ಪೋಸ್ಟ್‌ಗಳು

ಜೂನ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನವವಧು

ಇಮೇಜ್
ಅಮ್ಮ ಮನೆಯ ನೆಲವನ್ನು ನೆನ್ನೆ ಸಗಣಿಯಿಂದ ಸಾರಿಸಿದ್ದಾಳೆ. ಇವತ್ತು ಮನೆಯ ಹೊಸಲಿಗೆ ಕೆಮ್ಮಣ್ಣು ಬಳಿಯುವ ಕೆಲಸ ಮಾಡುತ್ತಿದ್ದಾಳೆ. ನಾಳೆ ಮನೆಯ ಗೋಡೆಗೆ ಕೆರೆಯ ಮಣ್ಣನ್ನು ಸಾರಿಸುವ ಕೆಲಸ ಇಟ್ಟುಕೊಂಡಿದ್ದಾಳೆ.  ಮನೆಗೆ ಸೊಸೆಯನ್ನು ಕರೆತರಲು ತಯಾರಿ ನಡೆದಿದೆ. ಮಣ್ಣಿನ ಹಣತೆಗಳು ಅಟ್ಟದ ಡಬ್ಬದಿಂದ ಕೆಳಗಿಳಿದಿವೆ. ಅಮ್ಮನ ಕೆಲಸ ನೋಡುತ್ತಾ ನನ್ನಲ್ಲಿರುವ ಕವಿ ಜಾಗೃತನಾಗುತ್ತಾನೆ.  ಒಂದೆರಡು ಸಾಲುಗಳು ನನ್ನ ಮನಸ್ಸಿನಲ್ಲಿ ಮೂಡುತ್ತವೆ. “ಸೊಸೆಯ ಸ್ವಾಗತಕ್ಕೆ ಅಮ್ಮ ಮಾಡುತ್ತಿದ್ದಾಳೆ ಮನೆಯ ಗತಕಾಲಕ್ಕೆ ಸಾರಣೆ, ವರ್ತಮಾನಕ್ಕೆ ಲೇಪನ ಮತ್ತು ಮನೆಯ ಉಜ್ವಲ ಭವಿಷ್ಯಕ್ಕಾಗಿ ಹಣತೆಗಳ ಪ್ರಕ್ಷಾಲನ”. ಎಷ್ಟೋ ವರ್ಷಗಳ ಹಿಂದೆ ಅಮ್ಮ ಇದೇ ಮನೆಗೆ ಕಾಲಿಟ್ಟಳು. ಅವಳ ಅತ್ತೆ ಅವಳನ್ನು ಬರಮಾಡಿಕೊಳ್ಳಲು ಹೀಗೇ ಮನೆಯನ್ನು ಸಾರಿಸಿ ಬಳಿದು ಸ್ವಚ್ಛಗೊಳಿಸಿ ರಂಗವಲ್ಲಿ ಬಿಡಿಸಿದ್ದಳು. ಎಲ್ಲಿ ಹಜ್ಜೆ ಇಡಲೆಂದು ತೋರದೆ ಅಮ್ಮ ಅಪ್ಪನ ಹಿಂದೆ ಹಿಂದೆ ಒಳಗೊಳಗೇ ಕಂಪಿಸುತ್ತಾ ಹಗುರವಾಗಿ ನಡೆಯುತ್ತಿರುವ ಚಿತ್ರ ನನ್ನ ಮನೋಭಿತ್ತಿಯ ಮೇಲೆ ಮಸುಕಾಗಿ ಮೂಡಿತು. ಅವಳು ಹದಿನಾರು ವರ್ಷದ ಹುಡುಗಿ. ಮನೆಯ ಏಕಮಾತ್ರ ಸೊಸೆ. ಇಡೀ ಮನೆಯ ಜವಾಬ್ದಾರಿಯನ್ನು ಅವಳೇ ಹೊರಬೇಕು. ಅದೆಷ್ಟು ಹೊಸ ಕೆಲಸಗಳನ್ನು ಕಲಿಯಬೇಕು, ಹೊಸ ಅನುಭವಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕು! ಅವಳು ಒಳಗೊಳಗೇ ಕಂಪಿಸಿದ್ದರೆ ಅದರಲ್ಲಿ ಏನು ಆಶ್ಚರ್ಯವಿದೆ? ಅವಳು ಇವನ್ನೆಲ್ಲ ಸಂಭಾಳಿಸಿಕೊಂಡು ಸಾಗಬಲ್ಲಳೇ? ಬಿದ್

ಗೋಲಿ ಆಟ

ಇಮೇಜ್
  ಜನವರಿಯ ಒಂದು ಸಂಜೆ. ಮೈ ಮರಗಟ್ಟುವ ಚಳಿ. ಅಮ್ಮ ನನ್ನ ಅತ್ತಿಗೆಯನ್ನು ಕರೆದು “ಎಲ್ಲರಿಗೂ ಶುಂಠಿ ಹಾಕಿ ಚಹಾ ಮಾಡಿಕೊಂಡು ಬಾ”ಎಂದಳು. ಅತ್ತಿಗೆ ಅಡುಗೆಕೋಣೆಗೆ ಹೊರಟರು. ಮದುವೆಯಾಗಿ ಕಳೆದ ವಾ ನಮ್ಮ ಮನೆಗೆ ಕಾಲಿಟ್ಟಿದ್ದ ನನ್ನ ಹೆಂಡತಿ ಅವರನ್ನು ಹಿಂಬಾಲಿಸಿ ಹೋದಳು. ಸ್ವಲ್ಪ ಹೊತ್ತಿನ ನಂತರ ಇಬ್ಬರೂ ತಲೆಯ ಮೇಲೆ ಸೆರಗು ಹೊದ್ದು ಕೈಯಲ್ಲಿ ಟ್ರೇ ಹಿಡಿದು ಬಂದರು. ಹೊಗೆಯಾಡುವ ಚಹಾ ಜೊತೆಗೆ ತಿನ್ನಲು ಬಿಸ್ಕೆಟ್ ಇಟ್ಟುಕೊಂಡು ಎಲ್ಲರಿಗೂ ಸರಬರಾಜು ಮಾಡಿದರು. ಅಪ್ಪನಿಗೆ, ಅಮ್ಮನಿಗೆ, ಅಣ್ಣನಿಗೆ, ನನಗೆ, ತಂಗಿಗೆ. ನಂತರ ತಾವೂ ಚಹಾ ಕುಡಿಯಲು ಅಡುಗೆ ಮನೆಗೆ ಹೋದರು. ಅಪ್ಪ ಟಿವಿ ಮೇಲೆ ನ್ಯೂಸ್ ನೋಡುತ್ತಾ ಚಹಾ ಕುಡಿಯುತ್ತಿದ್ದರು. ಅಣ್ಣ ಮೊಬೈಲ್ ಮೇಲೆ ಏನೋ ನೋಡುತ್ತಿದ್ದ. ನಾನು ಟೇಬಲ್ ಮುಂದೆ ಕುಳಿತು ಒಂದು ಕವಿತೆಯ ಕೈಯನ್ನು ನಾಜೂಕಾಗಿ ಹಿಡಿದು  ನಡೆಸುವ ಹುನ್ನಾರದಲ್ಲಿದ್ದೆ. ಹೊರಗೆ ಮಕ್ಕಳು ಗೋಲಿ ಆಟ ಆಡುತ್ತಿದ್ದರು. ಅವರ ಗದ್ದಲ ನಮಗೆ ಕೇಳುತ್ತಿತ್ತು. ತಂಗಿ ಮತ್ತು ನನ್ನ ಹೆಂಡತಿ ಬಾಗಿಲಲ್ಲಿ  ಮಕ್ಕಳ ಆಟ ನೋಡುತ್ತಾ ನಿಂತರು. ಒಮ್ಮೆಲೇ ಅಮ್ಮನ ಉದ್ಗಾರ ಕೇಳಿಸಿತು. “ಅಯ್ಯೋ, ನೋಡಿ! ನಮ್ಮ ಸೊಸೆ ಮಕ್ಕಳ ಜೊತೆ ಸೇರಿಕೊಂಡು ಗೋಲಿ ಆಡ್ತಿದ್ದಾಳೆ!” ಅವಳ ಧ್ವನಿಯಲ್ಲಿ ನಗುವಿತ್ತು, ಒಂದು ಮಗೆಯ ಸಂತೋಷವಿತ್ತು. ಆದರೆ ನನ್ನ ಕಡೆ ನೋಡಿ “ನೋಡಿದವರು ಏನೆಂದುಕೊಂಡಾರು, ಹೊಸದಾಗಿ ಮನೆಗೆ ಬಂದ ಸೊಸೆ …” ಎಂದಾಗ ಅವಳನ್ನು ತಡೆ ಎನ್ನುವ ಆಗ್ರಹವೂ ಅವಳ

ಗುರುತು

ಇಮೇಜ್
ಸಣ್ಣ ಊರಿನ ಶಾಲೆಯಲ್ಲಿ ಐಡಿ ಕಾರ್ಡ್ ನಿಜಕ್ಕೂ ಬೇಕೋ ಬೇಡವೋ! ಶಾಲೆಯ ಅಧಿಕಾರವರ್ಗದವರು ಎಲ್ಲಾ ಮಕ್ಕಳಿಗೂ ಐಡಿ ಕಾರ್ಡ್ ಕೊಟ್ಟು ಅದರಲ್ಲಿ ಹೆಸರು ಬರೆದು ಪ್ರತಿನಿತ್ಯವೂ ಹಾಕಿಕೊಂಡು ಬರಬೇಕೆಂದು ಮಕ್ಕಳಿಗೆ ಹೇಳಿಕಳಿಸಿದರು.ಮೂರನೇ ಕ್ಲಾಸು ಓದುವ ತಂಗಿಗೆ ನಾನೇ ಅವಳ ಹೆಸರನ್ನು ಬರೆದುಕೊಟ್ಟೆ. ಮಾಲೆಯಂತೆ ಅವಳ ಕೊರಳಿಗೆ ಅವಳ ಗುರುತಿನ ಕಾರ್ಡನ್ನು ಹಾಕಿ  "ಇನ್ನು ಮುಂದೆ ಎಲ್ಲರೂ ನಿನ್ನನ್ನು ಇದೇ ಹೆಸರಿನಿಂದ ಕರೆಯುತ್ತಾರೆ!" ಎಂದು ಅವಳ ಬೆನ್ನು ಚಪ್ಪರಿಸಿದೆ. ಯಾವುದೋ ನಿಧಿ ದೊರೆತಂತೆ ಅವಳು ಬೀಗಿದಳು. ಮಧ್ಯಾಹ್ನ ಹಿಂದಿರುಗಿದವಳು ಐಡಿ ಕಾರ್ಡ್ ತೆಗೆದು ಜೋಪಾನ ಮಾಡಿದಳು. "ನೀನು ಹೇಳಿದ್ದು ನಿಜ, ಅಣ್ಣ! ಇವತ್ತು ನನ್ನ ಗುರುತಿನ ಚೀಟಿ ನೋಡಿ ನೀನು ಪಾಂಡೆ ಅವರ ಮಗಳೇ ಎಂದು ಇಬ್ಬರು ಕೇಳಿದರು!" ಎಂದು ಉತ್ಸಾಹದಿಂದ ಹೇಳಿ ಊಟಕ್ಕೆ ಹೋದಳು.  ನಾನು ಓದಿನಲ್ಲಿ ಮಗ್ನನಾದೆ. ಸ್ವಲ್ಪ ಹೊತ್ತಿನ ಬಳಿಕ ಅವಳು ಮತ್ತೆ ಬಂದು "ಅಣ್ಣಾ!" ಅಂದಳು. ನಾನು ಪುಸ್ತಕದಿಂದ ಕಣ್ಣು ಸರಿಸಿ ಏನೆಂದು ಕೇಳಿದೆ. "ನಿನ್ನ ಹತ್ತಿರವೂ ಗುರುತಿನ ಚೀಟಿ ಇದೆಯಾ ಅಣ್ಣ?" ಎಂದಳು. "ಇಲ್ಲ" ಎಂದು ಸುಮ್ಮನಾದೆ. "ಮತ್ತೆ ನೀನು ಯಾರು ಅಂತ ಹೇಗೆ ಗೊತ್ತಾಗತ್ತೆ ಎಲ್ಲರಿಗೂ?" ನಾನು ಪುಸ್ತಕ ಕೆಳಗಿಟ್ಟು ದೀರ್ಘ ಶ್ವಾಸ ಎಳೆದುಕೊಂಡೆ. "ನಿಜ! ಇವತ್ತು ನನ್ನನ್ನು ಯಾರೂ ಗುರುತಿಸುವುದಿಲ್ಲ" ಎಂದೆ

ಅಲೆಕ್ಸಾಂಡರ್ ಮತ್ತು ಸಾವು

ಇಮೇಜ್
ಜಗತ್ತನ್ನೇ ಗೆದ್ದು ಬಂದ ಅಲೆಕ್ಸಾಂಡರ್ ಗೆಲ್ಲಲಾರಲಾಗದೆ ಮೃತ್ಯುವನ್ನು ಅಗಣಿತ ಗೆಲುವುಗಳ ಕಿರೀಟ ತೊಟ್ಟು ಮರಳಿದವನು ಈಗ ಅಂಗತ್ತ ಮಲಗಿದ್ದಾನೆ ಮಂಚದ ಮೇಲೆ.  ವೈದ್ಯರ ಶುಶ್ರೂಷೆಗೆ ಶುಷ್ಕ ನಗೆಯ ಉತ್ತರ ನೀಡಿ  ಕುಡಿಯುತ್ತಾನೆ  ಕಹಿ ಔಷಧ. ನುಂಗಿತು ಕಾಲ ಪ್ರಾಣಗೆಳೆಯ ಹೆಫೆಸ್ಟಿಯಾನನ್ನು ಕಳೆದ ವರ್ಷ. ಇಂಗಿತು ಆಗಲೇ  ಜೀವದ ಮೇಲಿನ ಆಸೆ ಅರ್ಧಕ್ಕರ್ಧ. ನಡೆದ ಸಂಗತಿಗಳೆಲ್ಲ ನೆನಪಿಗೆ ಬಂದು ಮಾಯವಾಗುತ್ತಿವೆ ನೆನ್ನೆಯಿಂದ. ನುಂಗುತ್ತಾನೆ ಅವನು ನೋವನ್ನು. ಯೋಧನಿಗೆ ನೋವು ದೊಡ್ಡದೇ! ಅಂಗರಕ್ಷಕನನ್ನು ಕರೆದು ಮೆಲ್ಲಗೆ ಉಸಿರುತ್ತಾನೆ ವೈದ್ಯರನ್ನು ಕರೆದು ತಾ. ಕಂಗಳಲ್ಲಿ ದೈನ್ಯವಿದೆ.  ವೈದ್ಯರೇ ನೀವೇ ನನ್ನ ದೇಹವನ್ನು ಹೊತ್ತು ತರಬೇಕು ವಿಂಗಡಿಸಿ ಇಡಬೇಕು ನಾನು ಗೆದ್ದು ತಂದ ಐಶ್ವರ್ಯಗಳನ್ನು ದಾರಿಯಲ್ಲಿ. ಮುಂಗೈಗಳು ಹೊರಗೇ ಇರಬೇಕು ದೇಹವನ್ನು ಹೂತಾಗ ಗೋರಿಯಲ್ಲಿ.  ಹೀಗೇಕೆ ಎಂದಿರಾ? ತಿಳಿಯಲಿ ಜನ ಯಾವ ವೈದ್ಯನೂ ಗೆಲ್ಲಲಾರ ಸಾವನ್ನು! ನಗನಾಣ್ಯ ವಜ್ರವೈಢೂರ್ಯ ಮುತ್ತುರತ್ನ ಎಲ್ಲವನ್ನೂ ಇಲ್ಲೇ ಬಿಟ್ಟು ಬರಿದಾದ ಅಂಗೈಗಳಲ್ಲೇ ಹೊರಟುಹೋದ ಅಲೆಕ್ಸಾಂಡರ್ ಎಂದು ಜನರಿಗೆ ಗೊತ್ತಾಗಲೆಂದು.