ಸಂತಾಪ ಸಂದೇಶ (ಗಜಲ್)

 ಈಗ ಎಲ್ಲರ ಸಾವಿಗೂ ಎಲ್ಲರೂ ಸಂತಾಪ ಸೂಚಿಸುವುದು ಪದ್ಧತಿ

ಎಲ್ಲರೂ ಕಾಮೆಂಟ್ ಮಾಡುವರು ಓಂ ಶಾಂತಿ, ಸದ್ಗತಿ


ರಾಣಿಯ ಸಾವಿಗೆ ಓಂ ಶಾಂತಿ ಆರ್ ಐ ಪೀ ರೆಸ್ಟ್ ಇನ್ ಪೀಸ್

ಕೇಳರಿಯದದ್ದಿರೂ ಕಾಣದಿದ್ದರೂ ಕಡಿಮೆಯಿಲ್ಲ ಕಕ್ಕುಲಾತಿ


ಕಣ್ಣೀರು ಹಾಕುವರು ತುಂಬಲಾರದ ನಷ್ಟ ಇದೆಂದು

ವರ್ಷಗಳಿಂದಲೂ ಏನೂ ಬರೆಯದೇ ಸತ್ತರೂ ಸಾಹಿತಿ


ಸತ್ತವರು ಮಾಡದ ಸಾಧನೆ ಮತ್ತು ಆಡದ ಮಾತು

ಒಂದೆರಡು ದಿನ ಸುತ್ತುವುವು ಹೀಗೆ ಸೃಷ್ಟಿಸಿದ ಮಾಹಿತಿ


ಆನಂತರ ಮರೆತು ಮುನ್ನಡೆಯುವುದು ಜಗತ್ತು

ಎಷ್ಟು ದಿನ ಮಾಡಲಾದೀತು ಯಾರನ್ನಾದರೂ ಪ್ರೀತಿ!


ಸಿ. ಪಿ. ರವಿಕುಮಾರ್


#ಗಜಲ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)