ತಲೆಬರಹದಲ್ಲಿ ಯುದ್ಧ

 ಮೀಡಿಯಾ ತಲೆಬರಹದಿಂದ 

ದೂರವಾಗಿದೆ ಯುದ್ಧ 


ಹೇಳಿದ್ದನ್ನೇ ಹೇಳಿ 

ಯಾರೆಷ್ಟು ಮಾಡಿದರೂ ಗೇಲಿ 

ವಿಡಿಯೋದಲ್ಲಿ ಬಾಂಬ್ ದಾಳಿ 

ಹೇಳಿ ಹೇಳಿ ಹೇಳಿ 

ಚಾಲೀಸ ಬಾರಿ ಹೇಳಿ 

ಕೆಂಪಾಕ್ಷರಗಳಲ್ಲಿ ರೌದ್ರಾವತಾರ ತಾಳಿ 

ಕೂಗಾಡುವ ಮೀಡಿಯಾ ಜನರೂ 

ಒಂದೆರಡು ದಿನ ಮರೆತರು 

ಕೊಚ್ಚೆಗೆ ಕಲ್ಲೆಸೆಯುತ್ತ. 


ಆಗುತ್ತಿವೆಯಂತೆ ಮನೆಗಳು ಇನ್ನೂ ನಿರ್ನಾಮ 

ಬಾಂಬ್ ದಾಳಿಗೆ ಬೀಳುತ್ತಿವೆ ಊರು, ನಗರ, ಗ್ರಾಮ 

ಕೆಂಪಗೇ ಇದೆಯಂತೆ ನೆಲಕ್ಕೆ ಬಿದ್ದ ನೆತ್ತರು 

ಶೋಕಿಸುತ್ತಾರಂತೆ ಇನ್ನೂ ಯಾರೊಬ್ಬರು ಸತ್ತರೂ. 


ಬ್ರೇಕಿಂಗ್ ನ್ಯೂಸ್ ಪಾಳಿಯಿಂದ 

ಬ್ರೇಕ್ ತೆಗೆದುಕೊಂಡಿವೆ ರಣಹದ್ದು ಪಡೆ  

ಮತ್ತೆ ಪಡೆದುಕೊಳ್ಳಲು ಮುಖಪುಟದ ಹಕ್ಕು

ದಾಟಿ ಬಿಡುವರೋ ಮುಂದಾಳುಗಳು ಇನ್ನಾವ ಗೆರೆ 

ಎಂದು ಭೀತಗೊಂಡು ನಡುಗುತ್ತದೆ ಎದೆ. 



ಸಿ ಪಿ ರವಿಕುಮಾರ್, ಏಪ್ರಿಲ್ ೨೪, ೨೦೨೨

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)