ಪೋಸ್ಟ್‌ಗಳು

ಆಗಸ್ಟ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆಚಾರವಿಲ್ಲದ ನಾಲಿಗೆ (ಹರಟೆ)

////////////////////////// ಸಿ.ಪಿ. ರವಿಕುಮಾರ್ /////////////////////////// ಇಂದು "ಆಚಾರ"ದ ಬಗ್ಗೆ ಮನಸ್ಸು ಹೊರಳಿದ್ದು ಒಬ್ಬ ಮಿತ್ರರು "ಖಾರದ ಹೂರಣ" ಇಟ್ಟು ಹೋಳಿಗೆ ಮಾಡಬಹುದೇ ಎಂದು ಕೇಳಿದಾಗ. ಅಯ್ಯೋ ಆಚಾರವಿಲ್ಲದ ನಾಲಿಗೆಯೇ! ಸಿಹಿ ಹೋಳಿಗೆಯನ್ನು ಕೊಟ್ಟರೂ ಮೇಲೆ ತುಪ್ಪಹಾಲುಗಳನ್ನು ಸುರಿದರೂ ನಿನಗೆ ತೃಪ್ತಿಯಿಲ್ಲವೇ! ಬೇರೇನನ್ನೋ ಬಯಸುತ್ತಿರುವೆಯಲ್ಲ! ಅಂದಹಾಗೆ ಆಚಾರ ಮತ್ತು ನಾಲಿಗೆಗಳನ್ನು ಒಂದೇ ವಾಕ್ಯದಲ್ಲಿ ಪ್ರಯೋಗ ಮಾಡಿದ್ದು ಪುರಂದರದಾಸರೇ ಇರಬಹುದು. ಆಚಾರ ಎಂದರೆ ಅವರ ಅರ್ಥದಲ್ಲಿ ಸದಾಚಾರವೇ ಆಗಿರಬೇಕು. ಏಕೆಂದರೆ ನಾಲಗೆಗೆ ಅನೇಕ ದುರಾಚಾರಗಳೂ ಇವೆ. ಬಿಸಿಜಾಮೂನಿನ ಮೇಲೆ ತಣ್ಣನೆಯ ಐಸ್ ಕ್ರೀಂ, ಕಾರದ ಚಕ್ಕುಲಿಗೆ ಮೊಸರು, ಸಿಹಿ ಮೊಸರನ್ನಕ್ಕೆ ಉಪ್ಪಿನಕಾಯಿ, ಸಿಹಿ ಒಬ್ಬಟ್ಟಿನ ಮೇಲೂ ಉಪ್ಪಿನಕಾಯಿ ... ಹೀಗೆ ನಂಜನ್ನು ಬೆರೆಸಿ ತಿನ್ನುವುದಕ್ಕೆ "ನಂಜಿಕೊಂಡು ತಿನ್ನು" ಎಂಬ ಪದಪುಂಜವನ್ನೇ ಸೃಷ್ಟಿಸಿ ಈ ಕ್ರಿಯೆಯನ್ನು ನ್ಯಾಯಸಮ್ಮತವನ್ನಾಗಿ ಮಾಡಿಬಿಟ್ಟಿದ್ದಾರೆ ನಮ್ಮವರು! "ಉಪ್ಪಿಲ್ಲದ ಊಟ, ತಾಯಿಲ್ಲದ ತವರು" - ಇದೇನೋ ಸರಿ, ಒಪ್ಪಿಕೊಳ್ಳೋಣ. ಆದರೆ ಉಪ್ಪಿನಕಾಯಿಲ್ಲದ ಊಟವನ್ನೇ ಒಲ್ಲದವರೂ ಇದ್ದಾರೆ. ಶ್! ನಮ್ಮ ಮನೆಯಲ್ಲೇ ಒಬ್ಬರು ಇದ್ದಾರೆ. ನಮ್ಮ ಮನೆಯಲ್ಲಿ ಮಾವಿನಕಾಯಿ ಕಾಲದಲ್ಲಿ ಹಾಕಿದ ಅಷ್ಟೂ ಉಪ್ಪಿನಕಾಯಿಯನ್ನು ಅವರೊಬ್ಬರೇ ಖಾಲಿ ಮಾಡುತ್ತಾರೆ. ಸಾಲದೆಂಬಂತೆ

ದುಃಖ ಉಮ್ಮಳಿಸಿತು

ಇಮೇಜ್
ಮೂಲ ಗಜಲ್ - ಶಕೀಲ್  ಬದಾಯೂನಿ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್   ದುಃಖ ಉಮ್ಮಳಿಸಿತು ಓ ಪ್ರೇಮವೇ  ನಿನ್ನ ಪ್ರತಿಫಲ ನೆನೆದು ದುಃಖ ಉಮ್ಮಳಿಸಿತು ಯಾಕೋ ನಿನ್ನ  ಹೆಸರನು ನೆನೆದು ಸಂಜೆಗಳು ಕಳೆವುವು ಹಾಗೂ ಹೀಗೂ ಭರವಸೆಗಳ ಮೇಲೆ ಇಂದದೇನಾಯಿತೋ  ದುಃಖ ಉಮ್ಮಳಿಸಿತು ಸಂಜೆಯ ನೆನೆದು ಅತ್ತ   ಭವಿಷ್ಯವು ನಿರ್ನಾಮ, ಇತ್ತ  ಜಗದೊಳೆಲ್ಲರ  ಮುನಿಸು ಪ್ರತಿ ಹೆಜ್ಜೆಗೂ ದುಃಖ ಉಮ್ಮಳಿಸಿತು ಪ್ರೇಮದ ದಾರಿಯ ಹಿಡಿದು ಹಾಳು ಈ ಗೋಳ ಕರೆ ತೊಡರಿತು ನನ್ನದೇ ಕಾಲಿಗೆ ಏಕೆ? ದುಃಖ ಉಮ್ಮಳಿಸಿತು ನನ್ನ ವಿಧಿ ಲಿಖಿತವ  ನೆನೆದು ಯಾರೇ ಹಾಡಲಿ  ಪ್ರೇಮದ ಮಾತನ್ನು ತೆಗೆದು  ದುಃಖ ಉಮ್ಮಳಿಸಿತು ನನ್ನ ಭಗ್ನ ಹೃದಯವ ನೆನೆದು  (ಚಿತ್ರ ಕೃಪೆ - ವಿಕಿಮೀಡಿಯಾ)

ನೀಲಿ ಬಟ್ಟಲು

ಇಮೇಜ್
ಮೂಲ ಅಮೆರಿಕನ್ ಪದ್ಯ: ಜೀನ್ ಕೀನ್ಯನ್  (ಅಮೆರಿಕಾ ಸಂಸ್ಥಾನ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್   ಪ್ರಾಚೀನ ರೀತಿಯೋ ಎಂಬಂತೆ ಹೂತೆವು ಬೆಕ್ಕನ್ನು,  ಅದರ ಜೊತೆ ಇಟ್ಟು ಅದರ ನೀಲಿ ಬಟ್ಟಲು.  ಬರಿಗೈಯಿಂದಲೇ ಬಗೆದು ಮರಳನ್ನು  ವಾಪಸು ಹಾಕಿದೆವು ಹಳ್ಳದಲ್ಲಿ ಸುತ್ತಲೂ.  ಚುಸ್ ಎಂದು ಸದ್ದು ಮಾಡುತ್ತಾ  ಮರಳು ಥಡ್ ಎಂದು  ಬಿತ್ತು ಬೆಕ್ಕಿನ ಪಕ್ಕ, ಕೆಂಪು ತುಪ್ಪಟದ ಮೇಲೆ,  ಕಾಲ್ಬೆರಳ ಸಂದಿಗಳ ಬೆಳ್ಳನೆಯ ಪುಕ್ಕದ ಮೇಲೆ,  ಚೂಪಾದ ನೀಳ ಮೂಗಿನ ಮೇಲೆ.  ತಡವಿದೆವು ಒಬ್ಬರನ್ನೊಬ್ಬರು ನಾವು  ಅಲ್ಲೇ ನಿಂತು ಸ್ವಲ್ಪ ಹೊತ್ತು  ಇದಕ್ಕಿಂತಲೂ ಆಳವಾದ ದುಃಖಗಳು  ಇರುತ್ತವೆಂಬುದು ಗೊತ್ತು.  ಉಳಿದ ದಿವಸ ಮೌನವಾಗಿ ಸಾಗಿಸಿದೆವು ಕೆಲಸ: ಊಟ, ಪರಸ್ಪರ ದೀರ್ಘ ನೋಟ, ನಿದ್ರೆ. ರಾತ್ರಿ ಎಲ್ಲಾ ಮಳೆ  ಜೋರಾಗಿ  ಸುರಿದು ಇದೀಗ ಮೋಡಗಳು ಚದುರುತ್ತಿವೆ.  ಉಲಿಯುತ್ತಿದೆ ಅಲ್ಲೊಂದು ರಾಬಿನ್ ಹಕ್ಕಿ    ತೊಟ್ಟಿಕ್ಕುವ ಎಲೆಗಳ ನಡುವೆ ಕುಳಿತು - ನೆರೆಮನೆಯವನ ಹಾಗೆ, ಹೃದಯ ಒಳ್ಳೆಯದಾದರೂ  ಅವನು ಬಾಯಿ ತೆರೆದರೆ ಮಾತ್ರ ವಕ್ರ ಮಾತು.  ಕವಿತೆಯ ಸ್ವಾರಸ್ಯ: ಮಕ್ಕಳು ಸಾಕಿದ ಪ್ರೀತಿಯ ಬೆಕ್ಕು ಸತ್ತುಹೋಗಿದೆ. ಅದನ್ನು ಅವರು ಮಣ್ಣು ಮಾಡಿ ಮನೆಗೆ ಬಂದಿದ್ದಾರೆ. ತಮಗೆ ಆಪ್ತವಾಗಿದ್ದ ಬೆಕ್ಕಿನ ಸಾವಿನ ದುಃಖವನ್ನು ಹೇಗೆ ಪ್ರಕಟಿಸಬೇಕೆಂದು ಮಕ್ಕಳಿಗೆ ಗೊತ್ತಾಗುತ್ತಿಲ್ಲ. ತಾವು ಎಂದಿನಂತೆ ಊಟ

ಕಾವ್ಯ ಪರಿಚಯ

ಇಮೇಜ್
ಮೂಲ: ಬಿಲ್ಲಿ ಕಾಲಿನ್ಸ್ (ಅಮೆರಿಕಾ ಸಂಸ್ಥಾನ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್   (ಚಿತ್ರಕೃಪೆ - ವಿಕಿಪೀಡಿಯಾ) ನಾನು ಅವರಿಗೆ ಹೇಳಿದೆ: ಬಣ್ಣದ ಸ್ಲೈಡ್ ನೋಡಿದ ಹಾಗೆ ಕವಿತೆಯನ್ನು ತೊಗೊಂಡು ಬೆಳಕಿಗೆ ಹಿಡಿದು ನೋಡಿರಪ್ಪಾ ಅಂತ.  ಅಥವಾ ಅದರ ಗೂಡಿಗೆ ಕಿವಿ ಹಚ್ಚಿ ಕೇಳಿ. ಇಲ್ಲವೇ ಕವಿತೆಯೊಳಗೆ ಒಂದು ಇಲಿಯನ್ನು ಇಳಿಬಿಟ್ಟು ಅದು ಹೇಗೆ ಹೊರಬರುತ್ತದೋ ಗಮನಿಸಿ. ಇಲ್ಲವೇ ಕವಿತೆಯ ಕೋಣೆಯನ್ನು ಹೊಕ್ಕು ಅದರ ಗೋಡೆಗಳನ್ನು ಸವರುತ್ತಾ ಲೈಟ್ ಸ್ವಿಚ್ ಏನಾದರೂ ಕೈಗೆ ಹತ್ತುತ್ತದೋ ನೋಡಿ. ಕವಿತೆಯ ತರಂಗಗಳ ಮೇಲೆ ವಾಟರ್-ಸ್ಕೀ ಮಾಡುತ್ತಾ ದಡದಲ್ಲಿರುವ ಕವಿಯ ಹೆಸರಿನತ್ತ ಕೈ ಬೀಸಿ.  ಆದರೆ ಅವರೋ ಕವಿತೆಯನ್ನು ಹಗ್ಗದಿಂದ ಕಟ್ಟಿ ಒಂದು ಕುರ್ಚಿಗೆ ಅದಕ್ಕೆ ಚಿತ್ರಹಿಂಸೆ ಕೊಟ್ಟು ಅದರ ಬಾಯಿಂದ ಹೇಳಿಸಲು ಹೊರಟಿದ್ದಾರೆ ತಪ್ಪೊಪ್ಪಿಗೆ. ಒಂದು ಪೈಪ್ ತೊಗೊಂಡು  ಹೊಡೆಯುತ್ತಿದ್ದಾರೆ ಕವಿತೆಗೆ ರಪರಪ  ಏನೆಂದು ಬಗೆಯಲು  ಅದರ ನಿಜವಾದ ಅರ್ಥ. ಕವಿತೆಯ ಸ್ವಾರಸ್ಯ:  ಕವಿತೆಯಲ್ಲಿ ನಿಮಗೆ ಬೇಕಾದದ್ದು ಹುಡುಕಬಹುದು! ನಿಜವಾದ ಅರ್ಥಕ್ಕಾಗಿ ವ್ಯರ್ಥ ಹಿಂಸೆ ಕೊಡುವುದು (ಅಥವಾ ಕೊಟ್ಟುಕೊಳ್ಳುವುದು) ಬೇಡ ಎಂಬುದನ್ನು ಕವಿ ಹಾಸ್ಯಮಯವಾಗಿ ನಿರೂಪಿಸಿದ್ದಾನೆ. ಇದೊಂದು  ಮಕ್ಕಳಿಗಾಗಿ  ಬರೆದ ಕವಿತೆ.

ನಮ್ಮಂಥ ಹೊಸಬರಿಗೆ ಏನಾದರೂ ಸಲಹೆ

ಇಮೇಜ್
ಮೂಲ : ರಾನ್ ಕಾರ್ಜ್ (ಅಮೆರಿಕಾ ಸಂಸ್ಥಾನ)  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನಿ ಮ್ಮ ಮೇಜಿನ ಮೇಲೆ ಕರ್ತವ್ಯಕ್ಕಾಗಿ ಕುಳಿತುಕೊಳ್ಳುವುದನ್ನು ಬಿಡಿ.  ನಿಮ್ಮ ಮನೆ ಬಿಟ್ಟು ಹೊರಡಿ. ಹೊರಗಿನ ಜಗತ್ತಿಗೆ ಕಾಲಿಡಿ.  ಬೇಕಾದರೆ ಕೈಯಲ್ಲಿ ಒಂದು ನೋಟ್ ಬುಕ್ ಇರಲಿ, ಆದರೆ  ಅಗ್ಗದ ಬೆಲೆಯದಾಗಿರಲಿ, ಪುಟಗಳು ನೀರುನೀರಾದ ಚಹಾ ಬಣ್ಣದ್ದು, ಮೇಲಿನ ಹೊದಿಕೆಯ ಮೇಲೆ ಬೆಕ್ಕಿನಮರಿ ಅಥವಾ ವ್ಯೋಮನೌಕೆ ಇರುವವಂಥದ್ದು.  ಮೂರಕ್ಕಿಂತಲೂ ಹೆಚ್ಚು  ಮಂದಿ ಕುತ್ತಿಗೆ ಮುಚ್ಚುವ ಸ್ವೆಟರ್  ತೊಟ್ಟಿರುವ  ಯಾವುದೇ ಕೋಣೆಯಲ್ಲಿ ಇರಬೇಡಿ.  ಹಿಮದಲ್ಲಿ ಹೂತುಹೋದ ಟೆನಿಸ್ ಕೋರ್ಟಿನ ಮೇಲೆ  ಜಿಂಕೆಯ ಹೆಜ್ಜೆಗಳು ಕಂಡರೆ ಜೋಪಾನ.  ಬರೆಯಲು ಲೈಬ್ರರಿ ಅತ್ಯುತ್ತಮ ಸ್ಥಳವೆಂದು ಹೇಳಬೇಕಾಗಿಲ್ಲ. ಅದರಲ್ಲೂ ಕಿಟಕಿಯಿಂದ ದೂರವಿರುವ ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ವಾಸಿ. ಅಲ್ಲೊಂದು ಮಗು, ವರ್ಷದ್ದೋ ಎರಡು ವರ್ಷದ್ದೋ, ಆಡುತ್ತಿದೆ ಮತ್ತು ಅದರ ತಾಯಿ ಸತ್ತು ಸ್ವರ್ಗವಾದ ಲೇಖಕರ ಕೃತಿಗಳನ್ನು ತಿರುವಿಹಾಕುತ್ತಿದ್ದಾಳೆ. ಪುಟ್ಟಮಗು ಕೆಳಗಿನ ಕಪಾಟಿನಿಂದ ಪುಸ್ತಕಗಳನ್ನು ಸೆಳೆದುಕೊಳ್ಳುತ್ತದೆ. ಪುಸ್ತಕದ ಶೀರ್ಷಿಕೆ, ಲೇಖಕನ ಹೆಸರು, ಹಿಂಬದಿಯಲ್ಲಿ ಮುದ್ರಿಸಿದ ಲೇಖಕನ ಆಲೋಚನಾಮಗ್ನ ಪಟ, ಇವು ಯಾವುದೂ ಮುಖ್ಯವಲ್ಲ. ಕೆಂಪು ಪುಸ್ತಕ, ಕಪ್ಪು ಪುಸ್ತಕ, ಕಂದು ಪುಸ್ತಕ, ಎಲ್ಲವನ್ನೂ ಪೇರಿಸುತ್ತದೆ ಮಗು. ಎತ್ತರ ಹೆಚ್ಚಿದಷ್ಟೂ

ಸ್ನೇಹಿತ

ಇಮೇಜ್
ಮೂಲ: ಹೆಕ್ಟರ್ ರೋಜಾಸ್ ಹೆರಾಜೋ (ಸ್ಪಾನಿಷ್ ಭಾಷೆ, ಕೊಲಂಬಿಯಾ ರಾಷ್ಟ್ರ) ಇಂಗ್ಲಿಷ್ ಭಾಷೆಗೆ: ನಿಕೋಲಾಸ್ ಸೂಸ್ಕುನ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ನನ್ನ ಕಡೆಗೆ ಅವನು ಒಮ್ಮೆಲೇ ನೋಡಿದ  ಎಲ್ಲರಿಗಿಂತ ಹೆಚ್ಚು ಏಕಾಂತದಲ್ಲಿ.  ಅವನು ನನ್ನ ಕಡೆ ನೋಡಿದ ತನ್ನ ಕಣ್ಣುಗಳಿಂದ, ತನ್ನ ಮೂಳೆಗಳಿಂದ, ಪಾದರಕ್ಷೆಗಳೊಳಗಿನ ತನ್ನ ಬರಿಪಾದಗಳಿಂದ.  ನನಗೆ ತಡೆದುಕೊಳ್ಳಲಾಗಲಿಲ್ಲ.  (ನಾವು ತಡೆಯಲಾರೆವು  ನಮ್ಮ ಆಳಕ್ಕೆ ಇಣುಕುವ ಯಾವುದನ್ನೂ.) ಅವನ ಹಿಂದೆ ಇತ್ತು ಸ್ವರ್ಗ  ಅಲ್ಲಿದ್ದರು ರಾಕ್ಷಸರು,  ಕೊತಕೊತ ಕುಡಿಯುವ ಎಣ್ಣೆಯ ಕೊಪ್ಪರಿಗೆ ಮತ್ತು ಸಾಬೂನಿನ ಗುಳ್ಳೆಗಳನ್ನು ಊದುತ್ತಿರುವ ದೇವಪಿತ.  ಈ ಕಡೆ ಇತ್ತು ಕಂಪ್ಯೂಟರ್ ಮೇಜು, ಫರ್ನಿಚರ್ ಸಾಮಾನು, ಕೋಣೆಯ ಮತ್ತೆಲ್ಲಾ ಸಾಕ್ಷಿಗಳು.  ಸ್ನೇಹಿತನು ಕುಳಿತಿದ್ದ ಪುಟ್ಟ ಕುರ್ಚಿಯ ಮೇಲೆ,  ನನ್ನ ಕಡೆ ನೋಡುತ್ತಾ, ಕುಳಿತುಕೊಂಡು, ಉಸಿರಾಡುತ್ತಾ.  ಕವಿತೆಯ ಸ್ವಾರಸ್ಯ: ಇಲ್ಲಿ ಕವಿತೆಯ ನಾಯಕನಿಗೆ ಕಾಣುವ ಸ್ನೇಹಿತ ಬೇರೊಬ್ಬನೇ ಆಗಿರಬೇಕಾಗಿಲ್ಲ. ಸ್ವತಃ ನಾಯಕನೇ ಆಗಿರಬಹುದು ಎಂಬ ಸುಳಿವಿನೊಂದಿಗೆ ಕವಿತೆಯನ್ನು ಮತ್ತೊಮ್ಮೆ ಓದಿ. ಕಂಪ್ಯೂಟರ್ ತೆರೆಯ ಹಿಂದೆ ಕಾಣುತ್ತಿರುವ "ಸ್ವರ್ಗ"ದಲ್ಲಿ  ನರಕವಾಸಿಗಳಾದ ರಾಕ್ಷಸರು, ಎಣ್ಣೆಯ ಕೊಪ್ಪರಿಗೆ ಇವೆಲ್ಲಾ ಯಾಕಿವೆ?  ಕಂಪ್ಯೂಟರ್ ತೆರೆಯ ಕನ್ನಡಿಯಲ್ಲಿ ತನ್ನನ್ನೇ ಕಂಡಾಗ ನಾಯಕನಿಗೆ  ತಡೆದುಕೊಳ

ಅಮ್ಮ

ಇಮೇಜ್
ಮೂಲ ಇಂಗ್ಲಿಷ್ ಕವಿತೆ: ತಬೀಶ್ ಖೈರ್ (ಭಾರತ)  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಪ್ಲಾಸ್ಟರ್ ಕಿತ್ತು ಉದುರುವ ಈ ಮನೆಯ ಮೆಟ್ಟಿಲುಗಳನ್ನು ಇಳಿಯುವಾಗ   ಅದರ ಕೋಣೆಗಳ ಆಪ್ಯಾಯಮಾನ ಖಾಲೀತನದಲ್ಲಿ ಸುತ್ತುವಾಗ  ಮರುಧ್ವನಿಸುತ್ತದೆ ಅಜ್ಜಿ,  ನಿನ್ನ  ಮೆಲ್ಲನೆಯ ಹೆಜ್ಜೆಯ ಸಪ್ಪಳ ಮತ್ತು ನಡುವಣ ಮೌನ.  ಥೇಟ್ ಹಾಗೇ, ಹೇಗೆ ಅನುರಣಿಸುತ್ತಿದ್ದವೋ ಬೇಸಗೆಯ ಮಧ್ಯಾಹ್ನಗಳಲ್ಲಿ  ಕೋಣೆಯ ಸುತ್ತಲೂ ತೊಯ್ಯಿಸಿದ ಖಸ್ ಪರದೆಗಳ  ನಡುವೆ  ಮಾವು ನಿಂಬೆಗಳ ತಂಪುಪಾನೀಯಗಳಿಂದ, ಕಲ್ಲಂಗಡಿ ಚೂರುಗಳಿಂದ  ಕಾದುವಾಗ ಬಿಸಿಲನ್ನ.  ನಿಧಾನವಾಗಿ ತೂರಾಡಿಕೊಂಡು ಓಡಾಡುತ್ತಾ ನೀನು ಗಮನಿಸುತ್ತೀಯೆ   ಪರದೆಗಳಲ್ಲಿ ಎಷ್ಟು ಕಡೆ ಹರಿದಿದೆ ಹೊಸದಾಗಿ,  ಬೇಸಗೆಯಿಂದ ಬಿಡುವು ಸಿಕ್ಕರೆ ತಾನೇ, ಯಾವಾಗ ಬಂದೀತೋ ಮುಂಗಾರು ಮಳೆ, ಯಾವಾಗ ಮಾಡುವೆನೋ ಹೊಲೆದು ಜೋಪಾನ.   ಕೀಲುನೋವಿನ ನಡುವೆಯೇ ನೀನು ಓಡಾಡುವೆ ಕೋಣೆಯಿಂದ ಕೋಣೆಗೆ, ಲೆಕ್ಕ ಹಾಕುತ್ತಾ ಉರುಳುವ ಸಂವತ್ಸರಗಳು ಎಲ್ಲೆಲ್ಲಿ ಎಷ್ಟೆಷ್ಟು ಹಾನಿ ಮಾಡಿವೆ, ಎಂದು ಭೂತವು ಕುಸಿದು ಬೀಳುತ್ತದೋ  ಮತ್ತು ಎಷ್ಟು ಕಾಲ ಬಾಳುತ್ತದೋ ವರ್ತಮಾನ ನೀನಗೆಂದೂ ಬೇಕಾಗದು ಕನ್ನಡಕ ಮನೆಯ ಸುತ್ತ ಓಡಾಡುವುದಕ್ಕೆ, ಮೊಮ್ಮಕ್ಕಳನ್ನು ದೂರದಿಂದ ಗುರುತಿಸಲಾರೆಯಾದರೂ,  ರವಿಕೆ  ತಳಕಂಪಳಕ ಧರಿಸಿದ್ದೆ ಒಮ್ಮೆ! ಬದಲಾಗಿಲ್ಲ ಅಜ್ಜಿ, ಇಲ್ಲ, ಏನೂ ಬದಲಾಗಿಲ್ಲ ಇನ್ನಾ;  ನಿನ್ನ ಪುಟ್ಟ ಹೆಜ್ಜೆಗಳು ಎಂದೂ ಕೊಂಡೊಯ್ಯದಿದ್ದರ