ಪೋಸ್ಟ್‌ಗಳು

ಲಾಕ್ ಡೌನ್ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಬೂರ್ಶ್ವಾ

ಬ್ರೆಡ್ ಕದ್ದನೆಂಬ ಅಪರಾಧಕ್ಕಾಗಿ ಜಾನ್ ವಾಲ್ಜಾನ್ ಅನುಭವಿಸಿದ ವರ್ಷಗಟ್ಟಲೆ ಸೆರೆವಾಸ ಮತ್ತು ತಪ್ಪಿಸಿಕೊಂಡಾಗ ಬೆಂಬಿಡದ ಪೊಲೀಸ್ ಅಧಿಕಾರಿ ಜಾವೇ ಕಣ್ತಪ್ಪಿಸಿ ಓಡಾಡುವ ದುಸ್ಸಾಹಸ. ಮಂದಿಗೆ ಬ್ರೆಡ್ ಸಿಕ್ಕದ ಕಾಲದಲ್ಲೂ ಬೂರ್ಶ್ವಾ ಶ್ರೀಮಂತರು ನಡೆಸುತ್ತಿದ್ದರು ಕೇಕ್ ಮತ್ತು ವೈನ್ ಗಮ್ಮತ್ತು. ಮೇರಿ ಅಂಟಾಯ್ನೇ ಕೇಳಿದ ಪ್ರಶ್ನೆಯಿಂದ ಉದ್ರಿಕ್ತ ಜನ ಗಿಲೊಟಿನ್ ಗರಗಸಕ್ಕೆ ದೂಡಿದರು ಅವಳ ನಾಜೂಕು ಕತ್ತು. ಯಾರೋ ಅನ್ನುತ್ತಾರೆ ದಿನಗೂಲಿ ಜನರಿಗೆ ತಿನ್ನಲು ಗತಿಯಿಲ್ಲ. ಇನ್ನೊಬ್ಬರು ಶೇರ್ ಮಾಡುತ್ತಾರೆ ಇದು ನಾನೇ ಮನೆಯಲ್ಲಿ ಮಾಡಿದ ರಸಗುಲ್ಲ. ಸಮೋಸಾ ವಡೆ ಕಾಶಿ ಹಲ್ವಾ. ನಾವೆಲ್ಲರೂ ಹೀಗೆ ಬೂರ್ಶ್ವಾ ಆಗಿಬಿಟ್ಟಿದ್ದೇವಲ್ವಾ. ಇರಲಾರದು ನಮಗೆ ಗಿಲೊಟಿನ್ ಆಪತ್ತು ಆದರೆ ಹೇಗಿದ್ದೀತು ಕತ್ತರಿಸಿದರೆ ನಮ್ಮೆಲ್ಲರ ನೆಟ್ಟು. ಸಿ. ಪಿ. ರವಿಕುಮಾರ್

ಲಾಕ್ ಡೌನ್ ಸಡಿಲ

ಈಗ ಹೊರಗಡೆ ಓಡಾಡುವುದು ಸುಲಭವಲ್ಲ ಗೂಗಲ್ ಅಕ್ಕನಿಗೂ ರಸ್ತೆ ತಿಳಿಯುವುದಿಲ್ಲ ಕೆಲವು ದಾರಿಗಳು ಮುಚ್ಚಿವೆ ಕೆಲವು ಅರ್ಧ ಮಾತ್ರ ಕಣ್ಬಿಚ್ಚಿವೆ ಜನ ಹೇಗೆ ಗಾಡಿ ಓಡಿಸುತ್ತಿದ್ದಾರೋ ಕಾಣೆ ಹೇಗೋ ಒಪ್ಪಿಕೊಂಡಿದ್ದಾರೆ ಬದಲಾವಣೆ ನಮ್ಮ ಜನರಿಗಿಲ್ಲ ಮಾಸ್ಕ್ ತೊಟ್ಟು ಅಭ್ಯಾಸ ಕೆಲವರು ಹಾಗೇ ಹೊರಬಂದಿದ್ದಾರೆ ರಾಜಾರೋಷ ಕೆಲವರ ಧ್ವಜ ಜಾರಿದೆ ಅರ್ಧದಷ್ಟು ಕೆಳಗೆ ಕೆಲವರಿಗೆ ಮಾತ್ರ ಬಾಯ್ಮುಚ್ಚುವಷ್ಟು ಸಲುಗೆ ಜನ ಹೇಗೋ ಉಸಿರಾಡುತ್ತಿದ್ದಾರೆ ಈಗಲೂ ಮೂಗು ಬಾಯಿ ಲಾಕ್ ಡೌನ್ ಮಾಡಿದರೂ ಬಾಗಿಲು ಇರಾಕ್, ಸಿರಿಯಾಗಳಲ್ಲಿ ಬಾಂಬ್ ದಾಳಿಗೆ ಹೆದರಿ ಜನ ಹೇಗೆ ಬದುಕುವರೋ ದಿನದಿನ! ಧರ್ಮಾಂಧನ ಎದೆ ಕರೋನಾಗಿಂತ ಕಠಿಣ ಸಿಡಿಯುವುದು ಯಾವುದೋ ಅನಿರೀಕ್ಷಿತ ಕ್ಷಣ ಯಾವ ಮುಖವಾಡವೂ ನೀಡಲಾರದು ರಕ್ಷೆ ಎಷ್ಟು ಕೈ ತೊಳೆದರೇನು ಯಾರ ಪಾಪಕ್ಕೆ ಬಾಂಬ್ ದಾಳಿಯ ನಂತರ ಹೊರಗೆ ಬಂದಂತೆ ಜನ ಅಳುಕುತ್ತಿದ್ದರೂ ತಾಳಲಾಗದೇ ಬಂಧನ ಹೊರಗೆ ಇಣುಕುತ್ತಿದ್ದಾರೆ ಮೆಲ್ಲಮೆಲ್ಲನೆ ಮಂದಿ ಬಹುಮೆಲ್ಲನೆ ಕುಂಟುತ್ತಿದೆ ಬದುಕಿನ ಜಟಕಾ ಬಂಡಿ. ಮುಖವಾಡವಿದ್ದರೂ ಗುರುತಿಸಿ ಮುಗುಳ್ನಗೆ ಹೆಚ್ಚು ಮಾತಿಲ್ಲ ಹೊರಗೆ, ಎಲ್ಲ ಒಳಗೊಳಗೇ. "ತೆರೆದ ಬಾಗಿಲು ನಾನು, ಸರ್ವಋತು ಬಂದರು." ವೈಶಾಖ ಕಳೆದರೂ ವರ್ಷಋತು ಬಂದರೂ. ಬರಲಿ ಏನೇ ಪಾಲಿಗೆ ಅದುವೆ ಪಂಚಾಮೃತ ಎನ್ನುತ್ತ ಜನಗಣವು ಬಿಡದೆ ಜೀವನವೃತ ಮುನ್ನಡೆಯುತ್ತಿದೆ ಹೇಗೋ ನಮ್ಮ ಮಹಾನ್ ಭಾರತ ಗತಿ ನಿಧಾನವಾದರೇನು ಯಾರಿಗಿಲ್...