ಪೋಸ್ಟ್‌ಗಳು

Khalil Gibran ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪ್ರೇಮ

ಇಮೇಜ್
 ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಪ್ರೇಮವು – ಹೊತ್ತಿ ಉರಿಯುವ ಆತ್ಮದಿಂದ ಸ್ಫುರಿಸಿ ಸುತ್ತಲಿನ ಭೂಮಿಯನ್ನು ಬೆಳಗುವ ಒಂದು ಮಾಂತ್ರಿಕ ಕಿರಣ. ಅದರ ಬೆಳಕಿನಲ್ಲಿ ನಮಗೆ ಮೂಡುವುದು ನಮ್ಮ ಜಾಗೃತ ಸ್ಥಿತಿಗಳ ನಡುವೆ ಜೀವನ ಒಂದು ಸುಂದರ ಕನಸೆಂಬ ಪರಿಜ್ಞಾನ.

ಭಯ (ಅನುವಾದಿತ ಕವಿತೆ)

ಇಮೇಜ್
 ಭಯ ಮೂಲ: ಖಲೀಲ್ ಗಿಬ್ರಾನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಭಯದಿಂದ ಕಂಪಿಸುವುದಂತೆ ನದಿ ಸಮುದ್ರವನ್ನು ಪ್ರವೇಶಿಸುವ ಮೊದಲು. ತಾನು ಸಾಗಿ ಬಂದ ಹಾದಿಯತ್ತ ಹಾಯಿಸುತ್ತದೆ ಹೊರಳುನೋಟ ಪರ್ವತ ಶಿಖರಗಳಿಂದ ಧುಮುಕಿ ಸುತ್ತುತ್ತ ಕಾಡುಮೇಡುಗಳಲ್ಲಿ ಅದೆಷ್ಟು ಹಳ್ಳಿಗಳನ್ನು ದಾಟಿ  ಈಗ ನೋಡುತ್ತದೆ ತನ್ನೆದುರು ಆದಿ ಅಂತ್ಯವೇ ಗೋಚರಿಸದ ಸಿಂಧು ಪ್ರವೇಶಿಸಿದರೆ ಈ ಮಹಾಜಲಧಿಯನ್ನು ಅನಂತ ಕಾಲಕ್ಕೂ ಕಳೆದುಹೋಗುವ ಭೀತಿ ಆದರೆ ಬೇರಾವ ಮಾರ್ಗವೂ ಇಲ್ಲ ಹಾಕಲಾರದು ನದಿ ಹಿನ್ನಡೆ. ಹಿಂದಿರುಗಲಾರರು ಯಾರೂ. ಅಸ್ತಿತ್ವದಲ್ಲಿ ಹಿನ್ನಡೆ ಅಸಾಧ್ಯ. ನದಿಯು ಎದುರಿಸಲೇ ಬೇಕು ಸಾಗರವನ್ನು ಸೇರುವ ಅಪಾಯ: ಏಕೆಂದರೆ ಆಗಲೇ ಬಿಡುವುದು ಭಯ ಏಕೆಂದರೆ ಆಗಲೇ ನದಿಗೆ ಹೊಳೆಯುವುದು ಸಮುದ್ರದಲ್ಲಿ ತಾನು ಕಳೆದುಹೋಗಿಲ್ಲ ತಾನೇ ಸಮುದ್ರವಾಗಿರುವೆನೆಂಬ ತಿಳಿವು.

ಕಾಡು ಮತ್ತು ಕೊಳಲು (ಖಲೀಲ್ ಗಿಬ್ರಾನ್)

ಇಮೇಜ್
ಮೂಲ - ಖಲೀಲ್ ಗಿಬ್ರಾನ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್    ಕೊಟ್ಟು ನನ್ನ ಕೈಗೆ ಕೊಳಲು ಹಾಡು ನೀನು ಗೀತೆ - ನಿನಗೆ ಗೊತ್ತೇ? ಹಾಡಿನಲ್ಲಿದೆ ಅನಂತತೆ ನಾವು ನಾಶವಾದ ನಂತರವೂ ಕೊಳಲಿನ ವಿಲಾಪ ಕೇಳುತ್ತದೆ.  ನನ್ನಂತೆ ಗದ್ದಲದಿಂದ ದೂರವಾಗಿ ಕಾಡುಮೇಡುಗಳಲ್ಲಿ ಬದುಕಿದ್ದೀಯಾ ಎಂದಾದರೂ? ನಿಂತಿರುವೆಯಾ ಬೆಟ್ಟವನ್ನೇರಿ? ನದಿಗಳನ್ನು ಹೋಗಿದ್ದೀಯಾ ಹಿಂಬಾಲಿಸಿ? ಪನ್ನೀರಿನಲ್ಲಿ ಮಿಂದು ಬೆಳಕಿನಿಂದ ಮೈ ಒರೆಸಿ ಬಾನ ಬಟ್ಟಲಿನಲ್ಲಿ ಮುಂಜಾವನ್ನೇ ಮದಿರೆಯೆಂದು ಹೀರಿ ಹೊನ್ನ ದೀಪಗಳಂತೆ ತೂಗಿಬಿದ್ದ ಗೊಂಚಲ ಕೆಳಗೆ ಮಲಗಿದ್ದೀಯಾ ರಾತ್ರಿ ಹುಲ್ಲುಹಾಸಿನ ಮೇಲೆ ನಭವನ್ನೇ ತೊಟ್ಟು ಮೇಲುಹೊದ್ದಿಗೆಯಾಗಿ? ಮುಂದಿನ ಯೋಚನೆಗಳೆಲ್ಲಾ ಆವಿಯಾಗಿ ಹಿಂದೆ ನಡೆದದ್ದೆಲ್ಲಾ ಮರೆತು ಹಾಯಾಗಿ? ಬಂದಾಗ ಅಂಥದೊಂದು ಸುಮಧುರ ಘಳಿಗೆ ಹಾಡು, ಕೊಳಲನ್ನು ಕೊಡು ನನ್ನ ಕೈಗಳಿಗೆ. ಹಾಡಿನಲ್ಲಿ ದೊರೆವುದು ಹೃದಯಕ್ಕೆ ನ್ಯಾಯ ಅಪರಾಧಿ ಭಾವನೆಗಳೆಲ್ಲ ಆದರೂ ಲಯ ಮುಗಿಯದು ಕೊಳಲಿನ ವಿಲಾಪನೆ ಕೊಳಲನ್ನು ಕೊಟ್ಟು ನೀನು ಮಾಡು ಆಲಾಪನೆ ಮರೆತುಬಿಡು ಮದ್ದು ಮತ್ತು ಬಾಧಿಸುವ ಬೇನೆ ಜನರು ನೀರಿನ ಮೇಲೆ ಬರೆದ ಗೆರೆಗಳಂತೆ ಇಲಿಗಳು ಕೊರೆದ ಬಿಲಗಳಂತೆ ಜೇಡನ ಬಲೆಯ ದಾರಗಳಂತೆ. ದುರ್ಬಲನಾಗಿ ಬದುಕಿದವನು ಕ್ಷೀಣಿಸುತ್ತಾನೆ ನಿಧಾನವಾಗಿ. ಕಾಡು ಜೀವನದ ಸೆಲೆ! ಒಂದಷ್ಟು ದಿನಗಳು ಕೈಗೂಡಿದರೆ ನನಗೆ ಚೆಲ್ಲುವೆನು ನಾನವನ್ನು ಕ...