾರಿತ್ರ್ಯವಧೆಯಾಗಬೇಕು ರಾಮನಿಗೆ, ಗೋಮಾಂಸ ಇರಲೇ ಬೇಕು ಭೋಜನದಲ್ಲಿ ಇಲ್ಲದಿದ್ದರೆ ನಾನು ಬರುವುದಿಲ್ಲ ಮೂಢನಂಬಿಕೆ ವಿರುದ್ಧ ಗಾಢನಂಬಿಕೆಯುಳ್ಳ ಜನರನ್ನೇ ಪ್ಯಾನೆಲ್ ಗೆ ಕರೆಯಬೇಕು, ಮೀಡಿಯಾದಲ್ಲಿ ಮುರಿವ ಸುದ್ದಿ ಬರಲೇಬೇಕು ಇಲ್ಲದಿದ್ದರೆ ನಾನು ಬರುವುದಿಲ್ಲ

ನಾವು ಆಡುತ್ತೇವೆ ಅಸಹನೆಯ ಮಾತು

ಇಮೇಜ್
ಸಿ ಪಿ ರವಿಕುಮಾರ್  ಮಳೆ ಬಂದು ಟ್ರಾಫಿಕ್ ಜಾಮಾದರೆ ನಾನು ಸಿಟ್ಟಾಗುತ್ತೇನೆ - ಹೊಳೆಯೇ ಹರಿದು ಬರುತ್ತಿದೆ ಚೆನ್ನೈ ನಗರದಲ್ಲಿ.  ಅಸಾಧ್ಯ ನೋವೆಂದು ಮುಖ ಕಿವಿಚುತ್ತೇನೆ    ಚರ್ಮ ಕಿತ್ತರೆ ಬೆರಳಿನ ಉಗುರಿನಲ್ಲಿ. ಬಾಂಬ್ ದಾಳಿಯಲ್ಲಿ ಇವನ ಕೈ ಕತ್ತರಿಸಿಹೋಗಿದೆ,    ಕಂಡಕಂಡವರನ್ನು ಸುಡುತ್ತಿದ್ದಾರೆ ಉಗ್ರರಲ್ಲಿ.  ಮನೆಗೆ ಬರುವುದು ತಡವಾದರೆ ಸಿಟ್ಟಾಗುತ್ತೇನೆ    ತಡೆಯದೆ ಹಸಿವು-ಬಾಯಾರಿಕೆ. ಅದೆಷ್ಟು ಜನರಿಗೆ ಇದು ನಿತ್ಯದ ಚಡಪಡಿಕೆ.  ಆಫ್ರಿಕಾದಲ್ಲಿ, ಇರಾಕಿನಲ್ಲಿ, ಆಫ್ಘಾನಿಸ್ತಾನದಲ್ಲಿ, ಸಿರಿಯಾದಲ್ಲಿ ಜಗತ್ತಿನ ಪ್ರತಿಯೊಂದು ಮೂಲೆಯಲ್ಲಿ  ನಿರಂತರವಾಗಿ ಸಾಗಿದೆ ಮಾನವನಿಂದ ಮಾನವನ ಬೇಟೆ. ಜನ ಕಂಗಾಲಾಗಿದ್ದಾರೆ,  ಹಸಿದಿದ್ದಾರೆ, ನೊಂದಿದ್ದಾರೆ, ಉಟ್ಟಬಟ್ಟೆಯಲ್ಲೇ ಓಡಿ ಬಂದಿದ್ದಾರೆ, ಮನೆ-ಮಾರು ಕಳೆದುಕೊಂಡಿದ್ದಾರೆ.  ಹಸಿವೆಯಿಂದ ಅಳುವ ಮಕ್ಕಳು   ಕಡಲಿನ ಪಾಲಾಗಿವೆ.  ಸಾಗರವೂ ತನಗೆ ಬೇಡವೆಂದು  ದಡಕ್ಕೆ ತಂದು ಹಾಕಿದೆ.  ಹೋದೆಡೆಗೆ ಇವರನ್ನು ಹಿಂಬಾಲಿಸುತ್ತದೆ ಸಂಶಯದ ದೃಷ್ಟಿ.  ಹೋದೆಡೆಗೆ ಇವರ ಮೇಲೆ ಸುರಿಯುತ್ತದೆ ಬೈಗುಳದ ವೃಷ್ಟಿ.  ಉಗ್ರರಿಂದ ಓಡಿ ಬಂದವರಿಗೇ  ಉಗ್ರರೆಂಬ ಹಣೆಪಟ್ಟಿ. ಎದೆಯನ್ನು ಬಗೆದು ತೋರಿಸುವಂತಿದ್ದರೆ ಮನುಷ್ಯ! ಕಾಣಿಸುವಂತಿದ್ದರೆ ಮಸ್ತಿಷ್ಕ...

ಇತಿಹಾಸಕ್ಕೆ ವಿದಾಯ

ಇಮೇಜ್
ಸಿ ಪಿ ರವಿಕುಮಾರ್  ಯಾರಾದರೂ ನನ್ನನ್ನು ಮಾಡಿದರೆ ಶಿಕ್ಷಣ ಸಚಿವ ತಕ್ಷಣ ಮಾಡುವೆನು ಒಂದು ಅತಿಮುಖ್ಯ ಕೆಲಸ! ಸಿಲಬಸ್ ಪುಸ್ತಕದಿಂದ ಹೊಡೆಸಿಹಾಕಿಬಿಡುವೆ ಹಿಸ್ಟರಿ, ಚರಿತ್ರೆ, ಇತಿಹಾಸ. ಆಗುವುದೇ ಇಲ್ಲ ಆಗ ಇತಿಹಾಸದ ಪುನರಾವರ್ತನೆ ಮಾಯವೇ ಆಗಿಬಿಡುವುದು ದ್ವೇಷ.  ಮಾಗದಂತೆ ಎಂದೂ ನೂರಾರು ವರ್ಷದ ಗಾಯ ಕಿತ್ತುತ್ತಲೇ ಇರುವ ಇತಿಹಾಸದ ಪಾಠಗಳು! ಎಂದೋ ಉರಿದ ಅಗ್ನಿಗೆ ಇನ್ನಷ್ಟು ಉರುವಲನ್ನಿಟ್ಟು ಕೆದಕುವ ಈ ಆಟಗಳು! ಹಳೆಯ ತಪ್ಪುಗಳನ್ನು ಮತ್ತೆ ಮಾಡದೇ ಇರುವುದು ಇತಿಹಾಸದಿಂದ ಕಲಿಯಬೇಕಾದ ಪಾಠ. ನಮಗಿಲ್ಲ ಅದಕ್ಕೆ ಬೇಕಾದ ತಾಳ್ಮೆ ಮತ್ತು ತಯಾರಿ ಆದ್ದರಿಂದ ಹೇಳೋಣ ಇತಿಹಾಸಕ್ಕೆ ಟಾಟಾ. -- ಸಿ ಪಿ ರವಿಕುಮಾರ್

ಇತಿಹಾಸ

ಇಮೇಜ್
ಸಿ ಪಿ ರವಿಕುಮಾರ್  ನಾಣ್ಯದ ಒಂದು ಮುಖ ಸಾಚಾ, ಇನ್ನೊಂದು ಮುಖ ಖೋಟಾ. ಅವನು ಸಾಚಾ ಮುಖ ಮೇಲಿಟ್ಟು ಕೊಡುತ್ತಾನೆ, ಹೇಗೋ ನಡೆಯಬಹುದು ಆಟ. ನಾಣ್ಯಕ್ಕೆ ಬದಲಾಗಿ ಅವನಿಗೆ ಸಿಕ್ಕಿದ್ದು - ಖೋಟಾ ಮಾಲು + ಸವಕಲು ನಾಣ್ಯ ಚಿಲ್ಲರೆ. ನಿನ್ನದು ಖೋಟಾ ಎಂದು ಜಗಳವಾಡುತ್ತಾರೆ, ಉರಿದುಬೀಳುತ್ತಾರೆ ಮಾತೆತ್ತಿದರೆ. ಯೋಚಿಸಿದರೆ ತೋರುವುದು ನಿಮಗೆ, ಸ್ವಲ್ಪ ಹೀಗೇ ಅಲ್ಲವೇ ನಮ್ಮ ಇತಿಹಾಸ? ಸಾಚಾ ಮುಖ ಕಾಣಿಸಿತೆ ನಿನಗೆ, ಅವನಿಗೆ ಖೋಟಾಮುಖವಾಗುತ್ತಿದೆ ಭಾಸ. ಹಳೆಯದನ್ನೆಲ್ಲಾ ತೆಗೆದು ಪ್ರತಿನಿತ್ಯವೂ ಜಗಳ, ಗೊತ್ತಾಗುತ್ತಿಲ್ಲ ನಾನು ಅಳಲಾ ಅಥವಾ ನಗಲಾ? ಸಿ ಪಿ ರವಿಕುಮಾರ್