ಪಾತಕ (ಕವಿತೆ)

ಸಿ.ಪಿ. ರವಿಕುಮಾರ್ 
Person Holding Glass Window

ಪರಿಸರ ದಿನಾಚರಣೆ
ತ್ಯಾಜ್ಯ ನಿರ್ವಹಣೆ
ಇವನ್ನೆಲ್ಲಾ ನಾವು
ಪೋಸ್ಟ್ ಮಾಡುತ್ತಿರುವಾಗ
ಅಲ್ಲೆಲ್ಲೋ 
ಅಲೀಗಢದಲ್ಲಿ
ಎರಡು ವರ್ಷದ ಹಸುಳೆಯನ್ನು
ಕತ್ತು ಹಿಸುಕಿ
ತ್ಯಾಜ್ಯಕ್ಕಿಂತಲೂ ಕಡೆಯಾಗಿ
ಎಸೆದ ಸುದ್ದಿ ಓದಿ
ಪರಿಸರದ ಬಗ್ಗೆ ಗಾಬರಿಯಾಗಿದ್ದೇನೆ
ಪರಿಸರದ ಸಮಸ್ಯೆ ಏನು ಮಹಾ ಅನ್ನಿಸಿದೆ
ಇಲ್ಲೇ ಬೆಂಗಳೂರಲ್ಲಿ  ...
ಸಾಲದ ಹೊರೆಗೆ ತತ್ತರಿಸಿ
ಒಬ್ಬ ತಂದೆ 
ಹೆಂಡತಿ ಮಗನನ್ನು ನೇಣಿಗೇರಿಸಿದ ಸುದ್ದಿ ಓದಿ
ಎಕಾನಮಿ ಬಗ್ಗೆ ಭೀತಿಗೊಂಡಿದ್ದೇನೆ
ಹಣ ನೆಟ್ಟು ಬೆಳೆಸುವ ಬ್ಯಾಂಕ್ ಸ್ಕೀಮುಗಳಲ್ಲಿ
ನಾನು ನೆಟ್ಟ ಸಸಿಯಲ್ಲೂ ಕೆಂಪಗಿನದೇನೋ ಕಂಡು
ಅಸಹ್ಯ ಪಟ್ಟುಕೊಂಡಿದ್ದೇನೆ
ಇಷ್ಟೆಲ್ಲಾ ಕಣ್ಣೀರಿನ ನಡುವೆ
ನೀರಿನ ಸಮಸ್ಯೆ ಏನು ಮಹಾ ಅನ್ನಿಸಿದೆ

ಡ್ರಗ್ ಟ್ರಾಫಿಕಿಂಗ್
ಹ್ಯೂಮನ್ ಟ್ರಾಫಿಕಿಂಗ್
ಕಿಡ್ನಿಗಾಗಿ ಮಕ್ಕಳ ಅಪಹರಣ
ಇವನ್ನೆಲ್ಲಾ ಓದಿ ತಲ್ಲಣಗೊಂಡಿದ್ದೇನೆ
ಬೆಂಗಳೂರು ಟ್ರಾಫಿಕ್ ಏನು ಮಹಾ ಅನ್ನಿಸಿದೆ
ಎಂಥ ಕರುಣಾಮಯಿಯಾದರೂ
ದೇವರು ನಮ್ಮನ್ನು ಕ್ಷಮಿಸಲಾರನೆಂದು
ಹತಾಶನಾಗಿದ್ದೇನೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)