ದೇಶಭಕ್ತ ರತ್ನ


ಮೂರನೇ ಕ್ವಾರ್ಟರ್‍‍ವರೆಗೆ  ದೇಶ ಸಾಧಿಸುವುದು ಆರ್ಥಿಕ ಪ್ರಗತಿ
ಹಾಗೆ ಹೇಳಿದ್ದು  ಸ್ವಯಂ ರಿಸರ್ವ್ ಬ್ಯಾಂಕ್ ಅಧಿಪತಿ
ಹೀಗಾಗಿ ರತ್ನ ಕೊಂಡು ತಂದಿದ್ದಾನೆ ಒಂದಲ್ಲ ಮೂರು
ಒಂದಾಯಿತು ಎರಡಾಯಿತು ಈಗ ಮೂರನೇ ಕ್ವಾರ್ಟರ್ರು.

ಮರುದಿವಸ ಮಧ್ಯಾಹ್ನ ಎಚ್ಚರವಾದಾಗ ರತ್ನ
ಕಷ್ಟಪಟ್ಟು ಕಣ್ಬಿಡಲು ಮಾಡಿದ ಪ್ರಯತ್ನ
ಏನೂ ಬದಲಾಗಿಲ್ಲ, ಎಲ್ಲ ಇದೆಯಲ್ಲ ಹಾಗೇ!
ಹಾಗೇ ಇದೆ ಗುಡಿಸಲು, ಕೂಗುತ್ತಿದೆ ಕಾಗೆ.

ಬೇಸರವಾಗಿ ರತ್ನ ಹೊರಟ ಸಂಜೆ ಮತ್ತೊಮ್ಮೆ ಬಾರಿಗೆ
"ಮರಳಿ ಯತ್ನವ ಮಾಡಿದರೆ ಗೆಲುವು ಸಿಕ್ಕೀತು ಒಂದು ಸಾರಿಗೆ."

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)