ಪೋಸ್ಟ್‌ಗಳು

ಫೆಬ್ರವರಿ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರೇತನರ್ತನ

ಇಮೇಜ್
 ಈಗ ಮಾಧ್ಯಮದಲ್ಲಿ ಪ್ರತಿನಿತ್ಯ ಪ್ರೇತಗಳ ನರ್ತನ ಎಪ್ಸ್ಟೀನ್ ಮಾಡಿದ ಪಾಪಗಳ ಪುನರಾವರ್ತನ ಒಳ್ಳೆಯ ಕಾರ್ಯಗಳನ್ನು ನೆನಪಿಡಲಾರರು ಜನ ಕೆಟ್ಟದ್ದನ್ನು ಕಾಪಾಡುವರು ನೆನೆಯುವರು ಅನುದಿನ ಹೇಗೆ ವೃದ್ಧಿಸುವುದೋ ಬ್ಯಾಂಕಿನಲ್ಲಿಟ್ಟ ಹಣ ಹಾಗೇ ಬಡ್ಡಿ ಗಳಿಸುವುದು ಕೂಡಿಟ್ಟ ಋಣ ನೀವು ದೊಡ್ಡವರೆಂದು ನಂಬಿದ್ದ ವಿದ್ವಜ್ಜನ ಮುಖವಾಡ ಕಳಚಿ ನೈಜದ ಅನಾವರಣ ಕೊಟ್ಟುಬಿಟ್ಟಿದ್ದೇವೆ ಇವರಲ್ಲಿ ಹಲವರಿಗೆ ಪದ್ಮಭೂಷಣ  ಅವಾರ್ಡ್ ವಾಪಸಿಗೆ ಈಗ ಅತ್ಯಂತ ಸೂಕ್ತ ಕ್ಷಣ

ಮೂರು ವ್ಯಾಲೆಂಟೈನ್ ಗುಲಾಬಿಗಳು

ಇಮೇಜ್
  ಮೂರು ವ್ಯಾಲೆಂಟೈನ್ ಗುಲಾಬಿಗಳು (೧) "ಕಾಸಿಮಿರ್! ಕಾಸಿಮೀರ್! ಎಲ್ಲಿ ಹೋದ ಈ ಹುಡುಗ!"  ತಾಯಿ ತನ್ನ ಮಗನನ್ನು ಜೋರಾಗಿ ಕರೆಯುತ್ತಾ ತಲೆಬಾಗಿಲಿನ ಹತ್ತಿರ ಬಂದಳು. ಅವರದ್ದು ದೊಡ್ಡ ಮನೆ. ಮಹಡಿಯ ಮೂರು ಕೋಣೆಗಳಲ್ಲದೆ ಕೆಳಗೆ ನಾಲ್ಕು ಕೋಣೆಗಳು, ದೊಡ್ಡ ಬೈಠಕ್ ಖಾನೆ. ಆರು ಮಕ್ಕಳ ದೊಡ್ಡ ಸಂಸಾರ. ಕಾಸಿಮಿರ್ ಹಿರಿಯ ಮಗ. ತಂದೆತಾಯಿಯ ಅಚ್ಚುಮೆಚ್ಚು. ಗಣಿತದಲ್ಲಿ ಅವನು ತುಂಬಾ ಪ್ರತಿಭಾಶಾಲಿ ಎಂದು ಅವನ ಶಾಲೆಯ ಉಪಾಧ್ಯಾಯರು ಮನೆಗೇ ಬಂದು ತಿಳಿಸಿದ್ದರು. "ನಿಮ್ಮ ಹುಡುಗ ಮುಂದೆ ಖಂಡಿತಾ ದೊಡ್ಡ ಗಣಿತಶಾಸ್ತ್ರಜ್ಞ ಆಗುತ್ತಾನೆ, ನೋಡುತ್ತಿರಿ! ಅವನನ್ನು ಮುಂದೆ ಓದಿಸಿ. ಕಾಲೇಜಿಗೆ ಹೋಗಿ ಪಿಎಚ್. ಡಿ. ಮಾಡಲಿ. ನಾನು ಈ ಮಾತನ್ನು ಎಲ್ಲಾ ಪೋಷಕರಿಗೂ ಹೇಳುವುದಿಲ್ಲ!" ಎಂದು ಪ್ರೊ. ಕಮಿನ್ಸ್ಕಿ ಹೇಳುತ್ತಿದ್ದಾಗ ತಾಯಿಯ ಎದೆ ಹೆಮ್ಮೆಯಿಂದ ಉಬ್ಬಿತು. ಅವಳು ತಟ್ಟೆಯಲ್ಲಿ ಎಲೆಕೋಸಿನ ಖಾದ್ಯಗಳನ್ನು ತಂದಿಟ್ಟಳು. ಬಟ್ಟಲಿಗೆ ಬಿಸಿ ಚಹಾ ಸುರಿದು "ದಯವಿಟ್ಟು ಸ್ವೀಕರಿಸಿ" ಎಂದಳು. ಪ್ರೊ. ಕಮಿನ್ಸ್ಕಿ ತೆರಳಿದ ಮೇಲೆ ಅವಳು ಪತಿಯ ಕಡೆ ನೋಡಿ "ನಮ್ಮ ಕಾಸಿಮಿರ್ ಖಂಡಿತಾ ಪೋಲೆಂಡ್ ದೇಶಕ್ಕೆ ಹೆಸರು ತರುತ್ತಾನೆ!" ಎಂದಳು. ಹಳೆಯದನ್ನೆಲ್ಲ ನೆನೆದು ಅವಳ ಕಂಠ ಗದ್ಗದವಾಯಿತು. ಕ್ಯಾಸಿಮಿರಾ ಮನೆಯ ಬಾಗಿಲಿನಲ್ಲಿ ನಿಂತು ಸುತ್ತಲೂ ನೋಡಿದಳು. ದೂರದಲ್ಲಿ ಕ್ಯಾಸಿಮಿರ್ ಬರುತ್ತಿದ್ದುದು ಕಾಣಿಸಿತು. ಅವನ ಕೈಯಲ್ಲಿ ಪುಸ...

ಆತ್ಮ ಉಳ್ಳವರಿಗಾಗಿ ಸೂಚನೆಗಳು

ಇಮೇಜ್
  ಮೂಲ : ಜೋಸೆಫ್ ಫಸಾನೋ  ಕನ್ನಡ ಅನುವಾದ: ಸಿ ಪಿ ರವಿಕುಮಾರ್  ಅದನ್ನು ಆಗಾಗ ಹೊರಗೆ ಮಳೆಯಲ್ಲಿ ಕೊಂಡೊಯ್ದು ತೊಯ್ಯಿಸಿ  ತೊಳೆಯಿರಿ ಅದರ ಅಗಾಧ ರೆಕ್ಕೆಗಳ ಮೇಲೆ ಕೂಡುವ ಮಣ್ಣುಮಸಿ  ಅದು ನಿಮ್ಮನ್ನು ಕೊಲ್ಲಲು ಬಂದಿತಾದರೆ ಅದಕ್ಕೆ ಒಂದೇ ಕಾರಣ ನೀವು ಒಂದು ನಿಮಿಷಕ್ಕಿಂತ ಹೆಚ್ಚು ಕಣ್ಣಲ್ಲಿ ಕಣ್ಣಿಟ್ಟು ನೋಡಲಿಲ್ಲ ಇನ್ನೊಬ್ಬರನ್ನ. ಈ ದೃಷ್ಟಿಗಳ ಮಿಲನ ಅದಕ್ಕೆ ಎಷ್ಟು ಅಗತ್ಯವೆಂದರೆ ದುಂಬಿಗೆ ಅಗತ್ಯವಿದ್ದಷ್ಟು ಹೂತುಟಿಯ ಇಬ್ಬನಿಯ ಸುರೆ. ಆಗಾಗ ಕರೆದೊಯ್ಯಿರಿ ಅದನ್ನು ಪ್ರವಾಸಕ್ಕೆ.  ಕಠಿಣವೆನ್ನಿಸುವ ಹೊತ್ತಿಗೆಗಳನ್ನು ಓದಲು ಪ್ರೇರೇಪಿಸಿ. ನೋಡಗೊಡಿ ಕಣ್ಣಲ್ಲಿ ಕಣ್ಣಿಟ್ಟು ಕಡಲಾಳ. ಕೊಡಬಹುದು ಚಿಪ್ಸ್, ಮತ್ತು ನೀರಿಗೆ ವಿಸ್ಕಿ ಬೆರೆಸಿ. ಆದರೆ ಆಗಾಗ ಪವಿತ್ರ ಸ್ಥಾನದ ಮುಂದೆ ಅಡ್ಡ ಬೀಳಲಿ. ಬೇರೇನಿಲ್ಲ ಅದಕ್ಕೆ ಜೀವಿಸುವ ಆಸೆ ಮತ್ತು ಸುಂದರವಾಗುವ ಖಯಾಲಿ. ಬೇರು ಬಿಟ್ಟು ಅರಳುತ್ತದೆ ಅದನ್ನು ಪೋಷಿಸಿದರೆ ತನುಮನಗಳು ಬತ್ತುತ್ತವೆ ಅದನ್ನುಉಪವಾಸ ಕೆಡವಿದರೆ. ಕಿತ್ತು ಬರುತ್ತದೆ ಜಗತ್ತು. ಸ್ತಬ್ಧವಾಗುತ್ತವೆ ಸಂಗೀತ, ನೃತ್ಯ ಪದಗತಿ. ಬೀಳುತ್ತದೆ ಮೇಲಿಂದ ರಾಕೆಟ್. ಅಗ್ನಿಗೆ ಮಕ್ಕಳ ಆಹುತಿ. ಇಲ್ಲಿ ಕೇಳು, ಇನ್ನೂ ಕಾಲ ಮಿಂಚಿಲ್ಲ  ಅದನ್ನು ಎಬ್ಬಿಸಲು. ಕೂಗಿ ಕರೆ ಮರೆತುಹೋದ ಹೆಸರುಗಳನ್ನು ಈಗಲೂ: ಕಾಜಾಣ, ಗೊರವಂಕ, ಗುಬ್ಬಿ, ಮುತ್ತುಗ, ಮಂದಾರ ಉಳಿಸಲಾರೆ ಜಗತ್ತನ್ನು ಆದರೆ ತೆರೆದು ನೆಲಮಾಳಿಗೆಯ ದ್ವ...