ಪೋಸ್ಟ್‌ಗಳು

old man ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಐಸ್ ಕ್ರೀಂ ಅಂಗಡಿಯಲ್ಲಿ

ಇಮೇಜ್
ಐಸ್ ಕ್ರೀಂ ಅಂಗಡಿಯಲ್ಲಿ  ಮೂಲ: ಬ್ರಯಾನ್ ಬಿಲ್ಸ್ಟನ್  ಅನುವಾದ: ಸಿಪಿ ರವಿಕುಮಾರ್ ಅವನೆಂದೂ ಸೇವಿಸದಿದ್ದರೂ ಅಜ್ಜನ ಬಳಿ ಇದ್ದೇ ಇರುತ್ತಿತ್ತು ಜೋಬಿನಲ್ಲಿ ಭದ್ರವಾಗಿ ತಂಬಾಕಿನ ಡಬ್ಬಿಯೊಂದು ಸದಾ ಅಲ್ಲಿ ಏನಿಟ್ಟುಕೊಂಡಿರುತ್ತೀಯಾ ಎಂದು ಅಣ್ಣ ಮತ್ತು ನಾನು ಕೇಳಿದಾಗ ಒಂದಿಷ್ಟು ಮರಳಿದೆ ಎಂದು ಉತ್ತರಿಸಿದ. ತಂಬಾಕಿನ ಡಬ್ಬಿಯಲ್ಲಿ ಯಾಕೆ ಮರಳು ಇಟ್ಟುಕೊಳ್ಳುತ್ತೀ ಎಂದು ಕೇಳಿದರೆ ಇನ್ನೆಲ್ಲಿ ಇಟ್ಟುಕೊಳ್ಳಲಿ ಎಂದು ಪ್ರಶ್ನಿಸಿದ. ಹಾಗಲ್ಲ, ಮರಳನ್ನು ಯಾಕೆ ಇಟ್ಟುಕೊಳ್ಳುತ್ತೀ ಎಂದಾಗ  ಅದು ವಿಶೇಷ, ತಂದಿದ್ದೇನೆ ದೂರದ ಫ್ರಾನ್ಸ್ ದೇಶದಿಂದ. ನಾವು ಡಬ್ಬಿಯಲ್ಲಿ ಇಣುಕಿ ಎಷ್ಟು ದುರುಗುಟ್ಟಿ ನೋಡಿದರೂ ಏನೂ ವಿಶೇಷ ಅನ್ನಿಸಲಿಲ್ಲ ಫ್ರಾನ್ಸ್ ದೇಶದ ಮರಳು. ಅವನನ್ನೇ ಏನು ಇದರ ವಿಶೇಷವೆಂದು ಕೇಳಿದರೆ ಒಂದೊಂದು ಕಣವೂ ಒಬ್ಬ ಸ್ನೇಹಿತನ ಕುರುಹು. ಅಜ್ಜನಿಗೆ ಬಹಳ ಜನ ಇರಬಹುದು ಎಳೆತನದ ಸ್ನೇಹಿತರು, ಬಾಲ್ಯದಲ್ಲಿ ಅವರ ಜೊತೆ ಸಮುದ್ರಕ್ಕೆ ಹೋಗಿದ್ದೆಯಾ? ಹಾಗೇ ಅಂದುಕೊಳ್ಳಿ ಎಂದು ಅಜ್ಜ ಐಸ್ ಕ್ರೀಂ ಕೇಳಿದ ಒಂದು ಸಾದಾ, ಇನ್ನೆರಡರ ಮೇಲೆ ಕೆಂಪು ಸಕ್ಕರೆ ಪಾಕ.

ಜರೆ

ಇಮೇಜ್
 (ಚಾರ್ಲ್ಸ್ ಸ್ಪೆನ್ಸ್ಲೇ ಅವರ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ತೋರಿಸಿದ ಚಿತ್ರ ಬರೆದಿದ್ದು ಏ ಐ.) ಚಿತ್ರಕವಿತೆ: ಸಿ. ಪಿ. ರವಿಕುಮಾರ್ ಜರೆ  ಮರೆತ ರಾಗಗಳನ್ನು ಮತ್ತೆ ನೆನೆಸಿಕೊಳ್ಳುತ್ತಾ ನೆರೆತ ಕೂದಲಿನವನು ಕೂತಿರುವನು ಸುಮ್ಮನೆ ಬರುವವರಿದ್ದರಲ್ಲ ಇಂದು ಯಾರೋ? ಅಥವಾ ಕರೆದಿದ್ದರೋ ಅವರು ತನ್ನನ್ನೇ ಮನೆಗೆ? ಯಾರವರು? ಓರಗೆಯವರು ಒಬ್ಬರೂ ಇಲ್ಲವಲ್ಲ. ಹೊರದೇಶದಲ್ಲಿದ್ದಾರಲ್ಲವೆ ವರ್ಷಗಳಿಂದ ಮಕ್ಕಳು?  ಕರೆದು ಕೇಳೋಣ ಎಂದು ಕೂಗಿದ ಅವಳನ್ನು; ಮರುಕ್ಷಣವೇ ಅವಳು ಮನದಲ್ಲಿ ನಕ್ಕಳು: ತೆರೆತೆರೆಯಾಗಿ ನಗಬಲ್ಲವಳು ಅವಳೊಬ್ಬಳೇ ಪೊರೆಗಣ್ಣಿಗೂ ಕಾಣುತ್ತದೆ ಅವಳ ನಗುಮುಖ. ಅರಳು ಮರಳಾಗಿದೆ ಎಂದು ರೇಗಿಸಿ ನಕ್ಕರೂ ಬರಲಿಲ್ಲ ಏಕೆಂದು ಯೋಚಿಸಿದ ಮುದುಕ. ಬರಿದಾದ ರಂಗ, ವಾದ್ಯ ನುಡಿಸುತ್ತಿದ್ದಾಗ ತಾನೊಬ್ಬನೇ ತೆರೆ ಯಾಕೆ ಎಳೆಯುತ್ತಿದೆ? ಕಾರ್ಯಕ್ರಮ ಮುಗಿಯಿತೇ?

ಮಂಜಪ್ಪನ ಕೋಳಿ

ಇಮೇಜ್
(ರಾಜಕುಮಾರ್ ಸ್ಥಬತಿ ಅವರ ಚಿತ್ರ ನೋಡಿ ಬರೆದ ಕವಿತೆ. ಕೆಳಗೆ ಕೊಟ್ಟಿರುವ ಚಿತ್ರ ಬರೆದಿದ್ದು ಏಐ) ಮೂಳೆ ಕೊರೆಯುವ ಚಳಿಗಾಲದ ರಾತ್ರಿ  ಮಂಜಪ್ಪ ತೊಟ್ಟು ತನ್ನ ಹಸಿರು ಟೋಪಿ ನಿದ್ದೆ ಬಾರದೆ ಎದ್ದು ಕೊಟ್ಟಿಗೆಗೆ ಬಂದು ನೋಡುವನು ಕೋಳಿ ಮಲಗಿದೆಯೇ ಎಂದು ಪ್ರೀತಿಯಿಂದ ಸಾಕಿದ್ದಾನೆ ಹಾಕಿ ಕಾಳು ನೀರು ಇನ್ನೇನು ತಿಂಗಳು ಕಳೆದರೆ ಮಾರಮ್ಮನ ತೇರು ಮೊಟ್ಟೆ ಇಟ್ಟು ಮರಿ ಮಾಡುವ ತನ್ನ ಧನಮೂಲ ಸಮೀಪಿಸುತ್ತಿದೆ ಮಾರಮ್ಮನಿಗೆ ಒಪ್ಪಿಸುವ ಕಾಲ ಇಲ್ಲ ಎನ್ನಲಾಗದು ಊರಲ್ಲಿ ಎಲ್ಲರಿಗೂ ಸರತಿ ಬಂದಾಗ ಕೋಳಿ ಒಪ್ಪಿಸುವುದೇ ರೀತಿ ಕೈಗೆತ್ತಿಕೊಂಡಾಗ ಕೋಳಿಯನ್ನು ಕಂದನ ಹಾಗೆ ಮಂಜಪ್ಪನ ಕಣ್ಣು ಮಂಜಾದದ್ದು ಯಾಕೆ ಹೀಗೇ ಎತ್ತಿಕೊಳ್ಳುತ್ತಿದ್ದ ಮಗಳ ನೆನಪಾಗಿ ಮತ್ತಷ್ಟು ಕ್ರೂರ ಎನಿಸುತ್ತದೆ ಮಾಗಿ ಮಾತು ಬಾರದ ಮೌನಿ, ಮನೆಗೆಲಸದಲ್ಲಿ ಜಾಣಿ ಹೆಗಲಿನ ಮೇಲೆ ಹೊತ್ತು ಬೆಳೆಸಿದ ರಾಣಿ ಜಾತ್ರೆಯಲ್ಲೇ ನಡೆದಿದ್ದಲ್ಲವೇ ಅವಳ ಮದುವೆ ಹರಕೆ ಹೊತ್ತಿದ್ದ ಮಾರಮ್ಮನಿಗೆ ಕೋಳಿ ಕೊಡುವೆ ಅವನ ಕಣ್ಣಂಚಲ್ಲಿ ನೆನಪು ತರಿಸುತ್ತದೆ ತೇವ ತಬ್ಬಿಕೊಳ್ಳುವನು ತನ್ನದೆಂಬ ಏಕೈಕ ಜೀವ ಚಿತ್ರಕವಿತೆ: ಸಿ. ಪಿ. ರವಿಕುಮಾರ್