ಪೋಸ್ಟ್‌ಗಳು

ಮೈಸೂರುಪಾಕ್ ನೆನಪುಗಳು

ಇಮೇಜ್
ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನನಗೆ ರಾಂಕ್ ಬರಬಹುದು ಎಂದು ನ್ಯಾಷನಲ್ ಹೈಸ್ಕೂಲಿನ  ಕೆಲವು ಅಧ್ಯಾಪಕರು ಅಪೇಕ್ಷೆ ಇಟ್ಟುಕೊಂಡಿದ್ದರು. ನಾನು ಪ್ರಥಮ ಭಾಷೆ ಕನ್ನಡ ತೆಗೆದುಕೊಂಡ ಕಾರಣ ಇದು ಸುಲಭವಲ್ಲ ಎಂದು ಅವರಿಗೆ ತಿಳಿದಿತ್ತು. ಆಗ ಕನ್ನಡದಲ್ಲಿ ಹೆಚ್ಚು ಮಾರ್ಕ್ಸ್ ಕೊಡುತ್ತಿರಲಿಲ್ಲ.  ಎರಡು ಪರೀಕ್ಷೆಗಳು ಇರುತ್ತಿದ್ದವು. ಮುಖ್ಯ ಪಠ್ಯಪುಸ್ತಕವನ್ನು ಆಧರಿಸಿ ಮೊದಲ ಪರೀಕ್ಷೆ. ನಾನ್ ಡೀಟೇಲ್ಡ್ ಪಠ್ಯವನ್ನು ಆಧರಿಸಿ ಎರಡನೇ ಪರೀಕ್ಷೆ. ಇವು ಬೆಳಗ್ಗೆ ಮತ್ತು ಮಧ್ಯಾಹ್ನ ನಡೆಯುತ್ತಿದ್ದವು. ಎರಡನೇ ಭಾಗದಲ್ಲಿ ಪ್ರಬಂಧ, ಪತ್ರಲೇಖನ, ನಾವು ಹಿಂದೆ ಓದಿರದ ಕವಿತೆಯ ವಿಶ್ಲೇಷಣೆ ಇವೆಲ್ಲ ಇರುತ್ತಿದ್ದವು.   ಕನ್ನಡದಲ್ಲಿ ನನಗೆ ನೂರಾ ಐವತ್ತಕ್ಕೆ ನೂರಾ ಇಪ್ಪತ್ತೈದು ಅಂಕಗಳು ಬಂದವು. ಹೀಗಾಗಿ ಕನ್ನಡದ ಕಾರಣ ರಾಂಕ್ ತಪ್ಪಿತು ಎಂದು ಹೇಳಲು ಸಾಧ್ಯವಿರಲಿಲ್ಲ. ಸೋಷಿಯಲ್ ಸ್ಟಡೀಸ್ ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಬಂದು ನನಗೆ ನಲವತ್ತಮೂರನೇ ರಾಂಕ್ ಬಂತು.  ಪ್ರಥಮ ಪಿಯುಸಿ ಪರೀಕ್ಷೆಗಳು ಮುಗಿದ ನಂತರ ನಮ್ಮ ತಾಯಿಗೆ ಬಹಳ ದಿನಗಳಿಂದ ಕಾಡುತ್ತಿದ್ದ ಗೈನಕಾಲಜಿ ಸಂಬಂಧದ ಚಿಕಿತ್ಸೆಗಾಗಿ  ಅವರು  ಮಾರ್ಥಾಸ್ ಆಸ್ಪತ್ರೆ ಸೇರಿದರು. ಅವರನ್ನು ಸೇರಿಸಲು ನಾನು ಮತ್ತು ನನ್ನ ದೊಡ್ಡಮ್ಮ ಇಂದಿರಮ್ಮ ಹೋಗಿದ್ದೆವು.  ನಮ್ಮ ತಾಯಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಅದಾದ ನಂತರ ಅವರಿಗೆ ಶುಶ್ರೂಷೆಯ ಅಗತ್ಯ ಇತ್ತು. ಹೆಣ್ಣು ಮಕ್ಕಳಿಲ್ಲದ ಕಾರಣ ಅವರ ಮೇಲೆ ಮನೆ

ನಾಗಿರೆಡ್ಡಿ ಅವರನ್ನು ಮಾತಾಡಿಸಿದ್ದು

ಇಮೇಜ್
ನಾನು ಇನ್ನೂ ಆರನೇ ಅಥವಾ ಏಳನೇ ಕ್ಲಾಸಿನಲ್ಲಿದ್ದಾಗ ನಡೆದ ಘಟನೆ. ನಮ್ಮ ತಂದೆಗೆ ದೆಹಲಿಗೆ ವರ್ಗವಾಗಿದ್ದರಿಂದ ಐದು ವರ್ಷ ನಾವು ಅಲ್ಲಿ ವಾಸ ಮಾಡಬೇಕಾಯಿತು. ಮೊದಲು ಲೋಧಿ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಒಂದೇ ಕೋಣೆಯಲ್ಲಿ ಒಂದು ವರ್ಷ ವಾಸ ಮಾಡಿದ ನಂತರ ಜೋರ್ ಬಾಗ್ ಎಂಬಲ್ಲಿ ನಮಗೆ ಬಾಡಿಗೆ ಮನೆ ಸಿಕ್ಕಿತು. ನಮ್ಮ ತಂದೆಯವರ ಆಫೀಸಿಗಾಗಿ ಬಾಡಿಗೆ ಪಡೆದ ಕಟ್ಟಡದಲ್ಲಿ ಮೇಲಿನ ಎರಡು ಕೋಣೆಯ ಪುಟ್ಟ ಮನೆಯನ್ನು ನಮಗೆ ಸಬ್-ಲೆಟ್ ಮಾಡಿಕೊಟ್ಟರು. ಹೀಗೆ ಒಂದು ಕೋಣೆಯ ಮನೆಯಿಂದ ಎರಡು ಕೋಣೆಯ ಮನೆಗೆ ಪ್ರಗತಿ ಸಾಧಿಸಿದೆವು. ಇಲ್ಲಿ ಎರಡು ಕೋಣೆ ಎಂದರೆ ನೀವು ಟೂ ಬಿ.ಎಚ್.ಕೆ. ಎಂದೆಲ್ಲ ಕಲ್ಪಿಸಿಕೊಳ್ಳಬೇಡಿ. ಅಲ್ಲಿದ್ದದ್ದು ಎರಡೇ ಕೋಣೆ. ಒಂದು ನಮಗೆ ಲಿವಿಂಗ್ ರೂಮ್, ಬೆಡ್ ರೂಮ್, ಸ್ಟಡಿ ಎಲ್ಲವೂ ಆಗಿತ್ತು. ಇನ್ನೊಂದು ಕಿಚನ್, ಡೈನಿಂಗ್ ಹಾಲ್ ಆಗಿತ್ತು. ಆದರೆ ಮನೆಯ ಸುತ್ತಲೂ ಇದ್ದ ಬಿಸಿಲುಮಚ್ಚು ದೇಶೋವಿಶಾಲವಾಗಿತ್ತು. ಬೇಸಗೆ ದಿನಗಳಲ್ಲಿ ಅಲ್ಲಿ ಚಾರ್ ಪಾಯಿ ಹಾಕಿಕೊಂಡು ನಾವು ಮಲಗಿಕೊಳ್ಳುತ್ತಿದ್ದೆವು.  ಚಳಿಗಾಲದಲ್ಲಿ ಮಾತ್ರ ಒಂದು ಕೋಣೆಯಲ್ಲಿ ರಜಾಯಿಯ ಕೆಳಗೆ ಸೇರಿಕೊಳ್ಳುತ್ತಿದ್ದೆವು. ಇದೆಲ್ಲ ಯಾಕೆ ಹೇಳಲು ಹೊರಟೆ ಎಂದರೆ ನಿಮಗೆ ಮುಂದೆ ಹೇಳಲು ಹೊರಟಿರುವ ಕಥೆಗೆ ಪೀಠಿಕೆ, ಅಷ್ಟೇ. ನಮ್ಮ ತಂದೆಯವರ ಆಫೀಸ್ ಅದೇ ಕಟ್ಟಡದ ಗ್ರೌಂಡ್ ಫ್ಲೋರಿನಲ್ಲಿತ್ತು. ಅಲ್ಲಿ ಒಂದು ಗೆಸ್ಟ್ ರೂಮ್ ಕೂಡಾ ಇತ್ತು. ಬೆಂಗಳೂರಿನಲ್ಲಿ ನಮ್ಮ ತಂದೆಯವರ ಆಫೀಸಿನ

ದಸರಾ ದರ್ಬಾರ್

"ಮೈಸೂರು ದಸರಾ ದರ್ಬಾರಿನಲ್ಲಿ  ನಾನು ಭಾಗವಹಿಸುವುದಿಲ್ಲ, ಮನ್ನಿಸಿ" ಎಂದು ಬರೆದರಂತೆ ಪತ್ರ ಮೈಸೂರು ಸಂಸ್ಥಾನದ ಚೀಫ್ ಇಂಜಿನಿಯರ್. ಮಹಾರಾಜರಿಗೆ ಇದು ಅಪಮಾನ ಎನ್ನಿಸಿ ಕಳಿಸಿದರು ಮಾರೋಲೆ  "ಏಕೆಂದು ಕೇಳಬಹುದೇ ಉತ್ತರಿಸಿ ಕೂಡಲೇ" "ಮಹಾಸ್ವಾಮಿ, ದರ್ಬಾರಿನಲ್ಲಿ ಬ್ರಿಟಿಷ್ ಅಧಿಕಾರಿಗಳಿಗೆ ಮಾತ್ರ ಕುರ್ಚಿ ಭಾರತೀಯರಿಗೆ ನೆಲದ ಮೇಲೆ ಸ್ಥಾನ. ಇದು ನಮಗೆ ಮಾಡಿದ ಅಪಮಾನ. ನನ್ನಿಂದಾಗದು, ಕ್ಷಮಿಸಿ. ಅವರಿಗೆ ನೆಲದ ಮೇಲೆ ಕೂಡಲು ಎಷ್ಟಿದೆಯೋ  ಕುರ್ಚಿಯ ಮೇಲೆ ಕೂಡಲು ನಮಗೂ ಅಷ್ಟೇ ಇದೆ ಹಕ್ಕು. ಪತ್ರ ಮುಗಿಸುವೆ ಗೌರವದಿಂದ ನಮಿಸಿ." ವಿಷಯ ಹೋಯಿತು ಕಿವಿಯಿಂದ ಕಿವಿಗೆ ತಲುಪಿತು ಬ್ರಿಟಿಷ್ ಆಧಿಕಾರಿಯವರೆಗೆ. ನೆಲಕ್ಕೆ ಕುಟ್ಟಿ ಬೂಟು  "ಎಷ್ಟು ಈ ಇಂಜಿನಿಯರಿಗೆ ಸೊಕ್ಕು!" ಎಂದು ಕಳಿಸಿದನಂತೆ ಖುದ್ದು ಆಹ್ವಾನ: ದರ್ಬಾರಿಗೆ ಬಂದು ಚೀಫ್ ಇಂಜಿನಿಯರ್ ನಮಗೆ  ನೀಡಬೇಕು ದರ್ಶನ" ಬಂತು ದರ್ಬಾರಿನ ದಿನ. ದರ್ಬಾರ್ ನೋಡಲು ಬಂದ ಜನ  ಎಲ್ಲಾ ಕಡೆ ಕುತೂಹಲದಿಂದ ಹರಿಸಿದರು ಕಣ್ಣು  ಹುಡುಕಿದರು ಚೀಫ್ ಇಂಜಿನಿಯರನ್ನು. ಚೀಫ್ ಇಂಜಿನಿಯರ್ ಬರಲಿಲ್ಲ ನುಡಿದಂತೆ ಅವರ ನಡೆ. ಯಾರು ಈ ಚೀಫ್ ಇಂಜಿನಿಯರ್ ಎಂದು  ನಿಮಗೆ ಈಗಾಗಲೇ ಹೊಳೆದಿರಬಹುದಷ್ಟೇ. ಇವರೇ ಕಟ್ಟಿದ್ದು ಕನ್ನಂಬಾಡಿ ಕಟ್ಟೆ."

ಎನ್ ಆರ್ ಎನ್ - ನೆನಪುಗಳು

ಇಮೇಜ್
  ಭಾರತಕ್ಕೆ ಮರಳಿ ಬಂದಾಗ ಇನ್ಫೋಸಿಸ್ ಕಚೇರಿಯಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ಡೈರೆಕ್ಟರ್ ಆಫೀಸಿನಲ್ಲಿ ನಾರಾಯಣ ಮೂರ್ತಿ ಕೂಡುತ್ತಿದ್ದರು. ಅವರಿಗೆ ಮುಂಗೋಪ ಹೆಚ್ಚು. ಒಮ್ಮೊಮ್ಮೆ ಸೆಕ್ರೆಟರಿಯ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದರು. ಅವರ ಆಲೋಚನೆಯ ರೀತಿ ವಿಭಿನ್ನವಾಗಿತ್ತು.  ಭಾರತದಿಂದ ಪ್ರತಿಭಾವಂತರನ್ನು ಹೊರದೇಶಕ್ಕೆ ಕಳಿಸಿ ಅಲ್ಲಿ ಪ್ರಾಜೆಕ್ಟ್ ಮಾಡಿಸಿ ಹಣ ಮಾಡುವ ಕಂಪನಿಗಳಿಗೆ ಬಾಡಿ ಶಾಪರ್ಸ್ ಎಂದು ವ್ಯಂಗ್ಯದಿಂದ ಮಾತಾಡುತ್ತಿದ್ದ ಕಾಲದಲ್ಲಿ ಭಾರತದಲ್ಲೇ ಪ್ರಾಜೆಕ್ಟ್ ಮಾಡಿಸಬೇಕು ಎಂಬ ಆಸೆಯನ್ನು ಮೂರ್ತಿ ಹೊಂದಿದ್ದರು.   ಕೆ.ಎಸ್.ಆರ್.ಟಿ.ಸಿ.ಗೆ ಟಿಕೆಟಿಂಗ್ ವ್ಯವಸ್ಥೆಯ ತಂತ್ರಾಂಶವನ್ನು ಅವರು ನಿಶ್ಶುಲ್ಕವಾಗಿ ತಯಾರಿಸಿಕೊಟ್ಟರು. ಟ್ರಾಕ್ಸ್ ಎಂಬ ಹೆಸರಿನ ಈ ತಂತ್ರಾಂಶವನ್ನು ನಿರ್ಮಿಸಲು ಸಾಕಷ್ಟು ಇಂಜಿನಿಯರುಗಳು ಅನೇಕ ತಿಂಗಳು ದುಡಿದರು.  ಬಹುಶಃ ಇಂಥ ಪ್ರಯತ್ನಗಳು ಬೇರೆಡೆ ನಡೆದಿರಲಾರವು.   ಸುಧಾ ಮೂರ್ತಿ ಒಮ್ಮೊಮ್ಮೆ ಆಫೀಸಿಗೆ ಬರುತ್ತಿದ್ದರು. ಬಹುಶಃ ಎರಡು ವರ್ಷ ವಯಸಾಗಿದ್ದ ಮಗನನ್ನು ಎತ್ತಿಕೊಂಡು ಬರುತ್ತಿದ್ದರು. ನಾವು ಮಗುವನ್ನು ಮಾತಾಡಿಸಿದರೆ ಮೂರ್ತಿ "ಇವನ ಜೊತೆ ಹುಷಾರು, ಇವನು ಮಹಾ ಅಪಾಯಕಾರಿ ವ್ಯಕ್ತಿ" ಎಂದು ತಮಾಷೆ ಮಾಡುತ್ತಿದ್ದರು.  ಅಂದು ಗಣಕಯಂತ್ರಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದವು. ಅಮೇರಿಕಾ ಮತ್ತು ಜಪಾನ್ ಮಾತ್ರ ಗಣಕಗಳನ್ನು ತಯಾರಿಸುತ್ತಿದ್ದವು. ಭಾರತದಂಥ ದೇಶಕ್ಕೆ ಗಣಕ ತಂತ್ರಜ್ಞಾನ

ವಾರ್ಡನ್ ಕಥನ

ಇಮೇಜ್
ನಾನು ದೆಹಲಿ ಐಐಟಿಯ ನೀಲಗಿರಿ ಹಾಸ್ಟೆಲಿಗೆ ವಾರ್ಡನ್ ಆಗಿ ನಿಯುಕ್ತನಾಗಿ ಕೊನೆಗೂ ಮನೆಯನ್ನು ಬದಲಾಯಿಸಿ ವಾರ್ಡನ್ ಮನೆಗೆ ಬಂದೆ. ಆ ಮನೆಯ ಸ್ಥಿತಿ ಏನೂ ಚೆನ್ನಾಗಿರಲಿಲ್ಲ. ಮನೆಯ ಮುಂದೆ ಮತ್ತು ಹಿಂದೆ ಇದ್ದ ದೊಡ್ಡ ತೋಟ ನನಗೆ ಇಷ್ಟವಾಗಿತ್ತು. ಆದರೆ ಅದರಲ್ಲಿ ತೋಟಗಾರಿಕೆ ಮಾಡಲು ನನಗೆಲ್ಲಿ ಸಮಯವಿತ್ತು! ಮಗಳಿಗೆ ಆಗತಾನೇ ಒಂದು ವರ್ಷ ತುಂಬಿತ್ತು.  ಅವಳನ್ನು ಹಿಡಿಯುವುದೇ ಒಂದು ಸಾಹಸ. ಅವಳಿಗೆ ಅವಳ ಅಮ್ಮ ಹಿತ್ತಲಲ್ಲಿದ್ದ ಶೆಹತೂತ್ ಅಥವಾ ಹಿಪ್ಪುನೇರಳೆ ಮರದಲ್ಲಿ ಉಯ್ಯಾಲೆ ಹಾಕಿಕೊಟ್ಟಳು. ಇಬ್ಬರೂ ಈ ಉಯ್ಯಾಲೆಯಲ್ಲಿ ಬೇಕಾದಷ್ಟು ಆಡಿದರು. ದೆಹಲಿಯ ವಾಯುಮಾಲಿನ್ಯ ಆಗಲೂ ಹದಗೆಟ್ಟಿತ್ತು. ಮಗಳಿಗೆ ಹವಾಮಾನ ಬದಲಾವಣೆಯಾದಾಗಲೆಲ್ಲಾ ನೆಗಡಿ, ಕೆಮ್ಮು. ಐಐಟಿಯ ದವಾಖಾನೆಯಲ್ಲಿ ಯಾವಾಗಲೂ ಗಿಜಿಗಿಜಿ ಜನ ತುಂಬಿರುತ್ತಿದ್ದ ಕಾರಣ ನಾವು ಹೊರಗಿನ ವೈದ್ಯರಿಗೆ ಶರಣಾದೆವು.  ಒಬ್ಬ ಹೋಮಿಯೋಪತಿ ವೈದ್ಯೆಯ ಪರಿಚಯವನ್ನು ಯಾರೋ ಹೇಳಿದರು. ಆಕೆಯ ಕ್ಲಿನಿಕ್ ದೂರದಲ್ಲಿತ್ತು. ನನ್ನ ಹೆಂಡತಿ ಟ್ಯಾಕ್ಸಿ ಮಾಡಿಕೊಂಡು ಅಲ್ಲಿಗೆ ಹೋಗಿಬರುತ್ತಿದ್ದಳು.  ಒಮ್ಮೆ ಹೋಮಿಯೋಪತಿಯ ಸಿಹಿಗುಳಿಗೆಗಳ ಬಾಟಲ್ ಮಗಳ ಕೈಗೆ ಸಿಕ್ಕಿ ಅವಳು ಅದರಲ್ಲಿದ್ದ ಸಿಹಿಯ ರುಚಿ ನೋಡಿದಳು..ಹೋಮಿಯೋಪತಿ ಔಷಧಕ್ಕೆ ಕಾಫಿ ಒಂದು ಆಂಟಿಡೋಟ್ ಅಥವಾ ಪ್ರತ್ಯೌಷಧ ಎಂದು ತಿಳಿದಿದ್ದ ನನ್ನ ಹೆಂಡತಿ ಮಗಳಿಗೆ ಸ್ವಲ್ಪ ಕಾಫಿ ಕುಡಿಸಿ ಡಾಕ್ಟರಿಗೆ ಫೋನ್ ಮಾಡಿ ಹೋದಳು.  ದೂರದ ಡಾಕ್ಟರ್ ಬಳಿ ಪದೇಪದೇ ಹೋಗುವುದು

ಕಾಪಿ ಚಟ್ ಕಾರಾ ಬೂಂದಿ

ಇಮೇಜ್
 ಕಬೀರನ ಒಂದು ದ್ವಿಪದಿಯಲ್ಲಿ ಅವನು ಹೀಗೆ ಹೇಳಿದ್ದಾನೆ. ಎಲ್ಲಿ ಹೆಸರಿದೆಯೋ ಅಲ್ಲಿ ಕೆಲಸವಿಲ್ಲ, ಎಲ್ಲಿ ಕೆಲಸವಿದೆಯೋ ಅಲ್ಲಿ ಇಲ್ಲ ಹೆಸರು ಎಂದೂ ಸೇರವು ಒಂದೇ ಸ್ಥಳದಲ್ಲಿ ತಿಂಗಳು ಮತ್ತು  ನೇಸರು ಬೇಂದ್ರೆ ಅವರ "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಎಂಬ ಸಾಲುಗಳು ನಿಮಗೆ ನೆನಪಾಗಿರಬಹುದು. ಸೂರ್ಯ ಮತ್ತು ಚಂದ್ರ ಒಂದು ಕಡೆ  ಹೇಗೆ ಸೇರುವುದಿಲ್ಲವೋ ಹಾಗೇ ಕೆಲಸ ಮತ್ತು ಹೆಸರು ಎಂದೂ ಒಂದೇ ಕಡೆ ಸೇರುವುದಿಲ್ಲ ಎನ್ನುವುದು ಕಬೀರನ ದ್ವಿಪದಿಯ ಸಾರಾಂಶ.  ಕೆಲಸ ಯಾರದೋ ಆದರೂ ಹೆಸರು ತೆಗೆದುಕೊಳ್ಳುವವರು ಬೇರೆ ಎಂಬ ವಿಷಯವನ್ನು ನೀವು ಪ್ರತಿನಿತ್ಯ ನೋಡುತ್ತೀರಿ.  ಯಾರೋ ಕಷ್ಟ ಪಟ್ಟು ಬರೆದದ್ದನ್ನು ಅನಾಯಾಸವಾಗಿ ಕಾಪಿ ಮಾಡಿ ತಮ್ಮ ಹೆಸರು ಹಾಕಿಕೊಳ್ಳುವುದು ಈಗ ಬಹಳ ಸಾಧಾರಣವಾಗಿದೆ.  ಇದಕ್ಕೆ ಪ್ಲೇಜಿಯರಿಸಮ್ ಎಂಬ ಒಂದು ಇಸಂ ಪದವಿದೆ.   ಆಲೆಕ್ಸ್ ಹೇಯ್ಲಿ ಎಂಬ ಅಮೆರಿಕನ್ ಮೂಲದ ಲೇಖಕ ರೂಟ್ಸ್  ಎಂಬ ಕಾದಂಬರಿ ಬರೆದ. ಕಪ್ಪು ಅಮೆರಿಕನ್ ಜನರ ಬೇರುಗಳನ್ನು ಶೋಧಿಸುವ ಈ ಕಾದಂಬರಿಯ ಸಂಕ್ಷಿಪ್ತ ರೂಪ ಬಹಳ ಹಿಂದೆ ರೀಡರ್ಸ್ ಡೈಜೆಸ್ಟ್ ಪತ್ರಿಕೆ ಪ್ರಕಟಿಸಿತು. ಆಗ ಅದನ್ನು ಓದಿ ಈ ಜನಾಂಗದವರು ಒಳಗಾದ ಶೋಷಣೆ ಕುರಿತು ನನ್ನ ಕಣ್ಣು ತೆರೆಯಿತು. ಮುಂದೆ ಈ ಕಾದಂಬರಿಯಲ್ಲಿ ಹೆರಾಲ್ಡ್ ಕೊರ್ಲಾಂಡರ್ ಎಂಬ ಲೇಖಕನ ದ ಆಫ್ರಿಕನ್ ಕೃತಿಯಿಂದ ಭಾಗಗಳನ್ನು ಕದಿಯಲಾಗಿದೆ ಎಂಬ ಆಪಾದನೆ ಬಂತು.  ನ್ಯಾಯಾಂಗ ಕೇಸ್ ದಾಖಲಾಯಿತು.

ಹಕ್ಕಿ ಹಾಡುತಿದೆ ಕೇಳಿದಿರಾ!

ಇಮೇಜ್
"ಪಪೀಹಾ ರೇ ಪಿವ ಕೀ ಬಾಣೀ ನ ಬೋಲ್" ಎಂದು ಮೀರಾಬಾಯಿ ಹಕ್ಕಿಯನ್ನು ಕೇಳಿಕೊಂಡಳು. ಬೆದರಿಸಿದಳು ಎಂದರೂ ಸರಿ. ಏಕೆಂದರೆ ಅವಳು ಮುಂದುವರೆದು ನನ್ನ ಮಾತು ಕೇಳದಿದ್ದರೆ ನಿನ್ನ ಕೊಕ್ಕು ಕತ್ತರಿಸಿ ಕರಿ ಲವಣ ಉದುರಿಸುತ್ತೇನೆ ಎಂದು ಹೆದರಿಸುತ್ತಾಳೆ. ಅವಳು ಕೇಳಿದ್ದಾದರೂ ಏನು? ಪಪೀಹಾ ಎಂದರೆ ಪಕ್ಷಿಯ ಒಂದು ಜಾತಿ.  ಮಳೆಗಾಲಕ್ಕಾಗಿ ಕಾಯುವುದು ಮತ್ತು ಮಳೆಹನಿಗಾಗಿ ಪರಿತಪಿಸುವುದು ಅದರ ಜಾತಕದಲ್ಲಿ ಬ್ರಹ್ಮನೇ ಬರೆದಿರುವ ಕಾರಣ ಅದಕ್ಕೆ ಚಾತಕ ಪಕ್ಷಿ ಎಂದೇ ಹೆಸರು.  ಈ ಪಪೀಹಾ ಮಾಡುವ ಸದ್ದು ಚಿವ್ ಚೀವ್ ಎಂದೋ ಪೀವ್ ಪೀವ್ ಎಂದೋ ಹೇಳುವುದು ಕಷ್ಟ. ಮೀರಾಬಾಯಿಗೆ ಪೀವ್ ಪೀವ್ ಎಂದೇ ಕೇಳಿಸಿತು.  ಪೀವ್ ಎಂದರೆ ಪಿಯಾ ಅಥವಾ ಪ್ರಿಯಾ ಎಂಬುದರ ಗ್ರಾಮ್ಯ ರೂಪ.  ಪಪೀಹಾ ತನ್ನ ಪ್ರಿಯನನ್ನು ಕರೆದಾಗ ಮೀರಾಬಾಯಿಗೆ ತನ್ನ ಪ್ರಿಯನಾದ ಗಿರಿಧರನಾಗರನ ನೆನಪಾಗಿ ಪಕ್ಷಿಯ ಮೇಲೆ ಕೋಪ ಬರುವುದು ಸ್ವಲ್ಪ ಅಸಹಜ. ಆದರೂ ಏನೂ ಮಾಡುವಂತಿಲ್ಲ. ಪೊಯೆಟಿಕ್ ಲೈಸೆನ್ಸ್ ಎಂಬುದೊಂದು ಇದೆ ನೋಡಿ.    ಪಪೀಹಾ ಹಕ್ಕಿಯ ಕೂಗಿನಲ್ಲಿ ಅನೇಕರಿಗೆ ಪ್ರೇಮದ ಆರ್ತತೆ ಕೇಳಿದೆ. ಅದಕ್ಕೆ ಲವ್ ಬರ್ಡ್ ಎಂದೇ ಹೆಸರು ಕೊಟ್ಟಿದ್ದಾರೆ. ಆಲ್ಫ್ರೆಡ್ ಹಿಚ್ ಕಾಕ್ ಚಿತ್ರೀಕರಿಸಿದ ಬರ್ಡ್ಸ್ ಎಂಬ ಚಿತ್ರದಲ್ಲಿ ನಾಯಕಿಗೆ ನಾಯಕ ಪಂಜರದಲ್ಲಿರುವ ಲವ್ ಬರ್ಡ್ಸ್ ಉಡುಗೊರೆ ಕೊಡುತ್ತಾನೆ. ಕಥೆ ನಡೆಯುವುದು ಒಂದು ದ್ವೀಪದಲ್ಲಿ.  ಅದೇಕೋ ಒಮ್ಮೆಲೇ ದ್ವೀಪದ ಹಕ್ಕಿಗಳಿಗೆ ರಾಕ್ಷಸೀ ಗುಣ ಬಂದು ಅವು