ಪೋಸ್ಟ್‌ಗಳು

ಏಪ್ರಿಲ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ

ಇಮೇಜ್
ಮೂಲ - ಮಿರ್ಜಾ ಗಾಲಿಬ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ('ಇಶ್ರತ್ ಏ ಕತರಾ ಹೈ ದರಿಯಾ ಮೇ ಫನಾ ಹೋ ಜಾನಾ'  - ಗಾಲಿಬ್ ಅವರ ಈ ಗಜಲ್ ಅನೇಕ ಗಾಯಕರಿಂದ ಹಾಡಲ್ಪಟ್ಟಿದೆ. ಕರ್ನಾಟಕ ಗಾಯನ ಶೈಲಿಯಲ್ಲಿ ಎಂ. ಎಸ್. ಸುಬ್ಬುಲಕ್ಷ್ಮಿಯವರೂ ಇದನ್ನು ಹಾಡಿದ್ದಾರೆ!  ತನ್ನ ಪ್ರೇಮಿಕೆಯಿಂದ ಯಾವುದೋ ಕಾರಣದಿಂದ ಬೇರಾದ ಪ್ರೇಮಿಯೊಬ್ಬನ ಅಳಲು ಈ ಕವಿತೆಯಲ್ಲಿದೆ.) ಸಿಂಧುವಿನಲ್ಲಿ ಕೊನೆಗಾಣುವುದರಲ್ಲಿದೆ ಬಿಂದುವಿನ ಆನಂದ ತಿಂದ ನೋವು ಮಿತಿ ಮೀರಿದಾಗ ಅದೇ ಆಗುತ್ತದೆ ದಿವ್ಯೌಷಧ ಬೀಗ ಮತ್ತದರ ಕೀಲಿಯಂತಾಯಿತಲ್ಲ ನನ್ನ ನಿನ್ನ ಸಂಬಂಧ ಎಲ್ಲ ನೇರವಾಯಿತು ಎನ್ನುವಾಗ ಕಳಚಿ ಬಿದ್ದಿತು ಬಂಧ ಕಷ್ಟಗಳಿಗಿಂತಲೂ ಪರಿಹಾರಗಳಿಂದ  ತತ್ತರಿಸಿದೆ  ಎದೆ  ಗಂಟು ಬಿಡಿಸಲು ಹೋಗಿ ಎಲ್ಲಾ  ಗೋಜಲುಗೋಜಲಾಗಿದೆ  ದೈವವೇ! ಹಿಂಸೆಯಿಂದಲೂ ವಂಚಿತವಾಗುತ್ತಿದೆ  ಮನಸ್ಸು ತನ್ನ  ಆರಾಧಕನ  ಮೇಲೆ ಅವಳಿಗೇಕೆ ಇಷ್ಟೊಂದು ಸಿಟ್ಟು? ಬಿಸಿ ನಿಟ್ಟುಸಿರುಗಳು  ಕಂಬನಿಯ ಸ್ಥಳವನ್ನಾಕ್ರಮಿಸಿದಾಗ ನೀರೂ ಆವಿಯಾಗಬಹುದೆಂದು ನಂಬಿಕೆ ಬಂತು ಆವಾಗ ಮದರಂಗಿ ಚಿತ್ತಾರದ ನಿನ್ನ ಮೃದು ಹಸ್ತಗಳ ನೆನಪು ಎದೆಯಿಂದ ಬೇರ್ಪಡಿಸುವುದಿದೆಯಲ್ಲ, ಕಿತ್ತಂತೆ ಉಗುರು ನಿನ್ನ ಮನೆ ಓಣಿಯನು ತಲುಪಲೊಲ್ಲದ  ಕುಸುಮದ ಗಂಧ ಬೀಸುಗಾಳಿಗೆ ಕಾದು ಕುಳಿತಿದೆ ಏತಕೆ  ಧೂಳಿನ ಅಂದ ಶ್ರಾವಣದ  ಕಾರ್ಮೋಡವು ಸುರಿಸಿದ ಮೇಲೆ ಬರಿದಾಗದೆ ಬಾನು? ಕಣ್ಣೀರು ಸುರಿಸಿದ ಮೇಲೆ ನನಗೂ ಬೇರೇ

ಲಾಕ್ ಡೌನ್ ಇಲ್ಲದ ಹಕ್ಕಿಗಳು

ಇಮೇಜ್
ಹೊರಗಡೆ ಮರದಲಿ ಅಮ್ಮಾ ನೋಡು ಹಕ್ಕಿಯೊಂದು ಕಟ್ಟಿದೆ ಹೊಸ ಗೂಡು ಬಿಡದೆ ಹಾಡುವುದು ಯಾವುದೋ ಹಾಡು ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ಹೊರಗಡೆ ಮರದಲಿ ಅಮ್ಮಾ ನೋಡು ಎಲೆಗಿಂತಲೂ ಹೆಚ್ಚಾಗಿದೆ ಹೂವು ದಟ್ಟಹಳದಿ, ನೀಲಿ, ತಿಳಿಗೆಂಪು ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ನೋಡು ಹಕ್ಕಿಗಳು ಬಡಿಯುತ ರೆಕ್ಕೆ ಪಟಪಟ ಹಾರುತ್ತವೆ ಮೇಲಕ್ಕೆ ಲಾಕ್ ಡೌನ್ ಇಲ್ಲವೇ ಇಲ್ಲ ಇವಕ್ಕೆ! ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ಬಂದಿರುವಾಗ ಸಕ್ಕರೆ ನಿದ್ದೆ ಕನಸೊಳು ಕಾರ್ಟೂನ್ ನೋಡುತ್ತಿದ್ದೆ ಇವುಗಳ ಕಲಕಲ ಕೇಳುತ ಎದ್ದೆ ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ಯಾಕಮ್ಮಾ ಹಕ್ಕಿಗಳಿವು ಹೀಗೆ ಕೂಡದೆ ಸುಮ್ಮನೆ ಒಂದೇ ಕಡೆಗೆ ಹಾರುತ್ತಿರುವುವು ದಿನಾ ಬೆಳಗ್ಗೆ ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ನಿನ್ನ ಹಾಗೆ ಹಕ್ಕಿಗಳೂ ಪುಟ್ಟ ಬರುವೆಯಲ್ಲ ತಿಂಡಿಯ ಹುಡುಕುತ್ತ ಹಾಗೇ ಹುಡುಕುತ್ತವೆ ಹುಳು ಹುಪ್ಟ ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! ತಿಂಡಿ ಎಂದ ಕೂಡಲೇ ನೆನಪಾಯ್ತು ಏನೋ ಘಮಘಮ ಬರ್ತಾ ಇತ್ತು ಮೈಸೂರ್ ಪಾಕೇನಮ್ಮ ಇವತ್ತು? ಚೀವ್ ಚೀವ್ ಚುವಿ ಚುವಿ ಚೀವ್ ಚೀವ್ ಚೂ! - ಸಿ.ಪಿ. ರವಿಕುಮಾರ್, ಏಪ್ರಿಲ್ ೨೫, ೨೦೨೦

ಲಾಕ್ ಡೌನ್ ಚುಟುಕಗಳು

ಲಾಕ್ ಡೌನ್ ಕಾಲದಲ್ಲಿ ಬರೆದ ಚುಟುಕಗಳು  ರಾಜು   ನನ್ನ ಫ್ರೆಂಡ್ ಎಂಎನ್ಎಚ್ ರಾಜು ಅಂತ ಓದಿಕೊಂಡಿಲ್ಲವಾದ್ರೂ ಸಹಜ ಬುದ್ಧಿವಂತ ಹುಟ್ಟಿದ್ದು ಮಾಗಡಿಯ ನಗುವಳ್ಳಿ ಅಂತ ಅವನ ತಂದೆಯ ಹೆಸರು ಹನುಮಂತ ಎಂದೂ ಬರೆದದ್ದು ಕಾಣೆ ಮಾ.ನ.ಹ. ರಾಜು ಅಂತ ಥ್ರೋ ಬ್ಯಾಕ್  ಮ್ಯಾನೇಜರ್ ನೀಡಿದ ಸಮಸ್ಯೆಗೆ ಪರಿಹಾರ ಇಂಜಿನಿಯರ್ ಕೊಡಬಾರದಾಗಿತ್ತು ಗುರುವಾರ ಸೂಕ್ತವಾಗಿದ್ದರೂ ವಾಪಸ್ ಬಂತು ರೀಬೌಂಡು ಯೋಚಿಸಲು ತಿಳಿದುಬಂತು ಯಾಕೆಂದು ಅಂದು ಮ್ಯಾನೇಜರ್‌ಗೆ ಥ್ರೋ ಬ್ಯಾಕ್ ಥರ್ಸ್ಡೇ ಆಚಾರ ಮೂರು   ರುಕ್ಮಿಣಿಗೆ ಎಷ್ಟಿತ್ತು ಗೊತ್ತೇ ಮುತುವರ್ಜಿ ಪತಿದೇವ ಕೃಷ್ಣನ ತೂಕ ಕುರಿತು ಕಾಳಜಿ ತಂದಾಗ ಸುದಾಮ ಖಾರದವಲಕ್ಕಿ ಕೃಷ್ಣ ತಿಂದದ್ದು ಎರಡೇ ಹಿಡಿ ಮುಕ್ಕಿ ಮೂರನೇ ಹಿಡಿಗೇ ಬಸ್ ಕರೋ ಸರ್ ಜೀ. ಲಾಕ್ ಡೌನ್ ಅಲೆಮಾರಿ   ಕೆಲವರು ಅಲೆಮಾರಿ ಜನಾಂಗ ಮನೆಯ ಹೊರಗೇ ಪಟ್ಟಾಂಗ ಈಗ "ಅಲ್ಲಿದೆ ನಮ್ಮ ಮನೆ ಇಲ್ಲಿಗೆ ಬಂದೆವು ಸುಮ್ಮನೆ" ಎಂದು ದಾಸರ ರಾಗ ಹಾಡುತ್ತಿರುವರೀಗ! ಕಳಪೆ ಕಿಟ್ಟು  ಯಾವಾಗ ಹೋದ ಭಾರತ ಬಿಟ್ಟು ನಮ್ಮ ಕಿಟ್ಟು ಚೈನಾಗೆ, ಮಾನಗೆಟ್ಟು! ಇಲ್ಲಿ ಕನಕಪುರದಲ್ಲಿದ್ದಾಗಲೂ ಮಾರುತ್ತಿದ್ದದ್ದು ಕಳಪೆ ಮಾಲು ಈಗಂತೂ ಹೆಡ್ಲೈನ್ ನ್ಯೂಸ್ "ಕಳಪೆ ಚೈನಾ ಕಿಟ್ಟು" ಡೌನ್ ಡೌನ್  ಅದು ಡೌನು ಇದು ಡೌನು ಲಾಕ್ ಡೌನು ಸೀಲ್ ಡೌನು ಬರಲಿದೆಯೋ ಏನೇನು ಚಿಂತಿಸೆನು ನಾನಿನ್ನು ಏನು ಫಲ, ಲೋಕವೇ ಆದಾಗ ಅಪ್ ಸೈಡ್ ಡೌನು!! ಏಕಲವ್ಯನ ಬೆ

ಲಾಕ್ ಡೌನ್ ಉದಯ

ಇಮೇಜ್
ಬೆಳ್ಳಂಬೆಳಗ್ಗೆ ಮಳೆ ಬಲು ಜೋರು ಏಳಲು ಯಾತಕ್ಕೋ ಬೇಜಾರು ಮಲಗುವೆನಮ್ಮಾ ಬೆಚ್ಚಗೆ ಹೊದ್ದು ಮಾಡಲಾದರೂ ಏನಿದೆ ಎದ್ದು ಲಾಕ್ ಡೌನ್ ಅಂತ ಮುಚ್ಚಿದೆ ಸ್ಕೂಲು ಈಗ ಯಾವ ಎಕ್ಸಾಮ್ ಇದೆ ಹೇಳು ದೇವರು ವರ ಕೊಟ್ಟರೂ ಪೂಜಾರಿ ಕೊಡದ ಹಾಗೆ ನೀನೇತಕೆ, ವೈರಿ, ಏಳೋ ಏಳೋ ಏಳೋ ಬೇಗ ರಿಕಾರ್ಡು ಹಚ್ಚುವೆ ಒಂದೇ ರಾಗ! ಏನು ಮಾಡಲಿದೆ ನಾ ಮೇಲೆದ್ದು ಹೊರಗಡೆ ಹೋದರೆ ಕೊಡುವರು ಗುದ್ದು ಬೋರಾಗಿದೆ ಮನೆಯೊಳಗೇ ಇದ್ದು ಕೋವಿಡ್ ಕರೋನಾ ಎರಡರದೇ ಸದ್ದು ಸರಿಯೇ ಕಣೋ ಹೇಳುವುದೂ ನೀನು ಬೆಚ್ಚಗೆ ಹೊದ್ದು ಮಲಗುವೆ ನಾನೂ ಅಪ್ಪನೇ ಮಾಡಲಿ ಇಂದಿನ ತಿಂಡಿ ಮಲಗಲು ಸೂಚಿಸುತಿದೆ ಈ ಥಂಡಿ ಅಯ್ಯೋ ಬೇಡಮ್ಮಾ ಇದೋ ಎದ್ದೆ ಅಪ್ಪನ ಉಪ್ಪಿಟ್ ಹಸಿಹಸಿ, ಮುದ್ದೆ ನೀನೇ ಮಾಡು ಪೂರಿಸಾಗು ರೆಡಿಯಾದಾಗ ನನ್ನನು ಕೂಗು ಅಷ್ಟರವರೆಗೂ ಮಲಗುವೆ ನಾನು ಸವಿಯುತ್ತಾ ನಿದ್ದೆಯ ಜಾಮೂನು - ಸಿ ಪಿ ರವಿಕುಮಾರ್, ಏಪ್ರಿಲ್ ೨೪, ೨೦೨೦

ಸ್ಮರಣೆಯೊಂದೇ ಸಾಲದೇ?

ಇಮೇಜ್
ಗೆಳೆಯ ಸುಧೀಂದ್ರ ಕನ್ನಡ ಲೇಖಕರ ನೆನಪುಗಳನ್ನು ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದಾನೆ. ಇದು ಬಹಳ ಸಂತೋಷದ ಸಂಗತಿ.  ಅವನು ನಿರಂಜನ ಮತ್ತು ಅನುಪಮಾ ಅವರನ್ನು ಕುರಿತು ಮಾತಾಡಿದ್ದು ಸ್ವಾರಸ್ಯಕರವಾಗಿದೆ. ಕೆಲವು ಖಾಸಗೀ ನೆನಪುಗಳನ್ನು ದಾಖಲಿಸುವ ಪ್ರಯತ್ನ ಇಲ್ಲಿದೆ. ನಿರಂಜನ ಮತ್ತು ಅನುಪಮಾ  ಅವರ ಸ್ಮರಣೆ ಎಂದಿಗೂ ಚೇತೋಹಾರಿ. ನಮ್ಮ ತಂದೆಗೆ ನಿರಂಜನ ಹತ್ತಿರದ ಗೆಳೆಯರು. ಒಂದು ಕಾಲದಲ್ಲಿ ಇಬ್ಬರೂ ಕನ್ನಡ ಪತ್ರಿಕೆಗಳಿಗೆ ಬರೆದವರು. ಆದರೆ ನನ್ನ ತಂದೆಯವರ ಒಲವು ಇಂಗ್ಲಿಷ್ ಬರವಣಿಗೆಯಲ್ಲಿ ಹೆಚ್ಚಿತ್ತು.  ನಿರಂಜನ ದಂಪತಿಗಳ ಮದುವೆಯಲ್ಲೂ ನಮ್ಮ ತಂದೆ ಒಂದು ಸಣ್ಣ ಪಾತ್ರ ವಹಿಸಿದ್ದರು.  ನನ್ನ ತಾಯಿಗೆ ಅನುಪಮಾ ಅವರು ಗೆಳತಿಯಾಗಿದ್ದರು. ಒಮ್ಮೆ ಅವರಿಗೆ ಚಿಕಿತ್ಸೆ ಕೂಡಾ ನೀಡಿದ್ದರು.  ನಮ್ಮ ತಂದೆ ದೆಹಲಿಗೆ ವರ್ಗವಾಗಿ ಹೋದಾಗ ಐದು  ವರ್ಷಗಳ ಕಾಲ ಸಂಪರ್ಕಗಳು ಕಡಿಮೆಯಾದವು. ಆಗ ಇಂದಿನಂತೆ  ಫೋನ್, ಸೋಷಿಯಲ್ ಮೀಡಿಯಾ ಇವೆಲ್ಲಾ ಇರಲಿಲ್ಲ. ಪತ್ರ ವ್ಯವಹಾರವೊಂದೇ ಆಗಿದ್ದ ಸಂಪರ್ಕ ಸಾಧನ!  ನಾವು ಮರಳಿ ಬೆಂಗಳೂರಿಗೆ ಬಂದಾಗ ಅವರು ನಮ್ಮ ತಂದೆಗೆ ವಿಮರ್ಶೆಗಾಗಿ ಕಳಿಸಿದ ಜ್ಞಾನಗಂಗೋತ್ರಿಯ ಸಂಪುಟಗಳನ್ನು ಓದುತ್ತಾ ನಾನು ಬೆಳೆದೆ. ಅಂಥ ದೊಡ್ಡ ಪ್ರಮಾಣದ ವಿಶ್ವಕೋಶದ ಸಂಪಾದನೆಯ ಹೊಣೆಯನ್ನು ಹೊರುವುದು ನಿರಂಜನ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಆದರೆ ಕೆಲಸದ ಒತ್ತಡ ಅವರ ಮೇಲೆ ಹೆಚ್ಚಾಯಿತು. ಸಂಪುಟದ ಬಿಡುಗಡೆಯ ದಿನವೇ ಭಾಷಣ ಮಾಡುವಾಗ ಕುಸಿದ

ಪಂಥ (ಷೆಕಾಫ್ ಅವರ ಸಣ್ಣಕತೆ,)

ಇಮೇಜ್
ಪಂಥ ಮೂಲ ಕಥೆ - ಆಂಟನ್ ಷೆಕಾಫ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಶರತ್ಕಾಲದ ಕಡುಗಪ್ಪು ರಾತ್ರಿ. ವೃದ್ಧ ಬ್ಯಾಂಕರ್ ತನ್ನ ಬೈಠಕ್ಕಿನಲ್ಲಿ ಶತಪಥ ತಿರುಗುತ್ತಿದ್ದ. ಹದಿನೈದು ವರ್ಷಗಳ ಹಿಂದಕ್ಕೆ ಅವನ ನೆನಪು ಓಡಿತು. ಇಂಥದ್ದೇ ಶರತ್ಕಾಲದ ರಾತ್ರಿಯಂದು ತಾನು ನೀಡಿದ ಔತಣಕೂಟದಲ್ಲಿ ಅದೆಷ್ಟು ಮಂದಿ ಬುದ್ಧಿವಂತರು ಸೇರಿ ಸುರಸ  ಸಂಭಾಷಣೆಗಳಲ್ಲಿ ತೊಡಗಿದ್ದರು! ಕೊನೆಗೆ ಮಾತು ಗಲ್ಲುಶಿಕ್ಷೆಯತ್ತ ಹೊರಳಿತು. ಅಲ್ಲಿ ನೆರೆದಿದ್ದ ಬಹಳ ಜನ ಬುದ್ಧಿಜೀವಿಗಳು ಮತ್ತು ಪತ್ರಕರ್ತರು ಮರಣದಂಡನೆಯನ್ನು ಬಲವಾಗಿ ಟೀಕಿಸಿದರು.   ಅದೊಂದು ಪ್ರಾಚೀನ ರೀತಿಯ ಶಿಕ್ಷೆ, ಅನೀತಿಯುತವಾದದ್ದು, ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ನಾಡುಗಳಲ್ಲಿ ಅಸಮ್ಮತವಾದ ಪದ್ಧತಿ ಎಂದು ಅವರು ವಾದಿಸಿದರು.  ಮರಣದಂಡನೆಗೆ ಬದಲಾಗಿ  ಜೀವಾವಧಿ ಕಾರಾಗೃಹವಾಸ ಶಿಕ್ಷೆಯನ್ನು ಘೋಷಿಸುವುದೇ ಸರಿಯಾದದ್ದು ಎಂದು ಕೆಲವರು ಅಭಿಪ್ರಾಯ ಕೊಟ್ಟರು. "ನಾನು ಒಪ್ಪುವುದಿಲ್ಲ," ಎಂದು ಬ್ಯಾಂಕರ್ ಘೋಷಿಸಿದ. "ನನಗೆ ಎರಡರದ್ದೂ ಅನುಭವವಿಲ್ಲವಾದರೂ ಹೋಲಿಕೆಯಲ್ಲಿ ಮರಣದಂಡನೆಯೇ ಹೆಚ್ಚು ನೀತಿಯುಕ್ತವಾದದ್ದು, ಹೆಚ್ಚು ಮಾನವೀಯವಾದದ್ದು  ಎನ್ನಿಸುತ್ತದೆ. ಮರಣದಂಡನೆ ಮನುಷ್ಯನನ್ನು ಒಂದೇ ಏಟಿಗೆ ಕೊಲ್ಲುತ್ತದೆ. ಆದರೆ ಜೀವಾವಧಿ ಶಿಕ್ಷೆ ಅವನನ್ನು ನಿಧಾನವಾಗಿ ಕೊಲ್ಲುತ್ತದೆ. ನೀವೇ ಹೇಳಿ, ಒಂದೇ ಕ್ಷಣದಲ್ಲಿ ಗಲ್ಲಿಗೇರಿಸಿ ಪ್ರಾಣ ತೆಗೆದುಬಿಡುವವನು ಉತ್ತಮನೋ ಅಥವಾ ವರ್

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ (ಹಾಸ್ಯಪ್ರಬಂಧ)

ಇಮೇಜ್
ಇನ್ನೂ ನನಗೆ ಒಮ್ಮೊಮ್ಮೆ ಪರೀಕ್ಷೆಯಲ್ಲಿ ಬರೆಯುತ್ತಿರುವ ಕನಸುಗಳು ಬರುತ್ತವೆ! ಕೊರೋನಾ ಭಯದಲ್ಲಿ ನಾವೆಲ್ಲರೂ ನಮ್ಮ ನಮ್ಮ ಬಿಲಗಳೊಳಗೆ ಸೇರಿಕೊಂಡಿರುವ ಈ  ಸಂದರ್ಭದಲ್ಲೂ ನನಗೆ ಇಂಥದೊಂದು ಕನಸಾಯಿತು. ಕನ್ನಡ ಪರೀಕ್ಷೆಯಲ್ಲಿ "ಈ ವಚನವನ್ನು ಕುರಿತು ಟಿಪ್ಪಣಿ ಬರೆಯಿರಿ" ಎಂಬ ಪ್ರಶ್ನೆ ಬಂದಿದೆ. "ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ತನುವಿನಲಿ ಹುಸಿ ತುಂಬಿ ಮನದಲಿ ವಿಷಯ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವ !" ಇದಕ್ಕೆ ನಾನು ಉತ್ತರಿಸುತ್ತಿದ್ದೇನೆ. ಈ ವಚನದಲ್ಲಿ ಕೋವಿಡ್ ೧೯ ಕಾಲಮಾನದಲ್ಲಿ ಮನೆಯೊಡೆಯರ  ಪಾಡನ್ನು ವಚನಕಾರರು ಮನೋಜ್ಞವಾಗಿ ಚಿತ್ರಿಸಿದ್ದಾರೆ.  ಮನೆಯಲ್ಲೇ ಇರುವ ಮನೆಯೊಡೆಯನಿಗೆ ಒಂದೇ ಎರಡೇ ಕೆಲಸ? ಕಸ ("ರಜ") ಗುಡಿಸಬೇಕು. ಹೊಸ್ತಿಲನ್ನು ಸಾರಿಸಿ ರಂಗವಲ್ಲಿ ಹಾಕಬೇಕು. ಇವೆಲ್ಲವನ್ನೂ ಪಕ್ಕದ ಮನೆಯವರು ನೋಡುವ ಮುನ್ನವೇ ಮಾಡಿ ಮುಗಿಸಬೇಕು. ಅನಂತರ  ಅಡಿಗೆ ಇತ್ಯಾದಿ ಕೆಲಸಗಳೂ ಇಲ್ಲವೇ? ಪ್ರಸ್ತುತ  ವಚನದಲ್ಲಿ "ರಜ" ಎಂಬ ಪದದ ವಿಶೇಷ ಪ್ರಯೋಗವನ್ನು ಗಮನಿಸಿ. ಲಾಕ್ ಡೌನ್ ಕಾಲದಲ್ಲಿ ಕೆಲವರಿಗೆ ಪ್ರತಿದಿನವೂ ರಜದಂತೆ ತೋರುತ್ತಿದೆ! ಮಕ್ಕಳಿಗೆ ರಜಾ ಬಂದರೂ ಏನು ಮಾಡಲೂ ತಿಳಿಯದೆ ಅಪ್ಪ-ಅಮ್ಮಂದಿರನ್ನು ಕಾಡುತ್ತಿದ್ದಾರೆ. ಇನ್ನು ವರ್ಕ್ ಫ್ರಮ್

ಎಂಜಲು

ಇಮೇಜ್
ಎಂಜಲಿಗೇಕೆ ಹೆದರುವಿರಿ, ಎಂಜಲು ಬದುಕಿನಲ್ಲಿ? ನೀವು ಕುಡಿಯುವ ಹೊಳೆಯ ನೀರನ್ನು ಅಲ್ಲೆಲ್ಲೋ ಎಂಜಲು ಮಾಡಿದೆ ಒಂದು ಸಾರಂಗ, ಒಂದು ಕಾಡೆಮ್ಮೆ, ಒಂದು ಆನೆ. ಪಾಲಿಥೀನ್ ಬ್ಯಾಗಲ್ಲಿ ಬಂತೆಂದು ಹಾಲೇನೂ ಪರಿಶುದ್ಧವಲ್ಲ ಅಮ್ಮನ ಕೆಚ್ಚಲಿಗೆ ಬಾಯಿಟ್ಟು ಎಂಜಲು ಮಾಡಿದೆ ಕರು. ನೀಟಾಗಿ ಪ್ಯಾಕೇಜ್ ಮಾಡಿದ ಬೇಳೆ ಕಾಳನ್ನು ಹೊಲದಲ್ಲಿ ರುಚಿ ನೋಡಿ ಎಂಜಲು ಮಾಡಿದೆ ಒಂದು ಹಕ್ಕಿ. ನೀವು ಆನಂದದಿಂದ ಮೆಲ್ಲುವ ಪಾನಿಪೂರಿಯ ಹಿಟ್ಟಿನ ರುಚಿ ನೋಡಿದೆ ಜಿರಳೆ ಎಂಜಲು ಮಾಡಿದೆ ಇಲಿ. ಹೆದರಿಕೆ ಏಕೆ ಎಂಜಲಿಗೆ ಎಂಜಲಿನಲ್ಲಿರಬಹುದು ವೈರಾಣು ಎಂದೇ? ಮೈಕ್ರೋಸ್ಕೋಪಿನಲ್ಲಿ ನೋಡಿದರೆ ಕೋಟಿಗಟ್ಟಲೆ ಕಾಣುತ್ತವೆ ಜೀವಿಗಳು, ಎರಡೇ, ಒಂದೇ! ಕಂಡಾಗ ತಿನ್ನುವ ಆಸೆಯಾದರೂ ದ್ರಾಕ್ಷಿ ಗೊಂಚಲು ಬೇಡ ಎನ್ನುತ್ತಿರುವಿರಿ - ನೆನೆದು ಯಾರದೋ ಎಂಜಲು! ಪಾಪಗಳನ್ನು ತೊಳೆಯುವ ಗಂಗೆ ಬರುತ್ತಾಳಲ್ಲ ನಿಮ್ಮ ಮನೆಗೆ! ಅಡುಗೆ ಮನೆಯಲ್ಲಿ ಹುಡುಕಿ ನೋಡಿ ಸಿಕ್ಕುತ್ತದೆ ಉಪ್ಪಿನ ಜಾಡಿ ಬೆಚ್ಚನೆ ನೀರಿನಲ್ಲಿ ಉಪ್ಪು ಬೆರೆಸಿ ತೊಳೆಯಿರಿ ಹಣ್ಣು ಕೊಟ್ಟ ಭೂಮಿಯನ್ನು ಸ್ಮರಿಸಿ ಉಪ್ಪು ನೀಡಿದ ಕಡಲನ್ನು ನೆನೆದು ಉಜ್ಜಿ ತೊಳೆದರೆ ನಾಶ ಎಲ್ಲ ಕೆಟ್ಟಕ್ರಿಮಿಜೀವಕೋಶ ತೊಳೆದರೆ ಶುದ್ಧಜಲದಲ್ಲಿ ಮತ್ತೊಮ್ಮೆ ನೈವೇದ್ಯಕ್ಕೆ ಸಿದ್ಧ, ಗೊಂಚಲಿನ ಹೆಮ್ಮೆ. ದ್ರಾಕ್ಷಿಯೊಂದಿಗೆ ನಿಮ್ಮ ಭೀತಿಯನ್ನೂ ಒಂದಿಷ್ಟು ತೊಳೆದುಬಿಡಿ ಉಪ್ಪು ನೀರಿನಲ್ಲಿಟ್ಟು. --ಸಿ. ಪಿ. ರವಿಕುಮಾರ್