ಕವಿತೆ


ಹಿಂದಿ ಮೂಲ : ಅಂಜನಾ ಬಕ್ಷಿ 
ಕನ್ನಡಕ್ಕೆ : ಸಿ ಪಿ ರವಿಕುಮಾರ್ 


ಕವಿತೆ ನನ್ನನ್ನು ಬರೆಯುತ್ತದೋ 
ನಾನು ಕವಿತೆಯನ್ನೋ 
ತಿಳಿಯುತ್ತಿಲ್ಲ 
ಒಳಗಿನ ತುಮುಲವು
ಕುದ್ದು ಹೊರಬಂದಾಗ 
ಕವಿತೆ ಮೂಡಿಸುತ್ತದೆ  ಶಬ್ದಗಳನ್ನು
ಮತ್ತು ಶಬ್ದಗಳಿಂದ ಹೊರಸೂಸುತ್ತದೆ ಕವಿತೆ 
ಹೇಗೆ ಕಟ್ಟೆಯಿಂದ ಸಂಸತ್ತಿನವರೆಗೂ 
ಮೂಡುತ್ತವೋ ಪಾಪದ ಅಸಂಖ್ಯ ಕತೆಗಳು 
ಹಾಗೇ 
ಮುಷ್ಟಿ ತುಂಬ ಶಬ್ದಗಳು 
ಹೊಮ್ಮಿಸುತ್ತವೆ ಕಾಗದದ ಮೇಲೆ 
ಎಣಿಕೆ ಮೀರಿದಷ್ಟು ಕವಿತೆಗಳನ್ನು 
ಈ ಕವಿತೆಗಳಲ್ಲಿ ಮೈದಳೆದ ಅಕ್ಷರಗಳು 
ಚೂಪಾಗಿ, ಉರುಟಾಗಿ, ಓರೆಕೋರೆಯಾಗಿವೆ 
ನೇರವಾಗಿ, ಚಪ್ಪಟೆಯಾಗಿ, ಸಹಜವಾದ 
ಅಕ್ಷರಮಾಲೆಯಂತಲ್ಲ 


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ