ಕೆರೆಯ ಕತೆ


ಒಂದು ಹಳೇ ಕಥೆಯಲ್ಲಿ
ಮಂತ್ರ ಮರೆತು ಹೋಗಿ
ಮಾಯದ ಪಾತ್ರೆಯಿಂದ ಉಕ್ಕುತ್ತಾ ಉಕ್ಕುತ್ತಾ
ಹುಗ್ಗಿ ಹೊಳೆಯಾಯಿತು.
ಒಂದು ಹೊಸಾ ಕಥೆಯಲ್ಲಿ
ತಂತ್ರ  ಬೆರೆತು ಹೋಗಿ
ಕೈಗಾರಿಕೆ ಕೈಜಾರಿಕೆ,
ಅಮೋನಿಯಾ-ನಿಮೋನಿಯಾ,
ತ್ಯಾಜ್ಯ-ವ್ಯಾಜ್ಯ,
ಮೂರ್ತಿ-ಬಣ್ಣ,
ಪಟಾಕಿ-ಮದ್ದು,
ಮಣ್ಣು-ಮಸಿ,
ಎಲ್ಲಾ ಕೆರೆಯಲ್ಲಿ ಹರಿದು
ನಗರದ
ಕೆರೆಯ ಬಾಯಲ್ಲಿ ನೊರೆ ಬಂತು

- ಸಿ ಪಿ ರವಿಕುಮಾರ್


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)