ಪೋಸ್ಟ್‌ಗಳು

ಗೋಸುಂಬೆಯ ಸಮಸ್ಯೆ

ಇಮೇಜ್
  ಗೋಸುಂಬೆಗಳು ಬಣ್ಣ ಬದಲಾಯಿಸುತ್ತವೆ ಎಂದು ಕೇಳಿದ್ದೇನೆ, ನೋಡಿಲ್ಲ. ಮೊನ್ನೆ ಒಂದು ಗೋಸುಂಬೆ ಸಿಕ್ಕಿತು. ಅದು ಯಾಕೋ ಬಹಳ ಬೇಸರ ಮಾಡಿಕೊಂಡು ಒಂದು ಕಲ್ಲಿನ ಮೇಲೆ ಮುಖ ತಗ್ಗಿಸಿಕೊಂಡು ಪಿಳಿಪಿಳಿ ಕಣ್ಣು ಬಿಡುತ್ತಾ ಕೂತಿತ್ತು.  ಯಾಕೆ ಹಾಗೆ ಕೂತೆ? ಅಂಥದ್ದೇನು ಆಯಿತು? ಎಂದು ಕೇಳಿದೆ. ಡಿಸ್ಟರ್ಬ್ ಮಾಡಬೇಡ, ನಾನು ಧ್ಯಾನ ಮಾಡುತ್ತಿದ್ದೇನೆ ಎಂದಿತು. ಆದರೆ ನಂತರ ಅದೇ ಮೌನ ಮುರಿದು ಮಾತಾಡಿತು. ಹೋಗಲಿ ಬಿಡು, ನನ್ನಿಂದ ಆಗೋದಿಲ್ಲ ಎಂದು ನಿಟ್ಟುಸಿರು ಬಿಟ್ಟಿತು. ಏನು, ಧ್ಯಾನ ಮಾಡೋದು ಆಗೋದಿಲ್ಲವಾ? ನನಗೂ ಕಷ್ಟ. ಟಿವಿ ಮುಂದೆ ಕೂತು ಅಲ್ಲಿ ಹೇಳಿಕೊಡೋ ಧ್ಯಾನ ಮಾಡಲು ಪ್ರಯತ್ನಿಸಿದರೆ ನಡುನಡುವೆ ಜಾಹೀರಾತು ಬರುತ್ತವೆ. ಧ್ಯಾನ ಎಲ್ಲಾ ಅಲ್ಲಿಗೆ ಖಲ್ಲಾಸ್ ಎಂದು ನನ್ನ ಪದಪ್ರಯೋಗಕ್ಕೆ ನಾನೇ ಖುಷಿ ಪಟ್ಟೆ.  ಇಲ್ಲ, ನಾನು ಧ್ಯಾನ ಮಾಡುತ್ತಿರಲಿಲ್ಲ. ಬಣ್ಣ ಬದಲಾಯಿಸಲು ಪ್ರಯತ್ನ ಪಡುತ್ತಿದ್ದೆ. ಈಗ ಅದೆಲ್ಲ ನಮ್ಮ ಕೈಯಲ್ಲಿ ಆಗುತ್ತಲೇ ಇಲ್ಲ. ಮುಂಚೆ ಯಾವ ಕಲ್ಲಿನ ಮೇಲೆ ಕೂಡುತ್ತಿದ್ದೇವೋ ಅದೇ ಬಣ್ಣಕ್ಕೆ ತಿರುಗಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತಾ ಇದ್ದೆವು. ಈಗ ಅದೆಲ್ಲ ಸಾಧ್ಯ ಆಗುತ್ತಿಲ್ಲ.  ಓಹ್, ಇದು ಜಾಗತಿಕ ಸಮಸ್ಯೆಯಾ? ಯಾವಾಗಿನಿಂದ? ನಾನು ಬೇಕಾದರೆ ಟಿವಿ ರಿಪೋರ್ಟರಿಗೆ ಹೇಳುತ್ತೇನೆ. ಅವನು ಇದನ್ನು ಕವರ್ ಮಾಡಬಹುದು. ಬೇಡ, ಬೇಡ. ಈ ಪ್ರಚಾರದಿಂದಲೇ ನಮ್ಮ ಶಕ್ತಿ ಕುಂದಿದ್ದು.  ಏನೋ ಬಹಳ ವಿಚಿತ್ರ...

ವಿಠ್ಠಲ್ ಪದಕೋಶ

ಇಮೇಜ್
ಬೆಳೆಸಿಕೊಳ್ಳಲು, ವಿಕಸಿಸಿಕೊಳ್ಳಲು, ಹಿಗ್ಗಿಸಲು ತನ್ನ ಕನ್ನಡ ಪದಗಳ ಭಂಡಾರ, ಖಜಾನೆ, ಕೋಶ, ಕೊಂಡನು, ಖರೀದಿಸಿದನು, ಕ್ರಯಕ್ಕೆ ತಂದನು ವಿಠಲ  ಕನ್ನಡ ಕನ್ನಡ ಸಮಾನಾರ್ಥಕ ಪದಕೋಶ. ಇದಾದ ಕೆಲ ಕಾಲದಲ್ಲಿ, ನಂತರ, ತರುವಾಯ, ಅನಂತರ, ಇರಲೇ ಇಲ್ಲ ಅವನಿಗೆ ಪದಗಳಿಗೆ ದುರ್ಭಿಕ್ಷ, ಕ್ಷಾಮ, ಬರ  ಮನಸ್ಸಿಗೆ ತೋರಿದ್ದನ್ನು, ಅನ್ನಿಸಿದ್ದನ್ನು, ತೋಚಿದ್ದನ್ನು ಪ್ರಕಟಿಸಲು, ಆಡಲು, ಪ್ರದರ್ಶಿಸಲು ಪದಗಳ ತತ್ವಾರ ಇದೆಲ್ಲಾ ಸರಿಯೇ, ಒಳ್ಳೆಯದೇ, ಚೆನ್ನವೇ, ಲಾಯಕ್ಕಾದುದೇ, ಮಂಗಳವೇ, ಮೆಚ್ಚುವಂಥದ್ದೇ, ಸ್ತುತ್ಯರ್ಹವೇ, ಆದರೆ ಅವನ ಗೆಳೆಯರಿಗೆ ಪಾಪ ಬೋರಾಗತೊಡಗಿತು, ಬೈರಿಗೆಯಾಯಿತು, ಕೊರೆತ ಎನ್ನಿಸತೊಡಗಿತು ವಿಠಲನನ್ನು ಕಂಡರೆ  ನಿಮಗೆ ಇದು ಆಗಲಿ ಪಾಠ, ಒಂದು ನಿದರ್ಶನ, ಒಂದು ಕಲಿಕೆ, ಒಂದು ಉದಾಹರಣೆ, ಒಂದು ಜೀವನ ಶಿಕ್ಷಣ: ಕಲಿತದ್ದನ್ನು, ಪಡೆದ ಶಿಕ್ಷಣವನ್ನು, ಗಳಿಸಿದ ಪಾಂಡಿತ್ಯವನ್ನು  ಮೆರೆಸಬಹುದು, ತೋರಬಹುದು, ಮಾಡಬಹುದು ಪ್ರದರ್ಶನ  ಆದರೆ ದಯವಿಟ್ಟು, ಕೃಪೆ ಮಾಡಿ, ನಿಮ್ಮ ದಮ್ಮಯ್ಯ, ಕೇಳಿಸಿಕೊಳ್ಳಿ ನನ್ನದೊಂದು ಸಲಹೆ, ಕಿವಿಮಾತು, ಬುದ್ಧಿವಾದ, ಹಿತವಚನ: ಎಂದೂ ಮರೆಯದಿರಿ ಸಂಕ್ಷಿಪ್ತ, ಸಾರಾಂಶ, ರುಚಿಗೆ ತಕ್ಕಷ್ಟು, ಹೃಸ್ವ, ಅಡಕ, ಸಂಗ್ರಹ ಎಂಬ ಪದಗಳನ್ನ. .... Brian Bilston  ಅವರ Roger's Thesaurus ಎಂಬ ಕವಿತೆಯ ಕನ್ನಡ ರೂಪ,  ಭಾವಾನುವಾದ, ರೂಪಾಂತರ. ಇದನ್ನು ಮಾಡಿದ್ದು ನಾನು, ನಿಮ್ಮ ವಿಶ್...

ಪರಿಚಿತೆ (ಕಥೆ)

ಇಮೇಜ್
 ‘ಸಂಯುಕ್ತ ಕರ್ನಾಟಕ’ ‘ಸಾಪ್ತಾಹಿಕ ಸೌರಭ’ದಲ್ಲಿ 17 ಆಗಸ್ಟ್‌ 2025 ಪ್ರಕಟವಾದ ಕಥೆ ( ಸಿ. ಪಿ. ರವಿಕುಮಾರ್) https://epaper.samyukthakarnataka.com/editionname/Bangalore/SMYK_BANG/page/9/article/SMYK_BANG_20250817_09_6 ಅವಳು ಮೇಕಪ್ ಮಾಡಿಕೊಳ್ಳದೆ ಮನೆಯಿಂದ ಹೊರಟುನಿಂತಳು. ಇದು ಬಹಳ ದಿಟ್ಟ ನಿರ್ಧಾರವಾಯಿತೇನೋ ಎಂಬ ಅಳುಕು ಮನಸ್ಸನ್ನು ಕಾಡಿತು. ಬಾಗಿಲ ಹತ್ತಿರ ಇದ್ದ ಚಪ್ಪಲಿ ಕಪಾಟಿನಲ್ಲಿ ಇಣುಕಿದಳು. ಹೈಹೀಲ್ಡ್ ಶೂಗಳನ್ನು ಬಿಟ್ಟು ಹಗುರವಾದ ಚಪ್ಪಲಿಯನ್ನು ಆರಿಸಿಕೊಂಡು ಬಾಗಿಲು ತೆರೆದು ಹೊರಟಾಗ ಎದುರು ದಿಕ್ಕಿನಿಂದ ಬಂದವಳನ್ನು ಕಂಡು ಅವಾಕ್ಕಾಗಿ ನಿಂತಳು. ಕೊನೆಗೂ ಸಾವರಿಸಿಕೊಂಡು ‘ಓಹ್! ನೀನು!’ ಎಂದು ಕರೆದಳು. ಅವಳ ಧ್ವನಿಯಲ್ಲಿ ಸಂಭ್ರಮವಿತ್ತು. ಬಂದವಳು ನಕ್ಕಳು. ಅವಳ ನಗುವಿನಲ್ಲೂ ಸಂಭ್ರಮವಿತ್ತು. ಇವಳು ಬಂದವಳನ್ನು ಆಲಂಗಿಸಿಕೊಂಡು ಒಳಗೆ ಕರೆದೊಯ್ದಳು. ಒಳಗೆ ಬಂದ ಅತಿಥಿಯೇ ಇವಳನ್ನು ಒಳಗೆ ಕರೆದುಕೊಂಡು ಹೋದಂತೆ ಇವಳಿಗೆ ಭಾಸವಾಯಿತು. ತನ್ನ ಮನೆಯ ಪರಿಚಯ ಅವಳಿಗೆ ಇಷ್ಟು ಚೆನ್ನಾಗಿರುವುದು ಹೇಗೆಂದು ಇವಳು ಯೋಚಿಸಿದಳು. ‘ಇಲ್ಲಿ ಕೂತುಕೋ!’ ಎಂದು ಇವಳು ಹೇಳಿದಾಗ ಅವಳೂ ಅದೇ ಮಾತನ್ನು ಹೇಳಿದ್ದು ಕೇಳಿ ಇವಳಿಗೆ ನಗು ಬಂತು. ಇಬ್ಬರೂ ನಕ್ಕರು. ‘ನಿನ್ನ ಸೀರೆ ಚೆನ್ನಾಗಿದೆ. ನಾವಿಬ್ಬರೂ ಅದನ್ನು ಒಂದೇ ಅಂಗಡಿಯಿಂದ ಖರೀದಿ ಮಾಡಿರಬೇಕು. ಲಾವಣ್ಯ ಸಿಲ್ಕ್ಸ್ ತಾನೇ?’ ಅವಳು ಹೌದೆಂದು ತಲೆಯಾಡಿಸಿದಳು. ‘ತಾ...

ಭಜಿಸುತಿರು ಕೃಷ್ಣನಾಮ!

ಇಮೇಜ್
ಓ ಮನ! ಭಜಿಸುತಿರು ಕೃಷ್ಣನಾಮ! ದಾಟದಿರು ಗುರುವು ಹಾಕಿದ ಗೆರೆ, ಸಲ್ಲಿಸು ಸಂತರಿಗೆ ಪ್ರಣಾಮ! ಓದಿ ಅರ್ಥೈಸು ಭಾಗವತದ ಕಥೆ, ಪಡೆದುಕೋ ಪುಣ್ಯಾರಾಮ! ಏಕೆ ಕೃಷ್ಣನ ನಾಮದ ಸ್ಮರಣೆ ಇಲ್ಲದೇ, ವ್ಯರ್ಥಗೊಳಿಸುವೆ ಜನುಮ! ಹರಿದುಹೋಗುತಿದೆ ಕೃಷ್ಣನಾಮಸುಧೆ,  ತೃಷೆ ಇದ್ದವರಿಗೆ  ಸೂರದಾಸ ಶ್ರೀಹರಿಯ ಚರಣವೇ ಸಾಫಲ್ಯ ಪರಂಧಾಮ! रे मन कृष्ण नाम कहि लीजै गुरु के बचन अटल करि मानहिं, साधु समागम कीजै पढिए गुनिए भगति भागवत, और कथा कहि लीजै कृष्ण नाम बिनु जनम बादिही, बिरथा काहे जीजै कृष्ण नाम रस बह्यो जात है, तृषावंत है पीजै सूरदास हरिसरन ताकिए, जन्म सफल करी लीजै

ಬೆಳಗಿನ ಹಾಡು

ಇಮೇಜ್
  ಮೂಲ: ಸಾರಾ ಟೀಸ್‌ಡೇಲ್ ಅನುವಾದ: ಸಿ ಪಿ ರವಿಕುಮಾರ್ ವಜ್ರದಂತಹ ಬೆಳಗು ಕೂಗಿ ಎಬ್ಬಿಸಿತು ನನ್ನನ್ನು ಏಕೋ ಒಂದು ಗಂಟೆ ಮುಂಚೆಯೇ ಇಂದು. ನಸುಕು ಕೊಂಡೊಯ್ದಿತ್ತು ತಾರೆಗಳನ್ನು ತನ್ನೊಂದಿಗೆ ಬಿಟ್ಟು ಹೋಗಿತ್ತು ಬಾನಲ್ಲಿ ಬೆಳ್ಳನೆಯ ಬಿಂದು. ಓಹ್ ಇಂದು! ನೀನು ಏಕಾಂಗಿನಿ! ಇರಲಿ ಬಿಡು, ನಿನ್ನಂತೆಯೇ ಒಂಟಿ ನಾನು ಕೂಡಾ. ಆದರೆ ನಮಗಿದೆ ಸುತ್ತಾಡಲು ಇಡೀ ಜಗತ್ತು, ಒಂಟಿಯಾದವರಿಗೆ ಮಾತ್ರ ಈ ಸ್ವಾತಂತ್ರ್ಯ.

ಏಕಾಕಿ

ಇಮೇಜ್
 ಮೂಲ ಕವಿತೆ: ಎಲ್ಲಾ ವ್ಹೀಲರ್ ವಿಲ್ ಕಾಕ್ಸ್ ಅನುವಾದ: ಸಿ ಪಿ ರವಿಕುಮಾರ್  ನೀನು ನಕ್ಕರೆ ನಗುವುದು ಜೊತೆಗೆ ಜಗತ್ತು, ಅತ್ತರೆ ನೀನು ಅಳಬೇಕು ಏಕಾಂಗಿಯಾಗಿ. ಕಷ್ಟಗಳು ಸಾಕಷ್ಟಿವೆ ಜಗತ್ತಿನಲ್ಲಿ ಹೀಗಾಗಿ ಹೀರುವುದದು ಸಂತಸವನ್ನು ಬಿಡದೆ ತೊಟ್ಟೂ. ನೀನು ಹಾಡಿದರೆ ಬೆಟ್ಟಗಳೂ ಹಾಡುತ್ತವೆ ಜೊತೆಗೆ, ಗಾಳಿಯಲ್ಲಿ ಕಳೆದುಹೋಗುವುದು ನಿನ್ನ ನಿಟ್ಟುಸಿರು. ಪ್ರತಿಧ್ವನಿ ಉಕ್ಕುವುದು ನಗುಮೊಗದ ಕತೆಗೆ, ಗೋಳುಕತೆಗೆ ಮೌನವೇ ಏಕೈಕ ಶ್ರೋತೃ. ಸಂಭ್ರಮಿಸಿದಾಗ ಜನ ಬರುವರು ಹುಡುಕುತ್ತ, ಮರಳುವರು ನೀನು ಬಿಕ್ಕಿದರೆ ಅತ್ತು. ಬೇಕು ಎಲ್ಲರಿಗೂ ನಿನ್ನ ಸುಖದ ಪೂರ್ಣ ಮೊತ್ತ, ಯಾರಿಗೂ ಬೇಡ ನಿನ್ನ ದುಃಖ ಕಿಂಚಿತ್ತೂ. ನಗುತ್ತಿದ್ದರೆ ನಿನಗೆ ನೂರಾರು ಗೆಳೆಯರು, ಅತ್ತಾಗ ನಿಲ್ಲುವುದಿಲ್ಲ ಯಾರೂ ಒಂದು ನಿಮಿಷ. ಬೇಡ ಎನ್ನುವುದಿಲ್ಲ ನೀನಿತ್ತ ಸಿಹಿ ಜೇನು ಯಾರೂ, ನೀನೇ ಕುಡಿಯಬೇಕು ಜೀವನದ ಕಹಿವಿಷ. ಜನ ಹುಡುಕಿ ಬರುವರು ಏರ್ಪಡಿಸಿದರೆ ಔತಣಕೂಟ, ಯಾರೂ ನೋಡುವುದಿಲ್ಲ ಹಿಡಿದಾಗ ಉಪವಾಸ ವೃತ.  ವಿಜಯಿಯಾಗಿ ನೀಡು ಕೊಡುಗೆ, ಜೀವಿಸಲು ಇದು ಮಾರ್ಗ, ಯಾರೂ ಜೊತೆ ಬರುವುದಿಲ್ಲ ನೀನು ಎಲ್ಲಾ ಬಿಟ್ಟು ಹೊರಟಾಗ. ಬೃಹತ್ ಬಂಡಿಯೂ ಸಾಗುವಷ್ಟು ಸುಖದ ಹಾದಿಯ ಗಾತ್ರ, ನೋವಿನ ಇಕ್ಕಟ್ಟು ಓಣಿಯಲ್ಲಿ ಸಾಗಲು ಒಬ್ಬರಿಗೆ ಮಾತ್ರ 

ರೊಟ್ಟಿ ಮತ್ತು ತೊವ್ವೆ

ಇಮೇಜ್
 ರೊಟ್ಟಿ ಮತ್ತು ತೊವ್ವೆ ಮೂಲ: ಡೇವಿಡ್ ವೈಟ್ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಯಾರೆಂದರು ಇದು ಮಾಹಿತಿ ಯುಗವೆಂದು ಇದು ಮಾಹಿತಿ ಯುಗವಲ್ಲ. ಬಿಡಿ ಸುದ್ದಿವಾಹಿನಿ ಪತ್ರಿಕೆ  ಮತ್ತು ಸ್ಕ್ರೀನ್ ತುಂಬ  ಕೆಂಪು Mಬಣ್ಣದ ಬ್ರೇಕಿಂಗ್ ನ್ಯೂಸ್. ಇದು ರೊಟ್ಟಿ ಮತ್ತು ತೊವ್ವೆಯ ಯುಗ. ಜನ ಹಸಿದಿದ್ದಾರೆ  ಮತ್ತು ಒಂದು ಒಳ್ಳೆಯ ಮಾತು ತಣಿಸಬಲ್ಲದು ಸಾವಿರ ಮಂದಿಯ ಹಸಿವು.