ಪೋಸ್ಟ್‌ಗಳು

Infosys ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಎನ್ ಆರ್ ಎನ್ - ನೆನಪುಗಳು

ಇಮೇಜ್
  ಭಾರತಕ್ಕೆ ಮರಳಿ ಬಂದಾಗ ಇನ್ಫೋಸಿಸ್ ಕಚೇರಿಯಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ಡೈರೆಕ್ಟರ್ ಆಫೀಸಿನಲ್ಲಿ ನಾರಾಯಣ ಮೂರ್ತಿ ಕೂಡುತ್ತಿದ್ದರು. ಅವರಿಗೆ ಮುಂಗೋಪ ಹೆಚ್ಚು. ಒಮ್ಮೊಮ್ಮೆ ಸೆಕ್ರೆಟರಿಯ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದರು. ಅವರ ಆಲೋಚನೆಯ ರೀತಿ ವಿಭಿನ್ನವಾಗಿತ್ತು.  ಭಾರತದಿಂದ ಪ್ರತಿಭಾವಂತರನ್ನು ಹೊರದೇಶಕ್ಕೆ ಕಳಿಸಿ ಅಲ್ಲಿ ಪ್ರಾಜೆಕ್ಟ್ ಮಾಡಿಸಿ ಹಣ ಮಾಡುವ ಕಂಪನಿಗಳಿಗೆ ಬಾಡಿ ಶಾಪರ್ಸ್ ಎಂದು ವ್ಯಂಗ್ಯದಿಂದ ಮಾತಾಡುತ್ತಿದ್ದ ಕಾಲದಲ್ಲಿ ಭಾರತದಲ್ಲೇ ಪ್ರಾಜೆಕ್ಟ್ ಮಾಡಿಸಬೇಕು ಎಂಬ ಆಸೆಯನ್ನು ಮೂರ್ತಿ ಹೊಂದಿದ್ದರು.   ಕೆ.ಎಸ್.ಆರ್.ಟಿ.ಸಿ.ಗೆ ಟಿಕೆಟಿಂಗ್ ವ್ಯವಸ್ಥೆಯ ತಂತ್ರಾಂಶವನ್ನು ಅವರು ನಿಶ್ಶುಲ್ಕವಾಗಿ ತಯಾರಿಸಿಕೊಟ್ಟರು. ಟ್ರಾಕ್ಸ್ ಎಂಬ ಹೆಸರಿನ ಈ ತಂತ್ರಾಂಶವನ್ನು ನಿರ್ಮಿಸಲು ಸಾಕಷ್ಟು ಇಂಜಿನಿಯರುಗಳು ಅನೇಕ ತಿಂಗಳು ದುಡಿದರು.  ಬಹುಶಃ ಇಂಥ ಪ್ರಯತ್ನಗಳು ಬೇರೆಡೆ ನಡೆದಿರಲಾರವು.   ಸುಧಾ ಮೂರ್ತಿ ಒಮ್ಮೊಮ್ಮೆ ಆಫೀಸಿಗೆ ಬರುತ್ತಿದ್ದರು. ಬಹುಶಃ ಎರಡು ವರ್ಷ ವಯಸಾಗಿದ್ದ ಮಗನನ್ನು ಎತ್ತಿಕೊಂಡು ಬರುತ್ತಿದ್ದರು. ನಾವು ಮಗುವನ್ನು ಮಾತಾಡಿಸಿದರೆ ಮೂರ್ತಿ "ಇವನ ಜೊತೆ ಹುಷಾರು, ಇವನು ಮಹಾ ಅಪಾಯಕಾರಿ ವ್ಯಕ್ತಿ" ಎಂದು ತಮಾಷೆ ಮಾಡುತ್ತಿದ್ದರು.  ಅಂದು ಗಣಕಯಂತ್ರಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಅಮೇರಿಕಾ ಮತ್ತು ಜಪಾನ್ ಮಾತ್ರ ಗಣಕಗಳನ್ನು ತಯಾರಿಸುತ್ತಿದ್ದವು. ಭ...