ಅರ್ಪಣೆ
ಮೂಲ: ಜಾಯ್ ಆಸ್ಬಾರ್ನ್
ಕನ್ನಡಕ್ಕೆ.: ಸಿ ಪಿ ರವಿಕುಮಾರ್
ತೊಡಗಿರುತ್ತಾರಲ್ಲ ನಿಶ್ಶಬ್ದ ಕದನದಲ್ಲಿ
ಬದುಕುತ್ತ ಮುಚ್ಚಿದ ಕದಗಳ ನೇಪಥ್ಯದಲ್ಲಿ
ಈ ಕವಿತೆ ಅಂಥವರಿಗಾಗಿ
ಮರೆಮಾಚಲು ನೋವನ್ನು ನಗೆಮುಸುಕು ತೊಟ್ಟು
ಇವರ ಮುಗುಳ್ನಗೆ ನೆರಳು ಗಾವುದದಷ್ಟು
ಈ ಕವಿತೆ ಅಂಥವರಿಗಾಗಿ
ಮುರಿದ ರೆಕ್ಕೆಯ ಹಕ್ಕಿಗಳು ಆದರೂ
ಬೆಳಗಾಗ ಹಾಡುವ ಧೈರ್ಯ ತೋರುವರು
ಈ ಕವಿತೆ ಅಂಥವರಿಗಾಗಿ
ಸ್ವಾಗತಿಸಿ ದಿವಸವು ತರುವ ಕಷ್ಟ ಶಾಖೋಪಶಾಖೆ
ಎಲ್ಲದರಲ್ಲೂ ಕಾಣುವರಲ್ಲ ಹೊಂಬೆಳಕಿನ ರೇಖೆ
ಈ ಕವಿತೆ ಅಂಥವರಿಗಾಗಿ

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ