ಪೋಸ್ಟ್‌ಗಳು

ಫೆಬ್ರವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಡಲ ಕಿನಾರೆಯಲ್ಲಿ

ಇಮೇಜ್
 ಕಡಲ ಕಿನಾರೆಯಲ್ಲಿ ಮೂಲ: ರಾಬರ್ಟ್ ಲೂಯಿ ಸ್ಟೀವನ್ಸನ್ ಅನುವಾದ: ಸಿ ಪಿ ರವಿಕುಮಾರ್ ಕಡಲ ಕಿನಾರೆಗೆ ಹೋಗಿದ್ದೆ ನಾನು ಮರದ ಚುಚ್ಚುಕವನನ್ನು ಕೈಯಲ್ಲಿ ಹಿಡಿದು ಮರಳನ್ನು ಅಗೆದಗೆದು ತೆಗೆದೆ ಹೊರಗೆ. ಅಗೆದಲ್ಲಿ ಒಂದೊಂದು ಮರಳಿನ ಬಟ್ಟಲು, ಒಂದೊಂದರಲ್ಲೂ ಬಂದುಬಿಟ್ಟಿತು  ಕಡಲು, ಇನ್ನು ಬಾರಲು ಸಾಧ್ಯವಾಗದವರೆಗೆ.

ಕಾಫಿ ಬಂತು ಕಾಫಿ

ಇಮೇಜ್
ಮೂಲ: ಈ ಎಲ್ ಸಿಲ್ವೆಸ್ಟರ್ ಅನುವಾದ: ಸಿ ಪಿ ರವಿಕುಮಾರ್ ಪರಿಮಳ ತರುವಳು ಕಾಫಿಯ ಕಿತ್ತಲಿ, ಹೊಮ್ಮುವ ಬಿಸಿಬಿಸಿ ಕಾಫಿ ಹೊಗೆ! ತರುವಳು ಹರಿಣಿ ಹಾಲಿನ ಗಿಂಡಿ, ನಗುತಿದೆ ನೊರೆಹಾಲು ಮುಗುಳುನಗೆ! ಗಾಜಿನ ಬಟ್ಟಲು ತಂದಳು ಕಮಲಾ ನೋಡಿರಿ ಕಿಣಿ ಕಿಣಿ ಎನಿಸುತ್ತಾ! ಫಳ ಫಳ ಹೊಳೆಯುವ ಚಮಚದ ಗೊಂಚಲು ತಂದಳು ನೋಡಿ ಚಾರುಲತಾ! ಎಲ್ಲರಿಗಿಂತ ಕೊನೆಗೆ ಬಂದಿತು ನಮ್ಮ ಪುಟ್ಟಿ ತೂರಾಡುತ್ತಾ ಸಿಹಿಯಲ್ಲವೇ  ನೀನೆಲ್ಲರಿಗಿಂತ, ಸಕ್ಕರೆ ತಂದೆಯಾ, ಬಾ ಪುಟ್ಟಾ !

ಕುಂಭದ ಹಲವು ಮುಖಗಳು

ಇಮೇಜ್
ಕುಂಭದ ಹಲವು ಮುಖಗಳು ಸಿ ಪಿ ರವಿಕುಮಾರ್ ೧ ಪ್ರತಿದಿನವೂ ಓದುತ್ತಾರೆ  ಪ್ರತಿದಿನವೂ ನೋಡುತ್ತಾರೆ  ಕೋಟ್ಯಂತರ ಜನ. ಮುದುಡಿದೆ ಮನ ತಾವು ಹೋಗಲಾರದ ಮಹಾಕುಂಭಕ್ಕೆ ತುಡಿದು. ಕಟ್ಟಿ ಹಾಕಿದ್ದಾರೆ ಯಾರೋ ಕಂಭಕ್ಕೆ ಹಿಡಿದು ಎಂದು ನಿಡುಸುಯ್ಯುತ್ತಾರೆ ಹೇಗೆ ಹೋಗುವುದು ಅಲ್ಲಿಗೆ ದೂರದ ದಿಲ್ಲಿಗೆ ಇರಲು ಎಲ್ಲಿ ಸ್ಥಳ ಯೋಚಿಸಿ ವ್ಯಾಕುಲ ಹೋಗಲಾರದು ಮಹಾಕುಂಭಕ್ಕೆಂದು ಮಿಡಿದು. ಕಟ್ಟಿ ಹಾಕಿದ್ದಾರೆ ಯಾರೋ ಕಂಭಕ್ಕೆ ಹಿಡಿದು ಎಂದು ನಿಡುಸುಯ್ಯುತ್ತಾರೆ. ಪುಣ್ಯವಂತರು ಹೋಗಿ ಬಂದರು ಅಲ್ಲಿಂದ ಗಂಗೆ ತಂದರು ಪಾಪಿಗೆ ಇಷ್ಟೇ ಪ್ರಾಪ್ತಿ ಇಷ್ಟೇ ನಮ್ಮ ವ್ಯಾಪ್ತಿ ಶಿವರಾತ್ರಿ ಜಾಗರಣೆ ಉಪವಾಸ ಪಾರಣೆ ಡೊಂಕು ಮಣ್ಣು ನೆಲಕ್ಕೆ ಸಗಣಿ ಸಾರಣೆ ಎಂದು ಹತಾಶರಾಗುತ್ತಾರೆ. ೨ ಮೇಳಕ್ಕೆ ಬಂದಿಳಿದ ಜನ ಭದ್ರಮಾಡುತ್ತಾರೆ ಜೋಬಿನ ಧನ ಕಳೆದುಹೋಗುವ ಭಯ ಭದ್ರವಾಗಿ ಹಿಡಿದು ಕೈಯ ಮುಳುಗಿ ಏಳುತ್ತಾರೆ ಮೂಗು ಮುಚ್ಚಿಕೊಂಡು ಹಣೆಗೆ ವಿಭೂತಿ ಹಚ್ಚಿಕೊಂಡು ಗೆದ್ದೆವು ಎಂದು ಬೀಗುತ್ತಾರೆ ಇಲ್ಲಿ ನಿಲ್ಲಿ ಬಂದು ಹತ್ತಿರ ಸರಿಯಾಗಿ ಉಟ್ಟುಕೊಳ್ಳಿ ಧೋತರ ತೆಗೆಯುತ್ತೇನೆ ಚಿತ್ರ, ನಗಬೇಕು, ಹಾಗೇಕೆ ಗಂಭೀರವಾಗಿರಬೇಕು ಎಲ್ಲರಿಗೂ ಸಿಕ್ಕುವುದೇ ಇಂಥ ಮಹಾಪ್ರವಾಸ ವಿಮಾನದಲ್ಲಿ ಕೂತು ಹೀಗೆ ನಿರಾಯಾಸ ಎಂದು ಕ್ಯಾಮೆರಾದಲ್ಲಿ ಸೆರೆಯಾಗುತ್ತಾರೆ ಅಷ್ಟೆಲ್ಲಾ ಕೋಟಿ ಹಣ  ಗಳಿಸಿ ಏನು ಪ್ರಯೋಜನ ಅಮೇರಿಕಾದಲ್ಲಿ ಸಿಕ್ಕುವುದೇ ಮಹಾಕುಂಭ ಡಿಸ್ನಿ ಲ್ಯಾಂಡ್, ಲೇಕ್ ಟಾಹೋ ಅಂತೆಲ್ಲಾ ಜಂ...

ಹಳದಿ ಇಟ್ಟಿಗೆಗಳ ರಸ್ತೆ

ಇಮೇಜ್
ಹಳದಿ ಇಟ್ಟಿಗೆಗಳ ರಸ್ತೆ ಮೂಲ ಹಾಡು: ಬರ್ನಾರ್ಡ್ ಟಾಪಿನ್ ಮತ್ತು ಎಲ್ಟನ್ ಜಾನ್ ನೀನು ಬರುವುದು ಯಾವಾಗ? ಯಾವಾಗ ನೀನು ಬಂದಿಳಿಯುವುದು? ನಾನು ಹೊಲದಲ್ಲೇ ಇರಬೇಕಾಗಿತ್ತು ಅಪ್ಪನ ಮಾತು ಕೇಳಬೇಕಾಗಿತ್ತು ನೀನು ನನ್ನನ್ನು ಸದಾಕಾಲ ಹಿಡಿದಿಡಲಾರೆ ನಾನೇನೂ ನಿನಗೆ ಬರೆದುಕೊಟ್ಟಿಲ್ಲ  ನಿನ್ನ ಗೆಳೆಯರು ತೆರೆದು ನೋಡಲು ನಾನೊಂದು ಉಡುಗೊರೆಯಲ್ಲ ಈ ಹುಡುಗನದು ಶೋಕಗೀತೆ ಹಾಡುತ್ತಾ  ಕೂಡುವ ವಯಸ್ಸಲ್ಲ ಹೀಗಾಗಿ ಇದೋ ವಿದಾಯ ಹಳದಿ ಇಟ್ಟಿಗೆ ರಸ್ತೆಗೆ ಎಲ್ಲಿ ಸಮಾಜದ ನಾಯಿಗಳು ಊಳಿಡುತ್ತವೋ ಅಲ್ಲಿಗೆ ನೀನು ಪೆಂಟ್ ಹೌಸಿನಲ್ಲಿ ನನ್ನನ್ನು ನೆಡಲಾರೆ ಇಗೋ ಮರಳುತ್ತಿರುವೆ ನನ್ನ ನೇಗಿಲಿಗೆ. ಮರಳುತ್ತಿರುವೆ ನಾನು ಗೂಬೆಗಳ ಗುಟುರಿಗೆ ಮರಳುತ್ತಿರುವೆ ನಾನು ಕಪ್ಪೆಗಳ ವಟರಿಗೆ  ಹಳದಿ ಇಟ್ಟಿಗೆಗಳ ರಸ್ತೆಗಳ ಆಚೆಗಿದೆ  ನನ್ನ ಭವಿಷ್ಯವೆಂದು ನಾನು ನಿರ್ಧರಿಸಿರುವೆ. ನೀನು ಏನು ಮಾಡಬಹುದೆಂದು ಯೋಚಿಸುತ್ತೇನೆ. ವಿಮಾನವನ್ನು ಹೊಡೆದು ಉರುಳಿಸುತ್ತೀಯ ತಾನೇ? ಒಂದೆರಡು ಪೆಗ್ ವೋಡ್ಕಾ ಮತ್ತು ಟಾನಿಕ್  ಮತ್ತೆ ಮೇಲೆದ್ದು ನಿಲ್ಲಲು ನಿನಗೆ ಇಷ್ಟು ಸಾಕು ನನ್ನ ಬದಲಿಗೆ ಹಾಕಿಕೊಳ್ಳುವೆ ಯಾರನ್ನೋ ಬೇರೆ ನನ್ನಂಥವರು ಬೇಕಾದಷ್ಟು ಜನ ಸಿಕ್ಕುತ್ತಾರೆ ಬಿಡಿಗಾಸಿಗೂ ಗತಿ ಇಲ್ಲದ ಬೀದಿನಾಯಿಗಳು ನೆಲದ ಮೇಲೆ ಬಿದ್ದ ನಿನ್ನಂಥ ಚೂರುಪಾರನ್ನು ಹುಡುಕುವವರು ಹೀಗಾಗಿ ಇದೋ ವಿದಾಯ ಹಳದಿ ಇಟ್ಟಿಗೆ ರಸ್ತೆಗೆ ಎಲ್ಲಿ ಸಮಾಜದ ನಾಯಿಗಳು ಊಳಿಡುತ್ತವೋ ಅಲ್ಲಿಗೆ...

ಗ್ರಂಥಾಲಯ

 ಗ್ರಂಥಾಲಯ ಮೂಲ ಕವಿತೆ: ಆಲ್ವಿ ಗ್ಯಾಲಘರ್ ಅನುವಾದ: ಸಿ ಪಿ ರವಿಕುಮಾರ್ ಅವಳು ನಮ್ಮನ್ನು ಇಲ್ಲೇಕೆ ಕರೆತರುತ್ತಿದ್ದಳೋ ಪ್ರತಿದಿನ ಅಷ್ಟೊಂದು ಆಸ್ಥೆಯಿಂದ. ಅವಳಾಗ ಯುವತಿ, ಸಮಾಜದಲ್ಲಿ ಹಿಂದೆ ಬಿದ್ದವಳು, ಆದರೆ ನಾವು ಬದುಕುತ್ತಿದ್ದ ಬದುಕಿಗಿಂತಲೂ ಭಿನ್ನವಾದ ಬದುಕಿನ ವಿವರಗಳು ಈ ಪುಸ್ತಕಗಳಲ್ಲಿ ಇದ್ದವೆಂದು ಅವಳಿಗೆ ತಿಳಿದಿತ್ತು.  ತಪ್ಪಿಸಿಕೊಳ್ಳುವ ಮಾರ್ಗ ತೋರುವುದು ಮಾತ್ರ ಕೆಲವರಿಂದ ಸಾಧ್ಯವೇನೋ. ಹಾಗೂ ಅಷ್ಟು ಸಾಕೆಂಬ ತಿಳಿವಳಿಕೆಯೇ ಕ್ಷಮೆಯೇನೋ. ನೋಡಿ, ನಾನು ಮೂವತ್ತು ವರ್ಷ ಓದಿ ಇಲ್ಲಿಗೆ ತಲುಪಿರುವೆ. ಪುಸ್ತಕಗಳಿಂದ ಕಟ್ಟಿಕೊಂಡ ಬದುಕು. ನನ್ನನ್ನು ನಾನು ಒಳಗಿನಿಂದ ತಳಕಂಪಳಕ ಮಾಡಿಕೊಂಡೆ. ಹಾಗಂತ  ಯಾರೂ ಸಾಯಲಿಲ್ಲ. ಯಾರ ಬೆರಳಿಗೂ ಚುಚ್ಚಿದ ಗಾಯ ಆಗಲಿಲ್ಲ. ಇದನ್ನು ಕಲ್ಪಿಸಿಕೊಳ್ಳಿ. ಹಿಂದೊಮ್ಮೆ ನನಗೆ ಮಾತಾಡಲು ಆಗುವುದೋ ಇಲ್ಲವೋ ಎಂಬ ಆತಂಕದಲ್ಲಿ ನಾನು ಇರುತ್ತಿದ್ದೆ. ನಾನು ಹೇಳಿದ್ದಕ್ಕೂ  ಬೇರೆಯವರು ಕೇಳಿದ್ದಕ್ಕೂ ನಡುವೆ ಇರುತ್ತಿತ್ತು ಒಂದು ಗೋಡೆ. ಕಾಗದಕ್ಕೆ ಲೇಖನಿ ಹಚ್ಚುವ ತನಕ ಆಗುತ್ತಲೇ ಇರಲಿಲ್ಲ ನನ್ನ ಕೈಯಲ್ಲಿ ಅನುವಾದ ಕಾರ್ಯ. ಆಗ ಎದುರಾಗಿದ್ದು ನನ್ನ ತಾಯಿನುಡಿ. ನಾನು ನನ್ನ ಜೀವವನ್ನು ಕೆಳಗಿಟ್ಟು ಹೊದ್ದಿಕೆಗಳ ಕೆಳಗೆ ನಡೆದು ಸಾಗಿದೆ ಇನ್ನೊಂದರ ಕಡೆಗೆ.

ಬರವಣಿಗೆ

 ಮೂಲ: ಕ್ರಿಸ್ಟೊಫರ್ ಸೆಕ್ಸ್ಟನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಬರವಣಿಗೆ ಎಂದರೆ ಸಾಮಾನ್ಯವೆಂದು ತಿಳಿಯದಿರಿ ಅದು ಚರ್ಮವನ್ನು ಸ್ಪರ್ಶಿಸದೇ ಅಪರಿಚಿತನ ಆತ್ಮವನ್ನು ಚುಂಬಿಸುವ ಪರಿ, ಎಂದೂ ಸಂಧಿಸದ ಹೃದಯಗಳ ಮೇಲೆ ಹೆಜ್ಜೆ ಗುರುತುಗಳನ್ನು ಮೂಡಿಸುವ ಕಲೆ, ಜಗತ್ತಿನ ಬಿರುಕುಗಳಲ್ಲಿ ಇಣುಕಿ  "ನೀನು ಒಬ್ಬಂಟಿಯಲ್ಲ" ಎಂದು ಪಿಸುಗುಟ್ಟು ಎಲ್ಲೋ ಯಾರೋ ಒಬ್ಬರು ಅದರ ಪ್ರತಿಧ್ವನಿ ಕೇಳಿಸಿಕೊಳ್ಳುವರೆಂಬ ವಿಶ್ವಾಸ.

ವ್ಯೋಮದಲ್ಲೊಂದು ಹಾಡು

ಇಮೇಜ್
 ವ್ಯೋಮದಲ್ಲೊಂದು ಹಾಡು ಮೂಲ:  ಏಡ್ರಿಯನ್ ಮಿಚೆಲ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಮಾನವನು ಹಾರಿ ಆಕಾಶದಾಚೆಗೆ ಹೋದ ಘಳಿಗೆ ಹಿಂತಿರುಗಿ ನೋಡಿದನು ಭೂಮಿಯ ನೀಲ ಕಣ್ಣೊಳಗೆ ನಿನ್ನ ಕಣ್ಣುಗಳೇಕೆ ಕಡುನೀಲಿ ಎಂದು ಕೇಳಲು ಉತ್ತರ ಬಂತು: ಕಣ್ಣೀರು ತುಂಬಿರುವ ಕಡಲು  ಕಡಲಿನಲ್ಲಿ ಏಕಿದೆ ಅಷ್ಟೊಂದು ಕಣ್ಣೀರು? ನಾನು ಅತ್ತಿದ್ದೇನೆ ಸಂವತ್ಸರ ಸಹಸ್ರಾರು. ವ್ಯೋಮದಲ್ಲಿ ಸಾಗುತ್ತಾ ಏಕೆ ಕಣ್ಣೀರು ಹಾಕುವೆ? ಏಕೆಂದರೆ ನಾನು ಮಾನವಕುಲಕ್ಕೆ ತಾಯಾಗಿರುವೆ.

ಬೇಕಾದಷ್ಟು

ಇಮೇಜ್
 ಬೇಕಾದಷ್ಟು ಮೂಲ: ಏಮಿ ಶ್ಮಿಟ್  ಅನುವಾದ: ಸಿ ಪಿ ರವಿಕುಮಾರ್ ಕೇಕ್ ತಯಾರಿಸಲು ಕಿತ್ತಳೆಯನ್ನು ಹೆರೆಯುವಾಗ ಒಂಟಿತನ ಬಾಧಿಸುವುದು ಸಾಧ್ಯವಿಲ್ಲ ಯಾರನ್ನೂ. ಮೆತ್ತನೆಯ ಸಿಪ್ಪೆಯನ್ನು ಉಜ್ಜಿದಾಗ ಮಣೆಗೆ  ಇಡೀ ಕೋಣೆಯನ್ನು ತುಂಬಿಕೊಳ್ಳುವುದು ಹಣ್ಣು. ಸುತ್ತಲೂ ಒಮ್ಮೆ ನೋಡಿಕೊಳ್ಳಿ: ಅಗತ್ಯಕ್ಕಿಂತಲೂ ಹೆಚ್ಚೇ ಇದೆ ನಿಮ್ಮಲ್ಲಿ ಎಲ್ಲಾ. ಅದು ಸದಾಕಾಲವೂ ಹಾಗೇ ಇತ್ತು, ಇದುವರೆಗೂ ಮನವರಿಕೆ ಆಗಿರಲಿಲ್ಲ.

ಆಮ್ಹರ್ಸ್ಟ್ ೧೯೧೮

 ಆಮ್ಹರ್ಸ್ಟ್ ೧೯೧೮ ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ನನ್ನ ಮುಖದ ಮೇಲೆ ಇಂದು ಧೂಳಿನ ಸಿಂಚನ ಆಗುವ ಕ್ಷಣದಲ್ಲಿ ಕಂಡಿತು ನನಗೊಂದು ಸ್ವಪ್ನ. ಮರುಕಳಿಸಿದ ಕನಸಿನಲ್ಲಿ ನಾನು ಕಂಡದ್ದು ಏನು - ಬಾಲಕನಾಗಿದ್ದೆ, ಆಟದಲ್ಲಿ ತೊಡಗಿದ್ದೆ ನಾನು. ವಿಚಿತ್ರವೆಂದರೆ ಅಂದಿಗಿಂತ ಹೆಚ್ಚೇನೂ ದುಃಖಿಯಾಗಿರುವಂತೆ ತೋರಲಿಲ್ಲ ನಾನು - ಎಲ್ಲವೂ ಯಥಾಪ್ರಕಾರ - ನಾನು  ದಾರಿಯಲ್ಲಿ ಸಾಕಷ್ಟು ಮುಂದೆ ಬಂದಿದ್ದೇನೆ ಆದರೂ  ಅದೇ ಕನಸು ಪುನರಾವರ್ತನೆ.

ತುದಿಗಾಲಿನ ಮೇಲೆ ನಿಂತವನು

ಇಮೇಜ್
  ತುದಿಗಾಲಿನ ಮೇಲೆ ನಿಂತವನು ಭದ್ರವಾಗಿ ನಿಲ್ಲಲಾರ ರಭಸದಲ್ಲಿ ಮುನ್ನುಗ್ಗುವವನು  ಹೋಗಲಾರ ಹೆಚ್ಚು ದೂರ ಮಂದಗೊಳಿಸುವನು ತನ್ನದೇ ಪ್ರಭೆಯನ್ನು  ಹೊಳೆಯಲು ಪ್ರಯತ್ನಿಸಿದವನು ತನ್ನ ನೈಜ ಸ್ವರೂಪವನ್ನು ಅರಿಯಲಾರ  ತನ್ನನ್ನೇ ಬಣ್ಣಿಸುವವನು ಪರರ ಮೇಲೆ ಅಧಿಕಾರ ಹೊಂದಿದವನು ತನ್ನ ಮೇಲೆ ನಿಯಂತ್ರಣ ಸಾಧಿಸಲಾರ ತನ್ನ ಕೆಲಸಕ್ಕೆ ಸದಾ ಅಂಟಿಕೊಂಡವನು ಬಾಳಬಲ್ಲ ಏನನ್ನೂ ಸೃಷ್ಟಿಸಲಾರ ಡಾವೋದೊಂದಿಗೆ ಸಾಧಿಸಬೇಕೆಂದರೆ ಸಾಮರಸ್ಯ ಸುಮ್ಮನೆ ನಿನ್ನ ಕೆಲಸ ಮಾಡಿ ಬಿಟ್ಟುಬಿಡೋ ಮನುಷ್ಯ. ಮೂಲ: ಲಾವೋ ತ್ಸು  ಅನುವಾದ: ಸಿ ಪಿ ರವಿಕುಮಾರ್

ಚಿನ್ನ

ಇಮೇಜ್
 ಚಿನ್ನ ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ನಿಸರ್ಗದ ಮೊದಲ ಹಸಿರು ಹೊಂಬಣ್ಣದ್ದು, ಹಿಡಿದಿಡಲು ಅವಳಿಗೆ ಅತ್ಯಂತ ಕಷ್ಟದ ಬಣ್ಣ. ಅವಳ ಮೊದಲ ಚಿಗುರೆಲೆಯೊಂದು ಪುಷ್ಪ, ಆದರೆ ಒಂದು ಗಂಟೆಯ ಕಾಲ ಮಾತ್ರ. ಅನಂತರ ಎಲೆಯು ಎಲೆಯಾಗಿಬಿಡುವುದು ಹಾಗೇ ಈಡನ್ ದುಃಖದಲ್ಲಿ ಮುಳುಗುವುದು ಹಾಗೇ ನಸುಕು ದಿವಸದಲ್ಲಿ ಕರಗುವುದು ಚಿನ್ನದ ಯಾವುದೂ ಸದಾ ಚಿನ್ನವಾಗಿರದು.

ಗಡಿಯಾರದವನು

ಇಮೇಜ್
 ಗಡಿಯಾರದವನು ಮೂಲ: ಶೆಲ್ ಸಿಲ್ವರ್ಸ್ಟೀನ್ ಅನುವಾದ: ಸಿ ಪಿ ರವಿಕುಮಾರ್ ಕೇಳಿದನು ಮಗುವನ್ನು ಗಡಿಯಾರದವನು, ಹೆಚ್ಚುವರಿ ಒಂದು ದಿನಕ್ಕೆಷ್ಟು ಬೆಲೆ ಕೊಡುವೆ? "ಕೊಡುವುದಿಲ್ಲ ಒಂದೂ ಕಾಸು!" ಉತ್ತರಿಸಿತು ಮಗು "ಮುಗುಳ್ನಗುಗಳಿದ್ದಷ್ಟು ನನ್ನಲ್ಲಿ ದಿನಗಳಿವೆ!" ಮಗು ಯುವಕನಾದಾಗ ಗಡಿಯಾರದವ ಕೇಳಿದನು, ಹೆಚ್ಚುವರಿ ಒಂದು ದಿನಕ್ಕೆಷ್ಟು ಬೆಲೆ ಕೊಡುವೆ? "ಒಂದು ರೂಪಾಯಿ ಕೊಡಬಲ್ಲೆ, ಹೆಚ್ಚೆಂದರೆ ಎರಡು! ಏಕೆಂದರೆ ನನ್ನವೇ ಬೇಕಾದಷ್ಟು ದಿನಗಳಿವೆ!" ಸಾಯುವ ಘಳಿಗೆಯಲ್ಲಿ ಗಡಿಯಾರದವ ಕೇಳಿದನು, ಹೆಚ್ಚುವರಿ ಒಂದು ದಿನಕ್ಕೆಷ್ಟು ಬೆಲೆ ಕೊಡುವೆ? "ಸಪ್ತಸಾಗರದ ಎಲ್ಲಾ ಮುತ್ತುಗಳನ್ನೂ ಕೊಟ್ಟು ಕೊಡುವೆ ಆಗಸದಲ್ಲಿರುವ ಸಕಲ ತಾರೆ."

ಹೆಚ್ಚು ಪ್ರೀತಿಸುವ ವ್ಯಕ್ತಿ

ಇಮೇಜ್
ಮೂಲ: ಡಬ್ಲ್ಯು ಎಚ್ ಆಡೆನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್  ಕತ್ತೆತ್ತಿ ನೋಡುವಾಗ ನಕ್ಷತ್ರಗಳತ್ತ ನನಗೆ ಒಳಗೊಳಗೇ ಗೊತ್ತು ಅವಕ್ಕೇನೂ ದರದಿಲ್ಲ ನಾನು ನರಕಕ್ಕೆ ಹೋದರೂ ಸತ್ತು  ಭೂಮಿಯ ಮೇಲೆ ಹಾಗಲ್ಲ, ಉಪೇಕ್ಷೆಯು ಅಲ್ಲವೇ ಅಲ್ಲ ಮನುಷ್ಯ ಅಥವಾ ಮೃಗಗಳಿಂದ ನಮಗೆ ಸಿಕ್ಕಬಲ್ಲ ಅತ್ಯಂತ ಕೆಟ್ಟ ವಸ್ತು ಹೇಗಿರುತ್ತಿತ್ತು ನಮ್ಮಲ್ಲಿ ಅನುರಕ್ತಗೊಂಡು ಸುಡುತ್ತಿದ್ದರೆ ನಕ್ಷತ್ರ? ಅವುಗಳ ಭಾವತೀವ್ರತೆಗೆ ಸಮವಾಗಿ ಸ್ಪಂದಿಸಲು ನಮಗೆ ಆಗತ್ತಾ? ಪ್ರೀತಿಯ ತಕ್ಕಡಿಯು ಸಮವಾಗಿಲ್ಲದೇ ಇದ್ದ ಪಕ್ಷ  ನಾನೇ ವಾಲುವುದು ಮೇಲು ಹೆಚ್ಚು ಪ್ರೀತಿಸುವತ್ತ ತಾರೆಗಳ ಅಭಿಮಾನಿ ನಾನೆಂಬುದು ನಿಜವೇ ಆದರೂ ನನಗಾಗಿ ಕ್ಯಾರೇ ಅನ್ನುವುದಿಲ್ಲ ಅವುಗಳಲ್ಲಿ ಯಾರೂ ಈಗ ಅವುಗಳ ಕಡೆಗೆ ನೋಡುತ್ತಾ  ಮನದಟ್ಟಾಗುತ್ತಿದೆ ನನಗೂ  ಬೆಳಗಿಂದ ಅಷ್ಟೇನೂ ಕಾಡಿಲ್ಲ ಅವುಗಳ ಅನುಪಸ್ಥಿತಿ ನನ್ನನ್ನು. ತಾರೆಗಳೆಲ್ಲಾ ಒಣಗಿ ಉದುರಿಹೋದರೆ ಒಂದು ಪಕ್ಷ ಕಲಿಯಬಲ್ಲೆ ನೋಡುತ್ತಾ ನಿಲ್ಲುವುದು ಶೂನ್ಯ ಅಂತರಿಕ್ಷ ಅನುಭವಿಸಲು ಕಲಿಯಬಲ್ಲೆ ಅದರ ಭವ್ಯ ಅಂಧಕಾರ ಸ್ವಲ್ಪ ಕಷ್ಟವಾದೀತು, ಆದರೂ ಕಲಿಯಬಲ್ಲೆ, ಖಚಿತ.