ಪೋಸ್ಟ್‌ಗಳು

ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ

ಇಮೇಜ್
  ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ ಬೇಕ್ ಬೇಕ್ ಎನ್ನುತ್ತಿವೆ ಇನ್ನೂ ಕಳ್ಳೆಪುರಿ ಎಲ್ಲ ನನಗೆ ಬೇಕು ಎಂದು ಅಗೋ ಅಲ್ಲಿ ಮರಿಯು ಒಂದು ಎಂಥ ಹೊಟ್ಟೆಬಾಕ! ನಿನ್ನ ಹಾಗೇ ಅಲ್ಲವೇನು ತಿಂದೆ ನಾಲ್ಕು ಜಾಮೂನು ಬಿಡದೆ ತೊಟ್ಟು ಪಾಕ! ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ ಬೇಕ್ ಬೇಕ್ ಎನ್ನುತ್ತಿವೆ ಇನ್ನೂ ಕಳ್ಳೆಪುರಿ ಹಂಚಿಕೊಂಡು ತಿಂದರೆ ಹೊಟ್ಟೆಗಿಲ್ಲ ತೊಂದರೆ ಇಬ್ಬರಿಗೂ ತೃಪ್ತಿ! ಸರಿ ಹಾಗಾದರೆ ಅಕ್ಕಾ ನೆನ್ನೆ ನಿನಗೆ ಸಿಕ್ಕ ಚಾಕೋಲೇಟ್ ಫಿಫ್ಟಿ ಫಿಫ್ಟಿ! ಕ್ವಾಕ್ ಕ್ವಾಕ್ ಎನ್ನುತ್ತಿವೆ ಬಾತುಕೋಳಿ ಮರಿ ಬೇಕ್ ಬೇಕ್ ಎನ್ನುತ್ತಿವೆ ಇನ್ನೂ ಕಳ್ಳೆಪುರಿ ಸಿ. ಪಿ. ರವಿಕುಮಾರ್

ತೃಪ್ತಿ

ಇಮೇಜ್
ಮೂಲ: ಕ್ಯಾಥರೀನ್ ಹೆಪ್ ಬರ್ನ್ ಅನುವಾದ: ಸಿ. ಪಿ. ರವಿಕುಮಾರ್ ನಾನು ಹದಿಹರೆಯದ ಹುಡುಗಿಯಾಗಿದ್ದಾಗ ಒಮ್ಮೆ.ನನ್ನ ತಂದೆಯ ಜೊತೆಗೆ ಸರ್ಕಸ್ ನೋಡಲು ಹೋಗಿದ್ದೆ. ಟಿಕೆಟ್ ಖರೀದಿಸಲು ನಾವು ಸಾಲಿನಲ್ಲಿ ನಿಂತಿದ್ದೆವು. ಉದ್ದದ.ಸಾಲು ಕ್ರಮೇಣ ಚಿಕ್ಕದಾಗುತ್ತಾ ಕೊನೆಗೂ ನಾವು ಟಿಕೆಟ್ ಪೆಟ್ಟಿಗೆಯ ಮುಂದೆ ಬಂದೆವು. ನಮಗೂ ಮತ್ತು  ಟಿಕೆಟ್ ಪೆಟ್ಟಿಗೆಗೂ ನಡುವೆ  ಈಗ ಒಂದು ಸಂಸಾರದವರು ಮಾತ್ರ ಉಳಿದಿದ್ದರು.  ನಮ್ಮ ಮುಂದೆ ನಿಂತಿದ್ದವರನ್ನು ನಾನು ಬಹಳ ಹೊತ್ತಿನಿಂದ ಗಮನಿಸುತ್ತಿದ್ದೆ. ಹನ್ನೆರಡು ವರ್ಷದ ಒಳಗಿನ ಎಂಟು ಮಕ್ಕಳು. ಅವರು ಧರಿಸಿದ್ದ ಬಟ್ಟೆಗಳು ಅವರು ಅಷ್ಟೇನೂ ಸ್ಥಿತಿವಂತ ಮನೆಯವರಲ್ಲ ಎಂದು ಸಾರುತ್ತಿದ್ದವು. ಸಾಧಾರಣವಾಗಿದ್ದರೂ  ಅವರ ಬಟ್ಟೆಗಳು ಶುಭ್ರವಾಗಿದ್ದವು.  ಅವರ ನಡೆನುಡಿಗಳು ಉತ್ತಮವಾಗಿದ್ದವು. ಅವರ ಉತ್ಸಾಹ ಹೇಳತೀರದು. ಸರ್ಕಸ್ಸಿನಲ್ಲಿ ಬರುವ ಪ್ರಾಣಿಗಳು, ಬಫೂನ್ ಇತ್ಯಾದಿಗಳ ಬಗ್ಗೆ ಅವರು ಹರಟೆ ಕೊಚ್ಚುತ್ತಿದ್ದರು. ಅವರು ಎಂದೂ ಸರ್ಕಸ್ ನೋಡಿರಲಿಲ್ಲ ಮತ್ತು ಬಹುಶಃ ಅವರು ಮೊಟ್ಟಮೊದಲ ಸಲ ಪಟ್ಟಣಕ್ಕೆ ಬಂದಿರಬಹುದು ಎಂದು ಊಹಿಸಬಹುದಾಗಿತ್ತು.  ಸರತಿಯ ಸಾಲಿನಲ್ಲಿ ಮಕ್ಕಳು ಇಬ್ಬಿಬ್ಬರು ಕೈ ಹಿಡಿದು ನಿಂತಿದ್ದರು. ಅವರೆಲ್ಲರ ಮುಂದೆ ಅವರ ಅಪ್ಪ ಅಮ್ಮ ನಿಂತಿದ್ದರು. ಅವರ ತಾಯಿ ತನ್ನ ಗಂಡನ ಕಡೆಗೆ ಬಹಳ ಹೆಮ್ಮೆಯಿಂದ ನೋಡುತ್ತಿದ್ದಳು. ಮಕ್ಕಳನ್ನು ಹೀಗೆ ಸರ್ಕಸ್ ತೋರಿಸಲು ಕರೆದು ತಂದ ತಂದೆಯನ್ನು ಅವಳು ಅಭಿಮಾನ ಮತ್ತು ಕೃತಜ್ಞ

ಕೈಸಾಲ

ಇಮೇಜ್
ಮಗಳೇ ಇಗೋ ಹಿಡಿ ಈ ಕಪ್ಪು ಹೋಗು ಪಕ್ಕದ ಮನೆಗೆ ಹೋಗಿ ಪಡೆದು ತಾ ಉಪ್ಪು ಅಮ್ಮಾ ನಮ್ಮ ಮನೆಯಲ್ಲಿ ಇದೆಯಲ್ಲ ಆಗಲೇ ಸುಮ್ಮನೆ ಯಾಕೆ ಅವರ ಮನೆಗೆ ಹೋಗಲೇ? ಮಗಳೇ ಪಕ್ಕದ ಮನೆಯಾಕೆ ಆಗಾಗ ಬಂದು ಕೇಳುತ್ತಿರುತ್ತಾಳೆ ಏನಾದರೂ ಬೇಕೆಂದು ಒಮ್ಮೆ ಚಹಾಪುಡಿ, ಇನ್ನೊಮ್ಮೆ ಬೆಲ್ಲ ಇಂಥದ್ದೇ ಏನಾದರೂ ಸಣ್ಣಪುಟ್ಟ ಸಾಲ ನಾನೂ ಕೇಳುತ್ತೇನೆ ಆಗಾಗ ಅವಳಲ್ಲಿ ಉಪ್ಪು, ಮೆಣಸು ಇತ್ಯಾದಿ ಅಗ್ಗದ ವಸ್ತು ಹಾಗೆ ಕೇಳಿದರೆ ತಾನೂ ಏನಾದರೂ ಕೊಟ್ಟೆ ಎಂಬ ಸಾರ್ಥಕ ಭಾವ ಅವಳ ಕಣ್ಣಲ್ಲಿ ಇತ್ತು ಅವಳು ಬಡವಿ, ಅವಳಿಗೆ ಬೇಡುವುದು ಬಹುಕಷ್ಟ ನಾನೂ ಬೇಡಿದರೆ ನಡುವೆ ಅಭಿಮಾನ ಬಾರದು ಅಡ್ಡ (ಒಂದು ವಾಟ್ಸಪ್ ಸಂದೇಶದ ಸ್ಫೂರ್ತಿ)

ದ್ರಾಕ್ಷಿಯ ಗೊಂಚಲು ಮತ್ತು ಕವಿತೆ

ಇಮೇಜ್
ದ್ರಾಕ್ಷಿಯ ಗೊಂಚಲು  ಸೂರ್ಯನ ಬೆಳಕಿನಲ್ಲಿ ಹೊಳೆಯುತ್ತಿದೆ: ಹಸಿರು, ಕೆಂಪು, ಊದಾ, ನೇರಳೆ, ಕಪ್ಪು, ಕಿತ್ತಳೆ! ಹೀಗೆ ಒಂದೊಂದು ಹಣ್ಣಿಗೂ ಒಂದೊಂದು ವರ್ಣ ತುಂಬುತ್ತಾ ಅದೆಷ್ಟು ಹೊತ್ತು ವ್ಯಯಿಸುವೆ ಎಂದು ಕೋಪಿಸಿಕೊಂಡು ಕೇಳಿದೆ ಪ್ರಕೃತಿಯನ್ನ. ಎಷ್ಟು ದಿನ ಇದ್ದೀತು ಗೊಂಚಲಿನ ಬಣ್ಣ! ಗಾಳಿ ಬಿಸಿಲಿಗೆ ಪಕ್ವವಾಗಿ ಯಾರೋ ಕಿತ್ತರೆ ಸರಿ ಕಿತ್ತದಿದ್ದರೆ ಕೆಳಬಿದ್ದು ಸೇರುವುದು ಮಣ್ಣ! ನಕ್ಕು ನುಡಿಯಿತು ಅದೇ ನನ್ನ ಪ್ರಕೃತಿ ಏನೇ ಮಾಡಿದರೂ ಸಾವಧಾನ! ನೀನು ಬರೆದಾಗ ಕವಿತೆ ಹೇಗೆ ಒಂದೊಂದೇ ಪದವನ್ನೂ ತೂಗಿ ಅಳೆದು ಸುರಿದು ಬದಲಿಸಿ  ಅಲ್ಲಿಂದ ಇಲ್ಲಿ ಕದಲಿಸಿ ಒಂದೆಡೆ ಬಿಡಿಸಿ ಇನ್ನೊಂದೆಡೆ ಸೇರಿಸಿ ಒದ್ದಾಡುವಾಗ ಬಂದವರು ಯಾರೋ ಎಷ್ಟು ದಿನ ಈ ಕವಿತೆಯ ಜೀವನ ಎಂದು ಕೇಳಿದರೆ ಏನು ಹೇಳುವೆ ಉತ್ತರವನ್ನ! ಇಷ್ಟಾಗಿ ನಿನ್ನ ನಿರೀಕ್ಷೆ ಮೀರಿ  ಕವಿತೆ ಅಮರವಾದರೆ ಆಗ ಕೈ ಹಿಸುಕುತ್ತ ಅಯ್ಯೋ ಇನ್ನಷ್ಟು ಚೆನ್ನಾಗಿ ಬರೆಯಬೇಕಿತ್ತು  ಎಂದು ಅನುಭವಿಸುವೆಯಾ ಕೊರಗಿನ ಕಷ್ಟ! (ಜಲವರ್ಣ: ಕಾರಾ ಬ್ರೌನ್) ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಅತಿಥಿಪಾತ್ರ

ಇಮೇಜ್
  ನನ್ನ ಮೇಜಿನ ಮೇಲೆ ಕೂತಿದೆ ಅಮೃತ ಶಿಲೆಯ ಮೇಲೆ ಕುಸುರಿ ಕೆಲಸದ ಪೆನ್ ಹೋಲ್ಡರ್ ಅಲ್ಲಿವೆ ಒಂದಕ್ಕಿಂತ ಒಂದು ಚೆಂದದ ಪೆನ್ ಓವರ್ ವೇಟ್ ಎನ್ನಿಸುವ ಕಪ್ಪು ಬಣ್ಣದ್ದು ಸಮ್ಮೇಳನದ ಹೆಸರನ್ನು ಹೊತ್ತ ನೀಲಿ ಬಣ್ಣದ್ದು ಕಂಪನಿಯ ಹೆಸರುಳ್ಳ ಕೆಂಪು ಬಣ್ಣದ್ದು ಎಣಿಸಿದರೆ ಹತ್ತಾದರೂ ಇರಬಹುದು ಸಂಖ್ಯೆ ಎಲ್ಲ ಬಾಲ್ ಪಾಯಿಂಟ್, ಈಗಿಲ್ಲ ಇಂಕೇ ಬೇಕಾದಾಗ ಕೈಗೆತ್ತಿಕೊಂಡು ಬರೆದಾಗ ಮಾತ್ರ ಬಯಲಾಗುವುದು ಇವುಗಳದ್ದು ಬರೀ ಅತಿಥಿ ಪಾತ್ರ ಗೋಗರೆದರೂ ಬೈದರೂ "ಬರೆ ಬರೆ" ಎಂದು ಅಕ್ಷರ ಹಾಗಿರಲಿ ಮೂಡದು ಗೆರೆ ಒಂದು! ಕೊನೆಗೆ ಸಿಕ್ಕುವ  ಐದು ರೂಪಾಯಿ ಪೆನ್ನು ಬರೆಯಲು ಅದಕ್ಕೆ ಉತ್ಸಾಹವಿದೆ ಇನ್ನೂ! - ಸಿ.ಪಿ. ರವಿಕುಮಾರ್

ಒಬ್ಬಂಟಿ

ಇಮೇಜ್
ಬಹಳ ಮುಖ್ಯ ನೀನು ಹೊರಗೆ ಹೋಗಿ ಒಬ್ಬಂಟಿ ವಿರಮಿಸುವುದು ಒಂದು ಮರದ ಕೆಳಗೆ, ಆಗ ಜೊತೆಯಲ್ಲಿ ಕೊಂಡೊಯ್ಯದಿರು ಯಾವುದೇ ಪುಸ್ತಕ, ಯಾರೇ ಸಹಚರ ನಿನ್ನನ್ನು ಹೊರತು. ಗಮನಿಸು  ಕೆಳಗೆ ಬೀಳುವ ಎಲೆಯನ್ನು, ನೀರು ದಡಕ್ಕೆ ಬಡಿಯುವ ಸದ್ದನ್ನು, ಕೇಳು ಮೀನುಗಾರರ ಹಾಡನ್ನು. ಹಕ್ಕಿಯ ಹಾರಾಟವನ್ನು ನೋಡು, ಮತ್ತು ಗಮನಿಸು ನಿನ್ನದೇ ಆಲೋಚನೆಗಳನ್ನು: ನಿನ್ನ ಮನೋಭೂಮಿಕೆಯಲ್ಲಿ ಅವು ಒಂದು ಇನ್ನೊಂದರ ಬೆನ್ನಟ್ಟಿ ಹೋಗುವುದನ್ನು. ಹೀಗೆ ನೀನು ಒಬ್ಬನೇ ಇವನ್ನೆಲ್ಲ ಗಮನಿಸಬಲ್ಲೆಯಾದರೆ ದಕ್ಕುವುವು ಅನರ್ಘ್ಯ ಐಶ್ವರ್ಯಗಳು ನಿನಗೆ ಅವುಗಳ ಮೇಲೆ ಹೇರಲಾರದು ತೆರಿಗೆ ಯಾವುದೇ ಸರಕಾರ ಅವುಗಳನ್ನು ಭ್ರಷ್ಟಗೊಳಿಸಲಾಗದು ಯಾವುದೇ ಮಾವನಾಧಿಕಾರ ಅದು ಯಾರೂ ನಾಶ ಮಾಡಲಾಗದ ಕೋಶಾಗಾರ. ಜಿಡ್ಡು ಕೃಷ್ಣಮೂರ್ತಿ (ಕನ್ನಡಕ್ಕೆ: ಸಿ. ಪಿ. ರವಿಕುಮಾರ್) [ಕ್ಯಾಮೆರಾ ಕೂಡಾ ಬೇಡ :) ]

ಸಾಕ್ರಟೀಸ್ ಹೇಳಿದ ಜಾಣ್ಮೆ

ಇಮೇಜ್
  "ನಿನಗೆ ಏನೂ ತಿಳಿದಿಲ್ಲ ಎಂಬುದರಲ್ಲೇ ಎಲ್ಲಾ ತಿಳಿವಳಿಕೆಯೂ ಇದೆ"  ಹೀಗೆ ಯಾರು ಹೇಳಿರಬಹುದು? ಅ. ತನ್ನ ಪಿಎಚ್. ಡಿ. ವಿದ್ಯಾರ್ಥಿಗೆ ಓರ್ವ ಸೂಪರ್ ವೈಸ್ ಆದ ಸೂಪರ್ವೈಸರ್ ಬ. ಹೊಸದಾಗಿ ಮದುವೆಯಾಗಿ ಮನೆಗೆ ಬಂದ ಸೊಸೆಗೆ ಓರ್ವ ಸಾಸ್ ಭೀ ಕಭೀ ಬಹೂ ಥೀ ಎಂಬುದನ್ನು ಮರೆತ ಅತ್ತೆ ಕ.  ತದ್ವಿರುದ್ಧವಾದವುಗಳನ್ನು ಒಂದೇ ವಾಕ್ಯದಲ್ಲಿ ಬಳಸಿ "ಯೂ ಕನ್ ಫ್ಯೂಸ್" ಅಸ್ ಎನ್ನಿಸಿಕೊಳ್ಳುತ್ತಿದ್ದ ಕನ್ಫ್ಯೂಷಿಯಸ್ ಡ. ಇಂಥ ಹೇಳಿಕೆಗಳನ್ನು ಕೊಟ್ಟು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದ್ದ ಸಾಕ್ರಟೀಸ್ ಮಹಾಶಯನಿಗೆ ಅವನ ಜಗಳಗಂಟಿ ಹೆಂಡತಿ ಇದಕ್ಕೆ ಉತ್ತರ ಸಾಕ್ರಟೀಸ್ ಎಂದು ನನ್ನ ಮಿತ್ರ ರಾಜಾರಾಂ ಹೇಳಿದರು.  ಅದು ಆದದ್ದು ಹೀಗೆ. ಶಿವರಾತ್ರಿಯ ಹಿಂದಿನ ಬೆಳಗ್ಗೆ ನಾವು ಮೂವರು ಅರ್ಥಾತ್ ಮರಿಗೌಡ, ರಾಜಾರಾಂ ಮತ್ತು ನಾನು ಶಿವಶಂಕರದರ್ಶಿನಿಗೆ ದರ್ಶನ ಪಡೆಯಲು ಬಂದಿದ್ದೆವು. ತಾಳಿ, ತಾಳಿ, ನೀವು ನಮ್ಮ ಬಗ್ಗೆ ತಾತ್ಸಾರ ಭಾವನೆ ತಳೆಯುವ ಮುನ್ನವೇ ಹೇಳಿಬಿಡುತ್ತೇನೆ. ನಾವು ಮೊದಲು ಭವಾನೀಶಂಕರನ ಗುಡಿಗೆ ಹೋಗಿ ಶಿವನಿಗೆ ಹಾಲು ನೀರನ್ನು ಅಥವಾ ನೀರು ಹಾಲನ್ನು ಎರೆದು ನಂತರವೇ ಶಿವಶಂಕರ ದರ್ಶಿನಿಗೆ ಬಂದಿದ್ದೆವು. ಭವಾನೀಶಂಕರನ ಗುಡಿಯಿಂದ ಕೇವಲ ಹತ್ತು ಹೆಜ್ಜೆಗಳ ನಡೆಯ ದೂರದಲ್ಲಿ ಸ್ಥಿತವಾಗಿರುವ ಶಿವಶಂಕರ ದರ್ಶಿನಿಯಲ್ಲಿ ಅಂದು ಶಿವರಾತ್ರಿ ಸ್ಪೆಷಲ್ ಊಷ್ಟಾ ಇದ್ದಿತು.  ಏನಿದು ಊಷ್ಟಾ ಎಂದು ಹುಬ್ಬೇರಿಸಿದವರಿಗೆ ಸಂದೇಹ ನಿವಾರಣೆ ಮಾಡಿ