ಪೋಸ್ಟ್‌ಗಳು

ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೃತಕ ಬುದ್ಧಿಮತ್ತೆ ಬಳಸಿ ಲೇಖನ ಬರೆದ ವಿದ್ಯಾರ್ಥಿಗೆ

 ಕೃತಕ ಬುದ್ಧಿಮತ್ತೆ ಬಳಸಿ ಲೇಖನ ಬರೆದ ವಿದ್ಯಾರ್ಥಿಗೆ ಮೂಲ: ಜೋಸೆಫ್ ಫಸಾನೋ ಅನುವಾದ: ಸಿ ಪಿ ರವಿಕುಮಾರ್ ಇಗೋ ನಿನಗೆ ವಾಪಸು ಕಳಿಸುತ್ತಿರುವೆ ನಿನ್ನ ಲೇಖನ. ನನಗೆ ಕೇಳಿಸುತ್ತಿದೆ ನಿನ್ನ ಒದ್ದಾಟ. ಜೀವನ ನಿನಗೆ ಬಹಳ ಕಷ್ಟವಾಗಿರಬೇಕು. ಅಮೂಲ್ಯವಾಗಿದೆ ನಿನಗೆ ಭೂಮಿಯ ಮೇಲಿನ ಒಂದೊಂದೂ ಕ್ಷಣ. ಆದರೆ ನಿನಗೆ ಮುಕ್ತಿ ಬೇಕಾಗಿರುವುದು  ಯಾವುದರಿಂದ ಹೇಳು.  ಜೀವಿಸುವುದರಿಂದಲೇ? ಬದುಕೆಂಬ ಪವಾಡದಿಂದಲೇ? ನೆನಪಿಡು. ಯಾರು ಕೆಲಸವನ್ನು ಪ್ರೀತಿಸುತ್ತಾರೋ ಅವರು ಮಾತ್ರ ಪ್ರೀತಿಗೆ ಅರ್ಹರು.

ಆಂಟಿ ಕಾಗೆ

ಇಮೇಜ್
 ಆಂಟಿ ಕಾಗೆ ಸಿ. ಪಿ. ರವಿಕುಮಾರ್ ಕಾಗಕ್ಕ ಕಾಗಕ್ಕ, ಏನು ತಿನ್ನುತ್ತಿರುವೆ ಕಾಣುತ್ತಿಲ್ಲವೇ, ಕೆಂಪಿರುವೆ. ಕೆಂಪಿರುವೆ ತಿನ್ನುತ್ತಿರುವೆ ಏತಕ್ಕೆ? ಮೈಯಲ್ಲಿ ಹುಷಾರಿಲ್ಲ ಅದಕ್ಕೇ. ಕೆಂಪಿರುವೆ ಏನು ನಿನಗೆ ಔಷಧವೆ?  ನಮಗೆ "ಆಂಟ್" ಇ ಬಯಾಟಿಕ್ ಇದುವೆ. ಏನೋ ತುಂಬಾ ರಹಸ್ಯಮಯವಾಗಿದೆಯಲ್ಲ! ರಹಸ್ಯ: ಇರುವೆಯಲ್ಲಿರುವ ಫಾರ್ಮಿಕ್ ಆಮ್ಲ. ಏನಾಗುತ್ತದೆ ಆಮ್ಲ ಸೇರಿದರೆ ಹೊಟ್ಟೆಯೊಳಗೆ? ಕ್ರಿಮಿ ನಾಶವಾಗಿ ನನಗೆ ಪುನಃ ಚೇತರಿಕೆ. ಕಾಗಕ್ಕ "ಆಂಟಿ" ಅನ್ನಬಹುದೇ ನಿನಗೆ? ನಿನ್ನ ಜೋಕಿಗೆ ನಗು ಬರಲಿಲ್ಲ ನನಗೆ. (ಚಿತ್ರ ಮತ್ತು ಮಾಹಿತಿ ಎರಡೂ ಫೇಸ್ಬುಕ್ ಕೃಪೆ. ಇದನ್ನು ಪುಟ್ಟ ಮಕ್ಕಳಿಗೆ ಹೇಳಿಕೊಡಬಹುದು. ಐದು ನಿಮಿಷದ ನಾಟಕ ಕೂಡಾ ಮಾಡಬಹುದು.)

ನಮ್ಮ ಮಕ್ಕಳು

ನಮ್ಮ ಮಕ್ಕಳು ಮೂಲ: ನಿಕೊಲೆಟ್ ಸೌಡರ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಹೇಗಿರಲಿ ನಮ್ಮ ಮಕ್ಕಳ ಪಾಲನೆ  ಅಂದರೆ ಅವರು ಪ್ರೀತಿಸಲಿ ಯಾರೂ ಪ್ರೀತಿಸದ ವಸ್ತುಗಳನ್ನು ಕೂಡಾ. ಉದಾಹರಣೆಗೆ ಕಾಡು ಸೇವಂತಿಗೆ ಹೂವುಗಳು, ಹರಿದಾಡುವ ಹುಳಹುಪ್ಪಟೆ ಮತ್ತು ಜೇಡ. ಅವರಿಗಿರಲಿ ಗುಲಾಬಿಗೆ ಮುಳ್ಳಿನ ಅಗತ್ಯವಿದೆ ಎಂಬ ಪರಿಜ್ಞಾನ, ಮಳೆಗಾಲದ ದಿನಗಳನ್ನೂ ಬೇಸಗೆಯ ದಿನಗಳಷ್ಟೇ ಆನಂದದಿಂದ ಸ್ವೀಕರಿಸುವ ಸ್ವಭಾವ. ಬೆಳೆದು ದೊಡ್ದವರಾದ ನಂತರ  ಬಂದಾಗ ಒಂದು ದಿನ ಧ್ವನಿ ಇಲ್ಲದವರ ಪರವಾಗಿ ಮಾರಾಡುವ ಸರದಿ ಬರಲಿ ಅವರಿಗೆ ಎಳೆಯ ವಸ್ತುಗಳನ್ನು  ಕಾಪಾಡಿದ ನೆನಪು ಮತ್ತು ಮಾತಾಡಲು ತಾವೇ ತೆರೆಯಲಿ ತುಟಿ.

ಹಕ್ಕುಗಳು

 ಹಕ್ಕುಗಳು  ಮೂಲ: ನಿಕ್ಕಿ ಜಿಯೋವನಿ ಕನ್ನಡಕ್ಕೆ: ಸಿ ಪಿ ರವಿಕುಮಾರ್ ನಾನೊಂದು ಜೇಡವನ್ನು ಕೊಂದುಹಾಕಿದೆ. ಅದೇನೂ ಕಂದುಬಣ್ಣದ ವಿಷಮಯ ಜೇಡವಾಗಿರಲಿಲ್ಲ ಅಥವಾ ಕಪ್ಪು ಬಣ್ಣದ ಬ್ಲಾಕ್ ವಿಡೋ ಕೂಡಾ ಆಗಿರಲಿಲ್ಲ. ನಿಜ ಹೇಳಬೇಕೆಂದರೆ ಅದೊಂದು  ಯಕಶ್ಚಿತ್  ಕಾಗದದಂಥ ಜೇಡವಾಗಿತ್ತು. ನಾನು ಕೈಯಲ್ಲಿ ಪುಸ್ತಕ ಎತ್ತಿಕೊಂಡಾಗ ಅದು ಓಡಿಹೋಗಬೇಕಾಗಿತ್ತು. ಹಾಗೆ ಅವಳು ಓಡಲಿಲ್ಲ  ಹೀಗಾಗಿ ನನಗೆ ಗಾಬರಿಯಾಗಿ ಅವಳನ್ನು ಅಪ್ಪಚ್ಚಿ ಮಾಡಿದೆ. ನನಗೆ ಭಯವಾಯ್ತೆಂದು ಜೀವಿಯೊಂದನ್ನು ಹೊಸಕಿ ಹಾಕುವ ಹಕ್ಕು ನನಗಿಲ್ಲ ಎಂದು ತೋರುತ್ತದೆ.

ಹಿಂದೆ ಬಂದರೆ ಹಾಯಬೇಡಿ

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ  ಅಂತೆಲ್ಲಾ ಹಾಡುಗಳು ಪ್ರಸಾರವಾಗುತ್ತಿದ್ದವು ಹಿಂದೆ. ಅದನ್ನೆಲ್ಲ ಕೇಳಿ ಜನರಿಗೆ  ಮುಂದೆ ಹೋಗೋಣ ಅನ್ನಿಸುತ್ತಿತ್ತು.  ಬಹಳ ಜನರಿಗೆ ಸಿನಿಮಾದಲ್ಲಿ ಮುಂದಿನ ಸೀಟ್  ಆಪ್ಯಾಯವಾಗಿತ್ತು. ಉಳಿದ ದುಡ್ಡಿನಲ್ಲಿ ಗಾಂಧಿಯಂತೆ ಕಳ್ಳೇಕಾಯಿ  ತಿನ್ನಬಹುದಾಗಿತ್ತು. ಬಸ್ಸುಗಳಲ್ಲಿ ತುಂಬಿರುತ್ತಿದ್ದರು ಜನ ಗಿಜಿಗಿಜಿ. ಕಂಡಕ್ಟರ್  ರೇಗುತ್ತಿದ್ದ ಮುಂದೆ ಹೋಗ್ರೀ! ಅವನಿಗೂ ಇತ್ತು ನೀವು ಮುಂದೆ ಬರಬೇಕೆಂಬ ಕಾಳಜಿ. ಈಗ ಮುಂದೆ ಬರಲು ಹಿಂದೇಟು. ಮಕ್ಕಳು ಹಿಡಿಯುತ್ತಾರೆ ಹಿಂದಿನ ಸೀಟು. ಹಿಂದಿದ್ದವರಿಗೆ ಕಾಣುತ್ತಿದೆ ಗಿಲೀಟು. ದಾಟಲು ಹೆದರುತ್ತಿದ್ದಾರೆ ಗೀಟು. ಹಿಂದಿದ್ದುಕೊಂಡು ಮುಂದೆ ಬಂದವರು ಮಾಡಿಕೊಳ್ಳುತ್ತಿದ್ದಾರೆ ತಮ್ಮ ಮಕ್ಕಳಿಗೂ  ಮೊಮ್ಮಕ್ಕಳಿಗೂ  ಮರಿಮಕ್ಕಳಿಗೂ ಹಿಂದಿನ ಸೀಟು ಪರ್ಮನೆಂಟು. ಸಿ ಪಿ ರವಿಕುಮಾರ್

ಶೋಧ

ಇಮೇಜ್
 ಶೋಧ  ಮೂಲ: ವ್ಯಾಲೆರಿ  ವೇಟ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಕಾಣೆಯಾದಳು ಅಜ್ಜಿ ಕಂಪ್ಯೂಟರ್ ಒಳಗೆ ಸುಳ್ಳು ಹೇಳುತ್ತೇನಾ ನಿಜವಾಗಿ, ನನ್ನಾಣೆ, ಕಂಟ್ರೋಲ್ ಎಂಟರ್ ಒತ್ತಿದಳು ನೋಡಿ ಒಮ್ಮೆಲೇ ಕಣ್ನೋಟಕ್ಕೆ ಆಗಿಬಿಟ್ಟಳು ಕಾಣೆ ನುಂಗಿಬಿಟ್ಟಿತು ಇಡಿಇಡಿಯಾಗಿ ಸಂಪೂರ್ಣ ನೆನೆಸಿಕೊಂಡರೆ ಈಗಲೂ ಮೈಯಲ್ಲಿ ನಡುಕ ಅಂಟಿಕೊಂಡಿರಬಹುದು ಒಳಗಿರುವ ವೈರಸ್ ಅಥವಾ ವರ್ಮ್ ಯಾವುದಾದರು, ಕೆಡುಕ ಹುಡುಕಿ ನೋಡಿದೆ ರೀಸೈಕಲ್ ಬಿನ್ ಒಳಗೆ ಮತ್ತು ಜಾಲಾಡಿದೆ ಎಲ್ಲಾ ಬಗೆಯ ಕಡತ ಇಂಟರ್ ನೆಟ್ ಕೂಡಾ ಬಳಸಿ ನೋಡಿದ್ದೇನೆ ಕಣ್ಣಿಗೆ ಬೀಳಲಿಲ್ಲ, ಬರೀ ನಿರರ್ಥಕ ದುಡಿತ. ವಿಹ್ವಲ ಸ್ಥಿತಿಯಲ್ಲಿ ನೆನಪಾದನು ಜೀವ್ಸ್  ಇಮೇಲ್ ಕಳಿಸಿದೆ ತಕ್ಷಣ : ಹೇಳು ಮಹರಾಯ ಹೇಗೆ ಶೋಧಿಸಿದರೆ ಸಿಕ್ಕಬಹುದೆಂದು ಆದರೆ ಅವನೂ ತಲೆ ಕೊಡವಿದನು, ಏನು ಅನ್ಯಾಯ ಆನ್ಲೈನ್ ಎಲ್ಲೂ ಕಾಣುತ್ತಿಲ್ಲವೆ? ಹಾಗಾದರೆ  ನೋಡು ಇನ್ ಬಾಕ್ಸ್ ಒಳಗೆ ಇರುವಳೇ ಅಜ್ಜಿ ಕಂಡರೆ ಕಂಟ್ರೋಲ್ ಸಿ ಕಂಟ್ರೋಲ್ ವಿ ಮಾಡಿ  ಕಳಿಸಿಬಿಡು ಮಾರೋಲೆ  ಆಟಾಚ್ಮೆಂಟ್ ಹಚ್ಚಿ.

ಬೆರಳೆಣಿಕೆಯಷ್ಟು

ಇಮೇಜ್
 ಬೆರಳೆಣಿಕೆಯಷ್ಟು ಮೂಲ: ಎಡ್ಗರ್ ಆಲ್ಬರ್ಟ್ ಗೆಸ್ಟ್  ಕನ್ನಡ ಅನುವಾದ : ಸಿ ಪಿ ರವಿಕುಮಾರ್  ಕಿಕ್ಕಿರಿದಿವೆ ಸುಲಭಮಾರ್ಗಗಳೆಲ್ಲ ಸಾಫಾದ ದಾರಿಗಳು ಜನನಿಬಿಡವಾಗಿವೆ ಆಳವಿಲ್ಲದ ಸಣ್ಣಪುಟ್ಟತೊರೆಗಳೆಲ್ಲ  ಕೊಡಮಡಕೆಕುಡಿಕೆ ತುಂಬಿ ಬಡವಾಗಿವೆ  ದೂರದಲ್ಲಿದೆಯಲ್ಲ ಕಲ್ಲು ಬಂಡೆಯದಾರಿ ಏರಿದರೆ ಕಾಣುವುದಲ್ಲ ದೂರದೂರದ ನೋಟ ಅಲ್ಲಿ ಹೋಗುವ ಜನರು ಬೆರಳೆಣಿಕೆಯಷ್ಟು  ಸಿಕ್ಕಲಾರದು ದಾರಿ ಶೋಧಿಸಿದರೂ ಭೂಪಟ. ಸುಗಮವಾಗಿದೆಯೋ ಎಲ್ಲಿ ನಡೆಯುವ ದಾರಿ ಅಲ್ಲಿಗೇ ಮುಗಿಬೀಳುವುದು ಜನತೆ ಸುಲಭ ಒಬ್ಬರ ಹಿಂದಿನ್ನೊಬ್ಬರು  ಸಾಗುವುದು ಜನಪ್ರಿಯ ಹಾದಿಗೆ ಇನ್ನಷ್ಟು ಜನಪ್ರಿಯತೆ. ದಾರಿ ದುರ್ಗಮ ಅಲ್ಲಿ ಹೆಜ್ಜೆ ಇಡಲೂ ಧೈರ್ಯ ಬೇಕೋ ಮಾಡಲು ಕಷ್ಟವೋ ಯಾವ ಕಾರ್ಯ ಪೂರೈಸಿದಾಗ ಅದುವೇ ತಂದುಕೊಡುವುದು ಕೀರ್ತಿ ಯಾರಿಗಿದೆಯೋ ಹಿಂಜರಿಯದೆ ಮುನ್ನಡೆವ ಸ್ಥೈರ್ಯ

ಮರಗಳು

ಇಮೇಜ್
ಮರಗಳು ಮೂಲ: ಫಿಲಿಪ್ ಲಾರ್ಕಿನ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಮರಗಳಲ್ಲಿ ಮತ್ತೆ ಒಡೆಯುತ್ತಿವೆ ಎಲೆ ಏನೋ ಹೇಳಲು ಬಾಯ್ತೆರೆದಂತೆ ತರು. ಕಣ್ತೆರೆದು ಅರಳುತ್ತವೆ ಹೊಸಚಿಗುರು ಅವುಗಳ ಹಸಿರಿನಲ್ಲಿದೆ ನೋವಿನ ಸೆಲೆ  ಮರುವುಟ್ಟು ಪಡೆದು ಅಮರವಾಗುವವೇ ವೃಕ್ಷ? ಜರೆ ಮತ್ತು ಸಾವು ನಮಗೆ ಮಾತ್ರವೇ? ಇಲ್ಲ, ಅವೂ ಸಾಯುತ್ತವೆ! ಬೇಕೇ ಪುರಾವೆ? ಮರದ ಉಂಗುರಗಳಲ್ಲಿದೆ ಅದರ ಆಯುಷ್ಯ ರಹಸ್ಯ. ಇಷ್ಟಾದರೂ ವೈಶಾಖ ಕಾಲಿಟ್ಟಾಗ ಮೈತುಂಬಾ ಹಸಿರು ಹೊದ್ದು ಸಂಭ್ರಮಿಸುವಳು ವೃಕ್ಷಸ್ತ್ರೀ ಪ್ರತಿವರ್ಷ "ಸತ್ತುಹೋಯಿತು ಹಳೆಯ ಸಂವತ್ಸರ!" ಅವಳ ಸಂದೇಶ, "ಮತ್ತೊಮ್ಮೆ ಎಲ್ಲವನ್ನೂ ಹೊಸದಾಗಿ ಮಾಡಿ ಶುರು!" (ಫಿಲಿಪ್ ಲಾರ್ಕಿನ್ ಒಬ್ಬ ಇಂಗ್ಲಿಷ್ ಕವಿ (೧೯೨೨-೨೦೦೧). ಇವನ ಕವಿತೆಗೂ ಬೇಂದ್ರೆ ಅವರ ಯುಗಾದಿ ಕವಿತೆಗೂ ಇರುವ ಸಾಮ್ಯ ಗಮನಿಸಿ. ಹೊಂಗೆ ಹೂವಿನ ಟೊಂಗೆಯಲ್ಲಿ ಪ್ರತಿವರ್ಷವೂ ವಸಂತದಲ್ಲಿ ಕೇಳಿ ಬರುವ ಸಂಗೀತವನ್ನು ಕೇಳಿದಾಗ, ಬೇವಿನ ಮರದಲ್ಲೂ ಹೂಗಳು ಚಿಗುರಿದಾಗ ಕವಿಯ ಮನಸ್ಸು ಯುಗಾದಿಯ ಚಮತ್ಕಾರದ ಕಡೆಗೆ ಹೊರಳುತ್ತದೆ. ಮರಗಳು ಹೀಗೆ ಮರುವುಟ್ಟು  ಪಡೆದುಕೊಳ್ಳುವುದು ಕವಿಗೆ ಆಶ್ಚರ್ಯ ಎನ್ನಿಸುತ್ತದೆ.  ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾಲಕೆ! ಒಂದೆ ಒಂದು ಜನ್ಮದಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೆ? ಎಂಬ ಬೇಂದ್ರೆ ಅವರ ಪ್ರಶ್ನೆ ಮತ್ತು ಫಿಲಿಪ್ ಲಾರ್ಕಿನ್ ಅವರ "ಮರಗಳು ಹೀಗೆ ಪ್ರತಿವರ್...

ವೃದ್ಧ ನಿರುದ್ವೇಗಿಯ ಪ್ರಾರ್ಥನೆ

ಇಮೇಜ್
  ಮೂಲ: ಎಮಿಲಿ ಬ್ರಾಂಟಿ ಕನ್ನಡಕ್ಕೆ:  ಸಿ ಪಿ ರವಿಕುಮಾರ್  ಸಂಪತ್ತನ್ನು ಕಂಡರೆ ನನಗೆ ಅಷ್ಟಕ್ಕಷ್ಟೇ ಪ್ರೇಮವೆಂದರೆ ನಗುವೆ ತಿರಸ್ಕಾರದ ನಗೆ ಕೀರ್ತಿಗಾಗಿ ಕಾಮಿಸಿದೆನಾದರೂ ಅದು  ಬೆಳಗಾಗ ಲಯವಾಗುವ ಕನಸಿನ ಹಾಗೆ ಈಗ ನಾನು ಪ್ರಾರ್ಥಿಸಲೆಂದು ಬಾಯ್ತೆರೆದರೆ ಆಗ ತುಟಿಗಳ ಮೇಲೆ ಬರುವ ಮಾತೊಂದೇ : ನನಗೀಗ ಕೇಳುವುದೋ ಯಾವ ಹೃದಯದ ತುಡಿತ ಅದನ್ನು ಹಾಗೇ ಉಳಿಸಿ ನೀಡು ಮುಕ್ತಿ ನನಗೆ! ಬಿರುಸಾಗಿ ಉರುಳುತ್ತ ನನ್ನ ದಿನಗಳು ತಮ್ಮ ಗುರಿಯತ್ತ ಧಾವಿಸುತ್ತಿರಲು ನಾನು ಬೇಡುವುದು ಇಷ್ಟೇ ಬದುಕು ಸಾವುಗಳಲ್ಲಿ ನಾನು ಮುಕ್ತಳಾಗಿರುವಂತೆ ಮತ್ತು ಸಹಿಸುವ ಶಕ್ತಿ ನನಗೆ ನೀಡು ಎಂದಷ್ಟೇ.

ಅವರಂತೆ

ಇಮೇಜ್
ಮೂಲ: ಜೆನ್ನಿ ಆಸ್ಬಾರ್ನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್  ಇದೆ ನನ್ನಾತ್ಮದ ಒಳಗೆ ಎಲ್ಲೋ ಒಂದು ಕಡೆ ನಾನು ತುಂಬಲಾರದ ಖಾಲೀ ಸ್ಥಳವೊಂದು ಕಿಟಕಿ ಪಕ್ಕದಲ್ಲಿಟ್ಟ ಖಾಲಿ ಹೂದಾನಿಯ ಹಾಗೆ ಸುಂದರ, ಆದರೆ ತುಂಬಲಾಗದು ಅಲ್ಲಿ ಹೂವನೆಂದೂ ನಾನು ಕಾಯುತ್ತೇನೆ ಕುಳಿತಲ್ಲೇ ಗಮನಿಸುತ್ತಾ ಹಾದುಹೋಗುವ ಪ್ರತಿಯೊಬ್ಬರ ತೂಕ ನನ್ನ ಮನದಲ್ಲಿದೆ ಅವರನ್ನು ಸೇರಿಕೊಳ್ಳುವ ಆಸೆ ತಡೆಯುವುದು ಅವರಂತೆ ಆಗಿಬಿಡುವ ಆತಂಕ

ಫ್ರೊ ಮೆಲ್ವಿನ್ ಬ್ರೂವರ್

 ನಾನು ಪಿಎಚ್ ಡಿ ಮಾಡುತ್ತಿದ್ದಾಗ ಅನೇಕ ಶ್ರೇಷ್ಠ ಅಧ್ಯಾಪಕರ ಪಾಠ ಕೇಳುವ ಮತ್ತು ಕೆಲವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಾನು ವಿದ್ಯಾರ್ಥಿಯಾಗಿ ಸೇರಿದ್ದು ಡಿಪಾರ್ಟ್ಮೆಂಟ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸಿಸ್ಟಮ್ಸ್ ವಿಭಾಗದಲ್ಲಿ ಮತ್ತು  ಕಂಪ್ಯೂಟರ್ ಇಂಜಿನಿಯರಿಂಗ್ ಎಂಬ ಶಾಖೆಯಲ್ಲಿ.  ಶಾಖೆಯಲ್ಲಿದ್ದ ಎಲ್ಲ ಪ್ರಾಧ್ಯಾಪಕರೂ ತಮ್ಮ ತಮ್ಮ ಸಂಶೋಧನಾ ರಂಗಗಳಲ್ಲಿ ಪ್ರಸಿದ್ಧರು. ಪ್ರೊ ಮೆಲ್ವಿನ್ ಬ್ರೂವರ್ ಅವರ ಸಂಶೋಧನಾ ಲೇಖನಗಳನ್ನು ನಾನು ಎಂ ಈ ಅಧ್ಯಯನದ ಸಂದರ್ಭದಲ್ಲಿ ಓದಿಕೊಂಡಿದ್ದೆ. ಅವರ ಜೊತೆಗೆ ಕೆಲಸ ಮಾಡಬೇಕೆಂಬ ಇಚ್ಛೆ ನನ್ನಲ್ಲಿತ್ತು. ನಾನು ಅವರಿಗೆ ಪತ್ರ ಬರೆದು ವಿನಂತಿಸಿಕೊಂಡೆ. ಆಗ ಇಂಟರ್ನೆಟ್ ಇರಲಿಲ್ಲ. ಹೀಗಾಗಿ ಪ್ರಾಧ್ಯಾಪಕರು ಸದ್ಯ ಯಾವ ರಂಗದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯುವುದು ಸುಲಭವಾಗಿರಲಿಲ್ಲ. ಪ್ರೊ.ಬ್ರೂವರ್ ವಿಎಲ್ ಎಸ್ ಐ ರಂಗದಲ್ಲಿ ಫಿಸಿಕಲ್ ಡಿಸೈನ್ ಎಂಬ ಕ್ಷೇತ್ರದಲ್ಲಿ ಮಾಡಿದ್ದ ಕೆಲಸ ನನಗೆ ತಿಳಿದಿತ್ತು. ಆದರೆ ನಾನು ಅವರಿಗೆ ಪತ್ರ ಬರೆದಾಗ ಅವರು ಈ ಕ್ಷೇತ್ರದಿಂದ ಮುಂದುವರಿದು ಟೆಸ್ಟಿಂಗ್ ಎಂಬ ಕ್ಷೇತ್ರವನ್ನು  ಪ್ರವೇಶಿಸಿ ಅಲ್ಲಿ ಸಕ್ರಿಯರಾಗಿದ್ದರು! ಹೀಗಾಗಿ ಅವರು ನನಗೆ ಮಾರೋಲೆ ಕಳಿಸಿ "ನಾನು ಈಗ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಕ್ರಿಯನಾಗಿಲ್ಲ.  ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶರ್ಮಾ ಶಾಸ್ತ್ರಿ ಎಂಬುವರಿಗೆ ನಿಮ್ಮ...

ಭಜಿಸೋ ಮನುಜ, ರಾಮ ಗೋವಿಂದ ಹರಿ

ಮೂಲ - ಸಂತ ಕಬೀರ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಭಜಿಸು ಮನುಜ, ರಾಮ ಗೋವಿಂದ ಹರಿ ಜಪ ತಪ ಸಾಧನ ಏನೂ ಬೇಡದು, ಬೇಡದು ನಿನ್ನ ಸಿರಿ ಸಂತತಿ ಸಂಪದ ಲೋಲುಪನಾಗಿ ಮರೆತು ಹೋದೆ ಗುರಿ ಸ್ಮರಿಸು ರಾಮನನ್ನು ಬರುವ ಮುನ್ನ ಮೃತ್ಯು ಹಾರಿ ಕೇಳಿ ಹೇಳುತಿಹನು ಸಂತ ಕಬೀರ ಸಾರಿ ಸಾರಿ ರಾಮನಾಮ ಹೇಳದ ನಾಲಗೆಗೆ ಮಣ್ಣುಧೂಳೆ ದಾರಿ

ಪುಟ್ಟ ಪುಟ್ಟ ವಸ್ತು

ಇಮೇಜ್
 ಮೂಲ: ಜೂಲಿಯಾ ಫ್ಲೆಚರ್ ಕಾರ್ನಿ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಪುಟ್ಟ ಪುಟ್ಟ ಹನಿಗಳು ಪುಟ್ಟ ಪುಟ್ಟ ಕಣಗಳು ಕೂಡಿ ಕಡಲು ಆಳ  ಮತ್ತು ನೆಲ ವಿಶಾಲ ಎಣಿಸುತ್ತಿವೆ ಟಿಕಿಟಿಕಿಸುತ  ಗಡಿಯಾರದ ದಂತ  ಕ್ಷಣಕ್ಷಣಗಳು ಸೇರಿಕೊಂಡು ಅಪ್ರಮೇಯ ಅನಂತ!

ಕಥೆ ಮತ್ತು ಕಥೆಗಾರ

ಇಮೇಜ್
ನಾನು ಪಿಎಚ್ ಡಿ ಮಾಡುತ್ತಿದ್ದಾಗ ಕೊನೆಯ ಎರಡು ವರ್ಷ ನನಗೆ ಯಾವ ಕೋರ್ಸ್ ಮಾಡುವ ಅಗತ್ಯ ಇರಲಿಲ್ಲ.  ಎಷ್ಟು ಕೋರ್ಸ್ ವರ್ಕ್ ಮಾಡಬೇಕಾಗಿತ್ತೋ ಅಷ್ಟನ್ನು ಮಾಡಿ ಮುಗಿಸಿದ್ದಾಗಿತ್ತು.  ಕೊನೆಯ ವರ್ಷದಲ್ಲಿ ಒಂದು ಘಟನೆ ನಡೆಯಿತು. ನನ್ನ ಪಿಎಚ್ ಡಿ ಮಾರ್ಗದರ್ಶಕರಾದ ಪ್ರೊಫೆಸರ್ ನನ್ನನ್ನು ಕರೆದು "ನಿನಗೆ ರಿಸರ್ಚ್ ಅಸಿಸ್ಟೆಂಟ್ಶಿಪ್ ಕೊಡಲು ನನ್ನ ಬಳಿ ಈ ಸೆಮಿಸ್ಟರ್ ಹಣ ಇಲ್ಲ" ಎಂದು ತಿಳಿಸಿದರು. ಅದನ್ನು ಹೇಳುವಾಗ ಅವರ ಮುಖದಲ್ಲಿ ನೋವಿತ್ತು. ಅವರ ಅಸಹಾಯಕತೆ ಕಂಡು ನಾನು ಅವರಿಗೆ ಸಮಾಧಾನ ಹೇಳಿ "ಪರವಾಗಿಲ್ಲ, ನೀವು ಯೋಚಿಸಬೇಡಿ" ಎಂದು ಹೇಳಿದರೂ ಮುಂದೆ ಹೇಗೆಂದು ಯೋಚನೆಯಾಯಿತು.  ಆಗ ಯೂನಿವರ್ಸಿಟಿಯಲ್ಲಿ ಗ್ರಾಜುಯೇಟ್ ಅಡ್ವೈಸರ್ ಹುದ್ದೆಯಲ್ಲಿದ್ದ ಬಿಲ್ ಬೇಟ್ಸ್  ನನಗೆ ಪರಿಚಿತರು. ನನ್ನನ್ನು ಅಭಿಮಾನದಿಂದ.ಕಾಣುತ್ತಿದ್ದ ಮನುಷ್ಯ.  ನಾನು ಟೀಚಿಂಗ್ ಅಸಿಸ್ಟೆಂಟ್ ಆಗಿದ್ದಾಗ ನನ್ನ ಬಗ್ಗೆ ಒಳ್ಳೆಯ ಮಾತುಗಳು ವಿದ್ಯಾರ್ಥಿಗಳಿಂದ. ಬರುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು. ಬಿಲ್ ಹಾಸ್ಯಪ್ರಿಯ. ಅವರಿಗೆ ಆಗ ಅರವತ್ತು ದಾಟಿದ ಪ್ರಾಯ ಎಂದು ನನ್ನ ಅಂದಾಜು. ಮಿಲಿಟರಿಯಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದು ಈಗ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು.  ಎಲ್ಲರೊಂದಿಗೆ ಬಹಳ ಕಡಿಮೆ ಮಾತು. ಎಷ್ಟು ಬೇಕೋ ಅಷ್ಟು. ಆದರೆ ನನಗೆ ಅವರ ಆಫೀಸಿನಲ್ಲಿ ಸದಾ ಸ್ವಾಗತ! ಹೌ ಆರ್ ಯೂ ಮೈ ಫ್ರೆಂಡ್, ವಾಟ್ ಕ್ಯಾನ್ ಐ ಡೂ...

ತನು ನಿನ್ನದು ಜೀವನ ನಿನ್ನದು - ಎರಡು ರಚನೆಗಳು

ಇಮೇಜ್
"ತನುವು ನಿನ್ನದು ಮನವು ನಿನ್ನದು" ಎಂಬುದು ಕುವೆಂಪು ಅವರ ಕವಿತೆ. ಇದನ್ನು ಅನೇಕ ಗಾಯಕರು ಹಾಡಿದ್ದಾರೆ. ತನು ನಿನ್ನದು ಜೀವನ ನಿನ್ನದೋ ರಂಗ ಎಂಬುದು ಕನಕದಾಸರ ರಚನೆ. ಇದನ್ನೂ ಅನೇಕ ಗಾಯಕರು ಹಾಡಿದ್ದಾರೆ. ವಿಕಿಸೋರ್ಸ್ ಸಂಗ್ರಹದಲ್ಲಿ ಕುವೆಂಪು ಅವರ ಕವಿತೆ ಸಿಕ್ಕಿತು. ಪಾಠದಲ್ಲಿ ಒಂದೂ ತಪ್ಪಿಲ್ಲದೆ ಸಂಗ್ರಹಿಸಿಟ್ಟ ಕನ್ನಡ ಬರಹಗಳು ಅಪರೂಪ. ಕನಕದಾಸರ ಕೃತಿಯನ್ನೂ ಯಾರೋ ಸಂಗ್ರಹಿಸಿದ್ದಾರೆ. ಇದನ್ನು ಟೈಪ್ ಮಾಡುವಾಗ ಸ್ವಲ್ಪ ಜಾಗರೂಕತೆ ವಹಿಸಬೇಕಾಗಿತ್ತು. ದ್ವಿತೀಯಾಕ್ಷರ ಪ್ರಾಸ ಸರಿಯಾಗಿ ಹೊಂದುವಂತೆ ಸಾಲುಗಳನ್ನು ಮುರಿಯಬೇಕಾಗಿತ್ತು.  ಪಂಚೇಂದ್ರಿಯಗಳ ಮೂಲಕವೇ ನಮಗೆ ಜೀವನಾನುಭವ ದೊರಕುವುದು. ಐದು ಇಂದ್ರಿಯಗಳ ಜೊತೆಗೆ ಮನಸ್ಸು ಎಂಬ ಆರನೇ ಇಂದ್ರಿಯವೂ ಇದೆ. ಅದು ನಮಗೆ ಬಾಹ್ಯದಲ್ಲಿ ತೋರುವುದಕ್ಕೂ ಮೀರಿ ಏನನ್ನೋ ತೋರಿಸುತ್ತದೆ.  ನಮ್ಮ ಇಂದ್ರಿಯಾನುಭವಗಳೆಲ್ಲ ದೈವವು ನಮಗೆ ನೀಡಿದ ಉಡುಗೊರೆ ಎಂಬ ಅನುಭೂತಿ ಕೂಡಾ ಇಂಥದ್ದೇ. ಕಾಯಜಪಿತ ಎಂದು ತಮ್ಮ ದೈವ ಕಾಗಿನೆಲೆ ಆದಿಕೇಶವನನ್ನು ಕನಕದಾಸರು ಸಂಬೋಧಿಸುತ್ತಿರುವುದು ಯಾಕೆ? ನಮ್ಮ ಪೂಜಾವಿಧಾನಗಳ ಬಗ್ಗೆ ಅವರು ಹೇಳುತ್ತಿರಬಹುದು. ದೇವರಿಗೆ ಬಣ್ಣಬಣ್ಣದ ಹೂವು, ಘಮಘಮಿಸುವ ಗಂಧ, ರುಚಿಯಾದ ಹಣ್ಣು ಪಕ್ವಾನ್ನಗಳ ನೈವೇದ್ಯ, ಘಂಟಾನಾದ/ಮಂತ್ರಘೋಷ  ಇವೆಲ್ಲ ಅರ್ಪಿಸಿ ಧನ್ಯತೆಯ ಭಾವ ಪಡೆಯುವ ಕಾರಣದಿಂದ ಅವರಿಗೆ ದೇವರು ಕಾಯಜಪಿತ ಎನ್ನಿಸುತ್ತಿರಬಹುದು. ನಮ್ಮ ಆರನೇ ಇಂದ್ರಿಯದಿಂದ...