ಭಾರತ ರಾಷ್ಟ್ರಪುರುಷ

 ಮೂಲ ಕವಿತೆ: ಅಟಲ್ ಬಿಹಾರಿ ವಾಜಪೇಯಿ

ಕನ್ನಡ ಅನುವಾದ: ಸಿ. ಪಿ. ರವಿಕುಮಾರ್


ಭೂಮಿಯ ಒಂದು ಖಂಡವಲ್ಲ ಭಾರತ,

ಜೀವಂತ ರಾಷ್ಟ್ರಪುರುಷ

ಹಿಮಾಲಯವು ಮಸ್ತಕ, ಕಾಶ್ಮೀರವು ಮುಕುಟ,

ಪಂಜಾಬ್ ಮತ್ತು ಬಂಗಾಳ ವಿಶಾಲ ಭುಜದ್ವಯಗಳು

ಪೂರ್ವ ಪಶ್ಚಿಮದ ಘಟ್ಟಗಳು ವಿಶಾಲ ತೊಡೆಗಳು

ಕನ್ಯಾಕುಮಾರಿ ಈ ಪುರುಷನ ಪಾದಗಳು

ಸಾಗರವೇ ಮುಂದಾಗುತ್ತದೆ ತೊಳೆಯಲು ಕಾಲು.

ಇಂದು ಚಂದನದ ಭೂಮಿ,

ಅಭಿನಂದನದ ಭೂಮಿ.

ಇದು ತರ್ಪಣದ ಭೂಮಿ,

ಇದು ಅರ್ಪಣದ ಭೂಮಿ.

ಇಲ್ಲಿಯ ಒಂದೊಂದು ಕಲ್ಲೂ ಶಂಕರ,

ಒಂದೊಂದು ಜಲಬಿಂದುವೂ ಗಂಗಾಜಲ.

ನಾವು ಬದುಕಿದರೂ ಇದಕ್ಕಾಗಿ

ಸತ್ತರೂ ಇದಕ್ಕಾಗಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)