ಪೋಸ್ಟ್‌ಗಳು

ಎವರ್ ಗ್ಲೇಡ್ ದಾರಿಯಲ್ಲಿ

ಇಮೇಜ್
  ಮೂಲ: ಗ್ರೇಸ್ ವೈಲೆನ್ಜ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಎಷ್ಟು ಕಾದಿದೆ ಎಂದರೆ ರಸ್ತೆ ನೆಂದಂತೆ ತೋರುತ್ತದೆ  ಮರೀಚಿಕೆಯಂತೆ ಹೊಳೆಯುತ್ತದೆ. ಸೂರ್ಯ ಕಂತುತ್ತಾ ಕ್ಷೀಣ ನೀಲ ಬೆಳಕು ಆವರಿಸುತ್ತಿದೆ. ನಾವು ಒಂದು ಕಡೆ ಪಾರ್ಕ್ ಮಾಡುತ್ತೇವೆ ಕೆಂಪು ಮಾಂಸದ ತುಂಡುಗಳಂತೆ ಕಾಣುವ ಟೊಮೆಟೋ ಹಣ್ಣುಗಳು ಯಾರದೋ ಟ್ರಕ್ ನಿಂದ ಉದುರಿ ಅಪ್ಪಚ್ಚಿಯಾಗಿವೆ. ಎದುರಿಗೆ ಇರುವ ವಿಶ್ರಾಂತಿ ಗೃಹ ವಿಮಾನತಲದಷ್ಟು ವಿಶಾಲವಾಗಿದೆ. ತಟ್ಟೆಗಳಲ್ಲಿ ನಮ್ಮ ಮೇಜುವಾನಿಗೆ ಬರುತ್ತವೆ ಹುರಿದ ಬೆಂಡೆಕಾಯಿ  ಕಾಲರ್ಡ್ ಎಲೆಗಳ ಕೋಸಂಬರಿ ಮತ್ತು ಕುಂಬಳದ ಜಾತಿಯ ಕಾಯಿಗಳ ಕಟ್ಲೆಟ್. ಬಿಲ್ ತೆರಲು ಹೋದಾಗ ಗಲ್ಲಾಪೆಟ್ಟಿಗೆಯಲ್ಲಿದ್ದಾಕೆ ಕೇಳುತ್ತಾಳೆ ರಸ್ತೆಯ ಅಂಚಿನ ಉದ್ದಕ್ಕೂ ಮಲಗಿದ್ದ ನೆರಳುಗಳು  ನೋಡಿದಿರಾ? ಅವು ಏನು ಹೇಳಿ ಮೊಸಳೆಗಳು. ನಾವು ನೋಡಿದ್ದೆವು. ಹದಿನೆಂಟು ಚಕ್ರಗಳ ಟ್ರಕ್ ಗಳ ಟೈರುಗಳು ಸ್ಫೋಟಿಸಿ ಎಗರಿ ಬಿದ್ದಿವೆ ಎಂದು ಮಾತಾಡಿಕೊಂಡಿದ್ದೆವು. ಅವಳು ಬೆರಳನ್ನು ಬಾಯೆಂಜಲು ಮಾಡಿ ಒಂದು ಪುಟ ಹರಿಯುತ್ತಾಳೆ ನಾವು ತೆತ್ತು ಹೊರಡುತ್ತೇವೆ. ಅವು ಬಿಸಿಲಿಗೆ ಹಾಕಿದ ವಂಕಿ ಅಂಚುಗಳ ರಬ್ಬರ್ ತುಂಡುಗಳಂತೆ ತೋರುತ್ತವೆ. ನಮ್ಮ ಪ್ರಯಾಣ ಮುಂದುವರೆಯುತ್ತದೆ ಸಂಜೆ ಬೆಳಕಿನಲ್ಲಿ ಎಲ್ಲಾದರೂ ಕಾಣುವುದೇನೋ ಅರೆಮುಚ್ಚಿದ ಕಣ್ಣು ಅಥವಾ ತೊಗಲಿನ ಚಿಪ್ಪುಗಳು ಅಥವಾ ಬೆನ್ನು ಎಂದು ನಾವು ಹುಡುಕುತ್ತೇವೆ. ಅವು ಬಹುಮೆಲ್ಲಗೆ  ಸ್ತಬ್ಧತೆಯ ವೇಗದಲ್ಲಿ ಚ...

ಇಡ್ಲಿಗೆ ಡೂಡಲ್

ಇಮೇಜ್
ಎಲೆ ಇಡ್ಲಿ ಎಲೆಯ ಮೇಲಿಂದ ಯಾವಾಗ ಹಾರಿ ಕಲೆಯಾಗಿಹೋದೆ ಗೂಗಲ್ ಡೂಡಲ್ ಸೇರಿ ಬಿಳಿಯನ್ನೇ ಉಟ್ಟು ಸರಳವಾಗಿದ್ದೆ  ನೆನ್ನೆಯವರೆಗೆ ತಲೆಯೇ ನಿಲ್ಲುತ್ತಿಲ್ಲವಲ್ಲ ಉತ್ತರವೇ ಇಲ್ಲ ಕರೆಗೆ! ದೋಸೆಗೆ ತಡೆಯಲಾಗುತ್ತಿಲ್ಲ ಈ ಆಘಾತ! ಅವಾರ್ಡು ಮೋಸದಿಂದ ಗೆದ್ದುಕೊಂಡದ್ದೆಂದು ಬಯಸುತ್ತಿದೆ ಸೇಡು ಇನ್ನು ಉಪ್ಪಿಟ್ಟಿಗಂತೂ ಡಿಪ್ರೆಶನ್ ಆಗುವುದು ಬಾಕಿ ಸುಮ್ಮನೆ ಹಾರಿಸುವರು ಎಲ್ಲ ಉಪಮಾತೀತ ಚಟಾಕಿ ಎಷ್ಟೇ ಬಗೆಯಲ್ಲಿ ರೂಪ ತಾಳಿ ಬಂದರೂ ಉಪ್ಪಿಟ್ಟು ಅಷ್ಟೇಕೆ ಎಲ್ಲರಿಗೂ ಅದರ ಮೇಲೆ ತಾತ್ಸಾರ ಸಿಟ್ಟು! ಇನ್ನು ಅವಲಕ್ಕಿಗೆ ಬೇಕಾಗಿಲ್ಲ ಈ ಯಾವ ಊಹಾ-ಪೋಹ ಕೃಷ್ಣನೇ ನನ್ನನ್ನು ಮೆಚ್ಚಿದನೆಂದು ಕಣ್ಮುಚ್ಚಿದೆ ಆಹಾ! ಕೋಪಿಸಿಕೊಂಡು ಕುದಿಯುತ್ತಿವೆ ಚಟ್ನಿ ಸಾಂಬಾರು ಸಪ್ಪೆ ಇಡ್ಲಿಗೆ ರುಚಿ ನಮ್ಮಿಂದಲೇ ಎಂದು ತಕರಾರು. ಸಿ ಪಿ ರವಿಕುಮಾರ್

ಶತಪದಿ

ಇಮೇಜ್
ಮೂಲ: ಜೂಲಿ ಹೋಲ್ಡರ್ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಬಹಳ ಜೋರಾಗಿ ಓಡಬಲ್ಲದು ಜರಿಹುಳು  ಏಕೆಂದರೆ ಅದಕ್ಕಿವೆ ಇನ್ನೂರು ಕಾಲು ಆದರೂ, ಇನ್ನೂರು ಕ್ಲಿಪ್ ಹೊಂದಿಸಿಕೊಂಡು  ಸಾಕ್ಸ್ ಒಣಗಿ ಹಾಕುವುದು ದೊಡ್ದ ಸವಾಲು ಉಡುಗೊರೆ ಕೊಟ್ಟರು ಯಾರೋ ಅದಕ್ಕೆ ವೆಲ್ಲಿಂಗ್ ಟನ್ ಬೂಟು ಐವತ್ತು ಜೊತೆ ಎಡಬಲ ಸಮ ಮಾಡುವ ತನಕ ಪುಟ್ಟ ಮಿದುಳು  ಪಾಪ ಮಳೆಗಾಲ ಮುಗಿದೇ ಹೋಗಿರುತ್ತೆ ನೂರು ಕಾಲಿದೆ ಜರಿಗೆ, ನನಗೆ ಎರಡೇ ಎರಡು ಹಾಗಂತ ನನಗೇನೂ ಹೊಟ್ಟೆಕಿಚ್ಚಿಲ್ಲಪ್ಪ, ಸದ್ಯಕ್ಕೆ. ಎಲ್ಲಿಗೆ ಹೋಗುತ್ತಿದ್ದೇನೆಂದು ಗೊತ್ತಾದಾಗ ಮುಂದಿನ ಕಾಲಿಗೆ ಹಿಂದಿನ ಕಾಲು ಇನ್ನೂ ಅದೇ ಸ್ಥಳದಲ್ಲಿರುತ್ತೆ.

ಪಂಡಿತರು

ಪದಾತಿ ಸೈನಿಕರು, ದೋಷಗಳ ವಿರುದ್ಧ ಸಮರದಲ್ಲಿ  ನಮ್ಮನ್ನು ನಮ್ಮಿಂದಲೇ ರಕ್ಷಿಸುವುದು ಇವರ ಗುರಿ ಸಜ್ಜಿತರಾಗಿ ಬಂದಿದ್ದಾರೆ ಇವರ ಕೈಯಲ್ಲಿದೆ ಶಸ್ತ್ರ  ಶಬ್ದಮಣಿ ರೆವರೆಂಡ್ ಕಿಟ್ಟೆಲ್ ಡಿಕ್ಷನರಿ ನಾವು ಬರೆದ ಪ್ರತಿ ಪದ ಪ್ರತಿ ಸಾಲು ಇವರ ಕೂಲಂಕಷ ಅವಗಾಹನೆಗೆ ಪಾಲು ತಿದ್ದುವರು ಅದು ಹಾಗಲ್ಲ ಹೀಗೆ ಎಂದು ಮಾಡುತ್ತ ಅವಹಾಲು ಹಲ್ಲು ಕಡಿಯುವರು, ಛೇ ಎಂದು ಹಲುಬುವರು  ನಾವು ದಾಟಿದ ಗೆರೆಯನ್ನು ಕೆಕ್ಕರಿಸಿ ನೋಡಿ  ಇನ್ನೇನು ಗತಿ ನಮ್ಮ ಭಾಷೆಗೆ ನಾಡಿಗೆ ಎಂದು ಪರೀಕ್ಷಿಸುವರು ಹಿಡಿದು ನಾಡ ನಾಡಿ. ಕನ್ನಡದ ಭಂಡಾರಕ್ಕೆ ಪಾಲಕರು ಇವರು ಅದನ್ನು ಶುದ್ಧವಾಗಿಡುವುದೇ ಇವರ ಕಾರ್ಯ. ಗರಿಷ್ಠ ಮೂರು ತಪ್ಪುಗಳ ವಿನಾಯಿತಿ ಕೊಟ್ಟಿದ್ದಾರೆ ಎಂಬುದೇ ಸಮಾಧಾನಕರ ವಿಷಯ. ತಿದ್ದುವ ಕೆಲಸದಲ್ಲಿ ಮೂಗು ಕೊಯ್ದರೂ ಓಕೆ  ಆಡಿಸುವರು ಇವರು ಚಕಚಕ ಕತ್ತರಿ ಚಾಕು. ಏನು ಹೇಳಿದ್ದೀರಿ ಲೇಖನದಲ್ಲಿ ನೋಡುವುದಿಲ್ಲ ವ್ಯಾಕರಣ ದೋಷ ಇರದಿದ್ದರೆ ಸಾಕು. ಮೂಲ : Brian Bilston  ಕನ್ನಡಕ್ಕೆ: ಸಿ ಪಿ ರವಿಕುಮಾರ್

ಜನಪ್ರಿಯ ಸುದ್ದಿ

ಮ್ಯಾಥೆಮ್ಯಾಟಿಕ್ಸ್ ಪೇಪರ್ ಮೂರು ಸಲ ಕಟ್ಟಿದರೂ ಪಾಸಾಗಲಿಲ್ಲ ,ಸ್ಟ್ಯಾಟಿಸ್ಟಿಕ್ಸ್ ಹೋಗಲಿಲ್ಲ ತಲೆಗೆ ಆದರೆ ದೇವರು ಕೊಟ್ಟಿದ್ದಾನೆ ಗಟ್ಟಿ ದನಿ ಚುರುಕು ನಾಲಗೆ ಹೀಗಾಗಿ ಮೀಡಿಯಾದಲ್ಲಿ ಇವರದ್ದೇ ಜೋರು ಒಬ್ಬರನ್ನು ಇಂಟರ್ವ್ಯೂ ಮಾಡಿ ಸಾಕು ಹೆಚ್ಚೆಂದರೆ ಇಬ್ಬರ ಮುಂದೆ ಹಿಡಿ ಮೈಕು  ನಾಳೆಗೆ ಬೇಕಾದ ವರದಿ ಸಂಜೆಗೆ ಬೇಕಾದ ನ್ಯೂಸ್ಉ ಬರೆದು ಜಲ್ದಿ ಜಲ್ದಿ ಹೇಗೋ ಮುಗಿಸಿ ಕಳಿಸು ಜನ ನೋಡುತ್ತಾರೆ ಹೇಗಿದ್ದರೂ ಕಣ್ಮುಚ್ಚಿಕೊಂಡು ಅವರಿಗೆಲ್ಲಿ ಬೇಕಾಗಿದೆ ಯಾವುದು ನಿಜವೆಂದು ಮನರಂಜನೆಗೆ ತಾನೇ ನೋಡುವುದು ಜನ ಹೀಗಾಗಿ ಹುಡುಕು ಏನಾದರೂ ವಿಲಕ್ಷಣ  ಓದುವಾಗ ಕೆಟ್ಟ ಅಣಕುಧ್ವನಿಯಲ್ಲಿ ಓದು  ಮಧ್ಯೆ ಮಧ್ಯೆ ಅವರಿವರನ್ನು ಒಂದಿಷ್ಟು ಬೈದು ಎಷ್ಟು ಗಟ್ಟಿಯಾಗಿ ಹೇಳುತ್ತೀಯೋ ಅಷ್ಟು ನಂಬುತ್ತಾರೆ ಜನ ಜನಪ್ರಿಯತೆಯೇ ಅಲ್ಲವೇ ಸಂಶೋಧನೆಯ ಲಕ್ಷಣ?

ಸ್ಥಿತಪ್ರಜ್ಞೆ

  ಕೇಳಿದೆನು ಕ್ವಾಂಟಂ ಕಂಪ್ಯೂಟರನ್ನು ನಾನು ಇದೆಯೋ ಇಲ್ಲವೋ ಬಾಕ್ಸಿನಲ್ಲಿ ಬೆಕ್ಕು ಕ್ವಾಕಂ ಉತ್ತರಿಸಿತು ಗಹಗಹಿಸಿ ನಕ್ಕು  ಕೇಳಬಾರದ ಪ್ರಶ್ನೆ ಕೇಳಿದೆಯಲ್ಲ ನೀನು ಎರಡು ಕ್ವಾಂಟಂ ಸ್ಥಿತಿಗಳಿವೆ ಮಾಡಿಕೋ ಮನವರಿಕೆ ಒಂದು ಬೆಕ್ಕಿನ ಇರುವಿಕೆ ಇನ್ನೊಂದು ಇಲ್ಲದಿರುವಿಕೆ ಇರುವುದೂ ಇಲ್ಲದಿರುವುದೂ ಒಮ್ಮೆಲೇ ಸಾಧ್ಯ ಚಂಪೂ ಕಾವ್ಯದಲ್ಲಿ ಇರುವಂತೆ ಗದ್ಯ ಮತ್ತು ಪದ್ಯ ಇದೆಯೋ ಇಲ್ಲವೋ ಎಂಬ ಕುತೂಹಲ ನಿನಗೆ ಹೀಗೇ ತೆರೆದಳು ಒಮ್ಮೆ ಪಂಡೋರಾ ಪೆಟ್ಟಿಗೆ ಪೆಟ್ಟಿಗೆ ತೆರೆದು ಏನಿದೆ ಎಂದು ಹೇಳಲೇ ಬೇಕೇ? ಎರಡು ಸ್ಥಿತಿಗಳನ್ನೂ ಇಳಿಸಲೇಬೇಕಾ ಒಂದಕ್ಕೆ? ಏಕೆ ಕೊಲ್ಲುವೆ ಇದ್ದರೂ ಇಲ್ಲದಂತಿರುವ ಬೆಕ್ಕನ್ನು? ಎಂದು ಜಾರಿತು ಕ್ವಾಕಂ, ಧ್ಯಾನಕ್ಕೆ, ಅರೆಮುಚ್ಚಿ ಕಣ್ಣು ಸಿ ಪಿ ರವಿಕುಮಾರ್ (ಇದು ಕನ್ನಡ ವಿಜ್ಞಾನ ನಾಟಕಕಾರ Shashidhara Dongre M ಅವರಿಗೆ)

ಗೋಸುಂಬೆಯ ಸಮಸ್ಯೆ

ಇಮೇಜ್
  ಗೋಸುಂಬೆಗಳು ಬಣ್ಣ ಬದಲಾಯಿಸುತ್ತವೆ ಎಂದು ಕೇಳಿದ್ದೇನೆ, ನೋಡಿಲ್ಲ. ಮೊನ್ನೆ ಒಂದು ಗೋಸುಂಬೆ ಸಿಕ್ಕಿತು. ಅದು ಯಾಕೋ ಬಹಳ ಬೇಸರ ಮಾಡಿಕೊಂಡು ಒಂದು ಕಲ್ಲಿನ ಮೇಲೆ ಮುಖ ತಗ್ಗಿಸಿಕೊಂಡು ಪಿಳಿಪಿಳಿ ಕಣ್ಣು ಬಿಡುತ್ತಾ ಕೂತಿತ್ತು.  ಯಾಕೆ ಹಾಗೆ ಕೂತೆ? ಅಂಥದ್ದೇನು ಆಯಿತು? ಎಂದು ಕೇಳಿದೆ. ಡಿಸ್ಟರ್ಬ್ ಮಾಡಬೇಡ, ನಾನು ಧ್ಯಾನ ಮಾಡುತ್ತಿದ್ದೇನೆ ಎಂದಿತು. ಆದರೆ ನಂತರ ಅದೇ ಮೌನ ಮುರಿದು ಮಾತಾಡಿತು. ಹೋಗಲಿ ಬಿಡು, ನನ್ನಿಂದ ಆಗೋದಿಲ್ಲ ಎಂದು ನಿಟ್ಟುಸಿರು ಬಿಟ್ಟಿತು. ಏನು, ಧ್ಯಾನ ಮಾಡೋದು ಆಗೋದಿಲ್ಲವಾ? ನನಗೂ ಕಷ್ಟ. ಟಿವಿ ಮುಂದೆ ಕೂತು ಅಲ್ಲಿ ಹೇಳಿಕೊಡೋ ಧ್ಯಾನ ಮಾಡಲು ಪ್ರಯತ್ನಿಸಿದರೆ ನಡುನಡುವೆ ಜಾಹೀರಾತು ಬರುತ್ತವೆ. ಧ್ಯಾನ ಎಲ್ಲಾ ಅಲ್ಲಿಗೆ ಖಲ್ಲಾಸ್ ಎಂದು ನನ್ನ ಪದಪ್ರಯೋಗಕ್ಕೆ ನಾನೇ ಖುಷಿ ಪಟ್ಟೆ.  ಇಲ್ಲ, ನಾನು ಧ್ಯಾನ ಮಾಡುತ್ತಿರಲಿಲ್ಲ. ಬಣ್ಣ ಬದಲಾಯಿಸಲು ಪ್ರಯತ್ನ ಪಡುತ್ತಿದ್ದೆ. ಈಗ ಅದೆಲ್ಲ ನಮ್ಮ ಕೈಯಲ್ಲಿ ಆಗುತ್ತಲೇ ಇಲ್ಲ. ಮುಂಚೆ ಯಾವ ಕಲ್ಲಿನ ಮೇಲೆ ಕೂಡುತ್ತಿದ್ದೇವೋ ಅದೇ ಬಣ್ಣಕ್ಕೆ ತಿರುಗಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತಾ ಇದ್ದೆವು. ಈಗ ಅದೆಲ್ಲ ಸಾಧ್ಯ ಆಗುತ್ತಿಲ್ಲ.  ಓಹ್, ಇದು ಜಾಗತಿಕ ಸಮಸ್ಯೆಯಾ? ಯಾವಾಗಿನಿಂದ? ನಾನು ಬೇಕಾದರೆ ಟಿವಿ ರಿಪೋರ್ಟರಿಗೆ ಹೇಳುತ್ತೇನೆ. ಅವನು ಇದನ್ನು ಕವರ್ ಮಾಡಬಹುದು. ಬೇಡ, ಬೇಡ. ಈ ಪ್ರಚಾರದಿಂದಲೇ ನಮ್ಮ ಶಕ್ತಿ ಕುಂದಿದ್ದು.  ಏನೋ ಬಹಳ ವಿಚಿತ್ರ...