ಅಕ್ಷಯ ತೃತೀಯ

ಸಿ. ಪಿ. ರವಿಕುಮಾರ್ 


ತರಲು ಹೊರಟಿದ್ದೆ ನಿನಗಾಗಿ ಚಿನ್ನ
ಅಕ್ಷಯ ತೃತೀಯಕ್ಕೆ ಬಂಗಾರದ ಬಳೆಯನ್ನ
ಏನು ಮಾಡಲಿ ಎಲ್ಲೂ ಕ್ಯಾಷ್ ಸಿಗದು
ಏಟೀಎಮ್ಮಿನಲಿ ಖಾಲಿಯಾಗಿದೆ ನಗದು

ಹೌದೇ! ಇರಲಿ! ನನಗೇನಿಲ್ಲ ಬಂಗಾರದ ಹುಚ್ಚು
ನೆನೆಸಿಕೊಂಡಿರಲ್ಲ ನನಗೆ ಅದೇ ಹೆಚ್ಚು
ವಿಚಿತ್ರ ಎಂದರೆ ನನ್ನ ಅನುಭವವೂ ಸ್ವಲ್ಪ ಹಾಗೇ 
ಮಾಡೋಕೆ ಹೊರಟೆ ಬೋಂಡಾ ಪಾಯಸ ಹೋಳಿಗೆ

ರೆಸಿಪಿ ನೋಡಲು ಹೋದರೆ ಹಾಳು ಇಂಟರ್ನೆಟ್ಟು
ಇವತ್ತೇ ಹಾಳಾದ್ದು ಕೂಡಬೇಕೇನ್ರೀ ಕೆಟ್ಟು
ಮಾಡಿರುವೆ ಅನ್ನ, ಸಾರಿಗೇ ಬೆಲ್ಲ ಹಾಕಿ ಸ್ವೀಟು
ಮುಖ್ಯ ಕಣ್ರೀ ನಮ್ಮ ಮನಸ್ಸಿನಲ್ಲಿ ಬಂದ ಥಾಟು!


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)