ವಿಕಾಸ

ಸಿ. ಪಿ. ರವಿಕುಮಾರ್
Vidura


ಧೃತರಾಷ್ಟ್ರ ಕುರುಡನಾದರೂ
ತನ್ನ ಮಕ್ಕಳ ನಿಜವನ್ನು ನೋಡಲಾಗದಷ್ಟೇನಲ್ಲ.
ಆದರೂ ನೋಡದಂತೆ ಇದ್ದುಬಿಟ್ಟ.
ಹೆಂಡತಿಯಂತೆ ತಾನೂ
ಕಣ್ಣಿಗೆ ಕಟ್ಟಿಕೊಂಡ ಕಪ್ಪುವಸ್ತ್ರ.


ಸಭೆಯಲ್ಲಿ ದ್ರೌಪದಿಯು ಕೂಗಿದ್ದು
ಅವನಿಗೆ ಕೇಳಿಸಲಿಲ್ಲ ಎಂದೇನಲ್ಲ.
ಆದರೂ ಕೇಳಿಸದಂತೆ ಇದ್ದುಬಿಟ್ಟ.
ನುಡಿಸುತ್ತಾ ವೀಣೆ ಸುಮ್ಮನಿದ್ದುಬಿಟ್ಟ
ದುಶ್ಶಲೆಯ ಹಾಡನ್ನು ಕೇಳುತ್ತಾ.


ಆದರೂ ಧೃತರಾಷ್ಟ್ರನಲ್ಲಿ ಒಂದು ಗುಣವಿತ್ತು. 
ಬೇಕಿದ್ದರೆ ಪಾಂಡುವಿನ ಮಕ್ಕಳ ಮೇಲೆ
ಹೊರಿಸಬಹುದಾಗಿತ್ತು ಸುಳ್ಳು ಆರೋಪ.
ದ್ರೌಪದಿಯ ಶೀಲವನ್ನು ಕುರಿತು
ಮಾತಾಡಬಹುದಾಗಿತ್ತು ನೂರೆಂಟು ಪಾಪ.
ದ್ವಾಪರದಿಂದ ಕಲಿಯುಗಕ್ಕೆ ಇದೇ ವಿಕಾಸ.

(ಚಿತ್ರಕೃಪೆ - ವಿಕಿಪೀಡಿಯ)



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)