ಸಿ ಪಿ ರವಿಕುಮಾರ್ - ಕನ್ನಡ ಬರಹಗಳು
ನನ್ನ ಇತರ ಬ್ಲಾಗ್ ಬರಹಗಳನ್ನೂ ನೋಡಿ -
http://cp-ravikumar-kannadapoems2english.blogspot.com/
http://cp-ravikumar-english.blogspot.com/
http://cpravikumar-hindi.blogspot.com/
http://seepisampada.blogspot.com/
ಸಿ ಪಿ ರವಿಕುಮಾರ್ "ಬಾರಿಸು ಕನ್ನಡ ಡಿಂಡಿಮವ" ಎನ್ನುವುದು ಕನ್ನಡ ಪ್ರಚಾರಗೀತೆ ಎನ್ನುವಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ ಕವಿತೆಯನ್ನು ಪೂರ್ಣವಾಗಿ ಓದಿದರೆ ಅದು ಕುವೆಂಪು ಅವರು ಕನ್ನಡಿಗರ ಜಾಯಮಾನಕ್ಕೆ ನೊಂದು, ಬದಲಾವಣೆಗಾಗಿ ಪ್ರಾರ್ಥನಾರೂಪದಲ್ಲಿ ಬರೆದ ಪದ್ಯ ಎಂಬ ತಿಳುವಳಿಕೆ ಮೂಡುತ್ತದೆ. ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ! ಕರ್ನಾಟಕದ ಹೃದಯ ಮಿಡಿಯಬೇಕಾದದ್ದು ಕನ್ನಡಕ್ಕೆ. ಆದರೆ ಅಲ್ಲಿ ಬೇರೆ ಭಾಷೆಗಳ ಮಿಡಿತವೇ ಹೆಚ್ಚು. ಕುವೆಂಪು ಅವರ ಕಾಲದಲ್ಲೂ ಇದು ಹಾಗೇ ಇತ್ತು, ಈಗಲೂ ಹಾಗೇ ಇದೆ! ಹೇಗೆ ಶಿವ ತನಗೆ ಸಹಜವಾದ ಡಿಂಡಿಮ ಬಾರಿಸಬೇಕೋ ಹಾಗೇ ಕರ್ನಾಟಕದ ಹೃದಯ-ಶಿವ ಕನ್ನಡವೆಂಬ ಡಿಂಡಿಮ ಬಾರಿಸಬೇಕು ಎಂಬುದು ಕವಿಯ ನೊಂದ ಮನದ ಮೊರೆ. "ಬಾರಿಸು ಕನ್ನಡ ಡಿಂಡಿಮವ "ಎಂಬಲ್ಲಿ "ಕನ್ನಡ" ಶಬ್ದಕ್ಕೆ ಒತ್ತು. ಸತ್ತಂತಿಹರನು ಬಡಿದೆಚ್ಚರಿಸು! ಕಚ್ಚಾಡುವರನು ಕೂಡಿಸಿ ಒಲಿಸು! ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು! ಒಟ್ಟಿಗೆ ಬಾಳುವ ತೆರದಲಿ ಹರಸು! ಕನ್ನಡ ಜನರಲ್ಲಿ ಒಗ್ಗಟ್ಟಿಲ್ಲ ಎನ್ನುವುದನ್ನು ಕುವೆಂಪು ಮನಗಂಡಿದ್ದರು. ಏಕೀಕರಣದ ಸಮಯದಲ್ಲಿ ಕೂಡಾ ಒಡಕು ಧ್ವನಿಗಳಿದ್ದವು. "ಅಖಂಡ ಕರ್ನಾಟಕ" ಪದ್ಯದಲ್ಲಿ ಇಂಥ ಒಡಕು ಧ್ವನಿಗಳನ್ನು ಎತ್ತುವ ಜನನಾಯಕರ ಬಗ್ಗೆ ಕುವೆಂಪು "ಮುಚ್ಚು ಬಾಯಿ" ಎಂಬ ರೀತಿಯಲ್ಲಿ ಗುಡುಗಿದ್ದಾರೆ. ಆದರೆ ...
ಸಿ. ಪಿ. ರವಿಕುಮಾರ್ ಕರ್ನಾಟಕ ನಾಡಗೀತೆಯನ್ನು ಹಾಡುವವರಿಗೆ/ಕೇಳುವವರಿಗೆ ಅದರ ಅರ್ಥ ತಿಳಿಯದೇ ಇದ್ದರೆ ಈ ಬ್ಲಾಗ್ ಬರಹವನ್ನು ಅವರು ಓದಬಹುದು. ಆದಷ್ಟೂ ಸರಳವಾಗಿ ಕವಿತೆಯ ಸಾರವನ್ನು ಹಿಡಿದಿಡಲು ಪ್ರಯತ್ನಿಸಿದ್ದೇನೆ. ಈ ವಿಶಿಷ್ಟ ಕವಿತೆಯಲ್ಲಿ ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡಿದ್ದಾರೆ. ಇದನ್ನು ಅವರು ರಚಿಸಿದ್ದು ತಮ್ಮ ಹದಿಹರೆಯದಲ್ಲಿ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ ಎಂದು ನಾಡಗೀತೆ ಪ್ರಾರಂಭವಾಗುತ್ತದೆ. ಇಡೀ ಗೀತೆಯ ಉದ್ದಕ್ಕೂ ಅತ್ತ ಭಾರತಮಾತೆಯ ಹಿರಿಮೆ, ಇತ್ತ ಕರ್ನಾಟಕಮಾತೆಯ ಹಿರಿಮೆ ಇವುಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗವನ್ನು ಕುವೆಂಪು ಮಾಡಿದ್ದಾರೆ. ರಾಷ್ಟ್ರವನ್ನೂ ಮತ್ತು ರಾಜ್ಯವನ್ನೂ ಏಕಕಾಲದಲ್ಲಿ ಸ್ತುತಿಸುವ ನಾಡಗೀತೆಯನ್ನು ಮತ್ತೊಮ್ಮೆ ಕೇಳಿ. ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ! ಇಲ್ಲಿ ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡಿದ್ದಾರೆ. ಭಾರತಮಾತೆಯ ಮಗಳಾದ ಕರ್ನಾಟಕಮಾತೆಗೆ ಜಯವಾಗಲಿ ಎಂದು ನಾಡಗೀತೆ ಪ್ರಾರಂಭವಾಗುತ್ತದೆ. ಇಡೀ ಗೀತೆಯ ಉದ್ದಕ್ಕೂ ಅತ್ತ ಭಾರತಮಾತೆಯ ಹಿರಿಮೆ, ಇತ್ತ ಕರ್ನಾಟಕಮಾತೆಯ ಹಿರಿಮೆ ಇವುಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗವನ್ನು ಕುವೆಂಪು ಮಾಡಿದ್ದಾರೆ. ರಾಷ್ಟ್ರವನ್ನೂ ಮತ್ತು ರಾಜ್ಯವನ್ನೂ ಏಕಕಾಲದಲ್ಲ...
ಸಿ ಪಿ ರವಿಕುಮಾರ್ ಶ್ರೀರಂಗರ ನಾಟಕಗಳನ್ನು ಈನಡುವೆ ಅಷ್ಟಾಗಿ ಯಾರೂ ಪ್ರಯೋಗಿಸುವುದಿಲ್ಲ. ರಂಗಶಂಕರದಲ್ಲಿ ಇವತ್ತು ಅವರ ಕತ್ತಲೆಬೆಳಕು ನಾಟಕದ ಪ್ರಯೋಗವಿತ್ತು. ಒಂದು ಕಾಲದಲ್ಲಿ ಶ್ರೀರಂಗ ಕನ್ನಡದ ಅಗ್ರಮಾನ್ಯ ನಾಟಕಕಾರರಾಗಿದ್ದರು. ಕೈಲಾಸಂ ನಂತರ ಪ್ರಖ್ಯಾತರಾದ ನಾಟಕಕಾರರೆಂದರೆ ಶ್ರೀರಂಗ (ಆದ್ಯರಂಗಾಚಾರ್ಯ). ಕತ್ತಲೆ-ಬೆಳಕು ನಾಟಕದಲ್ಲಿ ಒಬ್ಬ ನಾಟಕಕಾರನದ್ದು ಕೇಂದ್ರಪಾತ್ರ. ಇವನಿಗೆ ನಾಟಕ ಬರೆದುಕೊಡುವಂತೆ ಕಂಪನಿಯ ಮಾಲೀಕ ಹಿಂದೆಬಿದ್ದಿದ್ದಾನೆ. ಆದರೆ ನಾಟಕಕಾರನಿಗೆ ಯಾವ ವಸ್ತುವೂ ರುಚಿಸದಾಗಿದೆ. ಮಾಲೀಕನೇ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಎಂದು ಸೂಚನೆಗಳನ್ನು ಕೊಡುತ್ತಿದ್ದಾನೆ. ಮಾಲೀಕನಿಗೆ ಬೇಕಾಗಿರುವುದು ರಸವತ್ತಾದ ನಾಟಕ - ವಯಸ್ಸಾದ ಗಂಡನ ಮಗನನ್ನೇ ಪ್ರೇಮಿಸುವ ಮಲತಾಯಿ ತನ್ನ ಗಂಡನನ್ನೇ ಕೊಲೆ ಮಾಡುವ ಕತೆಯನ್ನು ಅವನು ಸೂಚಿಸುತ್ತಾನೆ. ನಾಟಕಕಾರನ ಮನೆಯ ಸಮೀಪದಲ್ಲೇ ಹಲವು ಕತೆಗಳು ನಡೆಯುತ್ತಿವೆ. ಸದಾ ತಾನಾಯಿತು, ತನ್ನ ಬರವಣಿಗೆಯಾಯಿತು ಎಂದು ಕತ್ತಲಿನಲ್ಲಿ ಕುಳಿತಿರುವ ನಾಟಕಕಾರನಿಗೆ ಹೊರಗಿನ ಜಗತ್ತು ಪ್ರಕಾಶವಾಗಿಲ್ಲ. Fact is stranger than fiction ಎನ್ನುತ್ತಾರೆ. ಶ್ರೀಮಂತನೊಬ್ಬನ ಯುವಪತ್ನಿ ತನ್ನ ಡ್ರೈವರ್ ಜೊತೆಗೆ ಸಂಬಂಧ ಬೆಳೆಸಿದ್ದಾಳೆ. ತನ್ನ ಮುದಿಗಂಡನನ್ನು ಮುಗಿಸಿಬಿಡುವಂತೆ ಕೂಡಾ ಅವಳು ಡ್ರೈವರ್ ಗೆ ಸೂಚಿಸುತ್ತಾಳೆ! ಬಡತನದಲ್ಲಿ ಬೆಂದ ಒಂದು ಗಂಡ-ಹೆಂಡಿರ ಜೋಡಿ ಆತ್ಮಹತ್ಯೆಯ ವಿಚಾರ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ