ಎಚ್ಚರಕ್ಕೆ ಶರಣು

ಕುಡಿದು ಹುಚ್ಚಾಟ ಮಾಡಿದ ಶಿಕ್ಷಕನ ಹಿಡಿದು
ಬಡಿಗೆಯಲಿ ಥಳಿಸಿದ ಗ್ರಾಮಸ್ಥರಿಗೆ ಶರಣು

ಇರುಳು ಬಸ್ಸಿನಲ್ಲಿ ಕಿರುಕುಳ ನೀಡುವ ಕಂಡಕ್ಟರಿಗೆ
ಎರಡು ಚಪ್ಪಲಿ ಏಟು ಬಿಗಿದ ಮಹಿಳೆಗೆ ಶರಣು

ನಡೆಯುವುದನ್ನೆಲ್ಲಾ ನೋಡಿ ಸುಮ್ಮನಿರಲಾರರು ಮಂದಿ
ತಡೆದುಕೊಳ್ಳಲೂ ಮಿತಿಯುಂಟೆಂಬ ಉದ್ಘೋಷಕ್ಕೆ ಶರಣು

ಬಹಳವಾದಾಗ ಸಾಮದಾನೋಪಾಯಗಳ ಭಾಗ್ಯ
ಇಹುದು ದಂಡೋಪಾಯವೆಂಬ ಎಚ್ಚರಕ್ಕೆ ಶರಣು


ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)