ನೂರು ವರ್ಷಗಳ ತರುವಾಯ
ನೂರು ವರ್ಷಗಳ ತರುವಾಯ ನನ್ನ ಕವಿತೆ
ಓದುತ್ತ ನಿಂತಿರುವೆ, ಯಾರು ನೀನು?
ನಿನಗಾಗಿ ಈ ವಸಂತಸಂಪದದಿಂದ
ಕಳಿಸಲಾರೆ ಒಂದಾದರೂ ಹೂವನ್ನು.
ಮುಗಿಲುಗಳ ಸ್ವರ್ಣಿಮ ಅಂಚುಗಳಿಂದ ನಿನಗಾಗಿ
ಕಳಿಸಲಾರೆ ಒಂದಾದರೂ ಹೊನ್ನರೇಖೆ.
ನಿನ್ನ ಬಾಗಿಲು ತೆರೆದು ನೋಡಿದರೆ ಹೊರಗಡೆಗೆ
ಕಾಣುವುದು ಮುಗುಳುಗಳ ಹೊತ್ತ ಶಾಖೆ
ಬಿಡಿಸಿಕೋ ನೂರು ವರ್ಷಗಳ ಹಿಂದೆ ಹೀಗೇ ಅರಳಿ
ಮಾಯವಾದ ಕುಸುಮಗಳ ಗಂಧ:
ಓದುತ್ತ ನಿಂತಿರುವೆ, ಯಾರು ನೀನು?
ನಿನಗಾಗಿ ಈ ವಸಂತಸಂಪದದಿಂದ
ಕಳಿಸಲಾರೆ ಒಂದಾದರೂ ಹೂವನ್ನು.
ಮುಗಿಲುಗಳ ಸ್ವರ್ಣಿಮ ಅಂಚುಗಳಿಂದ ನಿನಗಾಗಿ
ಕಳಿಸಲಾರೆ ಒಂದಾದರೂ ಹೊನ್ನರೇಖೆ.
ನಿನ್ನ ಬಾಗಿಲು ತೆರೆದು ನೋಡಿದರೆ ಹೊರಗಡೆಗೆ
ಕಾಣುವುದು ಮುಗುಳುಗಳ ಹೊತ್ತ ಶಾಖೆ
ಬಿಡಿಸಿಕೋ ನೂರು ವರ್ಷಗಳ ಹಿಂದೆ ಹೀಗೇ ಅರಳಿ
ಮಾಯವಾದ ಕುಸುಮಗಳ ಗಂಧ:
ಪ್ರಫುಲ್ಲ ಮನದ ಉದ್ಯಾನದಲ್ಲಿ ಕೇಳಲಿ
ನೂರು ವರ್ಷಗಳ ಹಿಂದೆ ಜೀವನಾನಂದದಿಂದ
ಹೀಗೇ ವಸಂತದ ಒಂದು ಸುಂದರ ದಿವಸ
ಹಾಡಿದ ಒಂದು ಕೋಕಿಲ ಕಂಠದದುಲ್ಲಾಸ.
ನೂರು ವರ್ಷಗಳ ಹಿಂದೆ ಜೀವನಾನಂದದಿಂದ
ಹೀಗೇ ವಸಂತದ ಒಂದು ಸುಂದರ ದಿವಸ
ಹಾಡಿದ ಒಂದು ಕೋಕಿಲ ಕಂಠದದುಲ್ಲಾಸ.
ಮೂಲ: ರವೀಂದ್ರನಾಥ ಟ್ಯಾಗೋರ್
ಕನ್ನಡಕ್ಕೆ: ಸಿ ಪಿ ರವಿಕುಮಾರ್

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ