ಪೋಸ್ಟ್‌ಗಳು

ಸೆಪ್ಟೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿಶ್ವಕರ್ಮ ಡೇ ಮತ್ತಿತರ ನೆನಪುಗಳು

 ಐಐಟಿಯಲ್ಲಿ ನಡೆಯುತ್ತಿದ್ದ ಪೂಜೆ ಎಂದರೆ ವಿಶ್ವಕರ್ಮ ಡೇ ಮಾತ್ರ ಎಂದು ನನ್ನ ನೆನಪು. ನಮ್ಮ ಡಿಪಾರ್ಟ್ಮೆಂಟಿನ ಕಂಟ್ರೋಲ್ ಲ್ಯಾಬಿನಲ್ಲೋ ಅಥವಾ ಪವರ್ ಸಿಸ್ಟಮ್ಸ್ ಲ್ಯಾಬಿನಲ್ಲೋ ಇದನ್ನು ಆಯೋಜಿಸುತ್ತಿದ್ದರು.  ಬಹುಶಃ ದಕ್ಷಿಣದಲ್ಲಿ ಆಯುಧಪೂಜೆ ಇದ್ದಂತೆ ಉತ್ತರದಲ್ಲಿ ವಿಶ್ವಕರ್ಮ ಡೇ. ವಿಶ್ವಕರ್ಮ ಒಬ್ಬ ಇಂಜಿನಿಯರ್ ಎಂಬ ನಂಬಿಕೆಯಿಂದಲೋ ಏನೋ ಈ ರೂಢಿ ನಡೆದುಬಂದಿದೆ.  ಎಲ್ಲರಿಗೂ ಆಹ್ವಾನವಿರುತ್ತಿತ್ತು. ಬರುತ್ತಿದ್ದವರು ಕಡಿಮೆ.  ನಮ್ಮ ಡಿಪಾರ್ಟ್ಮೆಂಟಿನ ಕ್ಲಾಸ್ ಡಿ ನೌಕರರಾದ ಪಂಡಿತ್ ಜೀ ಪೂಜೆ ಸಲ್ಲಿಸುತ್ತಿದ್ದರು. ಎಲ್ಲ ಲ್ಯಾಬ್ ಸಹಾಯಕ ಸಿಬ್ಬಂದಿಯೂ ಜರೂರಾಗಿ ಸೇರುತ್ತಿದ್ದರು. ಪೂಜೆಯ ನಂತರ ಎಲ್ಲರಿಗೂ ಸಿಹಿತಿಂಡಿ ಪ್ರಸಾದ ಸಿಕ್ಕುತ್ತಿತ್ತು.  ಪೂಜೆಗೆ ಬೇಕಾದ ಹಣವನ್ನು ಡಿಪಾರ್ಟ್ಮೆಂಟಿನ ಸಿಬ್ಬಂದಿಯಿಂದ ಚಂದಾ ರೂಪದಲ್ಲಿ ಪಡೆದುಕೊಳ್ಳುತ್ತಿದ್ದರು.  ಐಐಟಿಯಲ್ಲಿದ್ದ ಕನ್ನಡ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿ ಗಣೇಶನ ಹಬ್ಬ ಆಚರಿಸುವುದು ಕೂಡಾ ರೂಢಿಯಾಗಿತ್ತು. ಪ್ರೊ ಇಂದಿರೇಶನ್ ಅವರು ಐಐಟಿಯಲ್ಲಿ ಇದ್ದಷ್ಟು ದಿವಸವೂ ಅವರ ಮನೆಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು.  ಏನಿಲ್ಲವೆಂದರೂ ಐವತ್ತು ಜನ ಸೇರುತ್ತಿದ್ದರು. ಹಾಡು, ಭಜನೆ ಕಾರ್ಯಕ್ರಮಗಳ ನಂತರ ಎಲ್ಲರಿಗೂ ಪ್ರಸಾದ ಸಿಕ್ಕುತ್ತಿತ್ತು. ಇದಕ್ಕೆ ಚಂದಾ ಕೇಳುವ ಸಂಪ್ರದಾಯ ಇರಲಿಲ್ಲ.  ಪ್ರೊ ಇಂದಿರೇಶನ್ ಅವರು ನಿವೃತ್ತರಾದ ನಂತರ ಪ್ರೊ ಸುಬ್ಬರಾವ್ ಅಥವಾ ಪ್ರೊ ಮೂರ್ತಿ ಅವರ ಮನೆ

ಹೋಲಿ ಕೇ ರಂಗ್

  ಆಕಾಶದಲ್ಲಿ ತೂತು ಬಿದ್ದಹಾಗೆ ಎಂದು ಮಳೆಯನ್ನು ವರ್ಣಿಸುವುದನ್ನು ನೀವೂ ಕೇಳಿರಹುದು.   ಇಂಥ ಮಾತು ಬರಲು ಆಕಾಶವು ದೊಡ್ಡ ಹೊದಿಕೆಯಂತೆ ನಮ್ಮ ಭೂಗೋಳವನ್ನು ಸುತ್ತುವರೆದಿದೆ ಎಂಬ ಕಲ್ಪನೆಯೇ ಆಗಿದೆ.     ಆಕಾಶವೇ ಬೀಳಲಿ ಮೇಲೆ ಎಂಬ ಚಿತ್ರಗೀತೆ ಬರೆದ ಕವಿಗೂ ಇಂಥದ್ದೇ ಕಲ್ಪನೆ ಇದೆ.  ಒಮ್ಮೆಲೇ ಮೇಲಿಂದ ಒಂದು ಹೊದಿಕೆ ನಮ್ಮೆಲ್ಲರ ಮೇಲೆ ಇದ್ದರೆ ಏನು ಗತಿ! ಈ ಹೊದಿಕೆ ಎಷ್ಟು ಭಾರವೋ ಯಾರಿಗೆ ಗೊತ್ತು! ಹತ್ತಿಯಂತಹ ಮೋಡಗಳನ್ನು ನೋಡಿ ಅಷ್ಟೇನೂ ಭಾರ ಇರಲಾರದು ಎಂಬ ಧೈರ್ಯ ತೆಗೆದುಕೊಳ್ಳಬೇಕು.  ಬೆಳಗಿನ ಹೊತ್ತು ಬಿದ್ದರೆ ನಕ್ಷತ್ರಗಳು ಬೀಳಲಾರವು.  ರಾತ್ರಿಯ ಹೊತ್ತು ಬಿದ್ದರೆ   ನಮ್ಮ ತಾರಾಗತಿ ಏನಾಗುತ್ತದೋ ಹೇಳಲಾರೆ.   ಇಷ್ಟೆಲ್ಲಾ ಆದರೂ ನಾಯಕಿಗೆ "ನಾ ನಿನ್ನ ಕೈ ಬಿಡೆನು" ಎಂದು ಆಶ್ವಾಸನೆ ಕೊಡುತ್ತಿರುವ ನಾಯಕನ ಪ್ರೇಮವನ್ನು ಏನೆಂದು ವರ್ಣಿಸಲಿ? ಬಾನೆತ್ತರ ಎಂದು ವರ್ಣಿಸಿದರೆ ಅಯ್ಯೋ ಬಾನು ಗ್ರೌಂಡ್ ಲೆವೆಲ್ಲಿಗೆ ಬಂದಿದೆಯಲ್ಲ ಎಂದು ನೀವು ಸಾಯಿರಾ ಬಾನು ರೀತಿಯಲ್ಲಿ ಕೂಗಬಹುದು.  ಹಿಂದಿ ಚಿತ್ರಗೀತೆಗಳಲ್ಲಿ ನಾಯಕರು ಆಕಾಶ ಬೀಳುವ ಬಗ್ಗೆ ಹಾಡಿದ್ದನ್ನು ನಾನೆಂದೂ ಕೇಳಿಲ್ಲ. ಆಕಾಶದಿಂದ ತಾರೆಗಳನ್ನು ಕಿತ್ತು ತರುತ್ತೇನೆ ಎಂದು ಆಶ್ವಾಸನೆ ಇತ್ತು ನಾಯಕನು ನಾಯಕಿಯ  ಹೃದಯವನ್ನು ಗೆಲ್ಲುವುದು ಅಲ್ಲಿಯ ರೀತಿ.  ನಮ್ಮ ಕನ್ನಡ ನಾಯಕರು ಹಾಗೆಲ್ಲ ಒಂದೆರಡು ತಾರೆಗಳನ್ನು ತಂದರೆ ನಾಯಕಿಗೆ ತೃಪ್ತಿಯಾಗದು ಎಂದು ಬಲ್ಲವರು. ನನ್ನ ಅಮ್ಮ

ನೀರ್ ರಸ ಹರಟೆ

 ನೀರ್ ರಸ ಹರಟೆ ಎಲ್ಲಾ ಕಡೆಗೂ ನೀರೇ ನೀರು ಎಂದು ಎಲ್ಲರೂ ಕಣ್ಣೀರು ಹಾಕುತ್ತಾ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ.  ನೀರಿಗೆ ಏನಾದರೂ ಬೆರೆಸಿದರೆ ಅದು ವಸ್ತುವಿಶೇಷಗಳನ್ನು ನೀಡಬಲ್ಲದು. ಪ ಪ್ಲಸ್ ನೀರ್ ಈಕ್ವಲ್ಸ್ ಪನೀರ್ ಆದಾಗ ನಿಮಗೆ ಪನೀರ್ ಕೋಫ್ತಾ ನೆನಪಾಗಿ ಬಾಯಲ್ಲಿ ನೀರೂರಿ ಪರಿಸ್ಥಿತಿ ಇನ್ನಷ್ಟು ಕೆಡುವುದು ಎಂದು ನೀವು ಎಸ್ ಪ್ಲಸ್ ನೀರ್ ಈಕ್ವಲ್ಸ್  ಸ್ನೀರ್ ಮಾಡುವುದು ಬೇಡ. ಈಗಾಗಲೇ ಮಠದ ಸೀರ್ ಒಬ್ಬರ ಬಗ್ಗೆ ಟಿವಿ ವಾಹಿನಿಗಳು ಸಾಕಷ್ಟು ಸ್ನೀರ್ ಮಾಡಿ ಮುಖದಲ್ಲಿ ನೀರಿಳಿಸಿವೆ.  ವಾಹಿನಿಗಳ ಈ ಸ್ಲೋಗ-ನೀರಿನಿಂದ ನೊಂದು ಕೆಲವರು ಕಣ್ಣೀರು ಹರಿಸಿ ಕಡಲಲ್ಲದಿದ್ದರೂ ಕೆರೆಕೋಡಿಗಳಂತೂ ಉಂಟಾಗಿವೆ.  ಇನ್ನೂ ಕೆಲವರು ವಾಹಿನಿಗಳು ಪರಿಸ್ಥಿತಿಯನ್ನು ಕರುಣಾಜನಕ ಎಂದು ಕರೆಯುವ ಬದಲು ವರುಣಾಜನಕ ಎಂದು ತಪ್ಪಾಗಿ ಪ್ರಚಾರ ಮಾಡಿದ್ದರಿಂದಲೇ ಈ ರಣರಕ್ಕಸ ರುದ್ರ ರೌರವ  ಮಳೆಗೆ ರೀಸನ್ ಎಂದೂ ಲಾಜಿಕ್ ಹಾಕುತ್ತಿದ್ದಾರೆ. ಪಯೋನಿಧಿ ಎನ್ನುವಾಗ ಪಯೋ ಅಂದರೆ ಹಾಲು ಎಂದಲ್ಲವೇ? ಪಾಯಸ ಎಂಬ ಪದವೂ ಈ pious ಶಬ್ದದಿಂದಲೇ ಹುಟ್ಟಿದ್ದೆಂದು ಓದಿದ್ದು ನೆನಪು. ಇರಲಿ, ಪಯೋ ಪ್ಲಸ್ ನೀರು ಈಕ್ವಲ್ಸ್  ನಿಧಿ ಎಂಬ ಕೆಮಿಕಲ್ ಸಮೀಕರಣವನ್ನು ಮೊದಲು ಮಾಡಿದ ಪಯೋನೀರ್ ಯಾರು, ಹೇಳಿ!  ಹಾಲಿಗೆ ನೀರು ಬೆರೆಸಿ ಮಾರಬಹುದೆಂಬ ಕಲ್ಪನೆಯನ್ನು ನೋಡಿಯೂ ಹಾಲಲ್ಲಿ ನೀರನ್ನು ಮೊದಲಾರು  ಕಂಡವರು ಎನ್ನದೆ ಡಿವಿಜಿ ಅವರು ಅಕ್ಕಿಯೊಳು ಅನ್ನವನು ಮೊದಲಾರು ಕಂಡವರು ಎಂದೇಕೆ ಹಲು

ಮಾಡರ್ನ್ ಗುರು ಮಾಡರ್ನ್ ಕಲಿಕೆ

 ಗುರ್ ಎನ್ನುವವನೇ ಗುರು ಎಂಬುದರಲ್ಲಿ ಗುಲಗಂಜಿಯಷ್ಟೂ ನಿಜವಿಲ್ಲ. ಗುರುಗಳು ಗುರ್ ಎನ್ನಬಹುದು, ಆದರೆ ಗುರ್ ಎನ್ನುವವರೆಲ್ಲ ಗುರುಗಳಲ್ಲ. ಗುರ್ ಎನ್ನುವ ರಾಜಕಾರಣಿಗಳು ಎಷ್ಟೋ ಜನರನ್ನು ನೀವು ಗುರುತಿಸಬಹುದು. ಆದರೆ ಅವರೆಲ್ಲರನ್ನೂ ಗುರು ಎನ್ನಲಾದೀತೆ? ಮಾತು ಮಾತಿನಲ್ಲಿ ಸ್ನೇಹಿತರನ್ನು  ಏನ್ ಗುರೂ ಎನ್ನುವವರೂ ಇದ್ದಾರೆ. ಆದರೆ ಸ್ನೇಹಿತರಿಂದ ಅವರು ಏನನ್ನು ಕಲಿತರೋ ಹೇಳಲಾಗದು.  ನಿಮಗೆ ಅದೃಷ್ಟ ಇದ್ದರೆ ನಿಮ್ಮ ಸ್ನೇಹಿತರೇ ನಿಮಗೆ ಉತ್ತಮ ಗುರುಗಳಾದಾರು. ಬೆತ್ತದ ಏಟಿನಿಂದ ಮೇಷ್ಟ್ರು ಹೇಳಿಕೊಡಲಾಗದ್ದನ್ನು ಎಷ್ಟೋ ಸಲ ಸ್ನೇಹಿತರು ಸರಳವಾಗಿ ಹೇಳಿಕೊಟ್ಟುಬಿಡುವುದನ್ನು ಕಾಣುತ್ತೇವೆ. ಇಟ್ ಟೇಕ್ಸ್ ಎ ವಿಲೇಜ್ ಟು ರೇಸ್ ಎ ಚೈಲ್ಡ್ ಎಂದು ಹೇಳುವುದು ಇದಕ್ಕೇ. ನಮ್ಮ ಸೋಮನಾಥನು ಇದನ್ನೇ ಕೆಲವಂ ಬಲ್ಲವರಿಂದ ಕಲ್ತು ಇತ್ಯಾದಿಯಾಗಿ ಹೇಳಿದ್ದಾನೆ. ಬಲ್ಲವರು ಯಾರು ಎಂದು ಹೇಳುವುದೇ ಈಗ ಕಷ್ಟವಾಗಿದೆ. ಏನೇ ವಿಷಯವನ್ನು ಇಂಟರ್ನೆಟ್ನಲ್ಲಿ ಹುಡುಕಿದರೆ ಅದೆಷ್ಟು ಹಿಟ್ಸ್ ಸಿಕ್ಕುತ್ತವೆ ಎಂದರೆ ಗೂಗಲಿಗೂ ಸುಸ್ತಾಗಿ ಹೋಗುವಷ್ಟು.   ಅದೆಷ್ಟು ಜನ ಪಂಡಿತರು ಇದ್ದಾರಪ್ಪ ಎಂದು ಆಶ್ಚರ್ಯವಾಗುವಷ್ಟು.  ವಿಕಿಪೀಡಿಯವಂತೂ ಸರ್ವರೊಳಗೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆಗಿಬಿಟ್ಟಿದೆ. ಕೆಲವರು ವಿಕಿಯಿಂದಲೇ ಕಲ್ತು ವಿದ್ಯೆಯ ಸಣ್ಣ ಗುಡ್ಡಗಳಾಗಿ ಶೋಭಿಸುವುದನ್ನೂ ನೀವು ಕಾಣುತ್ತೀರಿ. ಇದನ್ನು ನೋಡಿ ನನ್ನ ಸ್ನೇಹಿತರೊಬ್ಬರು ಕೆಲವಂ ಅಲ್ಲಿಲ್ಲಿಂದ  ಕದ್ದು ಎಂ