ಅರ್ಪಣೆ
ಮೂಲ: ಜಾಯ್ ಆಸ್ಬಾರ್ನ್ ಕನ್ನಡಕ್ಕೆ.: ಸಿ ಪಿ ರವಿಕುಮಾರ್ ತೊಡಗಿರುತ್ತಾರಲ್ಲ ನಿಶ್ಶಬ್ದ ಕದನದಲ್ಲಿ ಬದುಕುತ್ತ ಮುಚ್ಚಿದ ಕದಗಳ ನೇಪಥ್ಯದಲ್ಲಿ ಈ ಕವಿತೆ ಅಂಥವರಿಗಾಗಿ ಮರೆಮಾಚಲು ನೋವನ್ನು ನಗೆಮುಸುಕು ತೊಟ್ಟು ಇವರ ಮುಗುಳ್ನಗೆ ನೆರಳು ಗಾವುದದಷ್ಟು ಈ ಕವಿತೆ ಅಂಥವರಿಗಾಗಿ ಮುರಿದ ರೆಕ್ಕೆಯ ಹಕ್ಕಿಗಳು ಆದರೂ ಬೆಳಗಾಗ ಹಾಡುವ ಧೈರ್ಯ ತೋರುವರು ಈ ಕವಿತೆ ಅಂಥವರಿಗಾಗಿ ಸ್ವಾಗತಿಸಿ ದಿವಸವು ತರುವ ಕಷ್ಟ ಶಾಖೋಪಶಾಖೆ ಎಲ್ಲದರಲ್ಲೂ ಕಾಣುವರಲ್ಲ ಹೊಂಬೆಳಕಿನ ರೇಖೆ ಈ ಕವಿತೆ ಅಂಥವರಿಗಾಗಿ