ಪೋಸ್ಟ್‌ಗಳು

ಸರ್ವಾಧಿಕಾರಿಯ ಮೃತ್ಯುಶಾಸನ

 ಸರ್ವಾಧಿಕಾರಿಯ ಮೃತ್ಯುಶಾಸನ ಅವನು ಹುಡುಕಾಡುತ್ತಿದ್ದ ವಸ್ತು: ಒಂದು ಬಗೆಯ ಪರಿಪೂರ್ಣತೆ ನೇರವಾಗಿ ಮುಟ್ಟುವಂತಿತ್ತು ಅವನು ಹುಟ್ಟುಹಾಕಿದ ಕವಿತೆ ಜನರು ಏನೇನು ಮಾಡಿಕೊಳ್ಳುತ್ತಾರೆ ಎಡವಟ್ಟು ಎಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಅವನಿಗೆ ಇದ್ದ ಪ್ರಮುಖ ಆಸಕ್ತಿ  ಸೈನ್ಯಗಳು, ನೌಕೆಗಳು, ಪರಮಾಣುಶಕ್ತಿ. ಅವನು ನಕ್ಕಾಗ ಪಕ್ಕದಲ್ಲಿದ್ದ ಗೌರವಾನ್ವಿತ ನಾಯಕರ ಹಿಂಡು ಕೇಕೆ ಹಾಕುತ್ತಾ ನಗುತ್ತಿತ್ತು ಪಕ್ಕೆ ಹಿಡಿದುಕೊಂಡು ಅವನು ಅತ್ತಾಗ ಏನೆಂದರೆ ಉಂಟಾಗುತ್ತಿದ್ದ ಪರಿಣಾಮ  ಬೀದಿ ಬೀದಿಗಳಲ್ಲಿ ಬೀಳುವ ಪುಟ್ಟ ಮಕ್ಕಳ ಹೆಣ. ಮೂಲ: ಡಬ್ಲ್ಯೂ ಎಚ್ ಆಡೆನ್  ಅನುವಾದ: ಸಿ ಪಿ ರವಿಕುಮಾರ್

ವಿಕ್ಟರ್

ಇಮೇಜ್
ಮೂಲ ಇಂಗ್ಲಿಷ್ ಕವಿತೆ: ಡಬ್ಲ್ಯೂ.ಎಚ್. ಆಡೆನ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಈ ಜಗತ್ತನ್ನು ಹೊಕ್ಕಾಗ  ವಿಕ್ಟರ್ ಎಂಬ ಪುಟ್ಟ ಮಗು ತೊಡೆಯ ಮೇಲಿಟ್ಟುಕೊಂಡು ಅಪ್ಪ ಅಂದಿದ್ದು: "ಕುಲದ ಹೆಸರನ್ನು ಕೆಡಿಸದಿರು ಎಂದೂ" ಅಪ್ಪನ ಕಡೆಗೆ ನೋಡಿದನು ವಿಕ್ಟರ್ ಪಿಳಿಪಿಳಿ ತನ್ನ ಕಣ್ಣುಗಳ ಅರಳಿಸಿ ಅಪ್ಪನೆಂದ: "ನನ್ನ ಒಬ್ಬನೇ ಮಗ ವಿಕ್ಟರ್, ಜೀವನದಲ್ಲಿ ಎಂದಿಗೂ ನುಡಿಯದಿರು ಹುಸಿ" ಹೊರಟಾಗ ವಿಕ್ಟರ್ ಅಪ್ಪನ ಜೊತೆಗೆ ವಾಯುವಿಹಾರಕ್ಕೆ ಕುದುರೆ ಬಂಡಿಯಲ್ಲಿ ಕುಳಿತು ಅಪ್ಪ ಜೋಬಿನಿಂದ ತೆಗೆದು ಬೈಬಲ್ ಓದಿದ: "ಶುದ್ಧಹೃದಯರಿಗೆ ಸಿಕ್ಕುವುದು ದೈವಾಶೀರ್ವಾದ" ಅದೊಂದು ಕೊರೆವ ಡಿಸೆಂಬರ್ ತಿಂಗಳು ವಿಕ್ಟರ್ ಗೆ ಇನ್ನೂ ಪ್ರಾಯ ಹದಿನೆಂಟು ಮುದ್ದಾಗಿತ್ತು ಆದರೂ ಅವನ ಕೈಬರವಣಿಗೆ ಮತ್ತು ಶುದ್ಧವಾಗಿದ್ದವು ಅವನ ಮಣಿಕಟ್ಟು ದ ಪೆವೆರಿಲ್ ಎಂಬ ಮರ್ಯಾದಸ್ತರ ಲಾಡ್ಜ್ ಅಲ್ಲಿ ವಿಕ್ಟರ್ ಮಾಡಿಕೊಂಡಿದ್ದ ಪುಟ್ಟ ಕೋಣೆ ಕಾಲವು ಅವನ ಮೇಲೆ ಕಣ್ಣಿಟ್ಟಿತ್ತು ಪ್ರತಿದಿನವೂ ಬೆಕ್ಕು ಕಣ್ಣಿಟ್ಟಂತೆ ಇಲಿಯ ಮೇಲೆ ಹೆಗಲ ಮೇಲೆ ಕೈಯಿಟ್ಟು ಸಹೋದ್ಯೋಗಿಗಳು "ವಿಕ್ಟರ್! ಹೆಣ್ಣಿನ ಸಂಗ ಮಾಡಿರುವೆಯಾ ಎಂದಾದರೂ? ನಡೆ ನಮ್ಮ ಜೊತೆ ಶನಿವಾರ ರಾತ್ರಿ ಪೇಟೆಗೆ!" ಎಂದಾಗ ತಲೆ ಅಲ್ಲಾಡಿಸುತ್ತಿದ್ದ ಮುಗುಳ್ನಕ್ಕು ಕೊರೋನಾ ಸಿಗಾರ್ ಸೇದುವ ಮ್ಯಾನೇಜರ್ ಎಂದ: "ಅಯ್ಯೋ ಅವನೊಬ್ಬ ಸಾಧು ಪ್ರಾಣಿ! ಅಷ್ಟೊಂದು ಮುಂದುವರೆವ...

ಕರುಣಿಸು ಅರೋಚಕ ಕಾಲಮಾನವನ್ನು

ಇಮೇಜ್
  ಕರುಣಿಸು ಪ್ರಭೂ ಒಂದು ನಿಧಾನ ಸುದ್ದಿಯ ದಿನವ, ಕಾಲ ಸರಿಯುವುದನ್ನು ಹೊರತು  ಕಾಫಿ ಕುಡಿಯುವುದನ್ನು ಬಿಟ್ಟು ಟಿವಿಯಲ್ಲಿ ಯಾವುದೋ ಹಳೆಯ ಧಾರಾವಾಹಿ  ನೋಡುವುದನ್ನು ಹೊರತಾಗಿ ಹೆಚ್ಚೇನೂ ನಡೆಯದ ನಿಶ್ಶಬ್ದ ನಿರಾಡಂಬರ ದಿವಸವೊಂದನ್ನು. ಕರುಣಿಸು ಸುದ್ದಿಗಳಿಲ್ಲದ ಒಂದು ದಿನವ, ತಲೆಗೊಂದು ಹರಟೆ  ಬುಡವಿಲ್ಲದ ಅಭಿಪ್ರಾಯ ಐರುಗೈರುಗಳಿಂದ ಕೇಳಬೇಕಾದ ದಿನವ. ಏನೂ ಜರುಗಲೇ ಬಾರದು ಅಂಥ ದಿವಸ, ಹೆಚ್ಚೆಂದರೆ ಒಂದೆರಡು ಗಂಟೆ ಒಡನಾಟ, ಸ್ಥಳೀಯ ಹವಾಮಾನದ ಕಡೆ ಕಣ್ಣೋಟ, ನೆನಪಿನಲ್ಲಿಡಲು ಪ್ರಯಾಸ ಪಡಬೇಕಾದ ದಿವಸ. ಮೂಲ: ಬ್ರಯಾನ್ ಬಿಲ್ಸ್ಟನ್  ಕನ್ನಡಕ್ಕೆ : ಸಿ ಪಿ ರವಿಕುಮಾರ್

ಪೀಳಿಗೆಗಳು

ಇಮೇಜ್
2017 ಹೊಸವರ್ಷ ಕಾಲಿಡುವ ಹಿಂದಿನ ರಾತ್ರಿ  ನನಗೆ ನೆನಪಿದೆ ಇನ್ನೂ. ಅಂದು ಚಳಿಗಾಲದಲ್ಲೂ  ತೀಕ್ಷ್ಣವಾಗಿತ್ತು ಬಾನಿನ ಕಣ್ಣು. ಕೈಯಲ್ಲಿ ಒಂದು ಮರದ ಸ್ಪೂನ್ ಹಿಡಿದು ನಾನು ಅಡುಗೆಮನೆಯಲ್ಲಿ ನಿಂತಿದ್ದೆ . ನಡುಮನೆಯಲ್ಲಿ ಅಮ್ಮ  ಸೇಬು, ಕ್ರ್ಯಾಕರ್ಸ್ ಮತ್ತು ಗಿಣ್ಣು ತಿನ್ನುತ್ತ ಟಿವಿ ನೋಡುತ್ತಿದ್ದಳು. ಹಿಂದಿನ ನಿಶಬ್ದ ಕೋಣೆಯಲ್ಲಿ  ತಳ್ಳುಗಾಡಿಯೊಂದರಲ್ಲಿ  ನನ್ನ ಮೊಮ್ಮಗ ನಿದ್ದೆ ಹೋಗಿದ್ದ. ಇಬ್ಬರೂ ನೆಮ್ಮದಿಯಾಗಿದ್ದರು  ತಮ್ಮ ಪಾಡಿಗೆ ತಾವು. ಒಬ್ಬರಿಗೆ ತೊಂಬತ್ತು  ಇನ್ನೊಬ್ಬರಿಗೆ ಒಂದು ತುಂಬಿತ್ತು. ನಾನು ಇವಬ್ಬರಿಗೂ ಸಂಬಂಧಿ. ಅಷ್ಟೇ ಇನ್ನೇನೂ ಇಲ್ಲ. ನನ್ನ ಜೀವನದ ಅತ್ಯಂತ ಸುಂದರ ಕ್ಷಣ. ಮೂಲ: ನಯೋಮಿ ಶಿಹಾಬ್ ನೈ ಅನುವಾದ: ಸಿ ಪಿ ರವಿಕುಮಾರ್ At the end of an unseasonably warm day New Year’s Eve 2017 I stood in my kitchen holding one wooden spoon. My mom was watching TV in the living room eating apples, crackers, and cheese. My grandson slept in a stroller in a quiet back room. I was related to both people, ages ninety and one. They were peaceful. And that was it. The most beautiful moment of my life.

ಅರ್ಪಣೆ

ಇಮೇಜ್
ಮೂಲ: ಜಾಯ್ ಆಸ್ಬಾರ್ನ್ ಕನ್ನಡಕ್ಕೆ.: ಸಿ ಪಿ ರವಿಕುಮಾರ್  ತೊಡಗಿರುತ್ತಾರಲ್ಲ ನಿಶ್ಶಬ್ದ ಕದನದಲ್ಲಿ  ಬದುಕುತ್ತ  ಮುಚ್ಚಿದ ಕದಗಳ ನೇಪಥ್ಯದಲ್ಲಿ ಈ ಕವಿತೆ ಅಂಥವರಿಗಾಗಿ ಮರೆಮಾಚಲು ನೋವನ್ನು  ನಗೆಮುಸುಕು ತೊಟ್ಟು ಇವರ ಮುಗುಳ್ನಗೆ ನೆರಳು ಗಾವುದದಷ್ಟು   ಈ ಕವಿತೆ ಅಂಥವರಿಗಾಗಿ ಮುರಿದ ರೆಕ್ಕೆಯ ಹಕ್ಕಿಗಳು ಆದರೂ ಬೆಳಗಾಗ ಹಾಡುವ ಧೈರ್ಯ ತೋರುವರು ಈ ಕವಿತೆ ಅಂಥವರಿಗಾಗಿ ಸ್ವಾಗತಿಸಿ ದಿವಸವು ತರುವ ಕಷ್ಟ ಶಾಖೋಪಶಾಖೆ ಎಲ್ಲದರಲ್ಲೂ ಕಾಣುವರಲ್ಲ ಹೊಂಬೆಳಕಿನ ರೇಖೆ  ಈ ಕವಿತೆ ಅಂಥವರಿಗಾಗಿ

ಹಿಮ ಬಿದ್ದ ದಿವಸ

ಇಮೇಜ್
  ಮೂಲ: ಬೆನ್ ಬಾನ್ಯಾರ್ಡ್ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಅಂಗಡಿಗೆ ಹೋಗಿ ಹಾಲು ಬ್ರೆಡ್ ಮತ್ತು ಬೆಂದ ಬೀನ್ಸ್ ಒಂದಿಷ್ಟು  ತುಂಬಿಸಿಕೊಂಡು ಬರೋಣ ಅಂದಷ್ಟೇ ಇರಾದೆಯಾಗಿತ್ತು ಆದರೆ ನೋಡಿ ಮಂಜು  ಸಿಕ್ಕಿಹಾಕಿಸಿದೆ ಎಲ್ಲೋ ನಡುವಿನಲ್ಲಿ  ಸುತ್ತಲೂ ಹರಡಿಕೊಂಡ ಹೊಳೆವ ಬಿಳಿ ಮಡುವಿನಲ್ಲಿ ಕಟ್ಟಲಾಗದು ಉಂಡೆ ಹಿಮವನ್ನು ಕೊಡಲಾಗದು ಹಿಮಮಾನವನ ಆಕಾರ ಎರಡು ವರ್ಷಗಳ ನಂತರ ಇಂಥ ಪುಡಿಪುಡಿಯಾದ ಹಿಮದ ಪುನರಾವತಾರ ಆದರೆ ಅಂಗಾತ ಮಲಗಿ ಚಲಿಸಿದರೆ ಕೈಗಳನ್ನು ಅತ್ತಿತ್ತ ಮೋಸವಿಲ್ಲದೆ ಮೂಡುವುದು ಹಿಮದಲ್ಲಿ ದೇವತೆಯ ಚಿತ್ರ. ಮಲಗಿದಲ್ಲೇ ನೋಡಿದರೆ ಗಾಯಗೊಂಡ ಆಕಾಶದತ್ತ ಕಾಲರಿನ ಮೇಲೆ ಬೀಳುವುದು ಹಿಮ ತಪ್ಪೊಪ್ಪಿಕೊಳ್ಳುತ್ತಾ.  ಸ್ತಬ್ಧವಾಗಿದೆ ಕೊನೆಗೂ ವಾಹನಗಳ ಕರ್ಕಶ ಇಂಜಿನ್ ಮೊರೆತ ಬದಲಿಗೆ ಕೇಳುತ್ತಿದೆ ಮಕ್ಕಳ ನಗೆ ಕೇಕೆ ಧಡಬಡ ಓಡಾಟ. ರಾಬಿನ್ ಹಕ್ಕಿಯೊಂದು ಕೂತಿದೆ  ಕ್ರಿಸ್ಮಸ್ ಕಾರ್ಡಿಗೆ ಭಂಗಿ ನೀಡುತ್ತ ಮಲಗಿದಲ್ಲೇ ಯೋಚಿಸುತ್ತೇನೆ ಇನ್ನೆಷ್ಟು ಹೊತ್ತು ಇದ್ದೀತು ಈ ಅದೃಷ್ಟ?

ಚಳಿಗಾಲದ ಪದ್ಯ

ಇಮೇಜ್
  ಮೂಲ: ನಿಕ್ಕಿ ಜಿಯೋವನಿ  ಕನ್ನಡಕ್ಕೆ: ಸಿ ಪಿ ರವಿಕುಮಾರ್ ನನ್ನ ಹುಬ್ಬಿನ ಮೇಲೆ ಒಮ್ಮೆ ಜಾರಿ ಬಿದ್ದಾಗ ಒಂದು ಹಿಮಕಣ ನನಗದು  ಆಪ್ಯಾಯವೆನ್ನಿಸಿ ಅದಕ್ಕೆ ಮುತ್ತಿಟ್ಟಾಗ ಅದಕ್ಕೆಷ್ಟು ಸಂತೋಷವಾಯಿತು  ಎಂದರೆ ಕರೆದು ತಂದಿತು ತನ್ನ ಅಕ್ಕ ತಮ್ಮ ಅಣ್ಣ ತಂಗಿ  ಬಳಗವನ್ನೆಲ್ಲಾ  ಮತ್ತು ಹೀಗೆ ನನ್ನ ಸುತ್ತ ಹೆಣೆದುಕೊಂಡ  ಹಿಮದ ಬಲೆಯನ್ನು  ನಾನು ಔಕಿದಾಗ ಸುರಿಯಿತು ವಸಂತದ ಮಳೆ ಮತ್ತು ನಾನು ಅದರ ಕೆಳಗೆ ಮಿಸುಕಾದಡೆ ನಿಂತು ಒಂದು ಹೂವಾಗಿ ಅರಳಿದೆ.