ಶ್ರೀ ರಸ್ತಾ ಸ್ತೋತ್ರಂ

(ಮಳೆಗಾಲದಲ್ಲಿ ಬೆಂಗಳೂರಿನ ರಸ್ತೆಗಳ ಮೇಲೆ ಓಡಾಡುವ ಅನುಭವದಿಂದ ಪ್ರೇರಿತ)

Persons Standing on Asphalt Road Near of Body of Water

ಎಲೈ ರಸ್ತೆ, ನಾದುರಸ್ತೆ, ನಗರ ಜೀವನಾವ್ಯವಸ್ಥೆ, ನಮೋಸ್ತುತೆ!
ಪಾಟ್ ಗುಂಡಿ ವಿರಾಜಿತೆ, ವಾಯುವಜ್ರ ಸಂಪೂಜಿತೆ, ನಮೋಸ್ತುತೆ!

ಸಿಮೆಂಟ್ ಟಾರ್‌ ವಂಚಿತೆ ನಿತ್ಯವಾರುಣ ಸಿಂ'ಚಿತೆ, ನಮೋಸ್ತುತೆ!
ಹಂಪುಶೈಲವಿಹಾರಿಣಿ, ಅಮೃತಾಂಜನದಾಯಿನಿ, ನಮೋಸ್ತುತೆ!

ಕಾಳಮುಖಿಶ್ರೀಭೈರವಿ ಕೈಗಳಂ ಮುಗಿವ ರವಿ, ಕಾಪಾಡು ಶ್ರೀಮಾತೆ, ನಮೋಸ್ತುತೆ!
ಸೇಲಿಹುದು ಮಾಲಿನಲಿ, ತಲುಪಿಸೈ ವೇಗದಲಿ, ನೆರೆನಂಬಿ ಬಂದಿಹೆನು, ನಮೋಸ್ತುತೆ!

ಇತಿ ಶ್ರೀ ರಸ್ತಾ ಸ್ತೋತ್ರಂ ಸಂಪೂರ್ಣಂ


ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)